ಗುರುವಾರ, ನವೆಂಬರ್ 15, 2012

ಬೇರಾಗುವುದೇ ಸರಿದಾರಿಯೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ?’ ಓದುಗೆಯನ್ನು ನೋಡಿ. ಅದು www.ellarakannada.org ತಾಣದಲ್ಲಿ ಉಚಿತವಾಗಿ ದೊರೆಯುತ್ತಿದೆ.

ಮೊನ್ನೆ ಕಾವೇರಿ ನೀರಿನ ಗಲಾಟೆಯ ಬಿಸಿ ಏರಿ ಇನ್ನೇನು ಬೆಂಕಿ ಬುಗಿಲೆಂದು ಹೊತ್ತಿಕೊಳ್ಳುತ್ತದೆ ಎಂಬ ಮಟ್ಟಕ್ಕೆ ತಲುಪಿದಾಗ ಹೋರಾಟದ ಮುಂಚೂಣಿಯಲ್ಲಿದ್ದ(?) ಕೆಲ ಮುಂದಾಳುಗಳು, ’ಪ್ರದಾನ ಮಂತ್ರಿಗಳೇ, ಕರ‍್ನಾಟಕಕ್ಕೆ ನ್ಯಾಯ ಒದಗಿಸಿ, ಇಲ್ಲ ಒಕ್ಕೂಟದಿಂದ ಹೊರಹೋಗಲು ಬಿಡಿ’ ಎಂದು ಗುಡುಗಿದರು.  ’ಒಕ್ಕೂಟದಿಂದ ಹೊರಹೋಗಲು ಬಿಡಿ’ ಎನ್ನುವುದು, ’ನಮಗೆ ನಿಮ್ಮ ದೇಶದಲ್ಲಿರುವುದು ಬೇಕಾಗಿಲ್ಲ. ನಾವೇ ಒಂದು ಪ್ರತ್ಯೇಕ ದೇಶವನ್ನು ಮಾಡಿಕೊಳ್ಳುತ್ತೇವೆ’ ಎಂದು ಮುಸುಡಿಗೆ ಹೊಡೆದಂತೆ ಹೇಳುವುದರ ಮೆಲ್ಮೆಯ ರೂಪ. ಇದೇನು ಮುಂದಾಳುಗಳ ಎದೆಯಲ್ಲಿ ನನ್ನಿಯಾಗಿ ಹೊಮ್ಮಿದ ಬಾವನೆಯೋ ಇಲ್ಲ ಕೆರಳಿದ್ದ ಕನ್ನಡಿಗರಿಂದ ಮೆಚ್ಚುಗೆ ಪಡೆಯುವ ಹುನ್ನಾರವೋ, ಆ ಮುಂದಾಳುಗಳಿಗೇ ಗೊತ್ತು. ಅದು ಹಾಗಿರಲಿ. ಏಕೆಂದರೆ ಇಲ್ಲಿ, ಮುಂದಾಳುಗಳ ಹಂಚಿಕೆ ಏನಿತ್ತು ಎನ್ನುವುದು ಅಶ್ಟು ಮುಕ್ಯವಲ್ಲ. ಒಂದುವೇಳೆ ನಮ್ಮ ದೇಶದ ರಾಜ್ಯಗಳು ’ನಾವೇ ಒಂದು ಪ್ರತ್ಯೇಕ ದೇಶವನ್ನು ಮಾಡಿಕೊಳ್ಳುತ್ತೇವೆ’ ಎಂದು ದಂಗೆ ಎದ್ದು ಹಾಗೇ ಮಾಡಿಬಿಟ್ಟರೆ, ಅದರಿಂದಾಗುವ ಪರಿಣಾಮಗಳೇನು ಎಂದು ಕೊಂಚ ಯೋಚಿಸುವುದು ಮುಕ್ಯ.
    ನಮ್ಮ ದೇಶ ಒಗ್ಗಟ್ಟಿಗೆ ಎಂದೂ ಹೆಸರಾಗಿರಲಿಲ್ಲ. ನಮಗೆ ’ರಾಶ್ಟ್ರ’ ಎಂಬ ಪರಿಕಲ್ಪನೆಯೇ ಇರಲಿಲ್ಲ. ನಮ್ಮ ನಮ್ಮಲ್ಲೆ ನಾವು ಎಶ್ಟು ಕಚ್ಚಾಡುತ್ತಿದ್ದೆವೆಂದರೆ, ಅದರಿಂದಾಗಿ ಹೊರಗಿನಿಂದ ಬಂದ ಚಿಲ್ಲರೆ ಪಲ್ಲರೆ ಜನರೆಲ್ಲಾ ನಮ್ಮನ್ನು ಸುಲಬವಾಗಿ ತುಳಿದು ಆಳಿದರು. ಹಾಗೆ ನೋಡಿದರೆ, ನಮ್ಮನ್ನು ಒಂದು ದೇಶ ಎಂದು ಮಾಡಿದ್ದೂ ಕೂಡ ಹೊರನಾಡಿಗರೇ. ಕಚ್ಚಾಡುವ ನಮ್ಮ ಹಳೆಯ ಚಾಳಿ ಈಗಲೂ ನಮ್ಮನ್ನು ಬಿಟ್ಟಿಲ್ಲ ಎಂಬುದೂ ಎಲ್ಲರಿಗೂ ಗೊತ್ತಿದೆ. ನನ್ನಿನೆಲೆ ಹೀಗಿರುವಾಗ, ರಾಜ್ಯಗಳೆಲ್ಲ ಸಿಡಿದು ಬೇರೆಬೇರೆ ದೇಶಗಳಾದರೆ ಜನರ ಗತಿ ಏನು?
    ಕಾವೇರಿಯಲ್ಲಿ ನೀರಿನ ಕೊರತೆ ಬೀಳುವುದು ಆಗಾಗ್ಗೆ ಆಗುತ್ತಲೇ ಇರುತ್ತದೆ. ಅದನ್ನು ತಡೆಯಲಿಕ್ಕಾಗುವುದಿಲ್ಲ. ಈಗಲಾದರೋ, ನೀರಿನ ಕೊರತೆ ಆದಾಗ, ಪ್ರತಿಬಟನೆಗಳು ಎದುರಿಗಳ ಅಣಕುಬೊಂಬೆಗಳನ್ನು ಸುಡುವುದರಲ್ಲೋ, ಹೆದ್ದಾರಿಗಳನ್ನು ತಡೆಯುವುದರಲ್ಲೋ, ಸಾರ್ವಜನಿಕರ ಸ್ವತ್ತುಗಳಿಗೆ ಕೊಂಚ ಜಕಮ್ ಮಾಡುವುದರಲ್ಲೋ - ಹೀಗೆ ಕಡಿಮೆ ಕೇಡಿನಲ್ಲೇ ಕೊನೆಗೊಳ್ಳುತ್ತವೆ. ಆದರೆ, ಕರ‍್ನಾಟಕ ಮತ್ತು ತಮಿಳುನಾಡುಗಳು ಬೇರೆಬೇರೆ ದೇಶಗಳೇ ಆಗಿಬಿಟ್ಟರೆ,  ಇಬ್ಬರ ನಡುವಿನ ತಕರಾರುಗಳು ಅಲ್ಪದರಲ್ಲೇ ತೀರುತ್ತವೆಯೆ? ಎರಡೂ ಕಡೆ ಮುಟ್ಟಾಳತನ ಎಶ್ಟು ದಂಡಿಯಾಗಿದೆ ಎಂದರೆ, ಒಂದೊಂದು ತಕರಾರಿಗೂ ಒಂದೊಂದು ಕಾಳಗವೇ ನಡೆಯಬಹುದು, ಬಾರತ ಮತ್ತು ಪಾಕಿಸ್ತಾನದ ನಡುವೆ ಇದುವರೆಗೆ ನಡೆದಿರುವ ಮೂರು ಯುದ್ದಗಳ ಹಾಗೆ. ಇದರಿಂದ ಜನರಿಗೆ ಲಾಬವಂತೂ ಆಗುವುದಿಲ್ಲ. ಜನರ ಸ್ತಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ, ಅಶ್ಟೆ. ಹಾಗಾಗಿ, ’ನಾವೇ ಬೇರೆ ದೇಶ ಮಾಡಿಕೊಳ್ಳುತ್ತೇವೆ’ ಎನ್ನುವುದು ಜಾಣ್ಮೆಯ ನಡೆಯಲ್ಲ. ಅದು ಅರಿವುಗೇಡಿನ ಕುರುಹು.
    ಜಾಣ್ಮೆಯ ನಡೆ ಯಾವುದೆಂದರೆ, ಒಕ್ಕೂಟದಲ್ಲಿ ಉಳಿದುಕೊಂಡೇ ನಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದು. ನಾವು ಮೊದಲು ಕೇಳಬೇಕಾದ ಕೇಳ್ವಿ ಇದು - ಪ್ರದಾನ ಮಂತ್ರಿಗಳು ತಮಿಳುನಾಡಿನ ಕಡೆಗೆ ಏಕೆ ವಾಲಿದರು?. ಈ ಕೇಳ್ವಿಗೆ ಮಾರು ಎಲ್ಲರಿಗೂ ಗೊತ್ತಿದೆ - ಪ್ರದಾನಿಗಳು ತಮಿಳುನಾಡಿನ ಕಡೆಗೆ ಏಕೆ ವಾಲಿದರು? ಏಕೆಂದರೆ, ಅವರ ಸಮ್ಮಿಶ್ರ ಸರ‍್ಕಾರದ ಉಳಿವಿಗೆ ತಮಿಳು ಪಕ್ಶದ ಬೆಂಬಲ ಬೇಕು, ಅದಕ್ಕೆ. ಕೆಲ ದಶಕಗಳಿಂದ ತಮಿಳರು ಇಂತಹ ಒಂದು ಒಳ್ಳೆಯ ಆಯಕಟ್ಟಿನ ಎಡೆಯಲ್ಲಿ ತಮ್ಮನ್ನು ತಾವು ಇರಿಸಿಕೊಂಡು ಬಂದಿದ್ದಾರೆ. ಇದೂ ಕೂಡ ಎಲ್ಲರಿಗೂ ಗೊತ್ತಿರುವುದೇ.
    ಕೆಂದ್ರದಲ್ಲಿ ಆಳಿಕೆ ಹೂಡುವುದಕ್ಕೆ ರಾಶ್ಟ್ರೀಯ ಪಕ್ಶಗಳಿಗೆ ಅವುಗಳದ್ದೇ ಬಹುಮತ ದೊರಕುತ್ತಿಲ್ಲ. ಹಾಗಾಗಿ, ಪ್ರಾದೇಶಿಕ ಪಕ್ಶಗಳ ನೆರವಿನಿಂದಲೇ ಅವು ಅದಿಕಾರಕ್ಕೆ ಬರಬೇಕು. ಇಂತಹ ನೆಲೆಯಲ್ಲಿ ಅದಿಕಾರದಲ್ಲಿರುವ ಪಕ್ಶಕ್ಕೆ ಬೆಂಬಲಿಗ ಪಕ್ಶಗಳು ಹೇಳಿದಂತೆ ಕುಣಿಯುವುದು ಅನಿವಾರ‍್ಯ ಆಗೇ ಆಗುತ್ತದೆ. ತಮಿಳರು ಸಾಮಾನ್ಯವಾಗಿ ಪ್ರಾದೇಶಿಕ ಪಕ್ಶಗಳನ್ನೇ ಗೆಲ್ಲಿಸಿ ಕಳಿಸುವುದರಿಂದ, ಅವರ ಹಂಗಿನಲ್ಲಿ ಆಡಳಿತ ಪಕ್ಶ ಇರಲೇಬೇಕಾಗುತ್ತದೆ.
    ಹಾಗಾದರೆ ನಾವೂ ಏಕೆ ತಮಿಳರಂತೆ ಆಯಕಟ್ಟಿನ ಎಡೆಯಲ್ಲಿ ನಮ್ಮನ್ನು ನಾವು ಇರಿಸಿಕೊಳ್ಳಬಾರದು? ನಾವೂ ಏಕೆ ಪ್ರಾದೇಶಿಕ ಪಕ್ಶಗಳನ್ನು ಕಟ್ಟಿ ಗೆಲ್ಲಿಸಬಾರದು? ಸರಿಯಾಗಿ ಬಗೆದು ನೋಡಿದರೆ, ಇದು ನಾವು ಹಿಡಿಯಬೇಕಾದ ದಾರಿ; ’ಬೇರೆ ಹೋಗುತ್ತೇವೆ’ ಎನ್ನುವುದಲ್ಲ.
    ಆದ್ದರಿಂದ, ನಮ್ಮದೇ ಆದ ಕೆಚ್ಚಿನ ನೆಚ್ಚಿನ ಪಕ್ಶಗಳನ್ನು ನಾವು ಕಟ್ಟಿಕೊಳ್ಳಬೇಕು. ಹಾಗೂ, ’ಕರುನಾಡವರು ಹುಟ್ಟಿನಲ್ಲಿ ಮತ್ತು ನಡೆನುಡಿಯಲ್ಲಿ ದ್ರಾವಿಡ ಹಿನ್ನೆಲೆಯವರು’ ಎಂಬ ನನ್ನಿ ಈ ಪಕ್ಶಗಳ ದೋರಣೆಯಲ್ಲಿ ಎದ್ದು ಕಾಣಬೇಕು. ನಮಗೆ, ’ಕೇಂದ್ರದಲ್ಲಿ ನಮ್ಮ ಮಾತು ನಡೆದರಶ್ಟೇ ಸಾಲದು, ದಕ್ಶಿಣದ ನಮ್ಮ ನೆರೆನಾಡುಗಳ  ನಣ್ಪು ಕೂಡ ದೊರೆಯಬೇಕು’ ಎಂಬ ಗುರಿ ಇರಬೇಕು. ಏಕೆಂದರೆ, ಉತ್ತರದ ಕಡೆಯಿಂದಲೂ ನಮಗೆ ಸಮಸ್ಯೆಗಳು ಬರುತ್ತವೆ. ವಾಸ್ತವವಾಗಿ,  ದೇಶದ ಜನಸಂಕ್ಯೆಯ ಮಾಹಿತಿಯನ್ನು ಗಮನಿಸಿದರೆ, ಕಾವೇರಿ ಸಮಸ್ಯೆಯನ್ನು ಮೀರಿಸುವ ಸಮಸ್ಯೆಗಳು ಬಡಗಿನಿಂದ  ಮುಂಬರುವ ನಾಳುಗಳಲ್ಲಿ ನಮ್ಮ ಕಡೆಗೆ ಬರುವಂತೆ ತೋರುತ್ತಿದೆ. ಹೀಗೆ ಬೇರೆಬೇರೆ ಕಾರಣಗಳಿಂದಾಗಿ ಇಂದು, ನಾವು ನಮ್ಮ ಪ್ರಾದೇಶಿಕತೆಯನ್ನು ಎತ್ತಿಹಿಡಿಯಬೇಕಾಗಿದೆ. ನಮ್ಮ ದ್ರಾವಿಡತನವನ್ನು ಕಂಡುಕೊಳ್ಳಬೇಕಾಗಿದೆ. ನಮ್ಮ ಉಳಿವಿಗಾಗಿ ನಾವು ಹೊಣೆವೆತ್ತು ನಡೆದುಕೊಳ್ಳಬೇಕಾಗಿದೆ.

ನಲ್ಮೆಯೊಡನೆ,
ಎಚ್.ಎಸ್.ರಾಜ್

5 ಕಾಮೆಂಟ್‌ಗಳು:

kannadaabhimaani ಹೇಳಿದರು...

The kaveri issue has been there since I was young. It appears that it is going to be there even after my time. Although Kaveri, takes birth in Karnataka, it flows through Tamilnaadu before ends in Indian ocean.
I still remember the words of a civil engineer back home in India, who gave a solution which looked possible. He simply said that we loose precious water in the entire country due to many avoidable reasons. Some of these being geographical borders, infights, poor management, lack of will from the governing bodies and so on. He also went on to say that with all these problems, we can still manage water effectively if we can connect all the rivers in the country. I knew that this idea has been there for a long time but the goverment has not looked at it earnestly.
It is just frustrating to see the same issues being used by the politicans and political parties to their benefits everytime when they come up. In general the qaulity of the politicians in our contry has declined significantly and I do not see anything good coming out these people. At the same time, this might lead to some sort of civil unrest and may also help emerge new regional political outfits. Again, Iam not too optimistic of the regional parties simply because of the collapse of morals/virtues in the society.
Whatever it is, I do not want to put my hopes down. It may be years, decades or centuries, I am sure that there will be good times!



Unknown ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Unknown ಹೇಳಿದರು...

I agree with you kannadaabhimaani that the quality of our politicians is poor. The opinion I am expressing is merely that having strong regional parties would level the playing field for us at the center. Thanks for your valuable comment. Your opinion is worth dwelling upon.

Ramakant Hegde ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Ramakant Hegde ಹೇಳಿದರು...

ಕರುನಾಡೊಂದೇ ಏಕೆ?, ಜನಸಾಮನ್ಯ ಎಲ್ಲಿಯವನೇ ಆಗಿದ್ದರೂ, ಎಲ್ಲರ ಬೇಳೆಯೂ ಬೇಯಲೆಂಬ ಸದುದ್ದೇಶದಿಂದ ತಾನೇ ದೇಶದ ಹಿರಿಯರು constitution ಮಾಡಿರೋದು?
ರಾಜಕೀಯ ಮಾಡೋದೇ ತನ್ನೊಬ್ಬನ ಬೇಳೆ ಬೇಯಿಸಿಕೊಳ್ಳಲಿಕ್ಕಾಗಿ ಮಾತ್ರ - ಎಂಬ ಇಂದಿನ ವಿಪರೀತವನ್ನು ಅಳಿಸಲಿಕ್ಕೆ ನಿಮ್ಮ ಸಹಾಯ ಇದೆಯೇ? ಈ ಬಗ್ಗೆ ಕೂಡಾ ತಮ್ಮ ಗಮನ ಹರಿಯಲಿ ಸಾರ್!