ಗುರುವಾರ, ಮೇ 09, 2013

ಬಲೇ ಅಮಿತಾಬ್ ಮತ್ತು ಸೋನಿಯಾ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಹಿಂದೀ ಚಿತ್ರರಂಗದ ಮೇರು ನಟ ಅಮಿತಾಬ್ ಬಚ್ಚನ್ ಇತ್ತೀಚಿನ ವರ‍್ಶಗಳಲ್ಲಿ ದೇಶದ ಒಳಿತಿಗಾಗಿ ಸರ‍್ಕಾರವೂ ಸಾರ‍್ವಜನಿಕರೂ ಹಮ್ಮಿಕೊಂಡಿರುವ ಹಲವಾರು ಯೋಜನೆಗಳಿಗೆ ರಾಯಬಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವುಗೊಂಡ ಹೆಸರಾಂತ ವ್ಯಕ್ತಿಗಳು ಹೇಗೆ ಸಮಾಜಕ್ಕೆ ಬೇರೆಬೇರೆ ಬಗೆಗಳಲ್ಲಿ ಒಳಿತು ಗಯ್ಯಬಹುದು ಎಂಬುದಕ್ಕೆ ಅವರು ಒಂದು ಬೆಳಗುವ ಆದರ‍್ಶವಾಗಿದ್ದಾರೆ. ನಮ್ಮ ದೇಶದ ಹುಲಿಗಳನ್ನು ಕಾಪಾಡುವ ಯೋಜನೆಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡು ಬಂದಿರುವ ರೀತಿಗೆ ಅವರನ್ನು ನಾನು ವಿಶೇಶವಾಗಿ ಮೆಚ್ಚಿದ್ದೇನೆ. ಇತ್ತೀಚೆಗೆ ಅವರನ್ನು ಇನ್ನಶ್ಟು ಮೆಚ್ಚುವ ಸಂಗತಿಯೊಂದು ನನ್ನ ಗಮನಕ್ಕೆ ಬಂತು. ಈ ಸಂಗತಿ ಬಹಳ ಮಂದಿಗೆ ವಿಶೇಶ ಎನಿಸದಿರಬಹುದು. ಆದರೆ, ಕನ್ನಡತನ ಹಾಗೂ ದ್ರಾವಿಡತನವನ್ನು ಮಯ್ಗೂಡಿಸಿಕೊಂಡಿರುವ ನನಗೆ ಅದರಲ್ಲಿ ಸೆರಪು (ವಿಶೇಶ) ಕಂಡದ್ದರಲ್ಲಿ ಸಂಶಯವಿಲ್ಲ. ಅದೇನೆಂದರೆ, ಟಯ್‍ಮ್ಸ್ ಆಫ್ ಇಂಡಿಯಾ ಪತ್ರಿಕೆಯ ಏಪ್ರಿಲ್ ೧೯ರ ಸಂಚಿಕೆಯಲ್ಲಿ ಬಚ್ಚನ್ ಅವರು ಇತ್ತೀಚೆಗೆ IPL ಕ್ರಿಕೆಟಿಗರ ಬಗ್ಗೆ ಕೊಟ್ಟ ಹೇಳಿಕೆಯನ್ನು ಪ್ರಕಟಿಸಿದ್ದಾರೆ. ಬಚ್ಚನ್ ಅವರ ಹೇಳಿಕೆ ಹೀಗಿದೆ - "Indian IPL players, you do not have to reply in English when questioned at the end of a game...reply in your mother tongue if uncomfortable.". ಈ ಹೇಳಿಕೆಯಲ್ಲಿ ಅದೇನು ಅಂತಾ ಸೆರಪು ಕಂಡಿತು ನನಗೆ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಇದು - ಬಚ್ಚನ್ ಅವರು, 'reply in your mother tongue' ಎನ್ನುವ ಬದಲು ’reply in Hindi’ ಎಂದು ಹಾಗೇ ಸುಮ್ಮನೆ ಹೇಳಿಬಿಡಬಹುದಾಗಿತ್ತು. ಹಾಗೊಂದು ವೇಳೆ ಅವರು ’reply in Hindi’ ಎಂದೇ ಹೇಳಿದ್ದರೆ, ಯಾರೂ ಅದಕ್ಕೆ ಹುಬ್ಬೇರಿಸುತ್ತಿರಲಿಲ್ಲ. ಯಾರೂ ಅದಕ್ಕೆ ಎದುರು ಹೇಳುತ್ತಿರಲಿಲ್ಲ. ಯಾರೂ ಅದನ್ನು ಗಮನಿಸುತ್ತಲೂ ಇರಲಿಲ್ಲ. ಹಾಗಿದ್ದರೂ, ಬಚ್ಚನ್ ಅವರು ಬಾಶಾಸೂಕ್ಶ್ಮತೆಗೆ ಕುಂದು ಬರದ ಹಾಗೆ, ಹಿಂದೀಯೇತರರನ್ನೂ ಒಳಗೊಳ್ಳುವ ಹಾಗೆ 'reply in your mother tongue' ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ. IPL ಆಟಗಾರರಲ್ಲಿ ಹಿಂದೀ ತಾಯ್ನುಡಿಯಲ್ಲದವರೂ ಇದ್ದಾರೆ ಎಂಬುದನ್ನು ಮರೆಯದೆ, ಪ್ರಜ್‍ನಾಪೂರ‍್ವಕವಾಗಿ ಕೊಟ್ಟ ಹೇಳಿಕೆ ಇದು ಎಂಬುದು ನನ್ನ ನಂಬಿಕೆ. ಬಡಗಣ ರಾಜ್ಯಗಳ ಕೋಟಿ ಕೋಟಿ ಹಿಂದೀವಾದಿಗಳೂ ಹೀಗೇ ಕೊಂಚ ನುಡಿನಣ್ಪನ್ನು ತೋರಿದರೆ, ನಮ್ಮಲ್ಲಿ ಬಾಶಾಕಲಹಕ್ಕೆ ಎಡೆಯೇ ಇರುವುದಿಲ್ಲ, ಅಲ್ಲವೆ?
      ಇನ್ನು ಈ ಕಳೆದ ಕೆಲ ನಾಳುಗಳಲ್ಲಿ ಬಾಶಾಸೂಕ್ಶ್ಮತೆ ತೋರಿದ ಇನ್ನೊಬ್ಬರು ಯಾರೆಂದರೆ ಕಾಂಗ್ರೆಸ್ ಪಕ್ಶದ ಮುಂದಾಳುಗಳು. ಚುನಾವಣೆಯ ಪ್ರಚಾರಕ್ಕೆಂದು ನಮ್ಮ ನಾಡಿನಲ್ಲಿ ಓಡಾಡಿದ ಕಾಂಗ್ರೆಸ್ ಪಕ್ಶದ ಮುಂದಾಳು ಸೋನಿಯಾ ಗಾಂದಿ, ಮಂಗಳೂರು ಬೆಂಗಳೂರುಗಳಂತಹ ಊರುಗಳಲ್ಲಿ ಇಂಗ್ಲೀಶಿನಲ್ಲಿ ಮಾತ್ರ ಪ್ರಚಾರ ಬಾಶಣಗಳನ್ನು ಮಾಡಿದರು. ಗುಲ್ಬರ‍್ಗದಲ್ಲಿ, ಬಹುಶಹ ಅಲ್ಲಿ ಹಿಂದೀ ಕೆಲಮಟ್ಟಿಗೆ ಚಲಾವಣೆಯಲ್ಲಿದೆ ಎಂಬ ಕಾರಣಕ್ಕೇನೋ, ಹಿಂದಿಯಲ್ಲಿ ಬಾಶಣ ಮಾಡಿದರು. ಒಟ್ಟಾರೆ, ಹೆಚ್ಚಿನ ಕಡೆ ಹಿಂದೀಯಲ್ಲಿ ಬಾಶಣ ಮಾಡದೇ ಇರುವ ಮೂಲಕ, ’ಕರ‍್ನಾಟಕ ತೆಂಕಣ ನಾಡು. ಕರ‍್ನಾಟಕದಲ್ಲಿ ಹಿಂದೀ ಆಡುವ ಉಡಾಫೆ ತೋರಿಸಬಾರದು’ ಎಂಬ ಬಾಶಾಸೂಕ್ಶ್ಮತೆಯನ್ನು ತೋರಿಕೆಗಾದರೂ ಅವರು ಮೆರೆದಿದ್ದಾರೆ. ’ನಾವೂ ಹಿಂದೊಮ್ಮೆ ಹಿಂದೀ ಹೇರಿಕೆಗೆ ವಿರೋದ ತೋರಿಸಿದ್ದೆವು, ನಮ್ಮ ದ್ರಾವಿಡತನವನ್ನೂ ಪ್ರಾದೇಶಿಕತೆಯನ್ನೂ ಮೆರೆದಿದ್ದೆವು’ ಎಂಬ ಸತ್ಯ ಅಲ್ಪಾವದಿ ನೆನಪಿನ ಶಕ್ತಿಯ ಕನ್ನಡಿಗರು ನಮಗೆ ಮರೆತು ಹೋಗಿರಬಹುದು. ಆದರೆ, ಕಾಂಗ್ರೆಸ್ ಪಕ್ಶಕ್ಕೆ ಇನ್ನೂ ಅದು ಮರೆತು ಹೋಗಿಲ್ಲ ಎನ್ನುವುದು ಸಮಾದಾನಕರ ಸಂಗತಿ.
      ಕಾಂಗ್ರೆಸ್ಸಿನವರು ಹೀಗೆ ನಮ್ಮ ದ್ರಾವಿಡತನಕ್ಕೆ ಕೊಂಚವಾದರೂ ಬೆಲೆ ಕೊಟ್ಟರೆ, ಕೊಬ್ಬಿನ ಮೊಟ್ಟೆಗಳಾದ ಬೀಜೇಪಿಯ ’ನೇತಾಗಳು’ ಏನು ಮಾಡಿದವು ನೋಡಿ. ಹೋದ ಕಡೆಯೆಲ್ಲಾ ಬರೀ ಹಿಂದಿಯಲ್ಲೇ ಬೊಗಳಾಟ! ಬಾಶಣವನ್ನು ಕನ್ನಡದಲ್ಲಿ ಶುರು ಮಾಡುವ ’ಸ್ಟಂಟ್’ ಹಾಕುವುದು, ಬಳಿಕ ಹಿಂದೀಯಲ್ಲಿ ಗಂಟೆಗಟ್ಟಲೆ ಜಡಿಯುವುದು! ಕರ‍್ನಾಟಕ ಹಿಂದೀಗೆ ಸೋತು ಶರಣಾದ ಇನ್ನೊಂದು ರಾಜ್ಯ ಎನ್ನುವ ಬಾವನೆ ಅವರ ಬಗೆಯಲ್ಲಿ ಎಶ್ಟು ಗಟ್ಟಿಯಾಗಿ ನಿಂತಿದೆ ಎಂದರೆ, ಅವರು ಇಲ್ಲಿಗೆ ಬಂದು ಹಿಂದೀಯಲ್ಲಿ ಬಾಶಣ ಮಾಡುವುದಕ್ಕೂ ವ್ಯವಹರಿಸುವುದಕ್ಕೂ ಎಳ್ಳಶ್ಟೂ ಅಳುಕು ತೋರಿಸುವುದಿಲ್ಲ. ಕೇಸರಿ ಬಣದವರಿಗೆ ಇಡೀ ದೇಶವನ್ನು ಹಿಂದೀಮಯ ಮಾಡದಿದ್ದರೆ ತಿಂದದ್ದು ಅರಗುವುದಿಲ್ಲ, ಇರುಳಲ್ಲಿ ನಿದ್ದೆ ಬರುವುದಿಲ್ಲ. ಇಂತಹ ದಬ್ಬಾಳಿಕೆ ನಡೆಸುವ ಗರ‍್ವಿಗಳು ಹಾಕುವ ತಾಳಕ್ಕೆ ಕಮಕ್ ಕಿಮಕ್ ಎನ್ನದೆ ಕುಣಿಯುತ್ತೇವೆ ನಾವು! ಇದೇನು ನಾವು ಅಮಾಯಕರೋ, ಇಲ್ಲ, ಬೆಪ್ಪು ತಕ್ಕಡಿಗಳೋ, ಇಲ್ಲ, ಹೇಡಿಗಳೋ, ನಮ್ಮನ್ನು ಪಡೆದ ಆ ಕನ್ನಡ ತಾಯಿಗೇ ಗೊತ್ತಿರಬೇಕು!
      ಇನ್ನು ಕಡೆಯದಾಗಿ, ಚುನಾವಣೆಯ ವೇಳೆಯಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ತಮಾಶೆಯ ವಿಶಯ. ಮತ ಹಾಕುವ ನಾಳು, ಬೀಜೇಪಿಯ ದೇಶಮಟ್ಟದ ’ನೇತಾ’ ವೆಂಕಯ್ಯ ನಾಯುಡು, ಸಾಲಿನಲ್ಲಿ ತಮ್ಮ ಸರದಿಗಾಗಿ ಕಾಯದೇ ನೇರವಾಗಿ ಅದಿಕಾರಿಗಳ ಬಳಿ ಹೋಗಿ, ’ನಾನು ಇಂತವನು. ನನಗೆ ಕೂಡಲೇ ಮತ ಹಾಕಲು ಬಿಡಿ’ ಎಂದು ಕೇಳಿಕೊಂಡರು. ಅದಿಕಾರಿಗಳು ಏನು ಮಾಡಿರುತ್ತಿದ್ದರೋ. ಆದರೆ, ಸಾಲಿನಲ್ಲಿ ಕಾಯುತ್ತಾ ನಿಂತಿದ್ದ ಮತದಾರರು ಅದಕ್ಕೆ ಅವಕಾಶ ಕೊಡಲಿಲ್ಲ. ಬೇರೆ ದಾರಿ ಇಲ್ಲದೆ, ನಾಯುಡು ಅವರು ತಮ್ಮ ಸರದಿಗಾಗಿ ಕಾದೇ ಮತ ಹಾಕಬೇಕಾಯಿತು. ಪೆಚ್ಚು ಮೋರೆ ಹಾಕಿಕೊಂಡು ಬಳಿಕ ಅವರು ಮಾದ್ಯಮದವರಿಗೆ ’ಏಕೆ ಹಾಗೆ ಸರದಿಗೆ ಕಾಯದಿರುವ ಆತುರ ತೋರಿಸಿದರು’ ಎಂಬುದನ್ನು ವಿವರಿಸಿದರು. ವಿವರಣೆ ಕೊಟ್ಟಿದ್ದು ಹಿಂದೀ ಮತ್ತು ಇಂಗ್ಲೀಶುಗಳಲ್ಲಿ. ಮತ್ತೆ ಅದೇ ಮೊಂಡಾಟ! ಬರೀ ಇಂಗ್ಲೀಶಿನಲ್ಲಿ ಬೊಗಳಿದ್ದರೆ ಸಾಕಿತ್ತಲ್ಲವೆ? ಹಿಂದೀ ಏಕೆ ಬೇಕಿತ್ತು?
      ಅದೇನೇದರೂ ಇರಲಿ. ಹಿಂದೀ ಬಾಶಣಗಳಿಗೆ ಮತ್ತೆ ಎದುರು ತೋರಿಸುವುದನ್ನು ನಾವು ರೂಡಿಸಿಕೊಳ್ಳಬೇಕು. ನಾವು ಕನ್ನಡಿಗರು. ನಾವು ದ್ರಾವಿಡರು. ನಮಗೆ ನಮ್ಮದೇ ಆದ ದ್ರಾವಿಡ ನುಡಿ ಇದೆ. ನಮಗೆ ಕೆಲಸಕ್ಕೆ ಬಾರದ ಹಿಂದೀ ಬೇಡ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಕಾಮೆಂಟ್‌ಗಳಿಲ್ಲ: