ಬುಧವಾರ, ಮೇ 27, 2015

ಪ್ರಾದೇಶಿಕತೆಯ ಉಳಿವಿಗಾಗಿ ಒಂದು ಹೊಸ ಒಕ್ಕೂಟ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.


ಹಲವಾರು ವರ್‌ಶಗಳಿಂದ ಕನ್ನಡಿಗರ ಏಳಿಗೆಗಾಗಿ ದುಡಿಯುತ್ತಿರುವ ಶ್ರೀಮತಿ ವಿನುತಾ ಅವರು ಇತ್ತೀಚೆಗೆ ಕನ್ನಡ ಸಂಗಟನೆಗಳ ಒಕ್ಕೂಟವೊಂದನ್ನು ಹುಟ್ಟುಹಾಕಿದ್ದಾರೆ. ಈ ಕಾರ್‌ಯದಲ್ಲಿ ನಮ್ಮ ಬಳಗ ಅವರೊಡನೆ ಕಯ್ಜೋಡಿಸಿದೆ. ಕಡ್ಡಾಯ ಹಿಂದೀ ಕಲಿಕೆ ಮುಂತಾದ ಅನಿಶ್ಟಗಳನ್ನು ತೊಡೆದು ಹಾಕುವುದು ಒಕ್ಕೂಟದ ಗುರಿ. ಒಕ್ಕೂಟದ ಮೊದಲ ಸಬೆ ಕಳೆದ ರವಿವಾರ ನಡೆಯಿತು. ಹಲವು ಸಂಗಟನೆಗಳ ಪ್ರತಿನಿದಿಗಳು ಪಾಲ್ಗೊಂಡಿದ್ದ ಆ ಸಬೆಯ ಒಂದು ಚಿತ್ರ ಇದು. ಒಕ್ಕೂಟದ ಜಾಲತಾಣ ಬೇಗನೇ ಏರ್‌ಪಡಲಿದೆ.

ನಲ್ಮೆಯಿಂದ,
ಎಚ್.ಎಸ್.ರಾಜ್