ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ.
ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ
ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ
ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು
www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.
ಕೆಲ ದಿನಗಳ ಹಿಂದೆ ಹಿರಿಯ ರಾಜಕಾರಿಣಿ ರಾಮ್ ಜೇಟ್ಮಲಾನಿ ಅವರು ’ರಾಮಾಯಣದ ಶ್ರೀರಾಮ ಒಬ್ಬ ಕೆಟ್ಟ ಗಂಡ’ ಎಂದು ನುಡಿದು ತಮ್ಮ ಪಕ್ಶ ಬೀಜೇಪಿಗೆ ಇನ್ನಿಲ್ಲದ ಮುಜುಗರ ಉಂಟುಮಾಡಿದರು! ಶ್ರೀರಾಮನನ್ನೇ ಬಂಡವಾಳ ಮಾಡಿಕೊಂಡಿರುವ ಬೀಜೇಪಿಗೆ ಇಂತಹ ಕಸಿವಿಸಿ ಆಗಬಾರದಿತ್ತು, ಪಾಪ!
ಜೇಟ್ಮಲಾನಿಯವರ ಅನಿಸಿಕೆಗೆ ಸಹಜವಾಗೇ ದೇಶದ ತುಂಬೆಲ್ಲ ಕೂಡಲೆ ಪ್ರತಿಕ್ರಿಯೆಗಳು ಬಂದವು. ನಮ್ಮ ಟೀವಿ ಕಾಲುವೆಗಳಲ್ಲೂ ಈ ವಿಶಯದ ಮೇಲೆ ಕೆಲ ಬಿಸಿ ಚರ್ಚೆಗಳು ನಡೆದವು. ಕೇಸರಿಪರ ಕಟ್ಟಾಳುಗಳು, ’ರಾಮ ತ್ಯಾಗಮಯಿ, ಆದರ್ಶ ದೊರೆ, ಆದರ್ಶ ಪತಿ. ಜೇಟ್ಮಲಾನಿಯವರು ಎಲ್ಲೋ ಬಾಯ್ತಪ್ಪಿ ಏನೋ ಹೇಳಿದ್ದಾರೆ’ ಎಂದು ತಿಪ್ಪೆ ಸಾರಿಸಿಕೊಂಡರು. ’ಇವತ್ತೇನಾದ್ರು ರಾಮ ತುಂಬು ಬಸಿರಿ ಸೀತೇನ ಕಾಡಿಗೆ ಕಳಿಸಿದ್ದರೆ ಜಯ್ಲಿಗೆ ಹೋಗುತ್ತಿದ್ದ’ ಎನ್ನುವ ದಾಟಿಯಲ್ಲಿ ಎದುರುವಾದಿಗಳು ಕೇಸರಿಪರದವರಿಗೆ ವಿಕ್ರುತ ಹಿಗ್ಗಿನಿಂದ ಮತ್ತೆ ಮತ್ತೆ ತೀಡಿದರು.
’ರಾಮ ಒಳ್ಳೆ ಗಂಡನೋ ಕೆಟ್ಟ ಗಂಡನೋ, ಅದರ ತಂಟೆ ನಮಗೆ ಯಾಕೆ ಬಿಡಿ. ಅದೊಂದು ಉಪಯೋಗಕ್ಕೆ ಬಾರದ ವಾದವಿವಾದ’, ಎನ್ನುವುದು ಈ ವಿಶಯದಲ್ಲಿ ನನ್ನ ವಯ್ಯಕ್ತಿಕ ಅನಿಸಿಕೆ. ಹಾಗಾಗಿ, ಟೀವೀಯಲ್ಲಿ ನಡೆಯುತ್ತಿದ್ದ ಹಗ್ಗಜಗ್ಗಾಟವನ್ನು ’ಇದೂ ಒಂದು ಮನರಂಜನೆ’ ಎಂದು ಮನಸ್ಸಿನಲ್ಲೇ ಅಂದುಕೊಂಡು ಹಗುರಾಗಿ ನೋಡುತ್ತಿದ್ದೆ. ಆಗ, ವಾದವಿವಾದದ ನಡುವೆ ಒಬ್ಬರು ಹೇಳಿದ ಮಾತೊಂದು ನನ್ನ ಗಮನ ಸೆಳೆಯಿತು. ರಾಮಾಯಣದಲ್ಲಿ ಕನ್ನಡಿಗರನ್ನು ’ವಾನರರು’ ಎಂದು ಕರೆದು ಅವಹೇಳನ ಮಾಡಲಾಗಿದೆಯಂತೆ - ಇದು ಅವರು ಹೇಳಿದ್ದು. ಇದನ್ನು ಕೇಳಿದ ಕೂಡಲೆ ನನ್ನ ನೆನಪಿನ ಅಂಗಳದಲ್ಲಿ ಕೊಂಚ ಸಂಚಲನ ಉಂಟಾಯಿತು. ಈ ಅಬಿಪ್ರಾಯವನ್ನು ಬಹು ಹಿಂದಿನಿಂದಲೂ ನಾನು ಆಗಾಗ್ಗೆ ಕೆಲವರ ಬಾಯಲ್ಲಿ ಕೇಳಿದ್ದೆ. ಕೇಳಿದಾಗಲೆಲ್ಲ ಅದರ ಬಗ್ಗೆ ನನಗೆ ಏನನ್ನಿಸಿತ್ತು ಎಂಬುದನ್ನು ಕೊಂಚ ಮೆಲುಕು ಹಾಕಿದೆ.
ರಾಮನಿಗೆ ಅವನ ಬೆಂಬಲಕ್ಕೆ ನಿಂತ ’ವಾನರರು’ ಸಿಕ್ಕಿದ್ದು ದಕ್ಶಿಣದಲ್ಲೇ. ಅದರ ಮೇಲೆ, ’... ಆ ಜಲದಿಯನೆ ಜಿಗಿದ ಹನುಮ ಪುಟ್ಟಿದ ನಾಡು... ’ ಎಂದು ಬೇರೆ ನಾವು ಹೆಮ್ಮೆಯಿಂದ ನಮ್ಮ ನಾಡಿನ ಬಗ್ಗೆ ಹೇಳಿಕೊಳ್ಳುತ್ತೇವೆ. ಆದ್ದರಿಂದ, ರಾಮಾಯಣದ ವಾನರರು ಕನ್ನಡ ನಾಡಿನವರು ಎನ್ನುವುದರಲ್ಲಿ ಅನುಮಾನವಿಲ್ಲ. ಆಗಿನ ಕಾಲದಲ್ಲಿ ನಮ್ಮ ನಾಡಿನಲ್ಲಿ ಬರೀ ವಾನರರು ಮಾತ್ರ ಇದ್ದರೋ, ಇಲ್ಲ ಅವರ ಜೊತೆ ಬೇರೆ ಸಾಮಾನ್ಯ ಮನುಶ್ಯರೂ ಇದ್ದರೋ, ಇದ್ದರೂ ಆವರ ಬಗ್ಗೆ ರಾಮಾಯಣದಲ್ಲಿ ಏನಾದರೂ ಪ್ರಸ್ತಾಪವಾಗಿದೆಯೋ ಎಂಬುದು ತಿಳಿದಿಲ್ಲ. ಇದರ ಬಗ್ಗೆ ನಮಗೆ ತಿಳಿದವರೇ ಹೇಳಬೇಕು.
ಅದೇನಾದರೂ ಇರಲಿ. ’ರಾಮಾಯಣದ ವಾನರರು ನಿಜವಾಗಿಯೂ ಕೋತಿಗಳಲ್ಲ. ಮನುಶ್ಯರೇ. ಅದರಲ್ಲೂ ಕನ್ನಡಿಗರು. ಬಹುತೇಕ ಕನ್ನಡಿಗರು ಕಪ್ಪು ಮಯ್ಬಣ್ಣದವರಾದದ್ದರಿಂದ, ಬಿಳಿ ಚಾಯೆಯ ಉತ್ತರದ ಆರ್ಯರು ಕರಿ ಚಾಯೆಯ ದಕ್ಶಿಣದ ದ್ರಾವಿಡರನ್ನು ತುಚ್ಚವಾಗಿ ಕಾಣುವ ಉದ್ದೇಶದಿಂದ ಅವರನ್ನು ವಾನರರಿಗೆ ಹೋಲಿಸಿದ್ದಾರೆ’ - ಇದು ಒಟ್ಟಾರೆ ದೂರು. ಈ ದೂರನ್ನು ದಕ್ಶಿಣದ ಕೆಲವರು ಆಗ್ಗಾಗ್ಗೆ ಮಾಡುತ್ತಾ ಬಂದಿದ್ದಾರೆ. ಈ ದೂರಿನಲ್ಲಿ ಏನಾದರು ಹುರುಳಿದೆಯೆ? ಇದು ನಾವು ಕೇಳಬೇಕಾದ ಕೇಳ್ಕೆ.
ವಯ್ಯಕ್ತಿಕವಾಗಿ ನನಗನ್ನಿಸುವುದು, ’ಈ ದೂರಿನಲ್ಲಿ ಹುರುಳಿಲ್ಲ’ ಎಂದೇ. ಏಕೆಂದರೆ, ರಾಮಾಯಣದಲ್ಲಿ ಹನುಮಂತ ಎಂಟ್ರಿ ಕೊಟ್ಟ ಕ್ಶಣದಿಂದಲೇ ಅದರ ಚಹರೆಯೇ ಬದಲಾಗಿಬಿಡುತ್ತದೆ. ರಾವಣ ಅಳಿಯುವವರೆಗೆ ಹನುಮಂತನೇ ಕತಾನಾಯಕನಾಗುತ್ತಾನೆ. ವಾನರರದೇ ಪ್ರದಾನ ಪಾತ್ರವಾಗುತ್ತದೆ. ಹೀಗೆ, ಒಂದು ಕತೆಯಲ್ಲಿ ಒಂದು ಸಮುದಾಯವನ್ನು ಕೀಳೆಂದು ಗುರುತಿಸಿ, ಅದೇ ಕತೆಯಲ್ಲಿ ಅದೇ ಸಮುದಾಯವನ್ನು ಏಕಕಾಲಕ್ಕೆ ವಯ್ಬವೀಕರಿಸುವುದು ಅಸಮಂಜಸ ಎನಿಸುವುದಿಲ್ಲವೆ? ರಾಮಾಯಣದಲ್ಲಿ ಹೇರಳವಾಗಿ ಕಾಲ್ಪನಿಕ ಅಂಶಗಳು ಸೇರಿಕೊಂಡಿವೆ. ಅವುಗಳಲ್ಲಿ ’ವಾನರರ’ ಸಂಗತಿಯೂ ಒಂದು ಕಾಲ್ಪನಿಕ ಅಂಶ ಎನಿಸುತ್ತದೆ ನನಗೆ. ಅಶ್ಟಕ್ಕೂ ರಾಮಾಯಣಕ್ಕೆ ಒಂದೇ ಆವ್ರುತ್ತಿ ಇಲ್ಲ. ಹಲವಾರು ಬೇರೆಬೇರೆ ರಾಮಾಯಣದ ಆವ್ರುತ್ತಿಗಳಿವೆ. ರಾಮಾಯಣದ ಕೆಲವು ಬಗೆಗಳಲ್ಲಿ ವಾನರರ ಪ್ರಸ್ತಾಪವೇ ಇಲ್ಲ. ಉದಾಹರಣೆಗೆ, ಹಳಗನ್ನಡದ ಕವಿ ನಾಗಚಂದ್ರನ ರಾಮಾಯಣದಲ್ಲಿ ಹನುಮಂತ ಕೋತಿಯೂ ಅಲ್ಲ, ರಾವಣ ರಾಕ್ಶಸನೂ ಅಲ್ಲ. ಅಶ್ಟೇ ಏಕೆ, ಅದರಲ್ಲಿ ಅವರಿಬ್ಬರೂ ನಂಟರು ಬೇರೆ! ಹಾಗಾಗಿ, ಬರಿಯ ಕಲ್ಪನೆಯ ಒಂದು ಅಂಶಕ್ಕೆ ವಿಪರೀತ ಅರ್ತ ಕೊಟ್ಟು, ನಾವು ಕನ್ನಡಿಗರು ರಾಮಾಯಣದ ಬಗ್ಗೆ ಅಲರ್ಜಿ ಬರಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ನನಗೆ ಅನ್ನಿಸುತ್ತದೆ.
ಹಾಗೆ ನೋಡಿದರೆ, ಉತ್ತರದವರು ನಮ್ಮನ್ನು ರಾಮಾಯಣದಲ್ಲಿ ಕೀಳಾಗಿ ಕಂಡಿದ್ದಾರಾ ಎನ್ನುವುದಕ್ಕಿಂತ ಅವರು ಈಗಲೂ ಹಾಗೇ ಮಾಡುತ್ತಿದ್ದಾರಾ ಎನ್ನುವುದು ಮುಕ್ಯ. ಸತ್ಯವಾಗಿಯೂ ಹಾಗೇ ಮಾಡುತ್ತಿದ್ದಾರೆ! ಇದೇ ಮುಕ್ಯ. ಜೊತೆಗೆ, ಇದು ಎಲ್ಲರಿಗೂ ಗೊತ್ತಿರುವ ವಿಶಯ ಕೂಡ. ಬಡಗರು, ನಾವು ತೆಂಕಣರನ್ನು ’ಮದ್ರಾಸಿ’ ಎಂಬ ಒಂದೇ ಪದದಿಂದ, ನಾಯಿಕುನ್ನಿಯನ್ನು ಎತ್ತಿ ಪಕ್ಕಕ್ಕೆ ಹಾಕುವ ಹಾಗೆ ಹಾಕಿಬಿಡುತ್ತಾರೆ. ತೆಂಕಣರಲ್ಲಿ ಕನ್ನಡಿಗರು, ತಮಿಳರು, ತೆಲುಗರು ಮುಂತಾದ ಬೇರೆಬೇರೆ ಸಮುದಾಯಗಳಿವೆ ಎನ್ನುವುದು ಅವರಿಗೆ ಮುಕ್ಯವಲ್ಲ. ಅವರಿಗೆ ಅದು ಬೇಕಾಗೂ ಇಲ್ಲ. ಅವರು ಮದ್ರಾಸಿ ಎಂದು ಹೇಳುವಾಗ ಉಚ್ಚಾರಣೆಯ ದಾಟಿಯನ್ನು ಗಮನಿಸಬೇಕು. ದಕ್ಶಿಣದವರ ಬಗ್ಗೆ ಅವರಿಗೆ ಇರುವ ’ಆದರ’ ಅದರಲ್ಲಿ ಹಾಗೇ ತೊಟ್ಟಿಕ್ಕುತ್ತದೆ!
ಉತ್ತರದ ಜನಸಾಮಾನ್ಯರು ಹಾಳಾಗಿ ಹೋಗಲಿ ಬಿಡಿ. ಕವಿವರ್ಯ ಟಾಗೋರರ ’ಜನಗಣಮನ’ ಗೀತೆಯಲ್ಲೂ ದಕ್ಶಿಣದವರಿಗೆ ತಕ್ಕ ಗೌರವ ಸಿಕ್ಕಿಲ್ಲ. ಪಂಜಾಬ ಸಿಂದ ಗುಜರಾತ ಮರಾಟ ’ದ್ರಾವಿಡ’ ಉತ್ಕಲ ವಂಗ! ತೆಂಕಣಿಗರಿಗೆಲ್ಲ ದ್ರಾವಿಡ ಎಂಬ ಒಂದೇ ಹೆಸರಿನ ಹಣೆಪಟ್ಟಿ! ಟಾಗೋರರಿಗೆ ದಕ್ಶಿಣದವರನ್ನು ಕಡೆಗಣಿಸುವ ಉದ್ದೇಶ ಇದ್ದಿರಲಿಕ್ಕಿಲ್ಲ. ಅನುಕೂಲಕ್ಕಾಗಿ ಎಲ್ಲರನ್ನೂ ದ್ರಾವಿಡ ಎಂದು ಒಟ್ಟುಸೇರಿಸಿ ಅವರು ಕರೆದಿರಬಹುದು. ಆದರೂ, ಸಂಸ್ಕ್ರುತಜನ್ಯ ಬಾಶೆಗಳನ್ನಾಡುವವರನ್ನೆಲ್ಲ ಬಿಡಿಬಿಡಿಯಾಗಿ ಗುರುತಿಸಿ, ದ್ರಾವಿಡ ನುಡಿಗಳನ್ನಾಡುವವರನ್ನು ಮಾತ್ರ ಒಟ್ಟಾರೆಯಾಗಿ ದ್ರಾವಿಡರು ಎಂದು ಕರೆದಿರುವುದು ಸರಿಯಲ್ಲ. ದೇಶದ ಕೆಲವು ಸಮುದಾಯಗಳನ್ನಂತೂ ಟಾಗೋರರು ಸಂಪೂರ್ಣವಾಗಿ ಕಯ್ಬಿಟ್ಟಿದ್ದಾರೆ. ಆ ಸಮುದಾಯಗಳಿಗೆ ಹೋಲಿಸಿದರೆ ನಮ್ಮ ಪಾಡು ಉತ್ತಮ ಎನ್ನಬಹುದು.
ದಕ್ಶಿಣದಲ್ಲಿ ನಮ್ಮನ್ನು ನಾವು, ’ನಾವು ಕನ್ನಡಿಗರು, ನಾವು ತಮಿಳರು, ನಾವು ತೆಲುಗರು’, ಹೀಗೆ ಸಹಜವಾಗೇ ಬೇರೆಬೇರೆಯಾಗಿ ಗುರುತಿಸಿಕೊಳ್ಳುತ್ತೇವೆ. ಆದ್ದರಿಂದ, ಯಾರಾದರೂ ನಮ್ಮನ್ನು ಮದ್ರಾಸಿ ಎಂದೋ, ದ್ರಾವಿಡ ಎಂದೋ ಇಲ್ಲ ಸವ್ತಿ ಎಂದೋ ಒಂದೇ ಹೆಸರಿನಿಂದ ಕರೆದರೆ ನಮಗೆ ಬೇಸರವಾಗುವುದು ಸ್ವಾಬಾವಿಕ (ಅಂದ ಹಾಗೆ, ಈಗಿನ ತಲೆಮಾರಿನ ನಮ್ಮ ಹುಡುಗರು ’ನಾರ್ತಿ’ ಎಂದು ಉತ್ತರದವರನ್ನು ಅವರ ದಾಟಿಯಲ್ಲೇ ಕರೆಯುತ್ತಾರೆ. ಆದರೆ, ಅದು ಬೇರೆ ಮಾತು). ಹೀಗೆ ಸುಮ್ಮನೆ ಬೇಸರಪಟ್ಟುಕೊಳ್ಳುವ ಬದಲು, ಉತ್ತರದವರು ನಮ್ಮನ್ನು ಮದ್ರಾಸಿ ಎಂದು ಕೀಳಾಗಿ ಕರೆಯುವುದರ ಹಿನ್ನೆಲೆ ಏನು ಎಂಬುದರ ಬಗ್ಗೆ ಸ್ವಲ್ಪ ಯೋಚಿಸಿ, ಅದರ ಬಗ್ಗೆ ತಕ್ಕ ದೋರಣೆಯನ್ನು ನಾವು ಬೆಳೆಸಿಕೊಳ್ಳುವುದು ಒಳ್ಳೆಯದು.
ಉತ್ತರದವರು ದಕ್ಶಿಣದವರನ್ನು ಕೀಳಾಗಿ ಕಾಣುವುದು ನಿನ್ನೆ ಮೊನ್ನೆಯ ಚಾಳಿಯಲ್ಲ. ತುಂಬಾ ಹಿಂದಿನಿಂದಲೂ ಅವರು ಹೀಗೇ ಮಾಡುತ್ತಾ ಬಂದಿದ್ದಾರೆ. ’ದಕ್ಶಿಣದವರು ದಡ್ಡರು’ ಎಂಬ ಉಕ್ತಿಯೇ ಇದೆ ಸಂಸ್ಕ್ರುತದಲ್ಲಿ. ಆದ್ದರಿಂದ, ಉತ್ತರದವರ ಮೇಲೆ ಸುಮ್ಮನೆ ಕೆರಳುವ ಬದಲು, ಅವರ ಮೇಲೆ ಉಂಟಾಗುವ ಮುನಿಸನ್ನು ನಾವು ಸರಿಯಾದ ನಿಟ್ಟಿನಲ್ಲಿ ಹರಿಸಬೇಕು. ನಮ್ಮ ಒಳಿತಿಗಾಗಿ ಆ ಸಿಟ್ಟನ್ನು ಬಳಸಿಕೊಳ್ಳಬೇಕು. ’ನಮ್ಮನ್ನೆಲ್ಲ ಮದ್ರಾಸಿ ಎಂಬ ಒಂದೇ ಹಣೆಪಟ್ಟಿಯಿಂದ ಕಡೆಗಣಿಸುತ್ತೀರಿ ತಾನೆ? ನಾವೂ ಅಶ್ಟೆ. ನಿಮ್ಮ ಜೊತೆ ವ್ಯವಹರಿಸಬೇಕಾಗಿ ಬಂದಾಗಲೆಲ್ಲ ನಾವು, ಮದ್ರಾಸಿ ಎಂಬ ಒಂದೇ ಹಣೆಪಟ್ಟಿಯಿಂದಲೇ ಒಗ್ಗಟ್ಟಿನಿಂದಲೇ ವ್ಯವಹರಿಸುತ್ತೇವೆ’ ಎನ್ನುವ ಚಲವನ್ನು ನಾವು ತೋರಿಸಬೇಕು. ’ರಾಶ್ಟ್ರಗೀತೆಯಲ್ಲಿ ನಮ್ಮನ್ನೆಲ್ಲ ದ್ರಾವಿಡರು ಎಂದು ಒಟ್ಟಾಗಿ ಕರೆದಿದ್ದೀರಿ ತಾನೆ? ರಾಶ್ಟ್ರಗೀತೆಯಲ್ಲಿರುವುದೇ ಸರಿ. ನಾವೆಲ್ಲ ದ್ರಾವಿಡರೆ. ನಿಮ್ಮ ಕಿರುಕುಳಗಳನ್ನು ಎದುರಿಸುವ ಸನ್ನಿವೇಶ ಬಂದಾಗಲೆಲ್ಲ ನಾವೆಲ್ಲ ಒಂದೇ’ ಎಂದು ದ್ರಾವಿಡೇತರರಿಗೆ ಮನದಟ್ಟಾಗುವ ಹಾಗೆ ನಾವು ನಡೆದುಕೊಳ್ಳಬೇಕು.
ಹೀಗೆ ನಮ್ಮನ್ನು ನಾವು ಗುರುತಿಸಿಕೊಳ್ಳುವುದರಲ್ಲಿ ಮಾರ್ಪಾಟನ್ನು ತಂದುಕೊಳ್ಳಬೇಕು. ಆದರೆ, ಇಂತಹ ಕಣ್ಣೋಲಿನ ಮಾರ್ಪಾಟು ಬೇಕಾಗಿರುವುದು ಬರೀ ಸೇಡು ತೀರಿಸಿಕೊಳ್ಳುವುದಕ್ಕೆಂದಲ್ಲ. ಇಂತಹ ಮಾರ್ಪಾಟು ನಿಜಕ್ಕೂ ಬೇಕಾಗಿರುವುದು ಉತ್ತರದಿಂದ ತಡೆಯಿಲ್ಲದೆ ನಮ್ಮೆಡೆಗೆ ಬರುವ ಕಿರುಕುಳಗಳನ್ನು ಸಮರ್ತವಾಗಿ ಎದುರಿಸುವುದಕ್ಕಾಗಿ. ಏಕೆಂದರೆ, ಉತ್ತರದಿಂದ ಬರುವ ಕಿರುಕುಳಗಳು ಕನ್ನಡಿಗರಿಗೆ ಮಾತ್ರ ಕಿರುಕುಳಗಳಾಗಿರುವುದಿಲ್ಲ. ಸಾಮಾನ್ಯವಾಗಿ ಅವು ದಕ್ಶಿಣದವರೆಲ್ಲರಿಗೂ ಕಿರುಕುಳಗಳಾಗಿರುತ್ತವೆ. ಆದ್ದರಿಂದ ಉತ್ತರದವರ ಕಿರುಕುಳಗಳನ್ನು ಎದುರಿಸುವಾಗ ’ಮದ್ರಾಸಿಗಳು’ ನಾವು ಒಗ್ಗಟ್ಟಿನಿಂದ ಕಯ್ ಕಯ್ ಸೇರಿಸಿ ನಿಲ್ಲಬೇಕು. ಹಾಗೆ ನಿಂತರೇ ನಮಗೆ ಒಳಿತು.
ನಲ್ಮೆಯೊಡನೆ,
ಎಚ್.ಎಸ್.ರಾಜ್
ಕೆಲ ದಿನಗಳ ಹಿಂದೆ ಹಿರಿಯ ರಾಜಕಾರಿಣಿ ರಾಮ್ ಜೇಟ್ಮಲಾನಿ ಅವರು ’ರಾಮಾಯಣದ ಶ್ರೀರಾಮ ಒಬ್ಬ ಕೆಟ್ಟ ಗಂಡ’ ಎಂದು ನುಡಿದು ತಮ್ಮ ಪಕ್ಶ ಬೀಜೇಪಿಗೆ ಇನ್ನಿಲ್ಲದ ಮುಜುಗರ ಉಂಟುಮಾಡಿದರು! ಶ್ರೀರಾಮನನ್ನೇ ಬಂಡವಾಳ ಮಾಡಿಕೊಂಡಿರುವ ಬೀಜೇಪಿಗೆ ಇಂತಹ ಕಸಿವಿಸಿ ಆಗಬಾರದಿತ್ತು, ಪಾಪ!
ಜೇಟ್ಮಲಾನಿಯವರ ಅನಿಸಿಕೆಗೆ ಸಹಜವಾಗೇ ದೇಶದ ತುಂಬೆಲ್ಲ ಕೂಡಲೆ ಪ್ರತಿಕ್ರಿಯೆಗಳು ಬಂದವು. ನಮ್ಮ ಟೀವಿ ಕಾಲುವೆಗಳಲ್ಲೂ ಈ ವಿಶಯದ ಮೇಲೆ ಕೆಲ ಬಿಸಿ ಚರ್ಚೆಗಳು ನಡೆದವು. ಕೇಸರಿಪರ ಕಟ್ಟಾಳುಗಳು, ’ರಾಮ ತ್ಯಾಗಮಯಿ, ಆದರ್ಶ ದೊರೆ, ಆದರ್ಶ ಪತಿ. ಜೇಟ್ಮಲಾನಿಯವರು ಎಲ್ಲೋ ಬಾಯ್ತಪ್ಪಿ ಏನೋ ಹೇಳಿದ್ದಾರೆ’ ಎಂದು ತಿಪ್ಪೆ ಸಾರಿಸಿಕೊಂಡರು. ’ಇವತ್ತೇನಾದ್ರು ರಾಮ ತುಂಬು ಬಸಿರಿ ಸೀತೇನ ಕಾಡಿಗೆ ಕಳಿಸಿದ್ದರೆ ಜಯ್ಲಿಗೆ ಹೋಗುತ್ತಿದ್ದ’ ಎನ್ನುವ ದಾಟಿಯಲ್ಲಿ ಎದುರುವಾದಿಗಳು ಕೇಸರಿಪರದವರಿಗೆ ವಿಕ್ರುತ ಹಿಗ್ಗಿನಿಂದ ಮತ್ತೆ ಮತ್ತೆ ತೀಡಿದರು.
’ರಾಮ ಒಳ್ಳೆ ಗಂಡನೋ ಕೆಟ್ಟ ಗಂಡನೋ, ಅದರ ತಂಟೆ ನಮಗೆ ಯಾಕೆ ಬಿಡಿ. ಅದೊಂದು ಉಪಯೋಗಕ್ಕೆ ಬಾರದ ವಾದವಿವಾದ’, ಎನ್ನುವುದು ಈ ವಿಶಯದಲ್ಲಿ ನನ್ನ ವಯ್ಯಕ್ತಿಕ ಅನಿಸಿಕೆ. ಹಾಗಾಗಿ, ಟೀವೀಯಲ್ಲಿ ನಡೆಯುತ್ತಿದ್ದ ಹಗ್ಗಜಗ್ಗಾಟವನ್ನು ’ಇದೂ ಒಂದು ಮನರಂಜನೆ’ ಎಂದು ಮನಸ್ಸಿನಲ್ಲೇ ಅಂದುಕೊಂಡು ಹಗುರಾಗಿ ನೋಡುತ್ತಿದ್ದೆ. ಆಗ, ವಾದವಿವಾದದ ನಡುವೆ ಒಬ್ಬರು ಹೇಳಿದ ಮಾತೊಂದು ನನ್ನ ಗಮನ ಸೆಳೆಯಿತು. ರಾಮಾಯಣದಲ್ಲಿ ಕನ್ನಡಿಗರನ್ನು ’ವಾನರರು’ ಎಂದು ಕರೆದು ಅವಹೇಳನ ಮಾಡಲಾಗಿದೆಯಂತೆ - ಇದು ಅವರು ಹೇಳಿದ್ದು. ಇದನ್ನು ಕೇಳಿದ ಕೂಡಲೆ ನನ್ನ ನೆನಪಿನ ಅಂಗಳದಲ್ಲಿ ಕೊಂಚ ಸಂಚಲನ ಉಂಟಾಯಿತು. ಈ ಅಬಿಪ್ರಾಯವನ್ನು ಬಹು ಹಿಂದಿನಿಂದಲೂ ನಾನು ಆಗಾಗ್ಗೆ ಕೆಲವರ ಬಾಯಲ್ಲಿ ಕೇಳಿದ್ದೆ. ಕೇಳಿದಾಗಲೆಲ್ಲ ಅದರ ಬಗ್ಗೆ ನನಗೆ ಏನನ್ನಿಸಿತ್ತು ಎಂಬುದನ್ನು ಕೊಂಚ ಮೆಲುಕು ಹಾಕಿದೆ.
ರಾಮನಿಗೆ ಅವನ ಬೆಂಬಲಕ್ಕೆ ನಿಂತ ’ವಾನರರು’ ಸಿಕ್ಕಿದ್ದು ದಕ್ಶಿಣದಲ್ಲೇ. ಅದರ ಮೇಲೆ, ’... ಆ ಜಲದಿಯನೆ ಜಿಗಿದ ಹನುಮ ಪುಟ್ಟಿದ ನಾಡು... ’ ಎಂದು ಬೇರೆ ನಾವು ಹೆಮ್ಮೆಯಿಂದ ನಮ್ಮ ನಾಡಿನ ಬಗ್ಗೆ ಹೇಳಿಕೊಳ್ಳುತ್ತೇವೆ. ಆದ್ದರಿಂದ, ರಾಮಾಯಣದ ವಾನರರು ಕನ್ನಡ ನಾಡಿನವರು ಎನ್ನುವುದರಲ್ಲಿ ಅನುಮಾನವಿಲ್ಲ. ಆಗಿನ ಕಾಲದಲ್ಲಿ ನಮ್ಮ ನಾಡಿನಲ್ಲಿ ಬರೀ ವಾನರರು ಮಾತ್ರ ಇದ್ದರೋ, ಇಲ್ಲ ಅವರ ಜೊತೆ ಬೇರೆ ಸಾಮಾನ್ಯ ಮನುಶ್ಯರೂ ಇದ್ದರೋ, ಇದ್ದರೂ ಆವರ ಬಗ್ಗೆ ರಾಮಾಯಣದಲ್ಲಿ ಏನಾದರೂ ಪ್ರಸ್ತಾಪವಾಗಿದೆಯೋ ಎಂಬುದು ತಿಳಿದಿಲ್ಲ. ಇದರ ಬಗ್ಗೆ ನಮಗೆ ತಿಳಿದವರೇ ಹೇಳಬೇಕು.
ಅದೇನಾದರೂ ಇರಲಿ. ’ರಾಮಾಯಣದ ವಾನರರು ನಿಜವಾಗಿಯೂ ಕೋತಿಗಳಲ್ಲ. ಮನುಶ್ಯರೇ. ಅದರಲ್ಲೂ ಕನ್ನಡಿಗರು. ಬಹುತೇಕ ಕನ್ನಡಿಗರು ಕಪ್ಪು ಮಯ್ಬಣ್ಣದವರಾದದ್ದರಿಂದ, ಬಿಳಿ ಚಾಯೆಯ ಉತ್ತರದ ಆರ್ಯರು ಕರಿ ಚಾಯೆಯ ದಕ್ಶಿಣದ ದ್ರಾವಿಡರನ್ನು ತುಚ್ಚವಾಗಿ ಕಾಣುವ ಉದ್ದೇಶದಿಂದ ಅವರನ್ನು ವಾನರರಿಗೆ ಹೋಲಿಸಿದ್ದಾರೆ’ - ಇದು ಒಟ್ಟಾರೆ ದೂರು. ಈ ದೂರನ್ನು ದಕ್ಶಿಣದ ಕೆಲವರು ಆಗ್ಗಾಗ್ಗೆ ಮಾಡುತ್ತಾ ಬಂದಿದ್ದಾರೆ. ಈ ದೂರಿನಲ್ಲಿ ಏನಾದರು ಹುರುಳಿದೆಯೆ? ಇದು ನಾವು ಕೇಳಬೇಕಾದ ಕೇಳ್ಕೆ.
ವಯ್ಯಕ್ತಿಕವಾಗಿ ನನಗನ್ನಿಸುವುದು, ’ಈ ದೂರಿನಲ್ಲಿ ಹುರುಳಿಲ್ಲ’ ಎಂದೇ. ಏಕೆಂದರೆ, ರಾಮಾಯಣದಲ್ಲಿ ಹನುಮಂತ ಎಂಟ್ರಿ ಕೊಟ್ಟ ಕ್ಶಣದಿಂದಲೇ ಅದರ ಚಹರೆಯೇ ಬದಲಾಗಿಬಿಡುತ್ತದೆ. ರಾವಣ ಅಳಿಯುವವರೆಗೆ ಹನುಮಂತನೇ ಕತಾನಾಯಕನಾಗುತ್ತಾನೆ. ವಾನರರದೇ ಪ್ರದಾನ ಪಾತ್ರವಾಗುತ್ತದೆ. ಹೀಗೆ, ಒಂದು ಕತೆಯಲ್ಲಿ ಒಂದು ಸಮುದಾಯವನ್ನು ಕೀಳೆಂದು ಗುರುತಿಸಿ, ಅದೇ ಕತೆಯಲ್ಲಿ ಅದೇ ಸಮುದಾಯವನ್ನು ಏಕಕಾಲಕ್ಕೆ ವಯ್ಬವೀಕರಿಸುವುದು ಅಸಮಂಜಸ ಎನಿಸುವುದಿಲ್ಲವೆ? ರಾಮಾಯಣದಲ್ಲಿ ಹೇರಳವಾಗಿ ಕಾಲ್ಪನಿಕ ಅಂಶಗಳು ಸೇರಿಕೊಂಡಿವೆ. ಅವುಗಳಲ್ಲಿ ’ವಾನರರ’ ಸಂಗತಿಯೂ ಒಂದು ಕಾಲ್ಪನಿಕ ಅಂಶ ಎನಿಸುತ್ತದೆ ನನಗೆ. ಅಶ್ಟಕ್ಕೂ ರಾಮಾಯಣಕ್ಕೆ ಒಂದೇ ಆವ್ರುತ್ತಿ ಇಲ್ಲ. ಹಲವಾರು ಬೇರೆಬೇರೆ ರಾಮಾಯಣದ ಆವ್ರುತ್ತಿಗಳಿವೆ. ರಾಮಾಯಣದ ಕೆಲವು ಬಗೆಗಳಲ್ಲಿ ವಾನರರ ಪ್ರಸ್ತಾಪವೇ ಇಲ್ಲ. ಉದಾಹರಣೆಗೆ, ಹಳಗನ್ನಡದ ಕವಿ ನಾಗಚಂದ್ರನ ರಾಮಾಯಣದಲ್ಲಿ ಹನುಮಂತ ಕೋತಿಯೂ ಅಲ್ಲ, ರಾವಣ ರಾಕ್ಶಸನೂ ಅಲ್ಲ. ಅಶ್ಟೇ ಏಕೆ, ಅದರಲ್ಲಿ ಅವರಿಬ್ಬರೂ ನಂಟರು ಬೇರೆ! ಹಾಗಾಗಿ, ಬರಿಯ ಕಲ್ಪನೆಯ ಒಂದು ಅಂಶಕ್ಕೆ ವಿಪರೀತ ಅರ್ತ ಕೊಟ್ಟು, ನಾವು ಕನ್ನಡಿಗರು ರಾಮಾಯಣದ ಬಗ್ಗೆ ಅಲರ್ಜಿ ಬರಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ನನಗೆ ಅನ್ನಿಸುತ್ತದೆ.
ಹಾಗೆ ನೋಡಿದರೆ, ಉತ್ತರದವರು ನಮ್ಮನ್ನು ರಾಮಾಯಣದಲ್ಲಿ ಕೀಳಾಗಿ ಕಂಡಿದ್ದಾರಾ ಎನ್ನುವುದಕ್ಕಿಂತ ಅವರು ಈಗಲೂ ಹಾಗೇ ಮಾಡುತ್ತಿದ್ದಾರಾ ಎನ್ನುವುದು ಮುಕ್ಯ. ಸತ್ಯವಾಗಿಯೂ ಹಾಗೇ ಮಾಡುತ್ತಿದ್ದಾರೆ! ಇದೇ ಮುಕ್ಯ. ಜೊತೆಗೆ, ಇದು ಎಲ್ಲರಿಗೂ ಗೊತ್ತಿರುವ ವಿಶಯ ಕೂಡ. ಬಡಗರು, ನಾವು ತೆಂಕಣರನ್ನು ’ಮದ್ರಾಸಿ’ ಎಂಬ ಒಂದೇ ಪದದಿಂದ, ನಾಯಿಕುನ್ನಿಯನ್ನು ಎತ್ತಿ ಪಕ್ಕಕ್ಕೆ ಹಾಕುವ ಹಾಗೆ ಹಾಕಿಬಿಡುತ್ತಾರೆ. ತೆಂಕಣರಲ್ಲಿ ಕನ್ನಡಿಗರು, ತಮಿಳರು, ತೆಲುಗರು ಮುಂತಾದ ಬೇರೆಬೇರೆ ಸಮುದಾಯಗಳಿವೆ ಎನ್ನುವುದು ಅವರಿಗೆ ಮುಕ್ಯವಲ್ಲ. ಅವರಿಗೆ ಅದು ಬೇಕಾಗೂ ಇಲ್ಲ. ಅವರು ಮದ್ರಾಸಿ ಎಂದು ಹೇಳುವಾಗ ಉಚ್ಚಾರಣೆಯ ದಾಟಿಯನ್ನು ಗಮನಿಸಬೇಕು. ದಕ್ಶಿಣದವರ ಬಗ್ಗೆ ಅವರಿಗೆ ಇರುವ ’ಆದರ’ ಅದರಲ್ಲಿ ಹಾಗೇ ತೊಟ್ಟಿಕ್ಕುತ್ತದೆ!
ಉತ್ತರದ ಜನಸಾಮಾನ್ಯರು ಹಾಳಾಗಿ ಹೋಗಲಿ ಬಿಡಿ. ಕವಿವರ್ಯ ಟಾಗೋರರ ’ಜನಗಣಮನ’ ಗೀತೆಯಲ್ಲೂ ದಕ್ಶಿಣದವರಿಗೆ ತಕ್ಕ ಗೌರವ ಸಿಕ್ಕಿಲ್ಲ. ಪಂಜಾಬ ಸಿಂದ ಗುಜರಾತ ಮರಾಟ ’ದ್ರಾವಿಡ’ ಉತ್ಕಲ ವಂಗ! ತೆಂಕಣಿಗರಿಗೆಲ್ಲ ದ್ರಾವಿಡ ಎಂಬ ಒಂದೇ ಹೆಸರಿನ ಹಣೆಪಟ್ಟಿ! ಟಾಗೋರರಿಗೆ ದಕ್ಶಿಣದವರನ್ನು ಕಡೆಗಣಿಸುವ ಉದ್ದೇಶ ಇದ್ದಿರಲಿಕ್ಕಿಲ್ಲ. ಅನುಕೂಲಕ್ಕಾಗಿ ಎಲ್ಲರನ್ನೂ ದ್ರಾವಿಡ ಎಂದು ಒಟ್ಟುಸೇರಿಸಿ ಅವರು ಕರೆದಿರಬಹುದು. ಆದರೂ, ಸಂಸ್ಕ್ರುತಜನ್ಯ ಬಾಶೆಗಳನ್ನಾಡುವವರನ್ನೆಲ್ಲ ಬಿಡಿಬಿಡಿಯಾಗಿ ಗುರುತಿಸಿ, ದ್ರಾವಿಡ ನುಡಿಗಳನ್ನಾಡುವವರನ್ನು ಮಾತ್ರ ಒಟ್ಟಾರೆಯಾಗಿ ದ್ರಾವಿಡರು ಎಂದು ಕರೆದಿರುವುದು ಸರಿಯಲ್ಲ. ದೇಶದ ಕೆಲವು ಸಮುದಾಯಗಳನ್ನಂತೂ ಟಾಗೋರರು ಸಂಪೂರ್ಣವಾಗಿ ಕಯ್ಬಿಟ್ಟಿದ್ದಾರೆ. ಆ ಸಮುದಾಯಗಳಿಗೆ ಹೋಲಿಸಿದರೆ ನಮ್ಮ ಪಾಡು ಉತ್ತಮ ಎನ್ನಬಹುದು.
ದಕ್ಶಿಣದಲ್ಲಿ ನಮ್ಮನ್ನು ನಾವು, ’ನಾವು ಕನ್ನಡಿಗರು, ನಾವು ತಮಿಳರು, ನಾವು ತೆಲುಗರು’, ಹೀಗೆ ಸಹಜವಾಗೇ ಬೇರೆಬೇರೆಯಾಗಿ ಗುರುತಿಸಿಕೊಳ್ಳುತ್ತೇವೆ. ಆದ್ದರಿಂದ, ಯಾರಾದರೂ ನಮ್ಮನ್ನು ಮದ್ರಾಸಿ ಎಂದೋ, ದ್ರಾವಿಡ ಎಂದೋ ಇಲ್ಲ ಸವ್ತಿ ಎಂದೋ ಒಂದೇ ಹೆಸರಿನಿಂದ ಕರೆದರೆ ನಮಗೆ ಬೇಸರವಾಗುವುದು ಸ್ವಾಬಾವಿಕ (ಅಂದ ಹಾಗೆ, ಈಗಿನ ತಲೆಮಾರಿನ ನಮ್ಮ ಹುಡುಗರು ’ನಾರ್ತಿ’ ಎಂದು ಉತ್ತರದವರನ್ನು ಅವರ ದಾಟಿಯಲ್ಲೇ ಕರೆಯುತ್ತಾರೆ. ಆದರೆ, ಅದು ಬೇರೆ ಮಾತು). ಹೀಗೆ ಸುಮ್ಮನೆ ಬೇಸರಪಟ್ಟುಕೊಳ್ಳುವ ಬದಲು, ಉತ್ತರದವರು ನಮ್ಮನ್ನು ಮದ್ರಾಸಿ ಎಂದು ಕೀಳಾಗಿ ಕರೆಯುವುದರ ಹಿನ್ನೆಲೆ ಏನು ಎಂಬುದರ ಬಗ್ಗೆ ಸ್ವಲ್ಪ ಯೋಚಿಸಿ, ಅದರ ಬಗ್ಗೆ ತಕ್ಕ ದೋರಣೆಯನ್ನು ನಾವು ಬೆಳೆಸಿಕೊಳ್ಳುವುದು ಒಳ್ಳೆಯದು.
ಉತ್ತರದವರು ದಕ್ಶಿಣದವರನ್ನು ಕೀಳಾಗಿ ಕಾಣುವುದು ನಿನ್ನೆ ಮೊನ್ನೆಯ ಚಾಳಿಯಲ್ಲ. ತುಂಬಾ ಹಿಂದಿನಿಂದಲೂ ಅವರು ಹೀಗೇ ಮಾಡುತ್ತಾ ಬಂದಿದ್ದಾರೆ. ’ದಕ್ಶಿಣದವರು ದಡ್ಡರು’ ಎಂಬ ಉಕ್ತಿಯೇ ಇದೆ ಸಂಸ್ಕ್ರುತದಲ್ಲಿ. ಆದ್ದರಿಂದ, ಉತ್ತರದವರ ಮೇಲೆ ಸುಮ್ಮನೆ ಕೆರಳುವ ಬದಲು, ಅವರ ಮೇಲೆ ಉಂಟಾಗುವ ಮುನಿಸನ್ನು ನಾವು ಸರಿಯಾದ ನಿಟ್ಟಿನಲ್ಲಿ ಹರಿಸಬೇಕು. ನಮ್ಮ ಒಳಿತಿಗಾಗಿ ಆ ಸಿಟ್ಟನ್ನು ಬಳಸಿಕೊಳ್ಳಬೇಕು. ’ನಮ್ಮನ್ನೆಲ್ಲ ಮದ್ರಾಸಿ ಎಂಬ ಒಂದೇ ಹಣೆಪಟ್ಟಿಯಿಂದ ಕಡೆಗಣಿಸುತ್ತೀರಿ ತಾನೆ? ನಾವೂ ಅಶ್ಟೆ. ನಿಮ್ಮ ಜೊತೆ ವ್ಯವಹರಿಸಬೇಕಾಗಿ ಬಂದಾಗಲೆಲ್ಲ ನಾವು, ಮದ್ರಾಸಿ ಎಂಬ ಒಂದೇ ಹಣೆಪಟ್ಟಿಯಿಂದಲೇ ಒಗ್ಗಟ್ಟಿನಿಂದಲೇ ವ್ಯವಹರಿಸುತ್ತೇವೆ’ ಎನ್ನುವ ಚಲವನ್ನು ನಾವು ತೋರಿಸಬೇಕು. ’ರಾಶ್ಟ್ರಗೀತೆಯಲ್ಲಿ ನಮ್ಮನ್ನೆಲ್ಲ ದ್ರಾವಿಡರು ಎಂದು ಒಟ್ಟಾಗಿ ಕರೆದಿದ್ದೀರಿ ತಾನೆ? ರಾಶ್ಟ್ರಗೀತೆಯಲ್ಲಿರುವುದೇ ಸರಿ. ನಾವೆಲ್ಲ ದ್ರಾವಿಡರೆ. ನಿಮ್ಮ ಕಿರುಕುಳಗಳನ್ನು ಎದುರಿಸುವ ಸನ್ನಿವೇಶ ಬಂದಾಗಲೆಲ್ಲ ನಾವೆಲ್ಲ ಒಂದೇ’ ಎಂದು ದ್ರಾವಿಡೇತರರಿಗೆ ಮನದಟ್ಟಾಗುವ ಹಾಗೆ ನಾವು ನಡೆದುಕೊಳ್ಳಬೇಕು.
ಹೀಗೆ ನಮ್ಮನ್ನು ನಾವು ಗುರುತಿಸಿಕೊಳ್ಳುವುದರಲ್ಲಿ ಮಾರ್ಪಾಟನ್ನು ತಂದುಕೊಳ್ಳಬೇಕು. ಆದರೆ, ಇಂತಹ ಕಣ್ಣೋಲಿನ ಮಾರ್ಪಾಟು ಬೇಕಾಗಿರುವುದು ಬರೀ ಸೇಡು ತೀರಿಸಿಕೊಳ್ಳುವುದಕ್ಕೆಂದಲ್ಲ. ಇಂತಹ ಮಾರ್ಪಾಟು ನಿಜಕ್ಕೂ ಬೇಕಾಗಿರುವುದು ಉತ್ತರದಿಂದ ತಡೆಯಿಲ್ಲದೆ ನಮ್ಮೆಡೆಗೆ ಬರುವ ಕಿರುಕುಳಗಳನ್ನು ಸಮರ್ತವಾಗಿ ಎದುರಿಸುವುದಕ್ಕಾಗಿ. ಏಕೆಂದರೆ, ಉತ್ತರದಿಂದ ಬರುವ ಕಿರುಕುಳಗಳು ಕನ್ನಡಿಗರಿಗೆ ಮಾತ್ರ ಕಿರುಕುಳಗಳಾಗಿರುವುದಿಲ್ಲ. ಸಾಮಾನ್ಯವಾಗಿ ಅವು ದಕ್ಶಿಣದವರೆಲ್ಲರಿಗೂ ಕಿರುಕುಳಗಳಾಗಿರುತ್ತವೆ. ಆದ್ದರಿಂದ ಉತ್ತರದವರ ಕಿರುಕುಳಗಳನ್ನು ಎದುರಿಸುವಾಗ ’ಮದ್ರಾಸಿಗಳು’ ನಾವು ಒಗ್ಗಟ್ಟಿನಿಂದ ಕಯ್ ಕಯ್ ಸೇರಿಸಿ ನಿಲ್ಲಬೇಕು. ಹಾಗೆ ನಿಂತರೇ ನಮಗೆ ಒಳಿತು.
ನಲ್ಮೆಯೊಡನೆ,
ಎಚ್.ಎಸ್.ರಾಜ್