ಶುಕ್ರವಾರ, ಅಕ್ಟೋಬರ್ 25, 2013

ಮಯ್ಬಣ್ಣ ಮತ್ತು ಕೀಳರಿಮೆ

ಕೆಲ ವಾರಗಳ ಹಿಂದೆ NDTV ಕಾಲುವೆಯಲ್ಲಿ ಬರ‍್ಕಾ ದತ್ ಎಂಬವರು ಚರ‍್ಚೆಯ ಕಾರ‍್ಯಕ್ರಮವೊಂದನ್ನು ನಡೆಸಿಕೊಟ್ಟರು. ಮಯ್ಬಣ್ಣವನ್ನು ಬಿಳುಪುಗೊಳಿಸುವ ಕ್ರೀಮುಗಳನ್ನು ಮಾರಾಟ ಮಾಡಲು ಬಳಸಲಾಗುತ್ತಿರುವ ಜಾಹೀರಾತುಗಳ ಬಗ್ಗೆ ಆ ಕಾರ‍್ಯಕ್ರಮದಲ್ಲಿ ಒಂದು ಚರ‍್ಚೆ ನಡೆಯಿತು. ಕಪ್ಪುಚೆಲುವಿನ ನಟಿ ನಂದಿತಾ ದಾಸ್, ಜಾಹೀರಾತುಗಳನ್ನು ತಯಾರಿಸುವ ರಂಗಕರ‍್ಮಿ ಪದಮ್‍ಸೀ ಮುಂತಾದವರು ಚರ‍್ಚೆಯಲ್ಲಿ ಪಾಲ್ಗೊಂಡಿದ್ದರು. ’ಕಪ್ಪು ಮಯ್ಬಣ್ಣದ ಎಳೆಯರಿಗೆ ತಮ್ಮ ಕಪ್ಪು ಬಣ್ಣದಿಂದಾಗಿ ಆತ್ಮವಿಶ್ವಾಸ ಕಡಿಮೆ. ಹಾಗಾಗಿ ಸಮಾಜದಲ್ಲಿ ಅವರು ಮುನ್ನಡೆ ಸಾದಿಸುವುದು ಕಶ್ಟ’ - ಹೀಗೆಂದು ಬಿಳುಪಿಸುವ ಕ್ರೀಮುಗಳ ಜಾಹೀರಾತುಗಳಲ್ಲಿ ಕಪ್ಪು ಬಣ್ಣದ ತರುಣರನ್ನು ಕೀಳಾಗಿ ಬಿಂಬಿಸಲಾಗುತ್ತಿದೆ. ಹೀಗೆ ಬಿಂಬಿಸುವುದು ತಪ್ಪು. ಇಂತಹ ಜಾಹೀರಾತುಗಳನ್ನು ತಯಾರಿಸಕೂಡದು, ಎಂಬುದು ನಂದಿತಾ ದಾಸ್ ಮತ್ತು ಅವರ ಪರ ಮಾತಾಡಿದವರ ವಾದವಾಗಿತ್ತು. ಕಪ್ಪು ಬಣ್ಣದವರಿಗೆ ಕೀಳರಿಮೆ ಇರುವುದು ಸಾಮಾಜಿಕ ಸತ್ಯ. ಇದ್ದುದನ್ನು ಇದ್ದ ಹಾಗೆ ಹೇಳಿದರೆ ತಪ್ಪೇನು? ಎಂಬುದು ಜಾಹೀರಾತುಗಳ ಪರದವರ ಪ್ರತಿವಾದವಾಗಿತ್ತು.
      ಅರ‍್ದ ಗಂಟೆಯ ಆ ಕಾರ‍್ಯಕ್ರಮದುದ್ದಕ್ಕೂ ಕಪ್ಪು ಬಣ್ಣದ ಬಗೆಗಿನ ಹಲವಾರು ಅಂಶಗಳ ಪ್ರಸ್ತಾಪವೇನೋ ಆಯಿತು. ಆದರೆ, ಕಪ್ಪು ಬಣ್ಣಕ್ಕೆ ಹಾಗೂ ಅದರ ಕೀಳುಗಾಣ್ಮೆಗೆ ಮೂಲ ಕಾರಣ ಏನು ಎಂಬುದರ ಬಗ್ಗೆ ಮಾತ್ರ ಹೆಚ್ಚು ಮಾತು ಹೊರಬರಲಿಲ್ಲ. ಒಬ್ಬ ಅತಿತಿಗಳು ಮಾತ್ರ ಕಪ್ಪು ಬಣ್ಣವನ್ನು ಕೀಳಾಗಿ ಕಾಣುವುದಕ್ಕೆ ಮೂಲ ಕಾರಣವನ್ನು ಪರೋಕ್ಶವಾಗಿ ಸೂಚಿಸಿದರು. ಆದರೆ, ಆ ಎಳೆಯನ್ನು ಉಳಿದವರು ಕಯ್ಗೆತ್ತಿಕೊಳ್ಳಲಿಲ್ಲ. ಹಾಗಾಗಿ ಆ ಎಳೆ ಅಲ್ಲಿಗೇ ನಿಂತು ಹೋಯಿತು. ನನ್ನ ಪ್ರಕಾರ, ಯಾವುದೇ ಸಮಸ್ಯೆಯಾಗಲಿ, ಆ ಸಮಸ್ಯೆಗೆ ಮೂಲ ಕಾರಣ ಏನೆಂದು ತಿಳಿದುಕೊಳ್ಳಬೇಕು. ಹಾಗೆ ತಿಳಿದುಕೊಳ್ಳುವುದು ಸಮಸ್ಯೆಯ ಬಗೆಹರಿವಿಗೆ ಸಾಕಶ್ಟು ನೆರವಾಗುತ್ತದೆ.
      ಬಿಳುಪಿಸುವ ಉತ್ಪನ್ನಗಳ ಜಾಹೀರಾತುಗಳು ಸಮಾಜದಲ್ಲಿ ವಾಸ್ತವವಾಗಿ ನಡೆಯುತ್ತಿರುವುದನ್ನೇ ಬಿಂಬಿಸುತ್ತಿವೆ. ನಮ್ಮ ಸಮಾಜದಲ್ಲಿ ಕಪ್ಪು ಬಣ್ಣದವರು ಉಳಿದವರಿಗಿಂತ ಕೊಂಚ ಹೆಚ್ಚು ಅಡೆತಡೆಗಳನ್ನು ಎದುರಿಸುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಶಯ. ಹೆಸರಾಂತ ನಟರಾದ ದುನಿಯಾ ವಿಜಯ್, ಮುರಳಿ ಮುಂತಾದವರೇ ಮೊದಮೊದಲು ಕಪ್ಪು ಬಣ್ಣದ ಕೀಳುಗಾಣ್ಮೆಯಿಂದಾಗಿ ತಮಗಾದ ತೊಂದರೆಗಳ ಬಗ್ಗೆ ಆಗಾಗ್ಗೆ ಹೇಳಿಕೊಂಡಿದ್ದಾರೆ. ಮದುವೆಗಾಗಿ ಗಂಡು ಹೆಣ್ಣುಗಳನ್ನು ಹೊಂದಿಸುವ ’ಮೇಟ್ರಿಮೋನಿಯಲ್’ ಕಾಲಮ್ಮುಗಳಲ್ಲಿನ ಬೇಡಿಕೆಗಳನ್ನು ನೋಡಿದರೆ, ಕಪ್ಪು ಬಣ್ಣ ಯಾರಿಗೂ ಬೇಡ ಎನ್ನುವುದಕ್ಕೆ ಪುರಾವೆ ಕೂಡಲೇ ದೊರೆಯುತ್ತದೆ. ವಾಸ್ತವ ಹೀಗಿರುವಾಗ ಕಪ್ಪು ಬಣ್ಣದ ಮಂದಿಯಲ್ಲಿ ಕೀಳರಿಮೆ ಹೇಗೆ ಮೂಡದೇ ಇದ್ದೀತು? ಈಗ ಕೇಳ್ವಿ ಇದು - ಈ ಕೀಳರಿಮೆಗೆ ಪರಿಹಾರ ಏನು?
      ಬಿಳಿಗೆಯ್ವ ಉತ್ಪನ್ನಗಳ ಬಳಕೆಯಿಂದ ಕೀಳರಿಮೆ ಕೊಂಚ ತಗ್ಗಬಹುದು. ಆದರೆ, ಕೊಂಚ ಮಾತ್ರ. ಅದೂ ಅಲ್ಲದೆ, ಒಂದೇ ಸವನೆ ಅವನ್ನು ಬಳಸುವುದರಿಂದ ಆರೋಗ್ಯ ಕೆಡಬಹುದು. ಒಳ್ಳೆಯ ಶಿಕ್ಶಣ ಹಾಗೂ ದುಡಿಯುವ ಆರ‍್ಪನ್ನು ಪಡೆದುಕೊಳ್ಳುವುದು ಇನ್ನೊಂದು ಪರಿಹಾರ. ಏಕೆಂದರೆ, ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವ ಸಾಮರ‍್ತ್ಯ, ಯಾರಿಗೇ ಆಗಲಿ, ಒಟ್ಟಾರೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇನ್ನೂ ಒಂದು ಪರಿಹಾರ ಇದೆ. ಆದರೆ, ಅದರ ಬಳಕೆ ನಮ್ಮ ದೇಶದಲ್ಲಿ ಆಗುತ್ತಿಲ್ಲ. ಏಕೆಂದರೆ, ಅದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅದು ತಿಳಿಯದಂತೆ ಮಾಡುವ ಪ್ರಯತ್ನ ಕೆಲವರಿಂದ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗಿನ ದಿನಗಳಲ್ಲಿ ಈ ಕೆಲವರಿಗೆ ರಾಜಕೀಯ ಬೆಂಬಲವೂ ದೊರಕುತ್ತಿದೆ. ಅದೇನೇ ಇರಲಿ, ಆ ಇನ್ನೊಂದು ಪರಿಹಾರ ಏನೆಂದರೆ, ಕೆಲವರಿಗೆ ಕಪ್ಪು ಕೆಲವರಿಗೆ ಬಿಳುಪು ಬಣ್ಣ ಇರುವುದಕ್ಕೆ ವಾಸ್ತವ ಕಾರಣ ಏನು ಎಂಬುದರ ಅರಿವು. ಈ ಅರಿವು ಅಮೆರಿಕದ ಕಪ್ಪು ಸಮುದಾಯಕ್ಕೆ ತಿಳಿದಿದೆ. ನಮ್ಮಲ್ಲಿ ಬಹುತೇಕ ಮಂದಿಗೆ ಈ ಅರಿವಿಲ್ಲ. ಈ ಅರಿವಿರುವುದರಿಂದ ಹಾಗೂ ತಮ್ಮ ಚರಿತ್ರೆಯ ಅರಿವೂ ಇರುವುದರಿಂದ ಅಮೆರಿಕದ ಬಹುತೇಕ ಕಪ್ಪು ಜನಾಂಗೀಯರು ಸಾಮಾಜಿಕ ಹಾಗೂ ರಾಜಕೀಯ ವಿಶಯಗಳಲ್ಲಿ ಒಗ್ಗಟ್ಟಿನಿಂದ ನಡೆದುಕೊಳ್ಳುತ್ತಾರೆ. ಅವರಲ್ಲಿ ಕೂಡ ನಮ್ಮಲ್ಲಿರುವಂತೆಯೆ ಕಪ್ಪು ಬಣ್ಣದ ಕೀಳರಿಮೆ ಇದೆ. ಆದರೆ, ಅರಿವು ಮತ್ತು ಅರಿವಿನಿಂದಾದ ಒಗ್ಗಟ್ಟು, ಅವರಲ್ಲಿ ಕೀಳರಿಮೆಯನ್ನು ಸಾಕಶ್ಟು ಮಟ್ಟಿಗೆ ತಗ್ಗಿಸಿದೆ. ಹಾಗೆ ನೋಡಿದರೆ, ಅವರು ಅಲ್ಲಿ ಅಲ್ಪಸಂಕ್ಯಾತರು. ನಮ್ಮ ನಾಡಿನಲ್ಲಿ ಕಪ್ಪು ಬಣ್ಣದವರೇ ಹೆಚ್ಚು. ಆದ್ದರಿಂದ, ನಮ್ಮ ಕಪ್ಪು ಬಣ್ಣಕ್ಕೆ ಸರಿಯಾದ ಕಾರಣವನ್ನು ತಿಳಿದುಕೊಳ್ಳುವುದರಿಂದ ಅದರ ಬಗೆಗಿನ ಕೀಳರಿಮೆಯನ್ನು ಇನ್ನೂ ಹೆಚ್ಚಿನ ಮಟ್ಟಿಗೆ ನಾವು ಕಡಿಮೆಗೊಳಿಸಬಹುದು. ಹಾಗಾದರೆ, ಯಾವುದು ಈ ಸರಿಯಾದ ತಿಳಿವಳಿಕೆ?
      ಹಿಂದಣ ಜನ್ಮದ ಕರ‍್ಮ, ಯಾವುದೋ ಶಾಪದ ಪಲ, ದುರದ್ರುಶ್ಟ, ದೇವರ ಇಚ್ಚೆ - ಹೀಗೇ ಮುಂತಾದುವು ನಮ್ಮ ಮಂದಿ, ’ಮಯ್ಬಣ್ಣ ಏಕೆ ಕಪ್ಪಾಗಿರುತ್ತದೆ?’ ಎನ್ನುವುದಕ್ಕೆ ಕೊಡುವ ಉತ್ತರಗಳು! ಬಸುರಿ ಹೆಣ್ಣುಮಗಳು ಕೇಸರಿ ಬೆರೆಸಿದ ಹಾಲನ್ನು ನಾಳುನಾಳೂ ಕುಡಿಯುತ್ತಿದ್ದರೆ ಹುಟ್ಟುವ ಮಗು ಬೆಳ್ಳಗಿರುತ್ತದೆ ಎಂಬ ನಂಬಿಕೆಯೂ ಇದೆಯಂತೆ! ಹೀಗೆಂದು ಶ್ರೀಮತಿ ಸಿ.ಜಿ.ಮಂಜುಳಾ ಅವರು ಪ್ರಜಾವಾಣಿಯ (ಸೆಪ್ಟಂಬರ್ ೨೪, ೨೦೧೩) ಅವರ ’ಕಡೆಗೋಲು’ ಅಂಕಣದಲ್ಲಿ ಬರೆದಿದ್ದಾರೆ. ಇಂತಹ ಅರಿವಿಲಿ ನಂಬಿಕೆಗಳಿದ್ದರೆ ಕಪ್ಪು ಬಣ್ಣದವರಿಗೆ ಕೀಳರಿಮೆ ಬರದೇ ಇನ್ನೇನು? ವಾಸ್ತವವಾಗಿ, ನಮ್ಮ ದೇಶದಲ್ಲಿ ಕಪ್ಪು ಮತ್ತು ಬಿಳಿ ಮಯ್ಬಣ್ಣಗಳು ಕಂಡುಬರುವುದಕ್ಕೆ ಕಾರಣ ಕಪ್ಪು ಮತ್ತು ಬಿಳಿಯ ಬೇರೆಬೇರೆ ಬುಡಕಟ್ಟುಗಳು ನೆಲೆಸಿರುವುದರಿಂದ. ಕಪ್ಪು ಚಾಯೆಗೆ ಕಾರಣ ನೆಗ್ರಿಟೋ, ಮುಂಡ ಮತ್ತು ದ್ರಾವಿಡ ಜನಾಂಗಗಳು. ಬಿಳಿ ಚಾಯೆಗೆ ಕಾರಣ ಆರ‍್ಯ ಮತ್ತು ಮಂಗೋಲ ಬುಡಕಟ್ಟುಗಳು. ವಿದ್ವಾಂಸರು ನಡೆಸಿದ ಸಂಶೋದನೆಯಿಂದ ತಿಳಿದು ಬಂದ ಈ ಅರಿವನ್ನು ಇತ್ತೀಚಿನ DNA ಅದ್ಯಯನಗಳೂ ಎತ್ತಿ ಹಿಡಿದಿವೆ.
      ಇನ್ನು ಕನ್ನಡಿಗರೂ ಸೇರಿದಂತೆ ತೆಂಕಣ ಬಾರತೀಯರ ಬಗ್ಗೆ ಹೇಳುವುದಾದರೆ, ನಮ್ಮಲ್ಲಿನ ಮಯ್ಬಣ್ಣ ವಯ್ವಿದ್ಯಕ್ಕೆ ಹೆಚ್ಚಾಗಿ ದ್ರಾವಿಡ ಮತ್ತು ಆರ‍್ಯ ಬುಡಕಟ್ಟುಗಳ ಬೆರಕೆಯೇ ಕಾರಣ. ಇದಕ್ಕೆ ಹೇರಳವಾದ ವಯ್‍ಜ್ನಾನಿಕ ಆದಾರವನ್ನು ನಮ್ಮ ಬಳಗದ ಕಯ್ಪಿಡಿ - ಕನ್ನಡಿಗರೂ ದ್ರಾವಿಡರೆ - ಓದುಗೆಯಲ್ಲಿ ಒದಗಿಸಲಾಗಿದೆ. ಇದು ನಮ್ಮ ಮಯ್ಬಣ್ಣದ ಸತ್ಯ. ತೆಂಕಣದವರಲ್ಲಿ, ಕನ್ನಡಿಗರೂ ಸೇರಿದಂತೆ, ದ್ರಾವಿಡ ಲಕ್ಶಣದ ಕಪ್ಪು ಬಣ್ಣದವರೇ ಹೆಚ್ಚು (ಇದೇ ಕಾರಣಕ್ಕಾಗೇ ತೆಂಕಣದವರು ಆಡುವ ನುಡಿಗಳು ದ್ರಾವಿಡ ನುಡಿಗಳಾಗಿರುವುದು). ಆದರೆ, ಅವರಲ್ಲಿ ಹೆಚ್ಚು ಮಂದಿಗೆ ಈ ಸತ್ಯ ತಿಳಿದಿಲ್ಲ. ಅಶ್ಟೇ ಅಲ್ಲ, ಸಾವಿರಾರು ವರ‍್ಶಗಳಿಂದ ಆರ‍್ಯ ನಡೆನುಡಿಗಳ ಅಟ್ಟುಳಿಯಿಂದ ತಮ್ಮ ನಡೆನುಡಿಗಳಿಗೆ ಆಗಿರುವ ಕೆಡುಕಿನ ಬಗ್ಗೆಯೂ ತಿಳಿದಿಲ್ಲ, ಈ ಎರಡೂ ವಿಶಯಗಳನ್ನು ಅರಿತುಕೊಂಡರೆ, ದ್ರಾವಿಡರಲ್ಲಿ ಒಗ್ಗಟ್ಟು ಮೂಡುತ್ತದೆ. ಒಗ್ಗಟ್ಟಿನಿಂದ ಸಾಮಾಜಿಕ ಮತ್ತು ರಾಜಕೀಯ ಕಸುವು ಹೆಚ್ಚುತ್ತದೆ. ನಾವೇ ಬಹುಸಂಕ್ಯಾತರೆಂಬ ನೆಮ್ಮದಿಯ ಬಲ ಬೆಳೆಯುತ್ತದೆ. ಮಯ್ಬಣ್ಣವೂ ಸೇರಿದಂತೆ ಎಲ್ಲಾ ಬಗೆಯ ಕೀಳರಿಮೆಗಳೂ ತಾವಾಗೇ ಕಡಿಮೆಯಾಗುತ್ತವೆ. ಇದು ನನ್ನ ನಂಬುಗೆ.
      ಕಪ್ಪು ಬಣ್ಣದ ಕೀಳರಿಮೆ ಎಂದೂ ನೆರೆಯಾಗಿ ಅಳಿಯದಿರಬಹುದು. ಮಾನವರ ಕಣ್ಣಿಗೆ ಸ್ವಾಬಾವಿಕವಾಗಿಯೇ ಬಿಳಿ ಮಯ್ಬಣ್ಣ ಒಟ್ಟಾರೆ ರುಚಿಸಬಹುದು. ಆ ಸಾದ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗೆಯೇ, DNA ಅರಿವು ನಾಗಾಲೋಟದಲ್ಲಿ ಬೆಳೆಯುತ್ತಿರುವ ಈ ದಿನಗಳಲ್ಲಿ, ಬೇಕೆನಿಸಿದ ಮಯ್ಪರಿ ಇರುವ designer ಮಕ್ಕಳನ್ನು ಪಡೆದುಕೊಳ್ಳುವ ಕಾಲ ದೂರವಿರದ ಆದುನಿಕ ಯುಗದಲ್ಲಿ, ಮಯ್ಬಣ್ಣ, ಬವಿಶ್ಯದಲ್ಲಿ ಒಂದು ಸಮಸ್ಯೆಯೇ ಆಗದಿರುವ ಇನ್ನೊಂದು ಸಾದ್ಯತೆಯೂ ಇದೆ. ಅದೇನೇ ಇರಲಿ, ಈಗಿನ ಮಟ್ಟಿಗಂತೂ, ನಮ್ಮ ಬಗ್ಗೆ ನಾವು ಸರಿಯಾಗಿ ತಿಳಿದುಕೊಂಡು, ಆ ತಿಳಿವಿನ ಬಲದಿಂದ ನಮ್ಮನ್ನು ಕಾಡುವ ದವುರ‍್ಬಲ್ಯಗಳನ್ನು ಕಳೆದುಕೊಳ್ಳುವುದು ಒಳ್ಳೆಯದೆನಿಸುತ್ತದೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಗುರುವಾರ, ಅಕ್ಟೋಬರ್ 10, 2013

’ಎನ್ನಡ ಎಕ್ಕಡ’ vs ’ಕ್ಯಾ ಹಯ್ ಕಹಾ ಹಯ್’

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಇತ್ತೀಚೆಗೆ ಚೆನ್ನಯಿಯಲ್ಲಿ ನಮ್ಮ ದೇಶದ ಚಿತ್ರೋದ್ಯಮ ನೂರು ವರ‍್ಶಗಳನ್ನು ಪೂರಯ್ಸಿದ ಸಂತಸಕ್ಕಾಗಿ ತಮಿಳುನಾಡಿನ ಸರ‍್ಕಾರದ ವತಿಯಿಂದ ಸಡಗರದ ಹಬ್ಬವೊಂದನ್ನು ನಡೆಸಲಾಯಿತು. ಹಬ್ಬದಲ್ಲಿ ತೆಂಕಣ ಬಾರತದ ಎಲ್ಲಾ ಬಾಶೆಗಳ ಚಿತ್ರಕರ‍್ಮಿಗಳು ಪಾಲ್ಗೊಂಡಿದ್ದರು. ಹಬ್ಬವೇನೋ ಸಂಬ್ರಮದಿಂದ ನಡೆದು ಮುಕ್ತಾಯವಾಯಿತು. ಆದರೆ, ಅದು ಮುಗಿದ ಮಾರನೇ ದಿನದಿಂದಲೇ ಶುರುವಾಯಿತು ನೋಡಿ ನಮ್ಮ ಕನ್ನಡ ಟೀವೀ ಕಾಲುವೆಗಳಲ್ಲಿ ಒಂದು ಜೋರು ಬೊಬ್ಬೆ! ಅದೇನೆಂದರೆ, ಉತ್ಸವದಲ್ಲಿ ಕನ್ನಡದ ನಟನಟಿಯರಿಗೆ ಆಯೋಜಕರಾದ ತಮಿಳರಿಂದ ಅವಮಾನವಾಯಿತು ಎಂದು. ’ಹಿರಿಯ ನಟಿಯರಾದ ಲೀಲಾವತಿ, ಬಾರತಿ, ಜಯಂತಿ ಮುಂತಾದವರಿಗೆ ಸರಿಯಾದ ವಾಹನ ಸವುಕರ‍್ಯವನ್ನು ಏರ‍್ಪಡಿಸದೆ ಅವರನ್ನು ಬಿಸಿಲಲ್ಲಿ ನಡೆಯುವಂತೆ ಮಾಡಿದರು. ಕನ್ನಡಿಗ ಅತಿತಿಗಳನ್ನು ಆಯೋಜಕರು ಯಾರೋ ಕಡಲೇಕಾಯಿ ಮಾರುವವರನ್ನು ಕರೆಯುವರಂತೆ ಕಯ್ ಸನ್ನೆ ಮಾಡಿ ಕರೆಯುತ್ತಿದ್ದರು. ನಟಿ ಜಯಮಾಲಾರನ್ನು ಸಬೆಯಲ್ಲಿ ಮೊದಲು ಮುಂದಿನ ಸಾಲಿನಲ್ಲಿ ಕೂರಿಸಿ, ಬಳಿಕ ಹಿಂದಿನ ಸಾಲಿಗೆ ಏಕಾಏಕಿ ಕಳಿಸಿದರು’ -  ಹೀಗೆ ಕೆಲವು ಆಪಾದನೆಗಳು ಕೇಳಿಬಂದವು. ಮೊದಮೊದಲು ಆಪಾದನೆಗಳನ್ನು ಅಲ್ಲಗಳೆಯುವ ಹೇಳಿಕೆಗಳು ಯಾರಿಂದಲೂ ಬರಲಿಲ್ಲ. ಆದರೆ, ಒಂದೆರಡು ದಿನಗಳ ಬಳಿಕ, ಸಾ. ರಾ. ಗೋವಿಂದು ಮತ್ತು ಎಸ್. ನಾರಾಯಣ್ ಅವರು ಆಪಾದನೆಗಳ ಸತ್ಯತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದರು. ನಟ ಶ್ರೀನಾತರು, ’ನನಗೆ ಅವಮಾನ ಆಯಿತು ಅಂತ ಹೇಳಿಕೊಂಡಿದ್ದೇನೆ ಅಂತ ಊಹಾಪೋಹ ಎದ್ದಿದೆ. ಆದರೆ, ನಾನು ಹಾಗೆ ಹೇಳಿಕೊಂಡೇ ಇಲ್ಲ’, ಎಂದು ಅವರೇ ಸ್ವತಹ ಕಾರ‍್ಯಕ್ರಮವೊಂದಕ್ಕೆ ಕರೆ ಮಾಡಿ ತಿಳಿಸಿದರು. ಒಟ್ಟಿನಲ್ಲಿ, ಈ ಚರ‍್ಚೆಗಳ ಅಬ್ಬರ ಮುಗಿಯುವಶ್ಟರಲ್ಲಿ, ಚೆನ್ನಯಿಯಲ್ಲಿ ನಮ್ಮ ಮಂದಿಗೆ ನಿಜವಾಗಿಯೂ ಅವಮಾನ ಆಯಿತೋ ಇಲ್ಲ ನಮ್ಮವರು ಅವಮಾನ ಆಯಿತು ಎಂದು ಕಲ್ಪನೆ ಮಾಡಿಕೊಂಡರೋ ಎಂದು ಎಲ್ಲರೂ ಅನುಮಾನ ಪಡುವಂತಾಯಿತು.
      ನನಗೆ ಅನಿಸುವುದು ಇದು - ಬಹುಶಹ ನಮ್ಮವರಲ್ಲಿ ಕೆಲವರಿಗೆ ಸಣ್ಣಪುಟ್ಟ ಅವಮಾನಗಳು ಆಗಿವೆ. ಏಕೆಂದರೆ, ನಾವು ಸುಮ್ಮ ಸುಮ್ಮನೆ ಸುಳ್ಳು ಹೇಳುವವರಲ್ಲ. ಒಂದುವೇಳೆ ಆಯೋಜಕರು ಬೇಕೆಂತಲೇ ಈ ಅವಮಾನಗಳನ್ನು ಎಸಗಿದ್ದರೆ ಅವರ ನಡತೆ ನಿಜಕ್ಕೂ ಕಂಡನೀಯ. ನಿಜವಾಗಿಯೂ ಅವಮಾನವಾಗಿದ್ದರೆ, ಅದರ ಬಗ್ಗೆ ದೂರುವುದರಲ್ಲಿ ತಪ್ಪಿಲ್ಲ.
      ಚೆನ್ನಯಿಯಲ್ಲಿ ನಿಜವಾಗಿಯೂ ಏನು ನಡೆಯಿತೋ, ಅದು ಒತ್ತಟ್ಟಿಗೆ ಇರಲಿ. ಈ ಸಂದರ‍್ಬದಲ್ಲಿ ನಾವು ನಿಜಕ್ಕೂ ಯೋಚನೆ ಮಾಡಬೇಕಾಗಿರುವುದು ನಮ್ಮದೇ ಸ್ವಬಾವದ ಬಗ್ಗೆ. ’ನೆರೆಯವರಿಂದ ನಮಗೆ ಅವಮಾನವಾಯಿತು’ ಎಂದು ನಾವು ದೂರುತ್ತಿರುವುದು ಇದೇ ಮೊದಲಲ್ಲ. ಅಗಾಗ್ಗೆ ನಾವು ಈ ಬಗೆಯ ದೂರುಗಳನ್ನು ಮಾಡುತ್ತಲೇ ಇರುತ್ತೇವೆ. ನನಗೆ ಈ ವಿಶಯದಲ್ಲಿ ಸೋಜಿಗ ಎನಿಸುವುದು ಇದು - ಬರೀ ನೆರೆಯವರಶ್ಟೇ ನಮಗೆ ಅವಮಾನ ಮಾಡುವುದಿಲ್ಲ. ನಮ್ಮ ನಡುವೆ ಬದುಕುತ್ತಿರುವ ಹೆಚ್ಚುಕಡಿಮೆ ಎಲ್ಲಾ ಬಾಶಿಕರೂ ನಮಗೆ ದಿನನಿತ್ಯ ಅವಮಾನ ಮಾಡುತ್ತಲೇ ಇರುತ್ತಾರೆ. ಆದರೆ, ನಾವು ಸಾಮಾನ್ಯವಾಗಿ ನೆರೆಯವರನ್ನು ದೂರುತ್ತೇವೆಯೇ ಹೊರತು ಉಳಿದವರನ್ನು ದೂರುವುದಿಲ್ಲ. ಉದಾಹರಣೆಗೆ, ನಮ್ಮ ನೆಲದಲ್ಲಿ ಜಾಂಡಾ ಊರಿರುವ ಹಿಂದೀವಾಲಾಗಳನ್ನು ತೆಗೆದುಕೊಳ್ಳಿ. ಅವರಲ್ಲಿ ಎಶ್ಟು ಮಂದಿ ಕನ್ನಡ ಮಾತಾಡುತ್ತಾರೆ? ಮನೆ ಕೆಲಸದವರು, ತರಕಾರಿ ಗಾಡಿಯವರು, ಬಸ್ ಕಂಡಕ್ಟರರು, ಅಂಗಡಿಯವರು, ನೆರೆಹೊರೆಯವರು, ಬೀದಿಯ ಸಾರ‍್ವಜನಿಕರು, ಸಹೋದ್ಯೋಗಿಗಳು - ಈ ಎಲ್ಲರ ಬಾಯಲ್ಲೂ ಮುಲಾಜೇ ಇಲ್ಲದೆ ಹಿಂದೀ ಹೊರಡಿಸುತ್ತಾರೆ ನಮ್ಮ ಹಿಂದೀವಾಲರು! ನಮ್ಮ ನೆಲದಲ್ಲಿ ನೆಲೆ ನಿಂತ ಹಿಂದೀವಾಲರು ನಮ್ಮ ನುಡಿಯನ್ನು ಕಲಿತು ಆಡಬೇಕು. ಹಾಗೆ ನಡೆದುಕೊಳ್ಳದೆ, ಅವರ ಹಿಂದಿಯಲ್ಲೇ ನಮ್ಮನ್ನೂ ಮಾತಾಡುವಂತೆ ಮಾಡುವುದು ನಮಗೆ ಎಸಗುವ ಅವಮಾನ ತಾನೆ? ಆದರೆ, ನಾವು ಅದನ್ನು ಅವಮಾನ ಎಂದುಕೊಳ್ಳುವುದಿಲ್ಲ! ಉತ್ತರ ಬಾರತದ ಅನೇಕ ಪುಡಾರಿಗಳು ನಮ್ಮಲ್ಲಿಗೆ ಬಂದು ಹಿಂದಿಯಲ್ಲಿ ಬಾಶಣ ಜಡಿದು ಹೋಗುತ್ತಾರೆ. ಅದೂ ಅವಮಾನವೇ. ಆದರೆ, ಅದನ್ನೂ ನಾವು ಅವಮಾನ ಎಂದು ತೆಗೆದುಕೊಳ್ಳುವುದಿಲ್ಲ! ಅದೇ ನಮ್ಮ ನೆರೆಯ ತಮಿಳರೋ ತೆಲುಗರೋ ಎಡವೆಟ್ಟು ಮಾಡಿದರೆ, ’ಅಯ್ಯೋ ನಮಗೆ ಅವಮಾನ ಆಯ್ತು’ ಎಂದು ಬೊಬ್ಬೆ ಇಡುತ್ತೇವೆ!  ಈ ವಿಚಿತ್ರಕ್ಕೆ ಏನು ಹೇಳುವುದು, ಸ್ವಾಮೀ?
      ’ನಮಗೆ ಎನ್ನಡಾ ಎಕ್ಕಡಾ ಅನ್ನೋರು ಬೇಡ’ - ಈ ಸಾಲನ್ನು ಕನ್ನಡ ಚಿತ್ರಗಳಲ್ಲಿ ಪಾತ್ರದಾರಿಗಳು ನುಡಿಯುವುದನ್ನು ನಾನು ನೋಡಿದ್ದೇನೆ. ಇದರ ಅರ‍್ತ, ’ನಮಗೆ ತಮಿಳರೂ ತೆಲುಗರೂ ಬೇಡ’ ಎಂದು. ಆದರೆ, ’ನಮಗೆ ಕ್ಯಾ ಹಯ್, ಕಹಾ ಹಯ್ ಅನ್ನೋರು ಬೇಡ’ ಎನ್ನುವ ಸಿನಿಮಾ ಡಯಲಾಗನ್ನು ನಾನು ಇದುವರೆಗೆ ಕೇಳೇ ಇಲ್ಲ. ಹೇಗಿದೆ ನೋಡಿ ಈ ತಮಾಶೆ! ನಮಗೆ ನಮ್ಮಂತೆ ದ್ರಾವಿಡರೇ ಆದ ತಮಿಳರು ತೆಲುಗರು ಬೇಡ. ಆದರೆ, ನಮ್ಮನ್ನೆಲ್ಲಾ ಒಟ್ಟಿಗೆ ಸೇರಿಸಿ, ’ಮದ್ರಾಸಿ’ ಎಂದು ಹೀಯಾಳಿಸುವ ಹಿಂದೀವಾಲರು ಮಾತ್ರ ಬೇಡ ಎನಿಸುವುದಿಲ್ಲ!
      ಇಂತಹ ಪರಿಸ್ತಿತಿಗೆ ನಮ್ಮಲ್ಲಿ ದ್ರಾವಿಡತನ ಇಲ್ಲದಿರುವುದೇ ಕಾರಣ. ಕಾವೇರಿ ಹೊಳೆ, ಕರುನಾಡು ಮತ್ತು ತಮಿಳುನಾಡು - ಈ ಎರಡೂ ರಾಜ್ಯಗಳಲ್ಲಿ ಹರಿಯುವುದರಿಂದ, ನಮಗೂ ತಮಿಳರಿಗೂ ಜಗಳ ತಪ್ಪಿದ್ದಲ್ಲ. ಕಾವೇರಿಯ ನೀರು ಇಬ್ಬರಿಗೂ ಸಾಕಾಗುವುದಿಲ್ಲ. ಈ ಕೊರತೆಯನ್ನೇ ಎರಡೂ ಕಡೆಗಳಲ್ಲಿ ಬಂಡವಾಳವಾಗಿ ಬಳಸಿಕೊಂಡು ಇಬ್ಬರ ಮದ್ಯೆ ವಯ್ಮನಸ್ಯ ತಂದಿಕ್ಕುವ ಪುಡಾರಿಗಳಿಗೇನು ಕೊರತೆಯೇ? ಈ ಕಾರಣಕ್ಕಾಗಿ ನಮ್ಮ ಹಾಗೂ ತಮಿಳರ ನಡುವೆ ಸವ್‍ಹಾರ‍್ದ ಮೂಡುವುದು ಕೊಂಚ ಕಶ್ಟ. ಪದೇ ಪದೇ ಮಳೆಯ ಪ್ರಮಾಣದಲ್ಲಿ ಕೊರತೆಯಾದರೆ, ಕ್ರಿಶ್ಣಾ ನದಿಯ ಸಲುವಾಗಿ ನಮಗೂ ತೆಲುಗರಿಗೂ ಕೂಡ ಮನಸ್ತಾಪ ಉಂಟಾಗಬಹುದು. ಈ ರೀತಿ ಆಗುವುದು ನಮಗಶ್ಟೇ ಅಲ್ಲ, ಇಡೀ ತೆಂಕಣ ಬಾರತಕ್ಕೇ ಕೆಟ್ಟದ್ದು. ಜನಸಂಕ್ಯೆ ತಗ್ಗಿ ಹಿಡಿತಕ್ಕೆ ಬರುವವರೆಗೂ ಈ ಸಮಸ್ಯೆಗಳಿಗೆ ಬಗೆಹರಿವಿಲ್ಲ. ಆದರೆ, ಸಮಸ್ಯೆಗಳ ತೀಕ್ಶ್ಣತೆಯನ್ನು ದ್ರಾವಿಡತನದ ಅರಿವನ್ನು ಬೆಳೆಸಿಕೊಳುವುದರ ಮೂಲಕ ಕೊಂಚ ಕಡಿಮೆ ಮಾಡಬಹುದು. ’ದಕ್ಶಿಣದವರಾದ ನಾವೆಲ್ಲರೂ ದ್ರಾವಿಡ ಹಿನ್ನೆಲೆಯವರು’ ಎಂಬ ಅರಿವನ್ನು ಮೂಡಿಸಿಕೊಂಡರೆ, ಕಡೇ ಪಕ್ಶ, ಸಣ್ಣಪುಟ್ಟ ಕಾರಣಗಳಿಂದಾಗಿ ನಮ್ಮ ನಮ್ಮಲ್ಲಿ ಮನಸ್ತಾಪ ಉಂಟಾಗುವುದಾದರೂ ನಿಲ್ಲುತ್ತದೆ. ದ್ರಾವಿಡತನದ ಬಿಗಿಯಾದ ಅಡಿಗಲ್ಲನ್ನು ಹಾಕಿಕೊಂಡರೆ, ಎಲ್ಲರ ಮೇಲೆ ಹಿಂದೀ ಹೇರುವ ಉತ್ತರದವರ ಕೆಟ್ಟ ಚಾಳಿಗೂ ನಾವು ತಕ್ಕ ಎದುರನ್ನು ಒಡ್ಡುತ್ತೇವೆ. ಹಾಗಾಗಿ, ಹೇಗೆ ನೋಡಿದರೂ, ದಕ್ಶಿಣದವರಾದ ನಾವು ದ್ರಾವಿಡತನವನ್ನು ಮಯ್ಗೂಡಿಸಿಕೊಂಡರೇ ಒಳ್ಳೆಯದು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಬುಧವಾರ, ಸೆಪ್ಟೆಂಬರ್ 25, 2013

ವಿಶ್ವಕ್ಕೇ ಅಣ್ಣ ನಮ್ಮ ಬಸವಣ್ಣ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಮರಾಟರಿಗೆ ಶಿವಾಜಿ ಹೇಗೋ, ತಮಿಳರಿಗೆ ವಳ್ಳುವರ್ ಹೇಗೋ, ತೆಲುಗರಿಗೆ ವೇಮನ ಹೇಗೋ, ಹಾಗೆ ಕನ್ನಡರಿಗೆ ಬಸವಣ್ಣ ’ಸಾಂಸ್ಕ್ರುತಿಕ’ ನಾಯಕನಾದರೆ, ಕನ್ನಡಿಗರಲ್ಲಿ ಒಮ್ಮತ ಮೂಡುತ್ತದೆ ಎಂದು ಕನ್ನಡ ಗೆಳೆಯರ ಬಳಗದ ರಾ.ನಂ.ಚಂದ್ರಶೇಕರರು ಇತ್ತೀಚೆಗೆ ಕಾರ‍್ಯಕ್ರಮವೊಂದರಲ್ಲಿ ಸಲಹೆಯೊಂದನ್ನು ಮುಂದಿಟ್ಟಿದ್ದಾರೆ. ಹೀಗೆಂದು ಸೆಪ್ಟೆಂಬರ್ ಒಂದರ ಪ್ರಜಾವಾಣಿ ಸುದ್ದಿಹಾಳೆಯಲ್ಲಿ ಪ್ರಕಟವಾಗಿದೆ. ರಾ.ನಂ.ಚಂದ್ರಶೇಕರರ ಈ ಸಲಹೆಯನ್ನು ಕಂಡಾಗ, ’ಬಸವಣ್ಣ ಎಂತಹ ಮಹಾನ್ ವ್ಯಕ್ತಿ! ಇಡೀ ವಿಶ್ವಕ್ಕೇ ಆದರ‍್ಶಪ್ರಾಯನಾಗಿರಬೇಕಾದ ಬಸವಣ್ಣನನ್ನು ಆತನ ನೆಲದಲ್ಲೇ ’ನಾಡ ಲಾಂಚನ’ ವ್ಯಕ್ತಿಯಾಗಿ ಗುರುತಿಸಲಾಗಿಲ್ಲವಲ್ಲ!’ ಎಂದು ನನಗೆ ಕೊಂಚ ಬೇಸರವಾಯಿತು.
      ಪ್ರಾಪಂಚಿಕವಾಗಿ ನೋಡುವುದಾದರೆ, ಬಸವಣ್ಣನಿಗೆ ಯಾವ ಕೊರತೆ ಇತ್ತು? ತಾರುಣ್ಯದಲ್ಲೇ ಹಿರಿಯ ಅದಿಕಾರದ ಪದವಿ ದೊರೆತಿತ್ತು. ದೊರೆ ಬಿಜ್ಜಳನ ಇಡೀ ಬಂಡಾರದ ಪಾರುಪತ್ಯೆಯ ಹೊಣೆಯೇ ಆತನ ಮೇಲಿತ್ತು. ದೊರೆಯ ಮೆಚ್ಚುಗೆ, ಸಮಾಜದ ಮನ್ನಣೆ ಎರಡೂ ಅವನಿಗಿತ್ತು. ಎತ್ತರದ ಪದವಿ ತಂದ ಸಿರಿಸಂಪತ್ತು ಮಾತ್ರವಲ್ಲದೆ ಅವನಿಗೆ ತನ್ನನ್ನು ಚಚ್ಚರದಿಂದ ಅನುಸರಿಸುವ ಅಕ್ಕರೆಯ ಕುಟುಂಬವೂ ಇತ್ತು. ಒಬ್ಬ ಮನುಶ್ಯನಿಗೆ ಇದಕ್ಕಿಂತ ಬೇರೆ ಇನ್ನೇನು ಬೇಕು? ಬಸವಣ್ಣ ಇಂತಹ ಪ್ರಾಪಂಚಿಕ ಸುಕದಲ್ಲಿ ಬದುಕಿನುದ್ದಕ್ಕೂ ಹಾಯಾಗಿ ಇದ್ದುಬಿಡಬಹುದಾಗಿತ್ತು. ಕಶ್ಟಗಳನ್ನು ಮಯ್ಮೇಲೆ ತಂದುಕೊಳ್ಳುವ ಅಗತ್ಯವಾದರೂ ಅವನಿಗೆ ಎಲ್ಲಿತ್ತು? ಆದರೂ ಆತ ಸಮಾಜದ ಒಳಿತಿಗಾಗಿ ಅಪಾಯಗಳಿಗೆ ಮಯ್ ಒಡ್ಡಿದ. ತುಳಿತಕ್ಕೆ ಒಳಗಾದವರ ಏಳಿಗೆಗಾಗಿ ತನ್ನ ಬದುಕನ್ನೇ ಸವೆಸಿದ.
      ಪ್ರಪಂಚದಲ್ಲಿ ಹಲವಾರು ನೀತಿಬೋದಕರೂ ಸಮಾಜ ಸುದಾರಕರೂ ಬಂದು ಹೋಗಿದ್ದಾರೆ. ಮನುಶ್ಯರಲ್ಲಿ ಸಮಾನತೆ ಇರಬೇಕೆಂದು ಉಪದೇಶಿಸಿದ್ದಾರೆ. ಮನುಶ್ಯರು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂದು ಅರುಹಿದ್ದಾರೆ. ಪ್ರಾಣಿಪಕ್ಶಿಗಳಲ್ಲಿ ಮರುಕವಿಡಬೇಕೆಂದು ಕೇಳಿಕೊಂಡಿದ್ದಾರೆ. ಆದರೆ, ಅವರಲ್ಲಿ ಎಶ್ಟು ಮಂದಿ ’ಕಾಯಕದ’ ಹಿರಿಮೆಯ ಬಗ್ಗೆ ನುಡಿದಿದ್ದಾರೆ? ಬಸವಣ್ಣ, ಸಾಮಾಜಿಕ ಸಮಾನತೆ, ವಯ್ಯಕ್ತಿಕ ನಯ್ತಿಕತೆ, ಪ್ರಾಣಿದಯೆ ಮುಂತಾದ ಮುನ್ನಿನ ಕೆಲ ಸುದಾರಕರು ಕೊಟ್ಟ ಹಳೆಯ ಸಂದೇಶವನ್ನೇ ತಾನೂ ಇನ್ನೊಮ್ಮೆ ಕೊಟ್ಟು ಸುಮ್ಮನಾಗಲಿಲ್ಲ. ’ಕಾಯಕವೇ ಕಯ್ಲಾಸ’ ಎಂತಲೂ ಹೇಳಿದ. ತನ್ನ ಬಾಳಿನುದ್ದಕ್ಕೂ ಹೇಳಿದಂತೆಯೇ ನಡೆದುಕೊಂಡ. ಬಸವಣ್ಣನಿಗೆ, ಕಾಯಕವೆಂಬುದೇ ಒಂದು ಮಹಾನ್ ವ್ರತ ಎಂಬ ನನ್ನಿಯ ಅರಿವಿತ್ತು. ’ಮಡಕೆ ಮಾಡುವರೆ ಮಣ್ಣೇ ಮೊದಲು’ ಎಂದು ಆತನ ವಚನವೊಂದು ಹೇಳುತ್ತದೆ. ಅದೇ ಪರಿಯಲ್ಲಿ, ’ಪ್ರಪಂಚ ನಡೆವರೆ ಕಾಯಕವೇ ಮೊದಲು’ ಎಂದು ಯಾರೂ ಹೇಳಬಹುದು. ಮಂದಿ ಕೆಲಸ ಮಾಡಲಿಲ್ಲ ಎಂದರೆ ಪ್ರಪಂಚ ಎಲ್ಲಿರುತ್ತದೆ? ಅಶ್ಟು ಮುಕ್ಯ, ಕೆಲಸ ಮಾಡುವುದು. ಮಾಡುವ ಕೆಲಸವನ್ನೇ ಅಚ್ಚುಕಟ್ಟಾಗಿ ಮಾಡಿ, ಅದರಲ್ಲೇ ಕಯ್ವಲ್ಯವನ್ನು ಪಡೆಯಿರಿ ಎನ್ನುವ ಬಸವಣ್ಣ ಸಾರಿದ ಮತದ ಎತ್ತರವನ್ನು ಅದೆಶ್ಟು ಉಳಿದ ಮತಗಳು ತಲುಪಲಾರುವವು?
      ಪ್ರಾಣಿದಯೆಯ ವಿಶಯದಲ್ಲೂ ಅಶ್ಟೆ. ಬಸವಣ್ಣನ ಕಣ್ಣೋಲಿನಲ್ಲಿ ವಸ್ತುನಿಶ್ಟತೆ ಇತ್ತು. ಮಾಂಸಕ್ಕಿಂತ ಮಾಂಸವನ್ನು ಪಡೆದುಕೊಳ್ಳುವುದರ ಹಿಂದಿನ ಹಿಂಸೆಯ ಬಗ್ಗೆ ಅವನಿಗೆ ಹೆಚ್ಚು ಕಾಳಜಿಯಿತ್ತು. ಮೊದಲೇ ಸತ್ತು ಹೊರಗೆಸೆಯಲಾಗಿದ್ದ ಹಸುವಿನ ಬಾಡನ್ನು ತಿನ್ನುವ ಕುಲವಿಲ್ಲದವರಿಗಿಂತ, ಜೀವಂತಿಕೆ ಕುಲುಕಿ ಚಿಮ್ಮುವ ಎಳೆಯ ಪ್ರಾಣಿಗಳನ್ನು ಕೊಂದು, ಬಾಡುಂಡು ತೇಗುವ ಕುಲಜರೇ ಕೀಳು ಎಂಬ ವಸ್ತುನಿಶ್ಟ ಅಬಿಪ್ರಾಯ ಅವನದಾಗಿತ್ತು. ’ಹೊತ್ತು ತಂದು ಕೊಲುವಿರಿ ನೀವು!’ ಎಂದು ಎಳವಾಡಿಗೆ ಆಟಿಸುವ ಸವರ‍್ಣೀಯರನ್ನು ತನ್ನ ಒಂದು ವಚನದಲ್ಲಿ ಅವನು ನೇರವಾಗೇ ಮೂದಲಿಸಿದ್ದಾನೆ.
      ಬಸವಣ್ಣನಿಗೆ ಸತ್ತ ಬಳಿಕ ಸಿಗುವ ಸ್ವರ‍್ಗಕ್ಕಿಂತ ಇಂದಿದ್ದು ಬಾಳುವ ಎಂದಿನ ಪ್ರಪಂಚದ ಏಳಿಗೆಯೇ ಮುಕ್ಯವಾಗಿತ್ತು. ವಿದವೆಯರ ಮರುಮದುವೆಗೆ ತಡೆ ಇರಬಾರದೆಂದ. ಬೆಲೆವೆಣ್ಣುಗಳ ಬಿಡುಗಡೆಗೆ ಮಿಡುಕಿದ. ಜಾತೀಯತೆಯನ್ನಂತೂ ಅತ್ಯಂತ ಕಟುವಾಗಿ ವಿರೋದಿಸಿದ. ಜಾತೀಯತೆಯ ಎದುರು ತಾನು ತಳೆದಿದ್ದ ಕಡುನಿಲುವನ್ನು ಎಂದೂ ಆತ ಸಡಿಲಿಸಲಿಲ್ಲ. ಕಡೆಕಡೆಗೆ ಜಾತೀಯತೆಗೆ ಪತ್ತಿದ ಗಟನೆಯೊಂದರಿಂದ ಅವನ ಪ್ರಾಣಕ್ಕೇ ಕುತ್ತು ಬರುವಂತಾಗಿ, ಆತ ಊರನ್ನೇ ತೊರೆದು ಹೋಗಬೇಕಾಯಿತು.
      ಇಂತಹ ಒಬ್ಬ ದೀರ ದೇವತಾ ಮನುಶ್ಯನನ್ನು ನಮ್ಮ ನಾಡಿನ ಲಾಂಚನವನ್ನಾಗಿ ನಾವು ಇನ್ನೂ ಮಾಡಿಕೊಂಡಿಲ್ಲ ಎನ್ನುವುದನ್ನು ನೆನೆದರೇ ಆಶ್ಚರ‍್ಯವಾಗುತ್ತದೆ. ಇದಕ್ಕೆ ಕಾರಣ ಏನಿರಬಹುದು? ಜಾತೀಯತೆಯ ಕೋತಿಹಿಡಿಯಲ್ಲಿ ಸಿಲುಕಿರುವ ನಮ್ಮ ಸಮಾಜ ಬಸವಣ್ಣನನ್ನು ವೀರಶಯ್ವ ಮತದೊಂದಿಗೆ ತಳಿಕೆ ಹಾಕಿರುವುದೇ ಕಾರಣವಿರಬಹುದೆ? ’ಬಸವಣ್ಣನನ್ನು ಸಾಂಸ್ಕ್ರುತಿಕ ನಾಯಕನನ್ನಾಗಿ ಮಾಡಿಕೊಂಡರೆ ಕನ್ನಡಿಗರಲ್ಲಿ ಒಮ್ಮತ ಮೂಡುತ್ತದೆ’ - ಇದು ಈ ಮೊದಲು ತಿಳಿಸಿದಂತೆ ರಾ.ನ.ಚಂದ್ರಶೇಕರರ ಅಬಿಪ್ರಾಯ. ನನಗನ್ನಿಸುತ್ತದೆ, ಇಂದಿನ ಜಾತಿಮರುಳಿನ ನೆಲೆಯಲ್ಲಿ ಯಾರಾದರೂ ಬಸವಣ್ಣನನ್ನು ಸಾಂಸ್ಕ್ರುತಿಕ ನಾಯಕನನ್ನಾಗಿ ಮಾಡಹೊರಟರೆ, ಒಮ್ಮತದ ಮಾತು ಬಿಡಿ, ಕನ್ನಡಿಗರಲ್ಲಿ ಒಂದು ಮಿನಿ ಕಾಳಗವೇ ನಡೆದರೂ ನಡೆಯಬಹುದು. ಎಂತಹ ನಾಚಿಕೆಗೇಡು ಇದು!
      ಎಂದಾದರೊಂದು ದಿನ ನಮ್ಮಲ್ಲಿಯ ಜಾತೀಯತೆಯ ಸಣ್ಣತನ ತೊಲಗಿ, ನಮ್ಮ ದ್ರಾವಿಡ ನೆಲದಲ್ಲಿ ಹುಟ್ಟಿ, ನಮ್ಮ ಮೆಚ್ಚಿನ ದ್ರಾವಿಡ ನುಡಿಯಾದ ಕನ್ನಡದಲ್ಲೇ ಇಡೀ ವಿಶ್ವವೇ ಒಪ್ಪುವಂತಹ ಮತವನ್ನು ಸಾರಿ ಸಂದ ಬಸವಣ್ಣ, ನಮ್ಮೆಲ್ಲರ ನಾಯಕನಾಗಿ, ನಮ್ಮ ನಾಡಕುರುಹಾಗಿ ಮೆರೆಯುತ್ತಾನೆ ಎಂದು ಸದ್ಯಕ್ಕೆ ಹಾರಯ್ಸೋಣ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಮಂಗಳವಾರ, ಸೆಪ್ಟೆಂಬರ್ 10, 2013

ನನ್ನಿಯೋ ಇಲ್ಲ ಬರೀ ಆಶಾವಾದವೋ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಆಗಸ್ಟ್ ಹತ್ತರ The Times of India ಪತ್ರಿಕೆಯಲ್ಲಿ, ಕನ್ನಡ ನುಡಿಯ ಬವಿಶ್ಯದ ಬಗ್ಗೆ ನಡೆದ ಕಾರ‍್ಯಕ್ರಮವೊಂದರ ಸುದ್ದಿ ಪ್ರಕಟವಾಗಿದೆ. ಆ ಕಾರ‍್ಯಕ್ರಮದಲ್ಲಿ ಕನ್ನಡ ನುಡಿವೊಲದಲ್ಲಿ  ಹೆಸರು ಮಾಡಿರುವ ಶ್ರೀಯುತರಾದ ಜಿ.ವೆಂಕಟಸುಬ್ಬಯ್ಯ, ಕೆ.ವಿ.ನಾರಾಯಣ್, ಗಣೇಶ್ ದೇವಿ ಮುಂತಾದವರು ಬಾಶಣ ಮಾಡಿದ್ದಾರೆ. ಸುದ್ದಿ ಬರಹ ಅವರ ಬಾಶಣಗಳಿಂದ ಕೆಲ ಮುಕ್ಯ ಅಬಿಪ್ರಾಯಗಳನ್ನು ಎತ್ತಿ ಓದುಗರ ಮುಂದಿಟ್ಟಿದೆ. ಬಾಶಣಗಳ ಒಟ್ಟಾರೆ ತೀರ‍್ಮಾನ ಕನ್ನಡದೊಲವಿಗಳಿಗೆ ಹಿಗ್ಗು ತರುವಂತಹುದೇ ಆಗಿದೆ. ಏಕೆಂದರೆ, ’ಕನ್ನಡ ನುಡಿಗೆ ಕುಂದಿಲ್ಲ. ಬರುವ ನೂರಾರು ವರ‍್ಶ ಕನ್ನಡ ನುಡಿ ಏಳಿಗೆವೆತ್ತು ಸಂಬ್ರಮದಿಂದ ಬಾಳಿ ಬದುಕಲಿದೆ’ - ಇದು ಬಾಶಣಗಳು ಒಮ್ಮತದಿಂದ ವ್ಯಕ್ತಪಡಿಸಿದ ಅಬಿಪ್ರಾಯ.
      ಈ ಬಗೆಯ ಗೆಲುನೋಟಕ್ಕೆ ಬಾಶಣಕಾರರು ಕೊಟ್ಟ ಆದಾರಗಳನ್ನು ಸುದ್ದಿ ಉದ್ದರಿಸಿದೆ. ’ಕನ್ನಡಕ್ಕೆ ಎರಡು ಸಾವಿರ ವರ‍್ಶಗಳ ಇತಿಹಾಸವೂ ಮೇಲುನುಡಿಪಿನ (ಶ್ರೇಶ್ಟಸಾಹಿತ್ಯದ) ಬೆಳೆಯೂ ಇದೆ. ಅಂದದ ಲಿಪಿ ಇದೆ. ಬಗೆಗೊಳುವ ಇನಿದಾದ ದನಿ ಇದೆ. ಮುಕ್ಯವಾಗಿ, ಅದನ್ನಾಡುವ ಕೋಟಿಕೋಟಿ ಮಂದಿಯ ಸಂಕ್ಯಾಬಲದ ಅಡಿಗಲ್ಲೂ ಇದೆ’ - ಇದು ನಡೆದಾಡುವ ನಿಗಂಟು ವೆಂಕಟಸುಬ್ಬಯ್ಯನವರ ಅನಿಸಿಕೆಯಾದರೆ, ನುಡಿಯರಿಗ ಕೆ.ವಿ.ನಾರಾಯಣ್ ಅವರು ಹೇಳಿರುವುದು ಹೀಗೆ - ’ಯಾವುದೇ ನುಡಿ ಅಳಿಯುವುದು ಅದನ್ನಾಡುವವರು ಅಳಿದರೆ ಮಾತ್ರ. ಕನ್ನಡಕ್ಕೆ ಅಳಿಯುವ ಬಯವಿಲ್ಲ. ಆದರೆ, ಒಂದೇ ನುಡಿ ಚಲಾವಣೆಯಲ್ಲಿರುವಂತಹ ಪರಿಸರಗಳು ಇನ್ನು ಮುಂದೆ ಇರುವ ಹಾಗಿಲ್ಲ. ಒಂದೇ ಪರಿಸರದಲ್ಲಿ ಹಲನುಡಿಗಳ ಬಳಕೆಯಾಗುವುದೇ ಬವಿಶ್ಯದ ವಾಸ್ತವ. ಸಂಕ್ಯಾಬಲ ಅಶ್ಟೊಂದು ಮುಕ್ಯವಲ್ಲ. ಏಕೆಂದರೆ, ಕೊಂಕಣಿ ಆಡುವರಿಗಿಂತ ಹಲವುಪಟ್ಟು ಹೆಚ್ಚು ಮಂದಿ ಗೋಂಡೀ ನುಡಿಯನ್ನು ಆಡುತ್ತಾರೆ. ಆದರೆ, ಸಂವಿದಾನದಲ್ಲಿ ಕೊಂಕಣಿಯನ್ನು ಹೆಸರಿಸಿದ್ದಾರೆಯೇ ಹೊರತು ಗೋಂಡೀಯನ್ನಲ್ಲ’. ಇನ್ನು ಮತ್ತೊಬ್ಬ ನುಡಿಯರಿಗರಾದ ಗಣೇಶ್ ದೇವಿ ಅವರು ಅಬಿಪ್ರಾಯಪಟ್ಟದ್ದು ಹೀಗೆ - ’ಕನ್ನಡಕ್ಕೆ ಎಲ್ಲ ನುಡಿಗಳಿಂದಲೂ ಪದಸಂಪತ್ತನ್ನು ತಂದುಕೊಳ್ಳುವ ಯುಕ್ತಿ ಇದೆ. ಬಾಶೆಗಳು ಅಳಿಯುತ್ತವೆ ಎನ್ನುವುದೇ ಸುಳ್ಳು. ಬಾಶೆಗಳು ಕಲುಶಿತವಾಗುತ್ತವೆ ಎನ್ನುವುದೂ ಸುಳ್ಳು. ಬಾಶೆಗಳು ಹೊಳೆಗಳ ಹಾಗೆ. ಹಲವು ಮೂಲಗಳಿಂದ ಕಸುವನ್ನು ಪಡೆದುಕೊಂಡು ನಿರಂತರವಾಗಿ ಹರಿಯುತ್ತವೆ, ಸಾಯುವುದಿಲ್ಲ. ಕನ್ನಡವೇ ಇದಕ್ಕೆ ಒಂದು ಒಳ್ಳೆಯ ಎತ್ತುಗೆ (ಉದಾಹರಣೆ)’.
      ಈ ಅನಿಸಿಕೆಗಳನ್ನು ಕೇಳಿದರೆ ಯಾವ ಕನ್ನಡಿಗನಿಗೇ ಆಗಲಿ ಸಂತೋಶವಾಗಬೇಕು. ನನಗೂ ಆಯಿತು. ಆದರೆ, ಒಡನೆಯೇ ಕೆಲ ಸಂದೇಹಗಳೂ ತಲೆ ಎತ್ತಿದುವು. ನಾನು ನುಡಿಯರಿಗನಲ್ಲ. ನುಡಿಗಳ ಬಗೆಗಿನ ಪೇರರಿವು ನನಗೆ ಕಂಡಿತ ಇಲ್ಲ. ಮೇಲೆ ಹೆಸರಿಸಿದ ಅರಿಗರ ತೀರ‍್ಮಾನಗಳನ್ನು ಅಲ್ಲಗಳೆಯುವ ಗುಂಡಿಗೆ ನನಗಿಲ್ಲ. ಆದರೂ, ಅವರ ಅನಿಸಿಕೆಗಳು ಇಡಿನನ್ನಿ (ಪೂರ‍್ಣ ಸತ್ಯ) ಅಲ್ಲ ಎನಿಸುವ ಸಂದೇಹಗಳು ನನ್ನಲ್ಲಿ ಮೂಡಿವೆ. ಅವುಗಳನ್ನು ಕಿರಿದಾಗಿ ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತೇನೆ.
      ಯಾವುದೇ ನುಡಿಯ ಇಂದಿನ ಹಾಗೂ ನಾಳೆಯ ಆರೋಗ್ಯವನ್ನು ಅದರ ಚರಿತ್ರೆ ಮತ್ತು ಸಾಹಿತ್ಯಗಳ ಹಳಮೆಯಿಂದ ನಿಜಕ್ಕೂ ಅಳೆಯಲು ಬರುತ್ತದೆಯೆ? ಕನ್ನಡದಲ್ಲಿ ’ಹಳೆಯ’ ನುಡಿಪೇನೋ ಬೇಕಾದಶ್ಟಿದೆ. ಆದರೆ, ಅದನ್ನು ಓದುವವರು ಎಶ್ಟಿದ್ದಾರೆ? ಜನ, ಬಾಶೆಗೆ ಇಂದು ಎಶ್ಟು ಉಪಯೋಗ ಇದೆ ಎಂಬುದರ ಬಗ್ಗೆ ಯೋಚಿಸುತ್ತಾರೆಯೆ ಹೊರತು ಅದರ ಚರಿತ್ರೆಯ ಬಗ್ಗೆ ಅಲ್ಲ. ಇನ್ನು, ’ಸಂಕ್ಯಾಬಲವಿದ್ದರೆ ನುಡಿ ಅಳಿಯುವುದಿಲ್ಲ’ ಮತ್ತು ’ಆಡುಗರು ಅಳಿಯದಿದ್ದರೆ ನುಡಿ ಅಳಿಯುವುದಿಲ್ಲ’ ಎಂಬ ನಂಬಿಕೆಗಳ ಬಗ್ಗೆ ಕೊಂಚ ಯೋಚಿಸೋಣ. ಉದಾಹರಣೆಗಾಗಿ, ಮೆಕ್ಸಿಕೋ ದೇಶದಲ್ಲಿದ್ದ ಮತ್ತು ಇಡೀ ದಕ್ಶಿಣ ಅಮೆರಿಕದ ದೇಶಗಳಲ್ಲಿದ್ದ ಸ್ತಳೀಯ ಬಾಶೆಗಳ ಪಾಡು ಏನಾಯಿತು ಎಂಬುದನ್ನು ಒಂದಿಶ್ಟು ಗಮನಿಸೋಣ. ಆ ನಾಡುಗಳಿಗೆ ವಲಸೆ ಹೋದ ಅಯ್‍ರೋಪ್ಯರ ಸಂಕ್ಯೆ ಅಲ್ಲಿನ ಸ್ತಳೀಯರ ಸಂಕ್ಯೆಗೆ ಹೋಲಿಸಿದರೆ ಬಹಳ ಕಡಿಮೆ. ಆದರೂ, ಅಯ್‍ರೋಪ್ಯರ ಸ್ಪ್ಯಾನಿಶ್ ಮತ್ತು ಪೋರ‍್ಚುಗೀಸ್ ಬಾಶೆಗಳು ಸ್ತಳೀಯರ ಬಾಶೆಗಳನ್ನು ಬಗ್ಗು ಬಡಿದವು! ಈಗ ಅಲ್ಲಿ, ಎಲ್ಲೋ ಅಲ್ಲೊಂದು ಇಲ್ಲೊಂದು ಸ್ತಳೀಯ ಬಾಶೆಗಳು ಬರೀ ಮನೆಗಳಿಗೆ ಮತ್ತು ಹಟ್ಟಿಗಳಿಗೆ ಸೀಮಿತವಾಗಿ, ಇದ್ದೂ ಸತ್ತಂತೆ ಬಳಕೆಯಲ್ಲಿವೆ. ಅಶ್ಟಕ್ಕೂ ಅಯ್‍ರೋಪ್ಯರ ಬರವಿನಿಂದಾಗಿ ಅಮೆರಿಕ ಕಂಡದ ಸ್ತಳೀಯ ಜನರೇನೂ ಅಳಿದು ಹೋಗಲಿಲ್ಲ. ಅವರ ಸಂತತಿ ನಿರಂತರವಾಗಿ ಬಾಳಿ ಬದುಕಿಕೊಂಡೇ ಬಂದಿದೆ. ಆದರೆ, ಅವರ ಬಾಶೆಗಳು ಮಾತ್ರ ಇತಿಹಾಸದ ಪುಟಗಳನ್ನು ಸೇರಿಕೊಂಡಿವೆ. ಅಂದರೆ, ಆಡುಗರು ಅಳಿಯಲಿಲ್ಲ, ಆದರೆ ಅವರ ಬಾಶೆಗಳು ಅಳಿದವು. ಇದಕ್ಕೆ ಕಾರಣ ಏನು? ಸ್ತಳೀಯರು ವಲಸೆ ಬಂದ ಅಯ್‍ರೋಪ್ಯರ ಕಯ್ಯಲ್ಲಿ ಸೋತು ಆಳಿಸಿಕೊಂಡರು! ಪರಿಣಾಮವಾಗಿ ಅಯ್‍ರೋಪ್ಯರ ನುಡಿಗಳು ’ಉಪಯುಕ್ತ’ ಎನಿಸಿದುವು. ಸ್ತಳೀಯರ ನುಡಿಗಳು ’ಅನುಪಯುಕ್ತ’ ಎನಿಸಿದುವು. ಅಶ್ಟೇ ಕಾರಣ.
      ದೂರದ ಅಮೆರಿಕ ಕಂಡಗಳು ಬೇಡ. ಕನ್ನಡದ ಚರಿತ್ರೆಯನ್ನು ನೋಡಿದರೇ ಮೇಲಿನ ನಂಬುಗೆಗಳು ಎಶ್ಟರಮಟ್ಟಿಗೆ ಸರಿ ಎನ್ನುವ ಸಂದೇಹ ಮೂಡುತ್ತದೆ. ಹಲವಾರು ವಿದ್ವಾಂಸರ ಪ್ರಕಾರ ಮಹಾರಾಶ್ಟ್ರದಲ್ಲಿ ಮೊದಲು ಕನ್ನಡವೇ ಜನರ ಮಾತಾಗಿತ್ತು. ಆದರೆ, ಕಾಲಕ್ರಮೇಣ ಮರಾಟಿ ಅಲ್ಲಿ ಕನ್ನಡವನ್ನು ಅಳಿಸಿ ಹಾಕಿತು. ಈ ಸತ್ಯದ ಬಗ್ಗೆ ಡಾ.ಚಿದಾನಂದ ಮೂರ‍್ತಿಯವರು ಅವರ ’ಬ್ರುಹತ್ ಬಾಶಿಕ ಕರ‍್ನಾಟಕ’ ಎಂಬ ಓದುಗೆಯಲ್ಲಿ ವಿವರವಾಗಿ ಬರೆದಿದ್ದಾರೆ. ಇದರ ಅರ‍್ತ ಏನು? ಕನ್ನಡರೇನೂ ಮಹಾರಾಶ್ಟ್ರದಿಂದ ಎಲ್ಲಿಗೋ ಓಡಿ ಹೋಗಲಿಲ್ಲ. ಕನ್ನಡವನ್ನು ಬಿಟ್ಟು ಮರಾಟಿಯನ್ನು ಕಯ್ಗೆತ್ತಿಕೊಂಡರು, ಅಶ್ಟೆ. ಕನ್ನಡಿಗರ ಸಂಕ್ಯಾಬಲವಾಗಲೀ, ಮುಂದುವರೆದ ಅವರ ಸಂತತಿಗಳಾಗಲೀ ಅವರಿಗೆ ಕನ್ನಡವನ್ನು ಉಳಿಸಿಕೊಳ್ಳುವಲ್ಲಿ ನೆರವಾಗಲಿಲ್ಲ.
      ಕಡೆಯದಾಗಿ, ’ನುಡಿಗಳು ಹೊಳೆಗಳ ಹಾಗೆ. ಹರಿಯುತ್ತಲೇ ಇರುತ್ತವೆ. ಸಾಯುವುದಿಲ್ಲ’ ಎಂಬ ಅಬಿಪ್ರಾಯದ ಬಗ್ಗೆ ನನಗೆ ಹೊಳೆಯುವುದು ಇದು. ನಿಸರ‍್ಗದ ಇತಿಹಾಸದಲ್ಲಿ ನೂರಾರು ಹೊಳೆಗಳು ಬತ್ತಿಹೋಗಿವೆ. ಮನುಶ್ಯನ ಇತಿಹಾಸದಲ್ಲಿ ನೂರಾರು ನುಡಿಗಳು ಕಣ್ಮರೆಯಾಗಿವೆ. ಹಾಗಾಗಿ, ಹೊಳೆಗಳಾಗಲೀ ನುಡಿಗಳಾಗಲೀ ನೆಲೆಯಾದುವಲ್ಲ.
      ಒಬ್ಬ ಸಾಮಾನ್ಯ ಬಾಶಾಸಕ್ತನಾಗಿ ನನ್ನ ಅನಿಸಿಕೆ ಇದು - ’ಯಾವುದೇ ಬಾಶೆ, ಜನರ ಕಣ್ಣಿಗೆ ಉಪಯುಕ್ತ ಎನಿಸಿದರೆ ತಾನಾಗೇ ಉಳಿದುಕೊಳ್ಳುತ್ತದೆ. ಉಪಯುಕ್ತ ಅಲ್ಲ ಎನಿಸಿದರೆ, ಅದರ ಉಳಿವು ಅದರ ಆಡುಗರ ಇಚ್ಚಾಶಕ್ತಿಯನ್ನು ಅವಲಂಬಿಸಿರುತ್ತದೆ. ಆಡುಗರ ಬೆಂಬಲವಿಲ್ಲದಿದ್ದರೆ ಯಾವುದೇ ನುಡಿಯಾಗಲೀ ಉಳಿಯುವುದಿಲ್ಲ. ಸಂಕ್ಯಾಬಲ ಮುಂತಾದ ವಾದಗಳಿಗೆ ಅಶ್ಟಿಶ್ಟು ಹುರುಳಿರಬಹುದು. ಆದರೆ, ಆಡುಗರ ಇಚ್ಚಾಶಕ್ತಿಯಶ್ಟು ಮುಕ್ಯ ಅವು ಎಂದೆಂದೂ ಅಲ್ಲ’. ಹಾಗಾಗಿ, ಪ್ರಶ್ನೆ ಇದು - ಕನ್ನಡಿಗರಿಗೆ ಕನ್ನಡವನ್ನು ಉಳಿಸಿಕೊಳ್ಳುವ ಇಚ್ಚಾಶಕ್ತಿ ಇದೆಯೆ? ಇದ್ದರೆ ಕನ್ನಡಕ್ಕೆ ಕುಂದಿಲ್ಲ.
      ಇಶ್ಟೆಲ್ಲಾ ಸಂದೇಹಗಳಿದ್ದರೂ, ಮೇಲಿನ ನುಡಿಯರಿಗರು ಕಂಡಿರುವ ಕಾಣ್ಕೆ ಕನ್ನಡದ ಪಾಲಿಗೆ ಸರಿಗಾಣ್ಕೆಯಾಗಲಿ ಎಂದೇ ನಾನು ಬಯಸುತ್ತೇನೆ. ಅಳಿದುಳಿದಿರುವ ಕೆಲವೇ ದ್ರಾವಿಡ ಸೊಲ್ಲುಗಳಲ್ಲಿ ಮುಕ್ಯವೆನಿಸಿರುವ ನಮ್ಮ ಕನ್ನಡ ನುಡಿಗೆ ಕೊನೆ ಎಂದೂ ಬಾರದಿರಲಿ ಎಂದೇ ನಾನು ಹಾರಯ್ಸುತ್ತೇನೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಭಾನುವಾರ, ಆಗಸ್ಟ್ 25, 2013

ತೆಲಂಗಾಣವೆಂಬ ಎಚ್ಚರಿಕೆಯ ಗಂಟೆ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕೆಲ ದಿನಗಳ ಹಿಂದೆ ನನ್ನ ಗೆಳೆಯರೊಬ್ಬರು ನನಗೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು. ನೆರೆಯ ತೆಲುಗುನಾಡು ತೆಲಂಗಾಣದ ಸಲುವಾಗಿ ಇರುಪೋಳು ಆಗುತ್ತಿರುವ ಸಂಗತಿ ಅವರಿಗೆ ತುಂಬಾ ನೋವನ್ನುಂಟು ಮಾಡಿತ್ತು. ಹಾಗಂತ ಅವರೇನೂ ತೆಲುಗರಲ್ಲ. ನನ್ನ ಹಾಗೇ ಕನ್ನಡಿಗರು. ಆದರೆ, ದ್ರಾವಿಡ ಅರಿಮೆ ಇರುವ ಕನ್ನಡಿಗರು.
      "ನಾವು ದ್ರಾವಿಡರೆಲ್ಲ ಒಂದಾಗಬೇಕು ಅಂತ ನಾವು ಅಂದುಕೊಂಡರೆ, ಒಂದೇ ಬಾಶೆ ಆಡುವ ತೆಲುಗರೇ ಎರಡು ಹೋಳಾಗಲಿಕ್ಕೆ ಹೊರಟಿದ್ದಾರಲ್ಲಾ, ಈ ದಡ್ಡತನಕ್ಕೆ ಏನು ಹೇಳೋದು, ರಾಜ್?", ಎಂದು ನನಗೆ ಪ್ರಶ್ನೆ ಹಾಕಿದರು. "ಈ ತೆಲುಗು ಮಂದಿಗೆ ಗಟ್ಟಿಯಾದ ಒಂದು ತೆಲುಗು ಅಯ್‍ಡೆಂಟಿಟಿ ಅನ್ನೋದು ಇದ್ದಿದ್ದರೆ ತಮ್ಮ ನೆಲವನ್ನೇ ಎರಡು ಹೋಳು ಮಾಡಲಿಕ್ಕೆ ಹೋಗುತ್ತಿದ್ದರೆ? ಇದಕ್ಕೆಲ್ಲಾ ತೆಲುಗು ಬಾಶೆಯ ಸಂಸ್ಕ್ರುತೀಕರಣ ಕಾರಣ, ಆರ‍್ಯಮಯವಾದ ತೆಲುಗು ಸಾಹಿತ್ಯ ಕಾರಣ", ಎಂದು ವಿಶಯದ ಬಗ್ಗೆ ತಮ್ಮ ತೀರ‍್ಮಾನವನ್ನೂ ಹೇಳಿದರು.
      ತೆಲಂಗಾಣದ ಬೇರ‍್ಪಡಿಕೆಗೂ ತೆಲುಗಿನ ಸಂಸ್ಕ್ರುತೀಕರಣಕ್ಕೂ ಎಲ್ಲಿಯ ನಂಟು ಎಂಬುದು ನನಗೆ ಕೂಡಲೇ ಹೊಳೆಯಲಿಲ್ಲ. "ತೆಲಂಗಾಣ ಬೇರೆ ಆಗುತ್ತಿರುವುದಕ್ಕೆ ಆರ‍್ತಿಕ ಅಸಮಾನತೆ ಕಾರಣ ಅಲ್ಲವೆ? ಬಹಳ ಹಿಂದಿನಿಂದಲೂ ತೆಲಂಗಾಣ ಪ್ರಾಂತ್ಯದ ಅಬಿವ್ರುದ್ದಿಯ ಬಗ್ಗೆ ಉಳಿದ ತೆಲುಗರು ನಿರ‍್ಲಕ್ಶ್ಯ ಮಾಡಿದ್ದಾರೆ. ಸಾಲದುದಕ್ಕೆ ತೆಲಂಗಾಣದ ತೆಲುಗನ್ನು ಕಳಪೆ ತೆಲುಗು ಎಂದು ಕೂಡ ಆಡಿಕೊಂಡು ಬಂದಿದ್ದಾರೆ. ದಶಕಗಳಿಂದ ಈ ಬಗ್ಗೆ ತೆಲಂಗಾಣದ ಮಂದಿ ತಮ್ಮ ಅಸಮಾದಾನವನ್ನು ವ್ಯಕ್ತಪಡಿಸಿಕೊಂಡು ಬಂದಿದ್ದಾರೆ. ಇದೆಲ್ಲದರ ಜೊತೆಗೆ ಈ ನಡುವೆ ಹಯ್ದರಾಬಾದು ನಗರಕ್ಕೆ ಹಣದ ಹೊಳೆಯೇ ಹರಿದಿದೆ. ಆ ಹಣವನ್ನು ಹೊಡೆದುಕೊಳ್ಳುವ ಆಲೋಚನೆ ಇರುವ ಸ್ತಳೀಯ ಪುಡಾರಿಗಳ ಹಂಚಿಕೆಯೂ ತೆಲಂಗಾಣದ ಪ್ರತ್ಯೇಕತೆಯಲ್ಲಿ ಸೇರಿಕೊಂಡಿದೆ. ತೆಲಂಗಾಣದ ಬೇರ‍್ಪಡಿಕೆಗೆ ಇವು ಕಾರಣಗಳು ಅಂತ ಎಲ್ಲರೂ ಹೇಳೋದು. ನೀವು ಹೇಳುವ ಹಾಗೆ ತೆಲುಗಿನ ಸಂಸ್ಕ್ರುತೀಕರಣ ಇರಲಾರದು", ಎಂದು ನಾನು ಅವರ ತೀರ‍್ಮಾನಕ್ಕೆ ಪ್ರತಿ ಹೇಳಿದೆ.
      "ಅಯ್ಯೋ! ನಾನು ಹೇಳೋದು ದ್ರಾವಿಡತನ ಇರೋ ನಿಮಗೂ ಅರ‍್ತವಾಗ್ತಾ ಇಲ್ವಲ್ಲಾ!", ಎಂದು ಆಕ್ಶೇಪಣಿಯ ದನಿಯಲ್ಲಿ ಉದ್ಗಾರ ತೆಗೆದು ನನ್ನ ಗೆಳೆಯರು ಅವರ ವಾದದ ಅರ‍್ತ ಏನೆಂಬುದನ್ನು ವಿವರಿಸಿದರು. "ನೋಡಿ ರಾಜ್, ತೆಲುಗರಿಗೆ, ’ನಾವು ಎಲ್ಲಕ್ಕೂ ಮೊದಲು ತೆಲುಗರು. ನಾವು ಒಂದೇ ಜನ. ನಮ್ಮ ನಿಶ್ಟೆ ಎಂದೂ ನಮ್ಮ ತೆಲುಗುತನಕ್ಕೇ’ಎಂಬ ಗಟ್ಟಿಯಾದ ’ತೆಲುಗು ಅಯ್‍ಡೆಂಟಿಟಿ’ ಇದ್ದಿದ್ದರೆ, ತೆಲಂಗಾಣದ ಅಬಿವ್ರುದ್ದಿಯನ್ನು ಅವರು ಕಡೆಗಣಿಸುತ್ತಿರಲಿಲ್ಲ. ತೆಲಂಗಾಣದ ತೆಲುಗನ್ನು ಕಳಪೆ ಅಂತ ಆಡಿಕೊಳ್ಳುತ್ತಿರಲಿಲ್ಲ. ಅಶ್ಟಕ್ಕೂ ತೆಲಂಗಾಣದ ಹೋರಾಟ ನೆನ್ನೆ ಮೊನ್ನೆಯದಲ್ಲ. ನಲ್ವತ್ತು ವರ‍್ಶಗಳಶ್ಟು ಹಳೆಯದು. ನಿಜವಾದ ತೆಲುಗುತನ ತೆಲುಗರಿಗೆ ಇದ್ದಿದ್ದರೆ ಅಶ್ಟು ಸಮಯದಲ್ಲಿ ತೆಲಂಗಾಣದ ಸಮಸ್ಯೆಯನ್ನು ಅವರು ಬಗೆಹರಿಸಿಕೊಂಡಿರುತ್ತಿದ್ದರು. ಈ ಮಾತನ್ನಾದರೂ ನೀವು ಒಪ್ಪಬೇಕು ತಾನೆ?"
      "ಮನುಶ್ಯರು ಎಶ್ಟೇ ಆಗಲಿ ಸ್ವಾರ‍್ತಿಗಳು. ಅವರ ಸ್ವಾರ‍್ತ ಅವರ ಕಯ್ಯಲ್ಲಿ ಯಾವ್ಯಾವಾಗ ಏನೇನು ಮಾಡಿಸುತ್ತೆ ಅಂತ ಹೇಳಲಿಕ್ಕೆ ಬರೋದಿಲ್ಲ. ಅಚಲವಾದ ತೆಲುಗು ಅಯ್‍ಡೆಂಟಿಟಿ ಅನ್ನೋದೊಂದು ತೆಲುಗರಲ್ಲಿ ಇದ್ದಿದ್ದರೆ ತೆಲುಗುನಾಡಿನಲ್ಲಿ ಎಲ್ಲಾ ಸರಿ ಇರುತ್ತಿತ್ತು ಅನ್ನೋದು ತುಂಬಾ ಸರಳ ದ್ರುಶ್ಟಿಯ ವಾದ ಅಂತ ನನಗೆ ಅನಿಸುತ್ತೆ. ಆದರೂ ಈ ವಾದವನ್ನು ಸುಮ್ಮನೆ ಬದಿಗೆ ಸರಿಸಲಿಕ್ಕೆ ಆಗೋದಿಲ್ಲ. ಅದರಲ್ಲಿ ಸತ್ಯದ ಎಳೆ ಇರೋ ಹಾಗಿದೆ. ಆದರೆ, ಇದರಲ್ಲಿ ತೆಲುಗು ಬಾಶೆಯ ಸಂಸ್ಕ್ರುತೀಕರಣದ ಪಾತ್ರ ಏನು ಅನ್ನೋದು ಮಾತ್ರ ಇನ್ನೂ ನನಗೆ ತಿಳೀತಿಲ್ಲ!", ಎಂದು ನನ್ನ ಸಂದೇಹವನ್ನು ಮತ್ತೆ ಅವರ ಮುಂದಿಟ್ಟೆ.
      "ಸಂಸ್ಕ್ರುತೀಕರಣದ ಪಾತ್ರ ಇದೆ. ನೋಡೀ, ಮೊದಮೊದಲು ನೂರಾರು ವರ‍್ಶ ತೆಲುಗಿನಲ್ಲಿ ಸಾಹಿತ್ಯ ಬರೆದವರೆಲ್ಲಾ ಸಂಸ್ಕ್ರುತ ಬಾಶೆಯ ಮೇಲೆ ಅಪಾರ ಗವ್ರವ ಇಟ್ಟುಕೊಂಡವರು. ಆರ‍್ಯ ಸಂಸ್ಕ್ರುತಿಯೇ ಇಡೀ ದೇಶದ ಸಂಸ್ಕ್ರುತಿ ಅಂತ ನಂಬಿಕೊಂಡವರು. ಅವರಿಗೆ ತೆಲುಗರ ದ್ರಾವಿಡತನದ ಬಗ್ಗೆ ಗೊತ್ತಿರಲಿಲ್ಲ. ಗೊತ್ತಿದ್ದರೂ ಅದನ್ನು ಲೆಕ್ಕಕ್ಕೆ ಇಡಲಿಲ್ಲ. ತೆಲುಗಿನ ಹೆಸರಿನಲ್ಲಿ ಬರೀ ಸಂಸ್ಕ್ರುತ ಪದಗಳನ್ನು ಗಿಡಿದು ’ತೆಲುಗು’ ಸಾಹಿತ್ಯ ರಚಿಸಿದರು. ಉತ್ತರದ ರಾಮಾಯಣ ಮಹಾಬಾರತದಂತಾ ಕತೆಗಳನ್ನೇ ಮತ್ತೆ ಮತ್ತೆ ತೆಲುಗಿನಲ್ಲಿ ಬರೆದು ’ಇದು ತೆಲುಗು ಸಾಹಿತ್ಯ’ ಎಂದು ಕರೆದರು. ಸಂಸ್ಕ್ರುತದಂತಾ ಬಾಶೆ ಇನ್ನೊಂದಿಲ್ಲ, ಆರ‍್ಯ ಸಂಸ್ಕ್ರುತಿಯೇ ಸಂಸ್ಕ್ರುತಿ ಅಂತ ಸಾಮಾನ್ಯ ತೆಲುಗರಿಗೆ ಶತಮಾನಗಳ ಕಾಲ ಒತ್ತುಣಿಸಿದರು. ತೆಲುಗರಲ್ಲಿ ತೆಲುಗಿನ ಅಬಿಮಾನ ಮೂಡಿಸುವ ಬದಲು ಅವರದಲ್ಲದ ಬಾರತದ ಅಬಿಮಾನ ತುಂಬಿಸಿದರು. ಬಾರತದ ಅಬಿಮಾನ ಮತ್ತು ತೆಲುಗು ಅಬಿಮಾನ ಬೇರೆಬೇರೆಯೇ ಅಲ್ಲ ಅನ್ನೋ ಹಾಗೆ ಗೊಂದಲ ಸ್ರುಶ್ಟಿ ಮಾಡಿದರು. ಇಂತಾ ಪರಿಸ್ತಿತಿಯಲ್ಲಿ ನಿಜವಾದ ’ತೆಲುಗು ಅಯ್‍ಡೆಂಟಿಟಿ’ ಹೇಗೆ ತಾನೆ ಬೆಳೆಯಲಿಕ್ಕೆ ಸಾದ್ಯ?", ಎಂದು ನನ್ನ ಗೆಳೆಯರು ಅವರ ವಾದವನ್ನು ಬಿಡಿಸಿ ಹೇಳಿದರು.
      ಅವರ ಈ ವಿವರಣೆ ಕೇಳಿದ ಮೇಲೆ ಅವರ ವಾದದಲ್ಲಿ ನಿಜಕ್ಕೂ ಹುರುಳಿದೆ ಎನಿಸಿತು. "ನಿಮ್ಮ ವಾದದ ಓಟ ಏನು ಅನ್ನೋದು ನನಗೆ ಈಗ ಗೊತ್ತಾಯಿತು. ನಿಮ್ಮ ವಾದ ಗಂಬೀರವಾಗಿ ಪರಿಗಣಿಸಬೇಕಾದದ್ದೇ. ನಿಮ್ಮ ವಾದ ತೆಲುಗಿಗೆ ಮಾತ್ರವಲ್ಲ, ಒಟ್ಟಾರೆ ಬಾರತದ ಎಲ್ಲ ಬಾಶೆಗಳಿಗೂ ಅನ್ವಯವಾಗುತ್ತೆ ಅಂತ ಅನಿಸುತ್ತೆ", ಎಂದು ಕೊಂಚ ಒಮ್ಮತ ಸೂಚಿಸಿದೆ.
      "ಹವ್‍ದು! weak identity ವಾದ ಎಲ್ಲ ಬಾಶೆಗಳಿಗೂ ಅನ್ವಯವಾಗುತ್ತೆ. ಅದರಲ್ಲೂ, ಮುಕ್ಯವಾಗಿ ಕನ್ನಡಕ್ಕೆ ಕಟುವಾಗೇ ಅನ್ವಯವಾಗುತ್ತೆ. ಕನ್ನಡದಲ್ಲಿ ಆಗಿರೋದೂ ಇದೇನೆ. ಕನ್ನಡದ ಸಾಹಿತಿಗಳಿಗೆ, ಚಿಂತಕರಿಗೆ, ಮಟಾದೀಶರಿಗೆ, ಮುಂದಾಳುಗಳಿಗೆ ಕನ್ನಡಿಗರ ದ್ರಾವಿಡತನವಾಗಲೀ ಕನ್ನಡತನವಾಗಲೀ ಚರಿತ್ರೆಯುದ್ದಕ್ಕೂ ಯಾವತ್ತೂ ಮುಕ್ಯವಾಗಿಲ್ಲ. ಹಳೆಯ ಸಾಹಿತಿಗಳು ಉತ್ತರದ ಹಳಸಲು ಕತೆಗಳನ್ನೇ ಕನ್ನಡದಲ್ಲಿ ಬರೆದು ’ಕನ್ನಡ’ಸಾಹಿತ್ಯ ಅಂತ ಕರೆದರು. ಕನ್ನಡದ ತುಂಬಾ ಸಂಸ್ಕ್ರುತ ಪದಗಳನ್ನು ತುರುಕಿಟ್ಟರು. ಈಚೆಗೆ ನಮ್ಮ ಮುಂದಾಳುಗಳು ದೇಶದ ಒಗ್ಗಟ್ಟಿನ ನೆವದಲ್ಲಿ ತ್ರಿಬಾಶಾ ಸೂತ್ರಕ್ಕೆ ಒಪ್ಪಿಗೆ ಕೊಟ್ಟು ಕನ್ನಡಿಗರಿಗೆ ಹಿಂದಿ ಕಲಿಸಿ, ಅದರ ಮೂಲಕ ಹಿಂದೀ ವಲಸಿಗರಿಗೆ ಅನುಕೂಲ ಮಾಡಿಕೊಟ್ಟರು. ಇನ್ನು ಸಂಸ್ಕ್ರುತ ವಿಶ್ವವಿದ್ಯಾಲಯ ಬೇರೆ ಕಟ್ಟುತ್ತಾರಂತೆ. ಹೀಗೆ ನಾಡಿನ ನಡೆನುಡಿಗಳನ್ನು ಎಡ್ಡಾದಿಡ್ಡಿ ಕಡೆಗಣಿಸಿದರೆ ಗೊಂದಲವಿಲ್ಲದ ’ಕನ್ನಡ ಅಯ್‍ಡೆಂಟಿಟಿ’ ಅನ್ನೋದು ಎಲ್ಲಿಂದ ಬರುತ್ತದೆ? ನಮ್ಮಲ್ಲೂ ಕೆಲವು ಪ್ರದೇಶಗಳು ಹಿಂದುಳಿದಿವೆ. ಅವುಗಳ ಮುನ್ನಡೆಗೆ ಉಳಿದ ಪ್ರದೇಶಗಳು ಸ್ವಾರ‍್ತ ಬಿಟ್ಟು ಗಮನ ಹರಿಸಬೇಕು. ಇಂತಾ ನಿಸ್ವಾರ‍್ತ ನಿಲುವನ್ನು ತೆಗೆದುಕೊಳ್ಳೋದಕ್ಕೆ, ’ನಾವು ಕನ್ನಡಿಗರು ಒಂದೇ ಮಂದಿ. ನಮಗೆ ನಮ್ಮ ನಾಡಿನ ನಡೆನುಡಿ ಮುಕ್ಯ. ನಮ್ಮ ನಿಶ್ಟೆ ನಮ್ಮ ನಾಡಿಗೆ ಅಶ್ಟೆ’ ಅನ್ನೋ ಒಂದು ಕಡುವಾದ ಕನ್ನಡ ಅಯ್‍ಡೆಂಟಿಟಿ ಬೇಕೇ ಬೇಕು. ಇಲ್ಲದಿದ್ದರೆ ತೆಲಂಗಾಣದಂತಾ ದುರಂತ ನಮ್ಮಲ್ಲೂ ಆಗಬಹುದು", ಎಂದು ನುಡಿದು ನನ್ನ ಗೆಳೆಯರು ಚರ‍್ಚೆ ಮುಗಿಸಿದರು.
      ನಾಡಿನ ಮುನ್ನಡೆಯಲ್ಲಿ ಪ್ರಾದೇಶಿಕ ಅಸಮಾನತೆ, ಕನ್ನಡಿಗರ ಬಗ್ಗೆ ಕಿಂಚಿತ್ತೂ ಆದರವಿಲ್ಲದ ಹೊರಗಿನವರ ಮಿತಿಮೀರಿದ ವಲಸೆ, ದೆಹಲಿಯ ಒಡೆಯರ ಮುಂದೆ ತೊತ್ತುಗಳಂತೆ ಕಯ್ಕಟ್ಟಿ ನಿಲ್ಲುವ ನಮ್ಮ ’ಮುಂದಾಳುಗಳು’ - ಇವು ಇತ್ತೀಚಿನ ದಶಕಗಳಲ್ಲಿ ನಾವು ಕಂಡಿರುವ ವಾಸ್ತವಗಳು. ಈ ವಾಸ್ತವಗಳ ಎದುರು ನಮ್ಮ ಗೆಳೆಯರು ಒಡ್ಡಿದ ವಾದದ ತಿರುಳನ್ನೂ ಪ್ರಸ್ತುತತೆಯನ್ನೂ ಅಲ್ಲಗಳೆಯಲು ಆದೀತೆ? ನೀವೇ ಹೇಳಿ!

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಶನಿವಾರ, ಆಗಸ್ಟ್ 10, 2013

Frankenstein ಪದಗಳು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಇತ್ತೀಚೆಗೆ ಟೀವೀಯಲ್ಲಿ ಸುದ್ದಿ ಕಾರ‍್ಯಕ್ರಮವೊಂದನ್ನು ನೋಡುತ್ತಿದ್ದೆ. ಸುದ್ದಿ ಓದುತ್ತಿದ್ದ ಆಳು ಯಾವುದೋ ಸುದ್ದಿಯೊಂದನ್ನು ಓದಿ, ಅದು ’ನಂಬಿಕಾರ‍್ಹ’ ಮೂಲಗಳಿಂದ ಸಿಕ್ಕಿದುದು ಎಂದು ಹೇಳಿಕೊಂಡರು. ಆ ’ನಂಬಿಕಾರ‍್ಹ’ ಎಂಬ ಪದವನ್ನು ಕೇಳಿದೊಡನೆ ನನ್ನಲ್ಲಿ ಹಲವಾರು ’ಒಳ್ಳೆಯವು’ ಎಂದು ಹೇಳಲಾರದ ಬಾವನೆಗಳು ಒಟ್ಟಿಗೇ ಮೂಡಿದವು. ಹಿಂದೊಮ್ಮೆ ’ನಂಬಲಾರ‍್ಹ’ ಎಂಬ ಇಂತಹುದೇ ಇನ್ನೊಂದು ಪದವನ್ನು ಕೇಳಿದ್ದು ಕೂಡಾ ನನ್ನ ನೆನಪಿಗೆ ಬಂತು. ಮೊದಲೆಲ್ಲಾ ಇಂತಹ ಪದಗಳನ್ನು ಕೇಳಿದಾಗ ನನಗೆ ಸಿಟ್ಟೇ ಬರುತ್ತಿತ್ತು. ಈಗಲಾದರೋ, ವಯಸ್ಸಿಗೆ ಅನುಗುಣವಾಗಿ ಮೆದುವಾಗಿರುವುದರಿಂದಲೋ ಇಲ್ಲ ಸೋಲನ್ನು ಹೆಚ್ಚುಕಡಿಮೆ ಒಪ್ಪಿಕೊಂಡಿರುವುದರಿಂದಲೋ, ಇಂತಹ ಪದಗಳನ್ನು ಕೇಳಿದರೆ ನನ್ನಲ್ಲಿ ಸಿಟ್ಟಿನ ಬದಲು ’ಅಯ್ಯೋ ಪಾಪ’ ಎನ್ನುವ ಉದ್ಗಾರಕ್ಕೆ ಹೊಂದುವ ಬಾವನೆಗಳು ಏಳುತ್ತವೆ. ಏಕೆ ಎಂದು ಕೇಳುತ್ತೀರಾ? ಹೇಳುತ್ತೇನೆ ಕೇಳಿ.
      ಕನ್ನಡ ನುಡಿಯಲ್ಲಿ ಬಳಕೆಯಾಗುತ್ತಿರುವ ಪದಗಳಲ್ಲಿ ಕನ್ನಡದ್ದೇ ಆದ ’ಅಚ್ಚಗನ್ನಡ’ ಎಂದು ಕರೆಸಿಕೊಳ್ಳುವ ಕಯ್, ಕಣ್ಣು, ಕೋಳಿ, ನಾಯಿ, ಮಳೆ, ಹೊಳೆ ಮುಂತಾದ ಪದಗಳಿವೆ. ಇವುಗಳ ಜೊತೆಗೆ ಹೊರನುಡಿಗಳಿಂದ ಎರವಲಾಗಿ ಬಂದ ದೀಪ, ಆಕಾಶ, ಪೆನ್ನು, ಮೇಜು ಮುಂತಾದ ’ಆಮದು’ ಪದಗಳಿವೆ. ಈ ಎರಡು ಬಗೆಯ ಪದಗಳಲ್ಲಿ ಅಸಹಜವಾದದ್ದು ಏನೂ ಇಲ್ಲ. ಆದರೆ, ಇವರೆಡು ಬಗೆಗಳಿಗೆ ಹೊರತಾಗಿ ಇನ್ನೊಂದು ಬಗೆಯ ಪದಗಳಿವೆ. ಈ ಪದಗಳನ್ನು ಸಹಜ ಎನ್ನಬೇಕೋ, ಅಸಹಜ ಎನ್ನಬೇಕೋ, ನನಗೆ ಸುಲಬವಾಗಿ ತೋಚುವುದಿಲ್ಲ. ಮೇಲೆ ತಿಳಿಸಿದ ’ನಂಬಿಕಾರ‍್ಹ’ ಎನ್ನುವುದು ಈ ಗುಂಪಿಗೆ ಸೇರಿದ್ದು. ಯಾವುದೇ ಕಿಡಿಗೇಡಿತನವಿಲ್ಲದೆ ಕೆಲ ಜನರಿಂದ ತಾನೇ ತಾನಾಗಿ ಇಂತಹ ಪದಗಳ ಸ್ರುಶ್ಟಿ ಆಗಿರುವುದರಿಂದ, ಇಂತಹ ಪದಗಳನ್ನೂ ’ಸಹಜ’ ಎಂದೇ ಕರೆಯಬೇಕಾಗಬಹುದು. ಆದರೆ, ಇಂತಹ ಪದಗಳು ’ಸರಿ’ ಎನ್ನುವುದು ಮಾತ್ರ ನನ್ನಂತಹ ಮನೋಬಾವನೆಯವರಿಗೆ ಸಾದ್ಯವಿಲ್ಲ.
      ಅದೇನು ಈ ’ನಂಬಿಕಾರ‍್ಹ’ ಎನ್ನುವ ಪದದಲ್ಲಿ ಆಗಿರುವ ಅಂತಾ ಎಡವಟ್ಟು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಹೀಗಿದೆ ನೋಡಿ. ’ನಂಬಿಕಾರ‍್ಹ’ ಪದ ಕನ್ನಡದ ’ನಂಬಿಕೆ’ ಎನ್ನುವ ಪದಕ್ಕೆ ’ಅರ‍್ಹ’ ಎನ್ನುವ ಸಂಸ್ಕ್ರುತ ಪದವನ್ನು ಯಾರೂ ಕಂಡುಕೇಳರಿಯದ ಸೊಲ್ಲರಿಮೆಯ (ವ್ಯಾಕರಣದ) ಕಟ್ಟಳೆಯ ಪ್ರಕಾರ ಅಂಟಿಸಿ ಮಾಡಿಕೊಂಡ ಪದ! ’ವಿಶ್ವಾಸಾರ‍್ಹ’ ಎಂಬ ಸರಿಯಾದ ರೀತಿಯಲ್ಲಿ ಮಾಡಿಕೊಂಡ ಸಂಸ್ಕ್ರುತ ಪದ ಒಂದಿದೆ. ಅದನ್ನೇ ಅನುಕರಿಸ ಹೊರಟು ಕನ್ನಡ ಸರಿಯಾಗಿ ತಿಳಿಯದವರು ಯಾರೋ ಮಾಡಿಟ್ಟ ತಪ್ಪುತಪ್ಪು ಪದ ಈ ನಮ್ಮ ’ನಂಬಿಕಾರ‍್ಹ’ ಪದ. ಮೊದ್ದು ಅನುಕರುಣೆಯಿಂದಾಗಿ ಇಂತಹ ಪದಗಳ ಟಂಕಣೆ ಆಗಾಗ್ಗೆ ಕನ್ನಡದಲ್ಲಿ ಆಗಿದೆ, ಆಗುತ್ತಿರುತ್ತದೆ. ಎತ್ತುಗೆಗೆ (ಉದಾಹರಣೆಗೆ), ’ಊಟೋಪಚಾರ’ ಎನ್ನುವ ಇನ್ನೊಂದು ಪದವಿದೆ. ಇದಂತೂ ತುಂಬಾ ಸ್ವಾರಸ್ಯವುಳ್ಳ ಪದ. ಇಲ್ಲಿ ಕನ್ನಡದ ’ಊಟ’ ಮತ್ತು ಸಂಸ್ಕ್ರುತದ ’ಉಪಚಾರ’ ಎಂಬ ಪದಗಳನ್ನು ಸಂಸ್ಕ್ರುತ ಸೊಲ್ಲರಿಮೆಯ ’ಗುಣ ಸಂದಿ’ ಎಂಬ ಕಟ್ಟಳೆಗೆ ಒಳಪಡಿಸಿ, ’ಊಟೋಪಚಾರ’ ಎಂದು ಯಾರೋ ಕಡುಜಾಣರು ಇಶ್ಟೆಲ್ಲಾ ತಿಳಿಯದೆಯೇ ಸಮೆದಿದ್ದಾರೆ! ಇವರ ಪ್ರತಿಬೆಗೆ ತಕ್ಕ ಪ್ರಶಸ್ತಿಯನ್ನು ಕೊಡಬೇಕು! ಈ ಪದದ ಬಳಕೆ ಸಾಮಾನ್ಯವಾಗಿ ಮದುವೆಗೆ ಪತ್ತಿದ ಬರಹಗಳಲ್ಲಿ ಕಾಣಬರುತ್ತದೆ. ಹಾಗಾಗಿ, ಸಂಸ್ಕ್ರುತದ ’ವರೋಪಚಾರ’ ಎಂಬ ಪದದ ದಡ್ಡ ಅನುಕರಣೆಯೇ ’ಊಟೋಪಚಾರ’ ಪದದ ಬರವಿಗೆ ಕಾರಣ ಎಂದು ಊಹಿಸುವುದು ಕಶ್ಟವಲ್ಲ. ಈ ತೆರನ ಅಮಾಯಕ ಅನುಕರಣೆಯಿಂದ ’ದೊಡ್ಡಸ್ತಿಕೆ’, ’ನೆಂಟಸ್ತಿಕೆ’, ’ಚಿಪ್ಪೇಂದ್ರಿಯ (chip + ಇಂದ್ರಿಯ)’ ಮುಂತಾದ ಇನ್ನೂ ಕೆಲ ಪದಗಳು ಕನ್ನಡದಲ್ಲಿ ಸ್ರುಶ್ಟಿಯಾಗಿವೆ.
      ಈ ರೀತಿ, ಕನ್ನಡದ ಪದಕ್ಕೆ ಬೇರೆ ಬಾಶೆಯ ಪದವನ್ನು ಅಂಟಿಸಿ ಮಾಡಿಕೊಳ್ಳುವ ಪದಗಳಿಗೆ ನಾನು ’ಪ್ರಾಂಕನ್‍ಸ್ಟಯ್ನ್’ (frankenstein) ಪದಗಳು ಎಂದು ಕರೆಯುತ್ತೇನೆ (Dr. Frankenstein ಎಂಬ ಒಬ್ಬ ಹುಚ್ಚು ವಿಜ್ನಾನಿ ಬೇರೆ ಬೇರೆ ಹೆಣಗಳಿಂದ ಅವಯವಗಳನ್ನು ಆಯ್ದು ಒಟ್ಟಿಗೆ ಸೇರಿಸಿ ಒಬ್ಬ ಕ್ರುತಕ ಮನುಶ್ಯನನ್ನು ಮಾಡಿದ ಎಂಬುದು ಪಡುವಲ ನುಡಿಪಿನಲ್ಲಿ, ಅಂದರೆ ಪಾಶ್ಚಾತ್ಯ ಸಾಹಿತ್ಯದಲ್ಲಿ, ಮೂಡಿಬಂದ ಒಂದು ಕತೆ). ಪ್ರಾಂಕನ್‍ಸ್ಟಯ್ನ್ ಪದಗಳು ಕನ್ನಡದಲ್ಲಿ ಬಹು ಹಿಂದಿನಿಂದಲೂ ಇವೆ. ಕನ್ನಡದ ಮೊತ್ತಮೊದಲ ಬರಹವಾದ ಪಲ್ಮಿಡಿ ಶಾಸನದಲ್ಲೇ ’ಪೆತ್ತಜಯನ್’ ಎಂಬ ಪ್ರಾಂಕನ್‍ಸ್ಟಯ್ನ್ ಪದವಿದೆ! ಕನ್ನಡದ ಪದಗಳ ಕೊನೆಗೆ ಸಂಸ್ಕ್ರುತದ ಒಟ್ಟುಗಳನ್ನು (ಪ್ರತ್ಯಯಗಳನ್ನು) ಅಂಟಿಸುವುದಂತೂ ನಮ್ಮಲ್ಲಿ ತುಂಬಾ ಹಳೆಯ ವಾಡಿಕೆ. ಸಮಗಾರ (ಕಾರ), ಹಣವಂತ (ವಂತ < ಮತ್),  ಕೂದಲುಮಯ (ಮಯ) ಮುಂತಾದ ಪದಗಳು ಕನ್ನಡದಲ್ಲಿ ಸಾಕಶ್ಟಿವೆ. ಇನ್ನು ’ಕಸುಬುದಾರ’, ’ಗುತ್ತಿಗೆದಾರ’ ಮುಂತಾದ ಪದಗಳಲ್ಲಿ ಕನ್ನಡದ್ದಲ್ಲದ ’ದಾರ್’ ಎಂಬ ಹಿನ್ನೊಟ್ಟಿನ ಬಳಕೆಯಾಗಿದೆ. ಹಿನ್ನೊಟ್ಟುಗಳನ್ನು ಬಳಸುವುದು ಸರಿ ಎಂದ ಮೇಲೆ ಬೇರೆ ನುಡಿಗಳ ಮುನ್ನೊಟ್ಟುಗಳನ್ನೂ ಏಕೆ ಬಳಸಬಾರದು? ಹೀಗೆ ಪ್ರಶ್ನೆ ಕೇಳಿಕೊಂಡೋ ಎಂಬಂತೆ ಈಗೀಗ ನಾವು ಸಂಸ್ಕ್ರುತದ ಪ್ರತ್ಯಯಗಳನ್ನು ಕನ್ನಡದ ಪದಗಳ ಮೊದಲಿಗೂ ಹಚ್ಚುತ್ತಿದ್ದೇವೆ. ಸನ್ನಡತೆ, ದುರ‍್ಬಳಕೆ, ಪುನರ‍್ಬಳಕೆ ಮುಂತಾದವು ಇದಕ್ಕೆ ಎತ್ತುಗೆ. ಅಶ್ಟಕ್ಕೇ ನಾವು ಸುಮ್ಮನಾಗಿಲ್ಲ. ಕನ್ನಡಕ್ಕೆ ಸಂಸ್ಕ್ರುತದ ಒಟ್ಟುಗಳನ್ನು ಅಂಟಿಸಿದ ಹಾಗೇ ಸಂಸ್ಕ್ರುತಕ್ಕೆ ಕನ್ನಡದ ಒಟ್ಟುಗಳನ್ನು ಏಕೆ ಅಂಟಿಸಬಾರದು? ಹೀಗೆ ಯೋಚಿಸಿ ನಾವು ಅದನ್ನೂ ಮಾಡಿದ್ದೇವೆ! ’ಮುಂಬಾಗ’, ’ಹಿಂಬಾರ’, ’ಮುಂದಾಲೋಚನೆ’, ’ಹೊಂಗಿರಣ’ ಎಂದೆಲ್ಲಾ ಪದಗಳನ್ನು ಬಳಕೆಗೆ ತಂದಿದ್ದೇವೆ. ಈಗ ಉಳಿದಿರುವುದು ಇಂಗ್ಲೀಶಿನ ಪ್ರತ್ಯಯಗಳನ್ನು ಕನ್ನಡಕ್ಕೆ ಅಂಟಿಸುವುದು ಮಾತ್ರ. ಅದೂ ಆಗಲೇ ಆಗಿದೆ ಎಂದು ನನಗೆ ಯಾರಾದರೂ ಹೇಳಿದರೆ ನಾನೇನೂ ಅಚ್ಚರಿ ಪಡುವುದಿಲ್ಲ.
      ಸಾಮಾನ್ಯ ಮಂದಿಗೆ ಪದಗಳ ಕಟ್ಟೋಣ ಹೇಗೆ ಆಗಿದೆ ಎಂಬುದರ ಅರಿವಿರುವುದಿಲ್ಲ. ಅವರಿಗೆ ತಮ್ಮ ನುಡಿಯ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. ಹಾಗಾಗಿ, ಪದಗಳು ಸರಿಯಾಗಿ ಮಾಡಿರುವಂತಹವೋ ಅಲ್ಲವೋ ಎನ್ನುವುದು ಅವರಿಗೆ ಗೊತ್ತಾಗುವುದಿಲ್ಲ. ಪದಗಳು ಹೇಗಿದ್ದರೂ ಅವುಗಳನ್ನು ಅವರು ಒಪ್ಪಿಕೊಳ್ಳುತ್ತಾರೆ ಮತ್ತು ಬಳಸುತ್ತಾರೆ. ಆದರೆ, ’ನಮ್ಮ ನುಡಿ ಎಂತಹುದು, ಯಾವ ಗುಂಪಿನದು, ಅದರ ವಿಶೇಶತೆ ಏನು, ಅದರ ಮಾಳ್ಕೆ ಹೇಗೆ, ಅದನ್ನು ಹೇಗೆ ಬಳಸುವುದು ಒಳ್ಳೆಯದು, ಅದರ ಬೆಳವಣಿಗೆಗೆ ಯಾವುದು ಒಳ್ಳೆಯದು’ ಮುಂತಾದ ಮಾಹಿತಿಗಳನ್ನು ತಿಳಿದುಕೊಂಡಿರುವವರಿಗೆ, ಎಡ್ಡಾದಿಡ್ಡಿಯಾಗಿ ಪದಗಳನ್ನು ಮಾಡಿಕೊಳ್ಳುವುದು ಒಪ್ಪಿಗೆಯಾಗುವುದಿಲ್ಲ. ನಮ್ಮ ಶಿಕ್ಶಣದಲ್ಲಿ ಕನ್ನಡದ ಬಗೆಗಿನ ಇಂತಹ ವಿಶಯಗಳ ಬಗ್ಗೆ ಸಾಕಶ್ಟು ಹೇಳಿಕೊಡುವುದಿಲ್ಲ. ಒಂದು ವೇಳೆ ಹೇಳಿಕೊಟ್ಟರೆ, ಬಹಳಶ್ಟು ಕನ್ನಡಿಗರು ಪ್ರಾಂಕನ್‍ಸ್ಟಯ್ನ್ ಪದಗಳನ್ನು ಇಶ್ಟಪಡುವುದಿಲ್ಲ ಎನ್ನುವುದು ನನ್ನ ನಂಬಿಕೆ. ಇಶ್ಟೆಲ್ಲಾ ಹೇಳಿದ ಮೇಲೆ, ಕನ್ನಡ ಒಂದು ಬಾಳುನುಡಿ (ಜೀವಂತ ಬಾಶೆ) ಎನ್ನುವುದನ್ನು ಮರೆಯಲಾಗುವುದಿಲ್ಲ. ಅದರ ಮೇಲೆ ಯಾರಿಗೂ ’ಕಾಪಿ ರಯ್‍ಟ್ ’ ಇಲ್ಲ. ಮಂದಿಗೆ, ’ಈ ಪದಗಳನ್ನು ಬಳಸಿ, ಈ ಪದಗಳನ್ನು ಬಳಸಬೇಡಿ’ ಎಂದು ಒತ್ತಾಯಿಸುವ ಅದಿಕಾರ ಯಾರಿಗೂ ಇಲ್ಲ. ಸರಿಯಾದ ಶಿಕ್ಶಣದಿಂದ ಮಾತ್ರ ಅವರ ಮನ ಒಲಿಸಬೇಕು. ಸರಿಯಾದ ಶಿಕ್ಶಣ ಯಾವಾಗ ದೊರೆಯುತ್ತದೋ ಯಾರಿಗೆ ಗೊತ್ತು? ಅಲ್ಲಿಯವರೆಗೂ ಪ್ರಾಂಕನ್‍ಸ್ಟಯ್ನ್ ಪದಗಳ ಟಂಕಣೆ ನಿಲ್ಲುವುದಿಲ್ಲ, ಬಳಕೆ ನೀಗುವುದಿಲ್ಲ. ಸದ್ಯಕ್ಕೆ, ಎಂದಾದರೊಂದು ದಿನ ಪ್ರಾಂಕನ್‍ಸ್ಟಯ್ನ್ ಪದಗಳಿಂದ ಕನ್ನಡಕ್ಕೆ ಬಿಡುಗಡೆ ದೊರೆಯಬಹುದು ಎಂದುಕೊಳ್ಳೋಣ, ಅಶ್ಟೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಗುರುವಾರ, ಜುಲೈ 25, 2013

ಕನ್ನಡಿಗರಿಗೇಕೆ ಸಂಸ್ಕ್ರುತ ವಿಶವಿದ್ಯಾಲಯದ ಹೊರೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಈ ಕೆಳಗಿನ ಓಲೆಯನ್ನು ಜುಲಯ್ ೨೪, ೨೦೧೩ ರಂದು ಮಾಗಡಿ ಕ್ಶೇತ್ರದ ಶಾಸಕರಾದ ಶ್ರೀ ಎಚ್.ಸಿ.ಬಾಲಕ್ರಿಶ್ಣರ ಕಯ್ಗಿತ್ತೆ. ಬಾಲಕ್ರಿಶ್ಣರು ಇತ್ತೀಚೆಗೆ ಸುದ್ದಿಗಾರರ ಬಳಿ ಮಾಗಡಿ ತಾಲೂಕಿನಲ್ಲಿ ತೆರೆಯಬೇಕೆಂದಿರುವ ಸಂಸ್ಕ್ರುತ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‍ನ ನಿರ‍್ಮಾಣವನ್ನು ವಿರೋದಿಸುವುದಾಗಿ ಹೇಳಿಕೆ ನೀಡಿದ್ದಾರೆ. ’ಇವರು ಬರಿಯ ಮಾತಿನ ಮಲ್ಲರಲ್ಲ!’ - ಇದು ಅವರನ್ನು ಕಂಡ ಬಳಿಕ ನನಗೆ ಅನಿಸಿದ್ದು. ಒಂದು ವೇಳೆ ಸಂಸ್ಕ್ರುತ ವಿಶ್ವವಿದ್ಯಾಲಯದ ವಿರುದ್ದ ಹೋರಾಟ ಮೊದಲಾದರೆ ನಾವೆಲ್ಲ ಬಾಲಕ್ರಿಶ್ಣರಿಗೆ ಬೆಂಬಲವನ್ನು ನೀಡೋಣ.


      ಜುಲಯ್ ೨೨, ೨೦೧೩

      ಮಾಗಡಿ ಕ್ಶೇತ್ರದ ಶಾಸಕರಾದ ಮಾನ್ಯ ಎಚ್.ಸಿ.ಬಾಲಕ್ರಿಶ್ಣರಿಗೆ ವಂದನೆಗಳು.
      ಕಳೆದ ಸರ‍್ಕಾರದ ಆದೇಶದ ಮೇರೆಗೆ ನಿಮ್ಮ ತಾಲೂಕಿನಲ್ಲಿ ತೆರೆಯಬೇಕೆಂದಿರುವ ಸಂಸ್ಕ್ರುತ ವಿಶ್ವವಿದ್ಯಾಲಯದ ಕ್ಯಾಂಪಸ್‍ನ ವಿರುದ್ದ ಹೋರಾಟ ನಡೆಸುವುದಾಗಿ ಇತ್ತೀಚೆಗೆ ನೀವು ಮಾದ್ಯಮದವರಿಗೆ ಹೇಳಿಕೆ ಕೊಟ್ಟಿದ್ದೀರಿ. ’ಈ ಯೋಜನೆಯಿಂದ ಸ್ತಳೀಯರಿಗೆ ಯಾವುದೇ ಪ್ರಯೋಜನವಿಲ್ಲ. ತಾಲೂಕಿನ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡದ ಸಂಸ್ಕ್ರುತ ವಿಶ್ವವಿದ್ಯಾಲಯ ನಮಗೆ ಬೇಡ’ ಎಂದು ಸುದ್ದಿಗಾರರ ಬಳಿ ಹೇಳಿದ್ದೀರಿ. ಈ ಸಂಗತಿ ಜುಲಯ್ ೨, ೨೦೧೩ ತಾರೀಕಿನ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಯಾಗಿದೆ.
      ಸಂಸ್ಕ್ರುತ ವಿಶ್ವವಿದ್ಯಾಲಯ ಸಣ್ಣ ಯೋಜನೆಯಲ್ಲ. ಅದು ನಿಮ್ಮ ಕ್ಶೇತ್ರದ ನೂರು ಎಕರೆಗಳಶ್ಟು ನೆಲವನ್ನು ಕಬಳಿಸಲಿದೆ. ನಿಮ್ಮ ಕ್ಶೇತ್ರದ ಇಶ್ಟೊಂದು ಸಂಪನ್ಮೂಲವನ್ನು ಬಳಸಿಕೊಂಡರೂ ಅದಕ್ಕೆ ಪ್ರತಿಯಾಗಿ ಈ ವಿಶ್ವವಿದ್ಯಾಲಯ ಸ್ತಳೀಯರಿಗೆ ಯಾವ ಉಪಯೋಗವನ್ನೂ ದೊರಕಿಸಿಕೊಡುವುದಿಲ್ಲ ಎಂಬ ನಿಮ್ಮ ಗ್ರಹಿಕೆ ಸರಿಯಾದುದೇ. ಹಾಗಾಗಿ, ಅದರ ನಿರ‍್ಮಾಣವನ್ನು ವಿರೋದಿಸುವ ನಿಮ್ಮ ನಿಲುವು ತಕ್ಕ ನಿಲುವೇ ಆಗಿದೆ. ನಿಮ್ಮ ನಿಲುವನ್ನು ಕೇವಲ ಸ್ತಳೀಯರಲ್ಲದೆ ಅಸಂಕ್ಯಾತ ಇತರ ಕನ್ನಡಿಗರೂ ಬೆಂಬಲಿಸುತ್ತಾರೆಂಬ ನಂಬಿಕೆ ನನಗಿದೆ.
      ನೀವು ಜನಪ್ರತಿನಿದಿಗಳಾಗಿರುವುದರಿಂದ, ನೀವು ಪ್ರತಿನಿದಿಸುವ ಜನಗಳ ಒಳಿತನ್ನು ಮುಂದಿಟ್ಟುಕೊಂಡು, ಸಹಜವಾಗಿಯೆ ಈ ವಿಶಯವನ್ನು ಸ್ತಳೀಯ ದ್ರುಶ್ಟಿಕೋನದಿಂದ ನೋಡಿ, ನಿಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದೀರಿ. ಆದರೆ, ಈ ವಿಶಯವನ್ನು ಕೇವಲ ಸ್ತಳೀಯ ದ್ರುಶ್ಟಿಕೋನದಿಂದಲ್ಲದೆ ಸಮಸ್ತ ಕನ್ನಡಿಗರ ದ್ರುಶ್ಟಿಕೋನದಿಂದಲೂ ಪರಿಗಣಿಸಬಹುದು. ಇದರ ಅರಿವು ನಿಮಗೂ ಇರುತ್ತದೆ. ಈ ವಿಶಾಲ ದ್ರುಶ್ಟಿಕೋನದ ಬಗ್ಗೆ ಸಂಕ್ಶಿಪ್ತವಾಗಿ ಇಲ್ಲಿ ಒಂದೆರಡು ವಿಶಯಗಳನ್ನು ಮಂಡಿಸಲು ನಾನು ಬಯಸುತ್ತೇನೆ.
      ಸಂಸ್ಕ್ರುತ ಬಾಶೆಯಿಂದ ಕನ್ನಡಿಗರಿಗೆ ಏನು ಪ್ರಯೋಜನ? ಇದು ಎಲ್ಲ ಕನ್ನಡಿಗರೂ ಕೇಳಬೇಕಾದ ಮೊತ್ತಮೊದಲ ಪ್ರಶ್ನೆ. ಏನೂ ಇಲ್ಲ. ಕಿಂಚಿತ್ತೂ ಇಲ್ಲ. ಎಳ್ಳಶ್ಟೂ ಇಲ್ಲ. ಇದು ಉತ್ತರ! ಸಂಸ್ಕ್ರುತ ಕಲಿಯುವುದರಿಂದ ಕನ್ನಡ ಯುವಕರಿಗೆ ಕೆಲಸ ದೊರೆಯುವುದೆ? ಇಲ್ಲ. ಕೆಲಸ ಕೊಡುವ ಯಾವ ಉದ್ಯಮದವರಾಗಲೀ ಸಂಸ್ತೆಯವರಾಗಲೀ, ’ನೀನು ಸಂಸ್ಕ್ರುತ ಕಲಿತಿದ್ದೀಯಾ?’ ಎಂದು ಉದ್ಯೋಗಾರ‍್ತಿಯನ್ನು ಕೇಳುತ್ತಾರೆಯೆ? ಎಂದೂ ಇಲ್ಲ. ಏಕೆಂದರೆ, ಸಂಸ್ಕ್ರುತದಿಂದ ನಿಜಪ್ರಪಂಚದ ವ್ಯವಹಾರದಲ್ಲಿ ಯಾವ ಉಪಯೋಗವೂ ಇಲ್ಲ.
      ವಾಸ್ತವ ಹೀಗಿದ್ದೂ ಸಂಸ್ಕ್ರುತ ವಿಶ್ವವಿದ್ಯಾಲಯವನ್ನು ತೆರೆಯುವ ಅವ್‍ಚಿತ್ಯವೇನು? ಈ ಪ್ರಶ್ನೆಯನ್ನು ಸಂಸ್ಕ್ರುತ ವಿಶ್ವವಿದ್ಯಾಲಯದ ಕುಲಪತಿ ಮಲ್ಲೇಪುರಮ್ ವೆಂಕಟೇಶರಿಗೆ ಈ ಹಿಂದೆ ಕೆಲ ಬುದ್ದಿಜೀವಿ ಕನ್ನಡಿಗರು ಕೇಳಿದ್ದರು. ಅದಕ್ಕೆ ಅವರು ಕೊಟ್ಟ ಒಟ್ಟಾರೆ ಉತ್ತರ ಹೀಗಿತ್ತು - ’ಹಳಗನ್ನಡದ ಕಾವ್ಯಗಳಲ್ಲಿ ಸಂಸ್ಕ್ರುತದ ಬಳಕೆ ಎಶ್ಟೊಂದು ವ್ಯಾಪಕವಾಗಿ ಆಗಿದೆ ಎಂದರೆ, ಸಂಸ್ಕ್ರುತದ ತಿಳಿವಳಿಕೆ ಇಲ್ಲದೆ ಅವುಗಳನ್ನು ಸರಿಯಾಗಿ ಅರ‍್ತ ಮಾಡಿಕೊಳ್ಳಲು ಆಗುವುದಿಲ್ಲ’. ಹೇಗಿದೆ ನೋಡಿ ಈ ಸಮರ‍್ತನೆ! ಹೆಚ್ಚುಕಡಿಮೆ ಇಂತಹ ವಾದವನ್ನೇ ಸಂಸ್ಕ್ರುತ ವಿಶ್ವವಿದ್ಯಾಲಯದ ಪರವಾಗಿರುವ ಎಲ್ಲರೂ ಸಾಮಾನ್ಯವಾಗಿ ಮುಂದಿಡುವುದು. ಇಂತಹ ಹುಲು ವಾದಕ್ಕೆ ಏನು ಹೇಳುವುದು? ಇವರ ವಾದ ಎಶ್ಟು ಪೊಳ್ಳು ಎನ್ನುವುದಕ್ಕೆ ಒಂದು ಸರಳ ಉದಾಹರಣೆ ಕೊಡುತ್ತೇನೆ, ಕೇಳಿ. ಯಾವಾಗಲಾದರೂ ಒಮ್ಮೆ ನಿಮಗೇನಾದರೂ ಕೊಂಚ ಹಾಲಿನ ಅಗತ್ಯ ಬಿದ್ದರೆ, ಅದನ್ನು ಅಂಗಡಿಗೆ ಹೋಗಿ ಕೊಂಡುಕೊಳ್ಳುತ್ತೀರೋ ಇಲ್ಲ ಕೊಟ್ಟಿಗೆ ಕಟ್ಟಿ, ಹಸುವನ್ನು ಸಾಕಿ ಕರೆದುಕೊಳ್ಳುತ್ತೀರೋ? ಕೊಟ್ಟಿಗೆ ಕಟ್ಟಿ, ಹಸುವನ್ನು ಸಾಕಿ ಕರೆದುಕೊಳ್ಳಬೇಕು ಎನ್ನುತ್ತಾರೆ ಸಂಸ್ಕ್ರುತ ವಿಶ್ವವಿದ್ಯಾಲಯ ಬೇಕು ಎನ್ನುವ ಸಂಸ್ಕ್ರುತದ ಒಣ ಅಬಿಮಾನಿಗಳು! ದೇಶದ ತುಂಬೆಲ್ಲಾ ಉತ್ಕ್ರುಶ್ಟವಾದ ಸಂಸ್ಕ್ರುತ ವಿಶ್ವವಿದ್ಯಾಲಯಗಳಿವೆ. ಕೆಲ ಪಂಡಿತರನ್ನು ಅಲ್ಲಿಗೇ ಕಳಿಸಿ, ಕನ್ನಡಕ್ಕೆ ಬೇಕಾಗುವಶ್ಟು ಸಂಸ್ಕ್ರುತದ ಅದ್ಯಯನವನ್ನು ಅವರಿಂದ ಮಾಡಿಸಿದರೆ ಸಾಕಾಗುವುದಿಲ್ಲವೆ? ಈ ಅಲ್ಪ ಕಾರಣಕ್ಕಾಗಿ ಒಂದು ಇಡಿಯ ಸಂಸ್ಕ್ರುತ ವಿಶ್ವವಿದ್ಯಾಲಯವನ್ನೇ ತೆರೆದು ನಡೆಸಬೇಕೆ? ಕನ್ನಡಿಗರ ಸಂಪನ್ಮೂಲಗಳನ್ನು ಇಂತಹ ಪ್ರಯೋಜನಕ್ಕೆ ಬಾರದ ಯೋಜನೆಗಳ ಸಲುವಾಗಿ ಪೋಲು ಮಾಡಬೇಕೆ?
      ಇಂದು ಕನ್ನಡಿಗರಿಗೆ ಬೇಕಾಗಿರುವುದು ಇಂಗ್ಲೀಶ್. ಸಂಸ್ಕ್ರುತವಲ್ಲ. ಇಂದು ಇಡೀ ಪ್ರಪಂಚವೇ ಇಂಗ್ಲೀಶ್ ಬಾಶೆಯನ್ನು ಕಲಿಯುತ್ತಿದೆ. ಇಂಗ್ಲೀಶನ್ನು ಅಶ್ಟಾಗಿ ಹಚ್ಚಿಕೊಂಡಿರದಿದ್ದ ಪ್ರಾನ್ಸ್, ಜಪಾನ್, ಚೀನಾ ಮುಂತಾದ ರಾಶ್ಟ್ರಗಳೇ ಇಂದು ಮುತುವರ‍್ಜಿಯಿಂದ ಇಂಗ್ಲೀಶ್ ಕಲಿಯುತ್ತಿವೆ. ಇಡೀ ಪ್ರಪಂಚಕ್ಕೇ ಒಂದು ವ್ಯಾವಹಾರಿಕ ಬಾಶೆಯಾಗಿ ಇಂದು ಇಂಗ್ಲೀಶ್ ತಲೆ ಎತ್ತಿ ನಿಂತಿದೆ. ಇಂದಿನ ಪ್ರಪಂಚದಲ್ಲಿ ಇಂಗ್ಲೀಶ್ ಕಲಿಯುವುದರಿಂದ ಆಗುವ ಲಾಬ ಕಡಿಮೆಯಲ್ಲ. ಇಂಗ್ಲೀಶ್ ಬಾರದಿದ್ದರೆ ನಶ್ಟ ಕಂಡಿತ. ಕನ್ನಡ ಮಾದ್ಯಮದಲ್ಲಿ ಓದುವವರೂ ಕೂಡ ಒಂದಲ್ಲಾ ಒಂದು ಹಂತದಲ್ಲಿ ಇಂಗ್ಲೀಶಿನಲ್ಲಿ ವ್ಯವಹರಿಸಲೇ ಬೇಕಾಗುತ್ತದೆ. ಸ್ವಾಬಿಮಾನಕ್ಕೂ ಇಂದು ಇಂಗ್ಲೀಶ್ ಬೇಕಾಗಿದೆ. ಇಂಗ್ಲೀಶಿನಲ್ಲಿ ಮಾತನಾಡಲು ಬಾರದೆ ಕೀಳರಿಮೆ ಅನುಬವಿಸುತ್ತಿರುವ ಲಕ್ಶಾಂತರ ಕನ್ನಡ ತರುಣರ ಪಾಡು ಯಾರಿಗೆ ತಿಳಿದಿಲ್ಲ? ಇಂಗ್ಲೀಶ್ ಬಾರದೆ ಬೇರೆ ದಾರಿ ಇಲ್ಲ ಎನ್ನುವಶ್ಟರಮಟ್ಟಿಗೆ ಇಂದು ಇಂಗ್ಲೀಶ್ ಅನಿವಾರ‍್ಯವಾಗಿದೆ. ಆದ್ದರಿಂದ, ಕನ್ನಡಿಗರು ಇಂದು ಕನ್ನಡದ ಜೊತೆ ಹೆಚ್ಚುವರಿಯಾಗಿ ಕಲಿಯಬೇಕಾಗಿರುವುದು ಇಂಗ್ಲೀಶನ್ನು. ಕನ್ನಡಿಗರ ಸಾರ‍್ವಜನಿಕ ಹಣ ಸಲ್ಲಬೇಕಾಗಿರುವುದು ಇಂಗ್ಲೀಶ್ ಕಲಿಕೆಗೆ. ಸಂಸ್ಕ್ರುತ ಕಲಿಕೆಗೆ ಅಲ್ಲ.
      ’ಕೋಟಿಗಟ್ಟಲೆ ಹಣ ನಿತ್ಯವೂ ಪೋಲಾಗುತ್ತಿರುತ್ತದೆ. ಸಂಸ್ಕ್ರುತ ಬಾಶೆಗೆ ಕೊಂಚ ಹಣ ಹೋದರೆ ಕೊಳ್ಳೆ ಹೋದುದು ಏನು?’ ಎಂದು ಸಂಸ್ಕ್ರುತ ದುರಬಿಮಾನಿಗಳು ಸಾಮಾನ್ಯವಾಗಿ ಸವಾಲು ಹಾಕುತ್ತಾರೆ. ಅವರಿಗೆ ನಾವು ಹೇಳಬೇಕಾದುದು ಇಶ್ಟೇ - ಪೋಲು ಪೋಲೇ. ವ್ಯರ‍್ತ ವ್ಯರ‍್ತವೇ. Wasting of resources is never justified!
     ಇವೆಲ್ಲ ಕಾರಣಗಳಿಂದಾಗಿ ಕನ್ನಡ ನಾಡಿನಲ್ಲಿ ಕನ್ನಡಿಗರ ಹಣ ಸುರಿದು ಸಂಸ್ಕ್ರುತ ವಿಶ್ವವಿದ್ಯಾಲಯವೊಂದನ್ನು ಸಾಕುವ ಆಲೋಚನೆ ತಕ್ಕುದಲ್ಲ. ಇದು ಅನೇಕ ಕನ್ನಡಿಗರಿಗೆ ತಿಳಿದಿದೆ. ತಕ್ಕ ಮುಂದಾಳ್ತನ ಇಲ್ಲದಿರುವುದರಿಂದ ಹಾಗೂ ತಕ್ಕ ಸನ್ನಿವೇಶ ಒದಗಿ ಬಂದಿಲ್ಲವಾದ್ದರಿಂದ, ಅವರು ಸದ್ಯಕ್ಕೆ ಸುಮ್ಮನೆ ಕುಳಿತಿದ್ದಾರೆ. ಗಂಬೀರವಾದ ಹೋರಾಟ ನಡೆಯುವ ಸೂಚನೆ ಕಂಡು ಬಂದರೆ ಅವರೆಲ್ಲರೂ ಎದ್ದು ತಮ್ಮ ಬೆಂಬಲವನ್ನು ವ್ಯಕ್ತಪಡಿಸುವುದರಲ್ಲಿ ಸಂದೇಹವಿಲ್ಲ. ಮಾನ್ಯ ಬಾಲಕ್ರಿಶ್ಣರೆ, ಅಂತಹ ಒಂದು ಹೋರಾಟಕ್ಕೆ ನಿಮ್ಮ ಕ್ಶೇತ್ರದಿಂದಲೇ, ನಿಮ್ಮಿಂದಲೇ ಚಾಲನೆ ದೊರಕಲಿ ಎಂದು ನಾನು ಹಾರಯ್ಸುತ್ತೇನೆ. ನಿಮ್ಮ ಹೋರಾಟಕ್ಕೆ ನನ್ನ ಯಾವತ್ತೂ ಬೆಂಬಲವಿರುತ್ತದೆಂಬ ಸಂಪೂರ್ಣ ನಂಬುಗೆಯನ್ನು ನಿಮಗೆ ನೀಡುತ್ತೇನೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಕನ್ನಡಿಗರೂ ದ್ರಾವಿಡರೆ ಗೆಳೆಯರ ಬಳಗ
(kannadigarudravidare.blogspot.in)
kannadigarudravidare@gmail.com