ಬುಧವಾರ, ನವೆಂಬರ್ 26, 2014

ಕಾಯಿಲೆಗಿಂತ ಕೆಟ್ಟದ್ದಾಯ್ತು ಮದ್ದಿನ ಅಡ್ಡ ಪರಿಣಾಮ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಈ ಬಾರಿಯ ಲೋಕಸಬೆಯ ಚುನಾವಣೆಯಲ್ಲಿ ಮಂದಿ ಬೀಜೇಪಿ ಪಕ್ಶವನ್ನು ನಿಚ್ಚಳ ಬಹುಮತದಿಂದ ಅದಿಕಾರಕ್ಕೆ ತಂದರು. ಆದರೆ, ಅವರು ಮತ ಹಾಕಿದ್ದು ನಿಜಕ್ಕೂ ಬೀಜೇಪಿಗೆ ಅಲ್ಲ. ಮತ ಹಾಕಿದ್ದೆಲ್ಲ ಮೋದಿಯವರಿಗೆ. ಒಂದೆಡೆ ಕಾಂಗ್ರೆಸ್ ಪಕ್ಶದ ಆಳ್ವಿಕೆಯಲ್ಲಿ ಹೊರಬಿದ್ದ ಬ್ರಶ್ಟಾಚಾರದ ಹಗರಣಗಳು, ಇನ್ನೊಂದೆಡೆ ಹದಗೆಟ್ಟು ತೊಳಲಾಡುತ್ತಿದ್ದ ಆರ್‌ತಿಕ ನೆಲೆ, ಇವೆರಡರಿಂದ ಬೇಸತ್ತಿದ್ದ ಮತದಾರರು, ಮೋದಿಯವರಿಂದ ಆಳ್ವಿಕೆಯಲ್ಲಿ ಕೊಂಚವಾದರೂ ಪ್ರಾಮಾಣಿಕತೆ ಮತ್ತು ಆರ‍್ತಿಕ ಸ್ತಿತಿಯಲ್ಲಿ ಸ್ವಲ್ಪವಾದರೂ ಲವಲವಿಕೆ ಮತ್ತೆ ಬರಬಹುದೆಂಬ ನಿರೀಕ್ಶೆಯಿಂದ ಬೀಜೇಪಿಯನ್ನು ಗೆಲ್ಲಿಸಿದರೇ ಹೊರತು, ಅದರ ಹಿಂದುತ್ವದ ನಿಲುವಿಗೆ ಮನಸೋತೇನೂ ಅಲ್ಲ.
      ಗುಜರಾತ್ ರಾಜ್ಯಕ್ಕೆ ಮೋದಿಯವರ ಆಡಳಿತದಿಂದ ಒಳಿತಾದಂತೆ ಇಡೀ ದೇಶಕ್ಕೂ ಆಗಲಿ ಎನ್ನುವ ಹಾರಯ್ಕೆಯಿಂದ ಮಂದಿ ಬೀಜೇಪಿಯನ್ನು ಬೆಂಬಲಿಸಿದ್ದು. ಆದರೆ, ಮೋದಿಯವರಿಂದ ಪವಾಡವನ್ನು ನಿರೀಕ್ಶಿಸುವ ರಬಸದಲ್ಲಿ, ಬೀಜೇಪಿಯ ತಾತ್ವಿಕ ನಿಲುವಿನಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಜನ ರವೆಯಶ್ಟೂ ಯೋಚಿಸಲಿಲ್ಲ. ದೇಶದ ಕಾಯಿಲೆಗೆ ಮೋದಿಯೇ ಸರಿಯಾದ ಮದ್ದು ಎಂದುಕೊಂಡರು. ಆದರೆ, ಆ ಮದ್ದಿಗೆ ಮೂಲ ಕಾಯಿಲೆಗಿಂತಲೂ ಕೆಟ್ಟದಾದ side effect ಗಳಿವೆ ಎಂಬುದನ್ನು ಮಾತ್ರ ಮರೆತರು! ಒಂದಾದ ಮೇಲೆ ಒಂದರಂತೆ ಉದ್ಬವವಾಗುತ್ತಿರುವ ಈ ಅಡ್ಡ ಪರಿಣಾಮಗಳ ಸರಣಿ ಮಾಲೆಯನ್ನು ಈಗ ನಾವು ನಾಳುನಾಳೂ ನೋಡುತ್ತಿದ್ದೇವೆ.
      ಮೋದಿಯವರೇನೋ ದೇಶ ಕಟ್ಟುವ ಕಾಯಕದಲ್ಲಿ ಸಿಂಹದಂತೆ ತಮ್ಮನ್ನು ತಾವು ತೊಡಗಿಸಿಕೊಂಡವರಂತೆ ಕಾಣುತ್ತಿದ್ದಾರೆ. ಆದರೆ, ಅವರ ಹೆಸರಿನಿಂದ ಬಲ ಪಡೆದುಕೊಂಡು, ಅವರ ನೆರಳಿನ ಕಾಪಿನಿಂದ ಕುದುರಿಕೊಂಡು ಹಲವರು ಗುಳ್ಳೇನರಿಗಳಂತೆ ಕಿರಿಕಿರಿ ಮಾಡುವುದಕ್ಕೆ ತೊಡಗಿದ್ದಾರೆ! ಅವರು ಆಡಿದ್ದೇ ಮಾತು, ಮಾಡಿದ್ದೇ ಕಟ್ಟಳೆ ಎನ್ನುವ ಹಾಗಿದೆ ಅವರ ಪರಿ. ಮೋದಿಯವರ ಬಣದ ಇಂತಹವರಿಂದ ಈಗೀಗ ಹೊರಬರುತ್ತಿರುವ ಬಗೆಮುತ್ತುಗಳು ಒಂದಲ್ಲ ಎರಡಲ್ಲ, ಸಾಲು ಸಾಲು!
      ನಮ್ಮ ನಾಡಿನ ಹೊಸ ರಾಜ್ಯಪಾಲರು ಹೇಳುತ್ತಾರೆ, ವೇದಗಳ ಕಲಿಕೆ ಶಾಲೆಗಳಲ್ಲಿ ಕಡ್ಡಾಯವಾಗಿ ಆಗಬೇಕಂತೆ. ವೇದಾದ್ಯಯನದಿಂದ ಅಪರಾದಗಳ ಮಟ್ಟ ಇಳಿಯುತ್ತದಂತೆ! "ಕಳಬೇಡ, ಕೊಲಬೇಡ" ಎಂದು ನಮಗೆಲ್ಲ ತಿಳಿಯುವ ತಿಳಿಗನ್ನಡದಲ್ಲೇ ನಮ್ಮ ಬಸವಣ್ಣ ವಚನ ಹಾಡಿ ಹೆಚ್ಚುಕಡಿಮೆ ಸಾವಿರ ವರ್‌ಶಗಳೇ ಕಳೆದರೂ ನಾವ್ಯಾರೂ ಕದಿಯುವುದನ್ನು ಬಿಡಲಿಲ್ಲ, ಕೊಲ್ಲುವುದನ್ನು ನಿಲ್ಲಿಸಲಿಲ್ಲ. ಇನ್ನು ನಮಗರಿಯದ ಸಂಸ್ಕ್ರುತದ ವೇದ ಕಲಿತರೆ ಸಂತರಾಗಿಬಿಡುತ್ತೇವೆಯೆ? ಉಪದೇಶದಿಂದ ಎಲ್ಲಾದರೂ ಜನರನ್ನು ಒಳ್ಳೆಯವರನ್ನಾಗಿಸಲು ಬರುತ್ತದೆಯೆ?
      ಪೇಜಾವರ ಶ್ರೀಗಳು ಹೇಳಿಕೆ ಕೊಡುತ್ತಾರೆ, ದೇಶದಲ್ಲಿ ಇಶ್ಟೊಂದು ಅಶಾಂತಿ ನೆಲೆಸಿರುವುದು ಹುಲಿಯಂತಹ ಒಂದು ಹಿಂಸ್ರ ಪ್ರಾಣಿಯನ್ನು ರಾಶ್ಟ್ರೀಯ ಪ್ರಾಣಿ ಎಂದು ನಾವು ಗುರುತಿಸಿಕೊಂಡಿರುವುದಕ್ಕಂತೆ! ಗೋಮಾತೆಯನ್ನು ರಾಶ್ಟ್ರೀಯ ಪ್ರಾಣಿ ಎಂದು ಗೋಶಿಸಿದರೆ ಎಲ್ಲೆಡೆ ಶಾಂತಿ ನೆಲೆಯೂರುವುದಂತೆ! ಅದೇನು ತರ್‌ಕ ಸ್ವಾಮೀ!
      ಉತ್ತರ ಬಾರತದ ಬತ್ರ ಎಂಬ ಮಹನೀಯರೊಬ್ಬರು ಹೇಳುತ್ತಾರೆ, ನಮ್ಮ ದೇಶದಲ್ಲಿ ಎಲ್ಲಾ ವಿದೇಶೀ ಬಾಶೆಗಳ ಕಲಿಕೆಯನ್ನು ಸಂಪೂರ್‌ಣವಾಗಿ ನಿಶೇದಿಸಬೇಕಂತೆ. ಹಾಗಾದರೆ ಇಂಗ್ಲೀಶ್ ಮೂಲತಹ ಒಂದು ವಿದೇಶೀ ಬಾಶೆ. ಅದನ್ನೂ ನಿಶೇದಿಸಬೇಕೆ? ಇಂದು ಇಂಗ್ಲೀಶ್ ಮತ್ತು ಇಂಟರ್‌ನೆಟ್ಟಿನ ಒಗ್ಗೂಡಿಕೆಯಿಂದ ಮನುಕುಲದ ಇಡೀ ಅರಿವೊಟ್ಟಿಲೇ ಎಲ್ಲರ ಬೆರಳ ತುದಿಯಲ್ಲಿದೆ. ಇಡೀ ವಿಶ್ವವೇ ಇಂಗ್ಲೀಶ್ ಕಲಿಯುತ್ತಿರುವಾಗ ನಾವು ಅದರ ಕಯ್ಬಿಡಬೇಕೆ? ಇದು ಅಪ್ಪಟ ಹುಚ್ಚು ತಾನೆ?
      ಕೇಸರಿ ಬಣದವರು ಪಟ್ಟಿ ಮಾಡುವ ತಪ್ಪುಗಳಲ್ಲಿ ಏನೇನು ಸೇರಿಕೊಂಡಿದೆ ನೋಡಿ. ಕಾದಲರ ನಾಳನ್ನು ಆಚರಿಸುವುದು ತಪ್ಪು, ಹೆಣ್ಣುಮಕ್ಕಳು ಜೀನ್ಸ್ ತೊಟ್ಟರೆ ತಪ್ಪು, ಯುವಕ ಯುವತಿಯರು ಪಾರ್‌ಟೀ ಮಾಡುವುದು ತಪ್ಪು, ಸಾರ‍್ವಜನಿಕ ಎಡೆಗಳಲ್ಲಿ ಮುತ್ತಿಡುವುದು ತಪ್ಪು, ಸಂಸ್ಕ್ರುತ ಕಲಿಯದಿದ್ದರೆ ತಪ್ಪು, ಹಿಂದೀ ಮಾತಾಡದಿದ್ದರೆ ತಪ್ಪು, ಗೀತೆ ವೇದಗಳನ್ನು ಓದದಿದ್ದರೆ ತಪ್ಪು, ಗೋವನ್ನು ಪೂಜನೀಯ ಪ್ರಾಣಿ ಎಂದು ನಂಬದಿರುವುದು ತಪ್ಪು, ಹೀಗೆ ಎಲ್ಲವೂ ತಪ್ಪೇ!
      ಕೇಸರಿಗಳು ಬರೀ ಅಬಿಪ್ರಾಯ ಕೊಟ್ಟು ಸುಮ್ಮನಿದ್ದರೆ ನಾವ್ಯಾರೂ ತಲೆ ಕೆಡಿಸಿಕೊಳ್ಳಬೇಕಿಲ್ಲ. ಆದರೆ, ಅವರು ಬರೀ ಹೇಳಿಕೆ ಕೊಟ್ಟು ಸುಮ್ಮನಿರುವುದಿಲ್ಲ. ಅವಕಾಶ ಸಿಕ್ಕಿದಾಗಲೆಲ್ಲ ಅವರ ಅಸಹನೆಯನ್ನು ಕಾರ್‌ಯರೂಪದಲ್ಲೂ ತೋರಿಸುತ್ತಾರೆ. ಯುವಕರ ಪಾರ್‌ಟೀಗಳಿಗೆ ನುಗ್ಗಿ ಹುಡುಗ ಹುಡುಗಿಯರನ್ನು ಕೇಸರಿಗಳು ಆಗಾಗ್ಗೆ ತಳಿಸುತ್ತಾರೆ. ಹರಿಯಾಣ ರಾಜ್ಯದ ಯಾವುದೋ ಒಂದು ಊರಿನಲ್ಲಿ ಹೆಣ್ಣುಮಕ್ಕಳು ಜೀನ್ಸ್ ತೊಡುವಂತಿಲ್ಲ, ಮೋಬಯಿಲ್ ದೂರವಾಣಿಗಳನ್ನು ಬಳಸುವಂತಿಲ್ಲ ಎಂಬ "ಕಾಪ್" ಕಟ್ಟಳೆಯನ್ನು ಹೊರಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಎಲ್ಲೋ ಒಂದೆಡೆ ಬುರ್‌ಕಾ ತೊಟ್ಟವರು ಬೀದಿಯ ಕಸ ಹೊಡೆಯುವಂತಿಲ್ಲ ಎಂಬ ಅವರದ್ದೇ ಆದ ಸ್ವಂತ ಕಾನೂನೊಂದನ್ನು ಮಾಡಿದ್ದಾರೆ. ಪುರಾತನ ಕಾಲದಲ್ಲೇ ನಮ್ಮಲ್ಲಿ ಟೆಸ್ಟ್ ಟ್ಯೂಬ್ ಬೇಬಿ ತಂತ್ರಜ್ನಾನವಿತ್ತೆಂದೂ, ದ್ರೋಣಾಚಾರ್‌ಯ ಒಬ್ಬ ಟೆಸ್ಟ್ ಟ್ಯೂಬ್ ಬೇಬಿಯೆಂದೂ ಉತ್ತರದ ರಾಜ್ಯವೊಂದರಲ್ಲಿ ಮಕ್ಕಳ ಪಟ್ಯಪುಸ್ತಕದಲ್ಲೇ ಸೇರಿಸಿಬಿಟ್ಟಿದ್ದಾರೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಇನ್ನು ಮುಂದೆ ಜರ್‌ಮನ್ನಿನಂತಹ ವಿದೇಶೀ ಬಾಶೆಗಳನ್ನು ನಾಲ್ಕನೇ ಬಾಶೆಯ ಸ್ತಾನಕ್ಕೆ ದೂಡಬೇಕೆಂದು ಕೇಂದ್ರ ಸರ್‌ಕಾರ ಸೂಚನೆ ಹೊರಡಿಸಿದೆ.
      ಹೀಗೆ, ಒಟ್ಟಿನಲ್ಲಿ ಕೇಸರಿ ಬಣದವರಿಗೆ ವಿದೇಶಿ ಸಂಸ್ಕ್ರುತಿ, ವಿದೇಶಿ ಬಾಶೆ ಎಂದರೆ ಅಸಹನೆ ಕೆರಳುತ್ತದೆ. ಇದರ ಜೊತೆಗೆ ಬಾರತದಲ್ಲೆಲ್ಲ ಸಂಸ್ಕ್ರುತ, ಹಿಂದಿ, ಬಗವದ್ಗೀತೆ, ವೇದ ಮುಂತಾದ ಏಕರೂಪ ನಡೆನುಡಿಗಳನ್ನು ಹೇರುವ ಹುನ್ನಾರ ಅವರಿಗಿದೆ. ಬಾರತ ಒಂದು ಬಗೆಬಗೆಯ ಸಂಸ್ಕ್ರುತಿಗಳಿರುವ, ನುಡಿಗುಂಪುಗಳಿರುವ ಮತ್ತು ಬುಡಕಟ್ಟುಗಳಿರುವ ದೇಶ ಎನ್ನುವ ವಾಸ್ತವವನ್ನು ಒಪ್ಪಿಕೊಳ್ಳುವ ಬಗೆನೆಲೆ ಅವರಿಗಿಲ್ಲ. ಎತ್ತುಗೆಗೆ, "ದ್ರಾವಿಡ’ ಎಂಬುದೇ ಸುಳ್ಳು, ಅದು ಆಂಗ್ಲರು ನಮ್ಮನ್ನು ಒಡೆದು ಆಳುವುದಕ್ಕೆ ಕಲ್ಪಿಸಿದ ಕಟ್ಟುಕತೆ ಎಂದುಬಿಡುತ್ತಾರೆ ಕೇಸರಿ ಬಣದವರು. ನುಡಿ ಹಾಗೂ ಬುಡಕಟ್ಟುಗಳ ಬಗ್ಗೆ ಸಂಶೋದನೆಗಳಿಂದ ಕಂಡುಕೊಂಡಿರುವ ವಾಸ್ತವಾಂಶಗಳು ಅವರಿಗೆ ಬೇಡ. ಅವರಿಗೆ ಅವರ ಕಲ್ಪನಾಲೋಕದ ಅವರದ್ದೇ ಆದ ಸಂಕುಚಿತವಾದ ಬಾರತದ ಚಿತ್ರಣ ಒಂದಿದ್ದರೆ ಸಾಕು.
      ಇಂತಹ ಸಂಕುಚಿತ ಬಗೆಗಟ್ಟಿನವರಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಪ್ರಾಂತೀಯ ಜನರು ತಮ್ಮ ಪ್ರಾಂತೀಯತೆಯ ಅರಿವನ್ನು ಬಳಸಿಕೊಳ್ಳಬೇಕು. ಕನ್ನಡಿಗರ ಮಟ್ಟಿಗೆ ಹೇಳುವುದಾದರೆ, ನಾವು ನಮ್ಮ ದ್ರಾವಿಡ ಹಿನ್ನೆಲೆಯ ಅರಿವನ್ನು ಕಂಡುಕೊಳ್ಳಬೇಕು, ದ್ರಾವಿಡ ಅರಿವನ್ನು ನಮ್ಮ ಸಮುದಾಯಗಳಲ್ಲಿ ಹರಡಬೇಕು, ದ್ರಾವಿಡ ನೆಲೆಗಟ್ಟಿನಲ್ಲಿ ರಾಜಕೀಯ ಪಕ್ಶಗಳನ್ನು ಕಟ್ಟಿಕೊಳ್ಳಬೇಕು, ನೆರೆಯ ಸಹದ್ರಾವಿಡರೊಡನೆ ಕಯ್‍ಜೋಡಿಸಿ ಹೋರಾಡಬೇಕು. ಹೀಗೆ ಮಾಡುವುದರಿಂದ ನಮ್ಮತನ ನಮಗೆ ಉಳಿದೀತು. ಆದರೆ, ಹೀಗೆಲ್ಲ ಮಾಡುವುದಕ್ಕೆ ಬೇಕಾಗುವ ಕೆಚ್ಚು ನಮಗಿದೆಯೆ? ಅದೇ ಇಂದಿನ ಒಂದು ದೊಡ್ಡ ಕೇಳ್ವಿ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಮಂಗಳವಾರ, ಅಕ್ಟೋಬರ್ 14, 2014

ಮಂದಿಯಿರುವೆಡೆಗೆ ಸಂದೇಶ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

For the English version of this write-up go to (https://www.facebook.com/groups/kannadigarudravidare/)


ಗೆಳೆಯರೆ,
ಸಾಮಾನ್ಯವಾಗಿ, ಬೆಂಗಳೂರಿನಲ್ಲಿ ಒಂದು ಕಾರ್‌ಯಕ್ರಮವನ್ನು ನಡೆಸಬೇಕೆಂದರೆ, ವಾರಗಟ್ಟಳೆ ಮುಂಚೆಯೇ ಸಬಾಮಂದಿರವನ್ನು ಕಾಯ್ದಿರಿಸಬೇಕಾಗುತ್ತದೆ. ಬಾಶಣ ಮಾಡಿಸುವುದಕ್ಕೆ ಹಲವು ಅತಿತಿಗಳನ್ನು ಒಪ್ಪಿಸಿ ಕರೆತರಬೇಕಾಗುತ್ತದೆ. ಇನ್ನು ಸಬೆಗೆ ಸೇರುವವರಲ್ಲಿ ಮುಕ್ಕಾಲುವಾಸಿ ಮಂದಿ ಆಗಲೇ ನಮ್ಮ ನಿಲುವನ್ನು ಒಪ್ಪಿಕೊಂಡವರೇ ಆಗಿರುತ್ತಾರೆ. ಅವರಿಗೆ ಬಾಶಣಗಳಿಂದ ಹೊಸದೇನೂ ಸಿಗುವುದಿಲ್ಲ. ಇಂತಹ ಕಾರ್‌ಯಕ್ರಮಗಳನ್ನು ನಡೆಸಿ ಏನು ಪ್ರಯೋಜನ? ಇದರ ಮೇಲೆ ಇಂತಹ ಕಾರ್‌ಯಕ್ರಮಗಳನ್ನು ಬೇಗಬೇಗನೇ ನಡೆಸಲೂ ಆಗುವುದಿಲ್ಲ.
      ನಮ್ಮ ಸಂದೇಶ ಹೊಸ ಹೊಸ ಮಂದಿಯನ್ನು ತಲುಪಬೇಕು. ಸದಾ ಚಾಲ್ತಿಯಲ್ಲೂ ಇರಬೇಕು. ಜಾಹೀರಾತಿನ ಮಾದರಿಯಲ್ಲಿ ಕಣ್ಣಿಗೆ ಬೀಳುತ್ತಿರಬೇಕು. ಈ ಉದ್ದೇಶಗಳಿಗೆಂದೆ, ಜನಗಳು ಸೇರುವೆಡೆಗಳಿಗೆ ಆಗಾಗ್ಗೆ ನಮ್ಮ ವ್ಯಾನಿನ ಮೇಲೆ ಹೊಸ ಹೊಸ ಸಂದೇಶಗಳನ್ನು ಹೊತ್ತೊಯ್ದು ತೋರಿಸಬೇಕೆಂದು ತೀರ್‌ಮಾನಿಸಿ, ಅದರ ಪ್ರಯೋಗವನ್ನೂ ತೊಡಗಿಸಿದ್ದೇವೆ. ಈ ಪ್ರಯೋಗದ ಒಂದು ಇಣುಕು ನೋಟ ಮೇಲಿನ ಚಿತ್ರದಲ್ಲಿದೆ. ಚಿತ್ರವನ್ನು ವಿನೋದಕ್ಕಾಗಿ ಬೆಂಗಳೂರಿನ ಎಮ್.ಜಿ. ರಸ್ತೆಯ ನಮ್ಮ ಮೆಟ್ರೋ ನಿಲ್ದಾಣದ ಎದುರೇ ತೆಗೆಯಲಾಗಿದೆ.
      ಮಂದಿಯನ್ನು ಸಂದೇಶವಿರುವೆಡೆಗೆ ಕರೆತರಲು ಪ್ರಯತ್ನಿಸುವುದಕ್ಕಿಂತ , ಮಂದಿಯಿರುವೆಡೆಗೆ ಸಂದೇಶವನ್ನು ಕೊಂಡೊಯ್ಯುವುದು ಉತ್ತಮ ತಾನೆ?

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಸೋಮವಾರ, ಸೆಪ್ಟೆಂಬರ್ 15, 2014

ಬಳಗದ ಒಸಗೆ ತುಣುಕು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

For the English version of this write-up go to (https://www.facebook.com/groups/kannadigarudravidare/)


ಗೆಳೆಯರೆ,
ಕೆಲ ತಿಂಗಳುಗಳ ಹಿಂದೆ, "ಇಂಗ್ಲೀಶ್ ಕಲಿಸಿ - ಹಿಂದೀ ಕಳಿಸಿ" ಅರುಹುನಡೆಯನ್ನು ತೊಡಗಿಸುವ ವೇಳೆಗೆ, ಮಾಗಡಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ಓಡಾಡಿ, ಸಬೆ ನಡೆಸಲು ಅಲ್ಲಿ ಯಾವ ಸವುಲಬ್ಯಗಳಿವೆ ಎಂಬುದನ್ನು ಕೊಂಚ ನೋಡಿದೆ. ಆಗ ನನಗೆ ಅನಿಸಿತು - "ಹಳ್ಳಿಗಳಲ್ಲಿ ಸಬೆ ನಡೆಸಬೇಕೆಂದರೆ ನಮ್ಮದೇ ಒಂದು ಸಂಚಾರಿ ವೇದಿಕೆ ಬೇಕು", ಎಂದು. ಆದ್ದರಿಂದ, ತಿಪ್ಪಸಂದ್ರದ ಕಾರ‍್ಯಕ್ರಮ ಮುಗಿದ ಮೇಲೆ, ನಮ್ಮ ಗುಂಪಿನ ಓಮ್ನಿ ವ್ಯಾನನ್ನು ಒಂದು ಸಂಚಾರಿ ವೇದಿಕೆಯನ್ನಾಗಿ ಮಾರ‍್ಪಡಿಸಲು ನಾನು ಮತ್ತು ನಮ್ಮ ಬಳಗದ ಕೆಲ ಗೆಳೆಯರು ಹೊರಟೆವು. ಹಲವಾರು ಕಾರಣಗಳಿಂದ, ಮುಕ್ಯವಾಗಿ ಬೆಂಗಳೂರಿನ ಕುಶಲಕರ‍್ಮಿಗಳ ಅಸಡ್ಡೆಯಿಂದ, ಒಂದೆರಡು ವಾರಗಳಲ್ಲಿ ಮುಗಿಯಬೇಕಾಗಿದ್ದ ಕೆಲಸ ಕೆಲವು ತಿಂಗಳನ್ನೇ ತೆಗೆದುಕೊಂಡಿತು. ಅದೇನೇ ಇರಲಿ, ಈಗ ನಮ್ಮ ವ್ಯಾನ್ ಒಂದು ಸರಳ, ಆದರೆ, ಸ್ವತಂತ್ರವಾದ ಸಂಚಾರಿ ವೇದಿಕೆಯಾಗಿ ಮಾರ‍್ಪಟ್ಟಿದೆ. ಇದರೊಡನೆ, ಸಂಚಾರಿ ಜಾಹೀರಾತಿನ ಸವುಲಬ್ಯವನ್ನೂ ಪಡೆದುಕೊಂಡಿದೆ. ಇನ್ನು ಮುಂದೆ, ನಮಗೆ ಕಾರ‍್ಯಕ್ರಮಗಳನ್ನು ನಡೆಸುವ ಕೆಲಸ ಸಾಕಶ್ಟು ಹಗುರವಾಗುತ್ತದೆ.
      ಮಳೆ ಕಡಿಮೆಯಾದ ಮೇಲೆ "ಇಂಗ್ಲೀಶ್ ಕಲಿಸಿ - ಹಿಂದೀ ಕಳಿಸಿ" ಅರುಹುನಡೆ ಮುಂದುವರೆಯುತ್ತದೆ. ಅಲ್ಲಿಯವರೆಗೆ ಬೆಂಗಳೂರಿನ ಬೇರೆಬೇರೆ ಬಾಗಗಳಲ್ಲಿ ಹಿಂದೀ ಹೇರಿಕೆಯ ವಿರುದ್ದವಾಗಿ ಕೆಲ ಕಾರ‍್ಯಕ್ರಮಗಳನ್ನು ನಡೆಸಲಾಗುತ್ತದೆ. ಕಾರ‍್ಯಕ್ರಮ ನಡೆಯುವ ಎಡೆ ಮತ್ತು ಹೊತ್ತಿನ ಬಗ್ಗೆ ಮುಂದಾಗೇ ಗೆಳೆಯರಿಗೆ ನಮ್ಮ Facebook ಪುಟದಲ್ಲಿ (https://www.facebook.com/groups/kannadigarudravidare/) ತಿಳಿಸಲಾಗುವುದು. ಗೆಳೆಯರೆಲ್ಲಾ ಪಾಲ್ಗೊಳ್ಳುವಿರಿ ಎಂದು ಬಯಸುತ್ತೇನೆ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಭಾನುವಾರ, ಆಗಸ್ಟ್ 17, 2014

ನಾವ್ ಮಾಡ್ತಿರೋದೂ ಅದನ್ನೇ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕನ್ನಡ ಒಂದನ್ನೇ ಮಾತಾಡುವ ಒಂದು ಕಿರುಹಳ್ಳಿ ಇದೆ ಎಂದುಕೊಳ್ಳಿ. ಆ ಹಳ್ಳಿಯವರಲ್ಲಿ ಅರೆವಾಸಿ ಮಂದಿ ಅದು ಹೇಗೋ ಏನೋ ಕಾಲಕ್ರಮೇಣ ಕನ್ನಡವನ್ನು ತೊರೆದು ಮರಾಟಿಯನ್ನು ಆಡಲು ತೊಡಗಿದರೆಂದುಕೊಳ್ಳಿ. ಆ ಬಳಿಕ ಅವರು, ಕನ್ನಡ ಆಡುವುದನ್ನು ಮುಂದುವರೆಸಿಕೊಂಡು ಬಂದ ಉಳಿದ ಅರ್‌ದದವರ ಮೇಲೆ ತಿರುಗಿಬಿದ್ದು, "ಏ ಕನ್ನಡದವರಾ, ನಾವೀಗ ಕನ್ನಡಿಗರಲ್ಲ, ಮರಾಟಿಗರು. ನಾವೇ ಬೇರೆ, ನೀವೇ ಬೇರೆ!" ಎಂದು ಬೊಬ್ಬೆ ಹಾಕಿ ಹಳ್ಳಿಯನ್ನು ಎರಡು ಪಾಲು ಮಾಡಿದರೆಂದುಕೊಳ್ಳಿ. ಅಶ್ಟಕ್ಕೂ ಸುಮ್ಮನಿರದೆ, "ಪಾಲು ಸರಿಯಾಗಿ ಆಗಿಲ್ಲ. ಇನ್ನೂ ಕೆಲವು ಓಣಿಗಳು ನಮಗೇ ಸೇರಬೇಕು" ಎಂದು ಚಂಡಿ ಹಿಡಿದು, ಆ ಓಣಿಗಳಲ್ಲಿ ಬಂಡರಂತೆ ಬಂದು ಮರಾಟಿ ಬಾವುಟ ನೆಟ್ಟರೆಂದುಕೊಳ್ಳಿ. ಹೀಗೇನಾದರು ನಡೆದರೆ ಏನೆನಿಸುತ್ತೆ ನಿಮಗೆ? ಅಲ್ಲ, ಇದೆಂತಹ ವಿಪರ್‌ಯಾಸ ಅಂತ!? ಇದೆಂತಹ ವಿಪರ್‌ಯಾಸವೆಂದರೆ, ಒಂದೇ ಒಕ್ಕಲಿನ ಕೆಲವರು ತಮ್ಮ ಮಾತನ್ನು ಬಿಟ್ಟು ಹೆರವರ ಮಾತನ್ನು ಅಪ್ಪಿಕೊಂಡು, ತಮ್ಮವರ ಮೇಲೇ ತಿರುಗಿ ಬೀಳುವ ಅಯ್ಯೋ ಎನಿಸುವಂತಹ ವಿಪರ್‌ಯಾಸ! ಕನ್ನಡಿಗರ ಮತ್ತು ಮರಾಟಿಗರ ನಡುವೆ ವಾಸ್ತವಾಗಿ ನಡೆದು ಬಂದಿರುವುದು ಇಂತಹದೇ ಒಂದು ಕ್ರೂರ ವಿಪರ್‌ಯಾಸ.
      ಮೊನ್ನೆ ಮೊನ್ನೆ ಬೆಳಗಾವಿ ಜಿಲ್ಲೆಯ ಯಳ್ಳೂರ ಗ್ರಾಮದಲ್ಲಿದ್ದ ’ಯಳ್ಳೂರು ಮಹಾರಾಶ್ಟ್ರಕ್ಕೆ ಸೇರಿದ ಊರು’ ಎಂದು ಸೂಚಿಸುವ ಪಲಕಗಳನ್ನು ತೆರವುಗೊಳಿಸಿದಾಗ, ಅದರಿಂದಾಗಿ ಮರಾಟಿಗರಿಂದ ನಡೆದ ಪುಂಡಾಟಿಕೆಯ ಬಗ್ಗೆ ಕೇಳಿದಾಗ, ಮೇಲಿನ ಚಾರಿತ್ರಿಕ ವಾಸ್ತವವನ್ನು ನೆನೆದು ’ಇದೆಂತಹ ವಿದಿಯ ಅಣಕ!’ ಎನಿಸಿತು ನನಗೆ. ಏಕೆಂದರೆ, ಇಂದಿನ ಬಹುತೇಕ ಮರಾಟಿಗರ ಮುನ್ನರು ಒಮ್ಮೆ ಕನ್ನಡಿಗರೇ ಆಗಿದ್ದರು, ಇಂದಿನ ಮಹಾರಾಶ್ಟ್ರದ ಹೆಚ್ಚಿನ ಬಾಗದಲ್ಲಿ ಒಮ್ಮೆ ಕನ್ನಡವೇ ನೆಲದ ನುಡಿಯಾಗಿತ್ತು ಎನ್ನುವುದಕ್ಕೆ ಯಾರಿಗೂ ಅಲ್ಲಗಳೆಯಲಾರದಶ್ಟು ಸಂಸ್ಕ್ರುತಿ, ಶಾಸನ ಹಾಗೂ ಊರ ಹೆಸರುಗಳ ಪುರಾವೆ ಇಡೀ ಮಹಾರಾಶ್ಟ್ರದಲ್ಲೆಲ್ಲಾ ಕಂಡುಬರುತ್ತದೆ. ಇದರ ಬಗ್ಗೆ ಬಹು ವಿವರವಾಗಿ ಡಾ.ಚಿದಾನಂದ ಮೂರ್‌ತಿಯವರ ’ಬ್ರುಹತ್ ಬಾಶಿಕ ಕರ್‌ನಾಟಕ’ ಎಂಬ ಓದುಗೆಯಲ್ಲಿ ಬರೆಯಲಾಗಿದೆ (ಕನ್ನಡದೊಲವಿಗಳೆಲ್ಲರೂ ಓದಲೇಬೇಕಾದ ಹೊತ್ತಗೆ ಇದು). ಸುಮಾರು ಸಾವಿರ ಏಡುಗಳ ಮುನ್ನ ಮರಾಟಿ ಎಂಬುದೇ ಇರಲಿಲ್ಲ ಎನ್ನುವುದರ ಬಗ್ಗೆ ನಮ್ಮ ಕನ್ನಡದ ಕೆಲ ಅರಿಗರು ಆಗಾಗ್ಗೆ ಮರಾಟಿಗರಿಗೆ ನೆನಪಿಸುವುದು ಒಂದು ವಾಡಿಕೆಯೇ ಆಗಿದೆ. ’ಒಮ್ಮೆ ಕನ್ನಡವನ್ನೇ ಆಡುತ್ತಿದ್ದ ನೀವು, ಈಗ ಕನ್ನಡಕ್ಕೇ ಅವಹೇಳನ ಮಾಡುತ್ತಿದ್ದೀರಿ’ ಎಂದು ಅವರನ್ನು ಚೇಡಿಸುವುದು ಕೂಡಾ ನಡೆದೇ ಇದೆ. ಆದರೆ, ಇದರಿಂದ ಪ್ರಯೋಜನವೇನೂ ಆಗಿಲ್ಲ. ಮರಾಟಿಗರಿಗೆ ಇಂದು, ಅವರನ್ನು ನುಂಗಿ ನೀರು ಕುಡಿದ ಆರ್‌ಯಬಾಶೆ ಮರಾಟಿಯೇ ಚೆನ್ನೆನಿಸಿದೆ, ಒಮ್ಮೆ ತಮ್ಮದೇ ಆಗಿದ್ದ ಕನ್ನಡ ನುಡಿ ಕೀಳೆನಿಸಿದೆ!
      ಈ ಬಗೆಯ, ’ತಮ್ಮನ್ನು ಮೆಟ್ಟಿದ ನಡೆನುಡಿಯನ್ನು ಹೊಗಳುವ, ತಮ್ಮದೇ ಆಗಿದ್ದ ನಡೆನುಡಿಯನ್ನು ತೆಗಳುವ’ ಪರಿ ಮರಾಟಿಗರಿಗೆ ಮಾತ್ರ ಸೀಮಿತವಾದದ್ದಲ್ಲ. ಒಟ್ಟಾರೆ ಮನುಶ್ಯ ಸ್ವಬಾವವೇ ಹೀಗೆ! ಈ ಚಾಳಿ ಕನ್ನಡಿಗರಲ್ಲೂ ಇದೆ. ಏಕೆಂದರೆ, ’ತಮ್ಮತನ’ ಕಳೆದುಕೊಂಡ ಮರಾಟಿಗರು ಏನನ್ನು ಮಾಡುತ್ತಿದ್ದಾರೋ ಅದನ್ನೇ ನಾವೂ ಮಾಡುತ್ತಿದ್ದೇವೆ, ನಮ್ಮದೇ ರೀತಿಯಲ್ಲಿ!
      ಮರಾಟಿ ಬಂದು ಕನ್ನಡ ಹೋಗುವ ಕಾಲದಲ್ಲಿ ಜನಕ್ಕೆ ವಾಸ್ತವಿಕವಾದ ’ದ್ರಾವಿಡ’ ಎಂಬ ಪರಿಕಲ್ಪನೆಯೇ ಇರಲಿಲ್ಲ. ಈ ಪರಿಕಲ್ಪನೆ ಬಂದಿರುವುದು ಸುಮಾರು ಇನ್ನೂರು ವರ್‌ಶಗಳಿಂದ ಮಾತ್ರ. ಒಂದು ವೇಳೆ ಈ ಪರಿಕಲ್ಪನೆ ಆಗಲೇ ಇದ್ದಿದ್ದರೆ ಮರಾಟಿಗೆ ಕನ್ನಡವನ್ನು ಹಿಮ್ಮೆಟ್ಟಿಸುವುದು ಹಗುರವಾಗುತ್ತಿರಲಿಲ್ಲ. ಅದೇನೇ ಇರಲಿ. ದ್ರಾವಿಡ ಪರಿಕಲ್ಪನೆಯ ಅರಿವು ಈಗಂತೂ ಇದೆ. ಆದರೆ, ಅದರ ಸಮರ್‌ಪಕ ಬಳಕೆ ನಮ್ಮಲ್ಲಿ ಎಲ್ಲಿ ಆಗುತ್ತಿದೆ?
      ಕನ್ನಡಿಗರ ಮಯ್ ಲಕ್ಶಣಗಳನ್ನು ಗಮನಿಸಿದರೆ, ಅವರಲ್ಲಿ ದ್ರಾವಿಡ ಲಕ್ಶಣಗಳು ಹೆಚ್ಚಾಗಿ ಇರುವವರೇ ಬಹಳ. ಮೇಲಾಗಿ ನಮ್ಮ ಕನ್ನಡ ಒಂದು ದ್ರಾವಿಡ ನುಡಿ. ಹಾಗಾಗಿ ದ್ರಾವಿಡತನವೇ ನಮಗೆ ನಮ್ಮತನದ ಅಡಿಗಲ್ಲಾಗಬೇಕು. ಆದರೆ, ದ್ರಾವಿಡತನದ ಬದಲು ಆರ್‌ಯತನವನ್ನೇ ಅಡಿಗಲ್ಲಾಗಿ ಮಾಡಿಕೊಳ್ಳಲು ಹೊರಟಂತಿದೆ ನಮ್ಮ ನಡವಳಿಕೆ!
      ದ್ರಾವಿಡ ಲಕ್ಶಣಗಳು ಹೆಚ್ಚಾಗಿ ಇರುವ ಕನ್ನಡಿಗರಲ್ಲಿ ಬಹುಮಂದಿ ಕಲಿತವರಲ್ಲ. ಮೇಲಿನ ವರ್‌ಗಕ್ಕೆ ಸೇರಿದವರಲ್ಲ. ಹಾಗಾಗಿ ಅವರು ಆಟಕ್ಕಿದ್ದರೂ ಲೆಕ್ಕಕ್ಕಿಲ್ಲ. ಕಲಿಕೆ ಇಲ್ಲದ ಅವರಿಗೆ ತಾವು ದ್ರಾವಿಡರು ಎಂಬುದೂ ತಿಳಿದಿಲ್ಲ. ದ್ರಾವಿಡ ಅರಿವು ಇರುವ ಕಲಿತವರೆನಿಸಿಕೊಂಡ ನಾವು ಅವರಲ್ಲಿ ದ್ರಾವಿಡ ಅರಿವನ್ನು ಮೂಡಿಸಬಹುದು. ಆದರೆ, ನಾವು ಹಾಗೆ ಮಾಡುತ್ತಿಲ್ಲ. ಹಾಗೆ ಮಾಡುವುದಿರಲಿ, ಅದಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದೇವೆ. ಆರ್‌ಯ ನಡೆನುಡಿಗಳನ್ನೇ ತಲೆಯಮೇಲಿಟ್ಟುಕೊಂಡು ಮೆರೆಸುತ್ತಿದ್ದೇವೆ. ಹೋಮ, ಹವನ, ಯಜ್ನ, ಯಾಗ ಮುಂತಾದ ಉತ್ತರದ ಕಂದಾಚಾರಗಳಿಗೆ ಪಕ್ಕಾಗಿದ್ದೇವೆ (ಅದೂ ಬಸವಣ್ಣನ ನಾಡಿನವರಾಗಿ!). ಕನ್ನಡದ ತುಂಬೆಲ್ಲ ಕನ್ನಡದ ಹೆಸರಿನಲ್ಲಿ ಸಂಸ್ಕ್ರುತವನ್ನು ತುರುಕಿಕೊಂಡಿದ್ದೇವೆ. ದ್ರಾವಿಡರಾದ ನಾವು ಆರ‍್ಯನುಡಿ ಸಂಸ್ಕ್ರುತಕ್ಕಾಗಿ ವಿಶ್ವವಿದ್ಯಾಲಯ ಕಟ್ಟಿಕೊಡುತ್ತಿದ್ದೇವೆ. ನಮ್ಮ ಹಿರಿಕಟ್ಟಡಗಳಿಗೆ, ಕೆರೆಕಟ್ಟೆಗಳಿಗೆ, ಕಾಡುಮೇಡುಗಳಿಗೆ, ಊರುಕೇರಿಗಳಿಗೆ ಮುಂತಾದುವಕ್ಕೆಲ್ಲ ಕನ್ನಡ ಎಂದುಕೊಂಡು ಸಂಸ್ಕ್ರುತದ ಹೆಸರುಗಳನ್ನು ಇಡುತ್ತಿದ್ದೇವೆ. ದೇಶಪ್ರೇಮದ ಹೆಸರಿನಲ್ಲಿ ರಾಶ್ಟ್ರಬಾಶೆ ಎಂದುಕೊಂಡು ಹಿಂದೀ ಕಲಿಯುತ್ತಿದ್ದೇವೆ. ನಮ್ಮ ನಾಡಿನಲ್ಲೇ ಹಿಂದಿಯಲ್ಲಿ ಮಾತಾಡಿ ಕನ್ನಡವನ್ನು ಬದಿಗೊತ್ತುತ್ತಿದ್ದೇವೆ. ಹಿಂದೀ ಬಾಶಣಗಳನ್ನು ದನ್ಯತಾಬಾವದಿಂದ(!) ಕೇಳುತ್ತಿದ್ದೇವೆ. ಇಂತಹ ಅಡಿಯಾಳ್ತನವನ್ನು ಮಯ್ಗೂಡಿಸಿಕೊಂಡಿರುವ ನಾವು, ’ಅಡಿಯಾಳ್ತನ ಬೇಡ!’ ಎಂದು ದ್ರಾವಿಡತನವನ್ನು ಕಾಯ್ದುಕೊಳ್ಳಲು ಹೆಣಗುತ್ತಿರುವ, ಜನಾಂಗೀಯವಾಗಿ ನಮ್ಮವರೇ ಆದ ತಮಿಳರ ನೀತಿಯನ್ನು ಮಾತ್ರ ತಪ್ಪದೆ ಜರೆಯುತ್ತೇವೆ! ನಮಗೂ ಮರಾಟಿಗರಿಗೂ ಎಲ್ಲಿದೆ ಮನೋಬಾವನೆಯಲ್ಲಿ ವ್ಯತ್ಯಾಸ? ಅವರು ಮಾಡುವುದನ್ನೇ ನಾವೂ ಮಾಡುತ್ತಿದ್ದೇವೆ.
      ಈಗಿನ ದಿನಗಳಲ್ಲಿ ಆರ್‌ಯವಾದಿಗಳಿಗೆ ರಾಜಕೀಯ ಬಲ ಬಂದಿರುವುದರಿಂದ, ದ್ರಾವಿಡರಾದ ಕನ್ನಡಿಗರ ನಡೆನುಡಿಗಳ ಮೇಲೆ ಇನ್ನು ಮುಂದೆ ಹೆಚ್ಚುಹೆಚ್ಚು ಒತ್ತಡ ಬೀಳುವುದರಲ್ಲಿ ಸಂದೇಹವಿಲ್ಲ. ಹಾಗಾಗಿ, ಕನ್ನಡಿಗರು ನಾವು ಆರ್‌ಯ ನಡೆನುಡಿಗಳಿಗೆ ಮಣೆ ಹಾಕದೆ, ನಮ್ಮವರೇ ಆದ ತಮಿಳರೊಂದಿಗೆ ಸೇರಿ, ನಮ್ಮ ನಡೆನುಡಿಗಳನ್ನು ಕಾಪಾಡಿಕೊಳ್ಳುವ ಒಗ್ಗಟ್ಟಿನ ಹಾದಿ ಹಿಡಿಯಬೇಕು (ತೆಲುಗರೂ ಮಲೆಯಾಳದವರೂ ಹೀಗೇ ಮಾಡಬೇಕು). ಹೀಗೆ ಮಾಡದಿದ್ದರೆ, ಮರಾಟಿಗರ ನಡವಳಿಕೆ ಎಶ್ಟು ವಿಶಾದನೀಯ ನಗೆಪಾಟಲು ಎನಿಸುತ್ತದೆಯೋ ಅಶ್ಟೇ ವಿಶಾದನೀಯ ನಗೆಪಾಟಲಾಗುತ್ತದೆ ನಮ್ಮ ನಡವಳಿಕೆ ಕೂಡ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಶುಕ್ರವಾರ, ಜುಲೈ 18, 2014

ಮುಂಬಾಗಿಲು ಬದ್ರ, ಹಿಂಬಾಗಿಲು ಚಿದ್ರ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಬೀಜೇಪಿ ಈಗ ಕೇಂದ್ರದಲ್ಲಿ ಅದಿಕಾರಕ್ಕೆ ಬಂದಿರುವುದರಿಂದ, ಇನ್ನು ಮುಂದೆ ಹಿಂದೀ ಹೇರಿಕೆಯ ಹುನ್ನಾರಗಳು ಮರುಕಳಿಸಬಹುದೆಂದು ನಾನು ಕಳೆದ ಲೇಕನದಲ್ಲಿ ಕಳವಳ ವ್ಯಕ್ತಪಡಿಸಿದ್ದೆ. ಕಾಕತಾಳೀಯವೆಂಬಂತೆ ಲೇಕನವನ್ನು ಪತ್ತಿಸಿದ ಕೆಲ ನಾಳುಗಳಲ್ಲೇ ಬೀಜೇಪೀಗಳ ಹಿಂದೀ ಹೇರಿಕೆಯ ಮೊದಲ ಪ್ರಯತ್ನ ನಡೆದೇಬಿಟ್ಟಿತು!
      ಸರ್‌ಕಾರೀ ಜಾಲತಾಣಗಳಲ್ಲಿ ಇನ್ನು ಮುಂದೆ ಹಿಂದೀ ಬಾಶೆಯ ಬಳಕೆಗೆ ಮೇಲೆಡೆ ಕೊಡಬೇಕೆಂದು ಮತ್ತು ರಾಜ್ಯ ಸರ್‌ಕಾರಗಳೊಡನೆ ಕೇಂದ್ರ ಸರ್‌ಕಾರ ಹಿಂದೀಯಲ್ಲಿ ವ್ಯವಹರಿಸಬಹುದೆಂದು ಆದೇಶಿಸುವ ಎರಡು ಬೇರೆಬೇರೆ ಸುತ್ತೋಲೆಗಳನ್ನು ಕೇಂದ್ರ ಸರ್‌ಕಾರ ಹೊರಡಿಸಿತು. ಹಿಂದೀ ಹೇರಿಕೆಗೆ ವಾತಾವರಣ ಈಗ ಹೇಗಿರಬಹುದೆಂದು ಅರಿತುಕೊಳ್ಳುವ ಹುನ್ನಾರದಿಂದ ಈ ರೀತಿ ಬೀಜೇಪಿ ಸರ್‌ಕಾರ ಮಾಡಿರಬಹುದು. ಕಾರಣ ಏನೇ ಇರಲಿ, ಅದರ ಈ ನಡೆಗೆ ಕೂಡಲೇ ಎದುರು ವ್ಯಕ್ತವಾದದ್ದೊಂದೇ ಅಲ್ಲ, ಹಾಗೆ ವ್ಯಕ್ತವಾದ ಎದುರಿಗೆ ಹಿಂದೆಂದೂ ಕಂಡಿರದ ಹರವು ಕೂಡ ಕಂಡುಬಂತು!
      ಮುಂಚೆ ಅರುವತ್ತರ ದಶಕದಲ್ಲಿ ಕೇಂದ್ರ ಸರ್‌ಕಾರ ಹಿಂದೀಯನ್ನು ಹೇರಲು ಹೊರಟಿದ್ದಾಗ ಅದಕ್ಕೆ ಎದಿರು ಕಂಡುಬಂದದ್ದು ಬಹುಪಾಲು ನಮ್ಮ ಸಹದ್ರಾವಿಡ ತಮಿಳು ಸೋದರರಿಂದ ಹಾಗೂ ಕೊಂಚಮಟ್ಟಿಗೆ ಕನ್ನಡಿಗರಿಂದ ಮತ್ತು ಬಂಗಾಳಿಗಳಿಂದ. ಆದರೆ ಈ ಬಾರಿ, ಒರಿಸ್ಸಾ, ಕಾಶ್ಮೀರ ಮುಂತಾದ ರಾಜ್ಯಗಳಿಂದ ಕೂಡ ವಿರೋದದ ಕೂಗುಗಳು ಕೇಳಿಬಂದವು! ಒರಿಸ್ಸಾದಲ್ಲಂತೂ, ಹಿಂದೀಯಲ್ಲಿ ಮಾತಾಡಲು ಹೊರಟ ಒಬ್ಬ ಶಾಸಕನಿಗೆ ಸಬಾಪತಿಗಳು, "ಒರಿಯಾದಲ್ಲಿ ಮಾತಾಡು, ಇಲ್ಲದಿದ್ದರೆ ಇಂಗ್ಲೀಶಿನಲ್ಲಿ ಮಾತಾಡು, ಹಿಂದೀಯಲ್ಲಿ ಮಾತ್ರ ಬೇಡ" ಎಂದು ಎಚ್ಚರಿಸಿದರು! ಹಿಂದಿಯೇತರರಾದ ನಮಗೆ ಇದೆಲ್ಲಾ ನಿಜಕ್ಕೂ ಒಂದು ಹಿಗ್ಗಿನ ಸುದ್ದಿ! ಕಲಿತವರ ಸಂಕ್ಯೆ ಹೆಚ್ಚಾಗುತ್ತಿರುವುದರಿಂದಲೋ ಏನೋ, ಹೆಚ್ಚು ಹೆಚ್ಚು ಹಿಂದಿಯೇತರರಿಗೆ ಹಿಂದೀ ದುರಬಿಮಾನಿಗಳ ಆಟದ ಅರಿವು ಮೂಡುತ್ತಿರುವುದರಿಂದಲೋ ಏನೋ, ಈಗೀಗ, ಹಿಂದೀ ಹೇರಿಕೆಗೆ ವಿರೋದ ದ್ರಾವಿಡರಿಂದ ಮಾತ್ರವಲ್ಲದೆ ಬೇರೆಯವರಿಂದಲೂ ವ್ಯಕ್ತವಾಗುತ್ತಿದೆ. ಈ ನೆಲೆ ಹೀಗೇ ಮುಂದುವರೆಯುತ್ತದೆ ಎಂದು ನಂಬೋಣ.
      ಇದೆಲ್ಲದರ ಅರ್‌ತ ಇಶ್ಟೇ. ಅದಿಕ್ರುತವಾಗಿ ಹಿಂದಿಯೊಂದನ್ನೇ ಸಂಪರ್‌ಕ ಬಾಶೆಯನ್ನಾಗಲೀ ರಾಶ್ಟ್ರಬಾಶೆಯನ್ನಾಗಲೀ ಮಾಡಲಾಗುವ ದಿನಗಳು ಹತ್ತಿರವಿಲ್ಲ. ಪಾಪ, ಹಿಂದೀ ದುರಬಿಮಾನಿಗಳು ಅದಕ್ಕಾಗಿ ಇನ್ನೂ ಹಲಹೊತ್ತು ತಾಳ್ಮೆಯಿಂದ ಕಾಯಬೇಕು. ಆದರೆ, ಅನದಿಕ್ರುತವಾಗಿ ಹಿಂದೀ ಹರಡುವುದು ಮಾತ್ರ ನಡೆಯುತ್ತಲೇ ಇದೆ. ಏಕೆಂದರೆ, ಹಿಂದಿಗೆ ವಿರೋದವಾಗಿ ಮುಂಬಾಗಿಲನ್ನೇನೋ ಮುಚ್ಚಿದ್ದೇವೆ. ಆದರೆ, ಹಿಂಬಾಗಿಲನ್ನು ತೆರೆದು ಬಿಟ್ಟಿದ್ದೇವೆ. ಹಿಂದಿಯ ತೂರಿಕೆಯನ್ನು ಮುಂಬಾಗಿಲಿನಲ್ಲಿ ತಡೆಯುವ ಹಾಗೇ ಹಿಂಬಾಗಿಲಿನಲ್ಲೂ ನಾವು ತಡೆಯಬೇಕು. ಇಲ್ಲದಿದ್ದರೆ, ಒಂದಲ್ಲ ಒಂದು ದಿನ ಹಿಂದೀ ಹೇಗೂ ಬಂದು ಕನ್ನಡದಂತಹ ಅಲ್ಲಲ್ಲಿನ ನೆಲದ ನುಡಿಗಳನ್ನು ಅಳಿಸಿಹಾಕುವುದು ಗ್ಯಾರಂಟಿ.
      ಅನದಿಕ್ರುತವಾಗಿ, ಅಂದರೆ ತಾನೇ ತಾನಾಗಿ, ಹಿಂದೀ ಬಾಶೆ ಒಂದು ಸ್ತಳೀಯ ಬಾಶೆಯನ್ನು ಹೇಗೆ ಬಗ್ಗುಬಡಿಯಬಲ್ಲುದು ಎಂಬುದಕ್ಕೆ ಒಂದು ಎತ್ತುಗೆಯನ್ನು ಕೊಡುತ್ತೇನೆ. ಮುಂಬಯಿ ನಗರವೇ ಆ ಎತ್ತುಗೆ. ಮುಂಬಯಿ ಮಹಾರಾಶ್ಟ್ರಕ್ಕೆ ಸೇರಿದ ಊರು. ಮಹಾರಾಶ್ಟ್ರದ ನೆಲದ ನುಡಿ ಮರಾಟಿ. ಆದರೆ, ಮುಂಬಯಿಯ ನೆಲದ ನುಡಿ ಮಾತ್ರ ಹಿಂದೀ! ಮುಂಬಯಿಯಲ್ಲಿ ಹಿಂದಿಯೇ ತಾಯ್ನುಡಿಯಾಗಿರುವವರ ಪ್ರಮಾಣ ನೂರಕ್ಕೆ ಇಪ್ಪತ್ತರಶ್ಟೂ ಇಲ್ಲ. ಆದರೂ, ಮುಂಬಯಿಯ ಬೀದಿ ಬೀದಿಗಳಲ್ಲಿ, ಮೂಲೆ ಮೂಲೆಗಳಲ್ಲಿ ಹಿಂದಿಯೋ ಹಿಂದಿ! ಅಲ್ಲಿ ಹಿಂದೀವಾಲರದೇ ಆಟ, ಹಿಂದಿಯದೇ ಬಾವುಟ! ಇದು ಹೇಗಾಯಿತು?
      ಅದಕ್ಕೆ ಉತ್ತರ ನಮ್ಮ ಬೆಂಗಳೂರಿನಲ್ಲೇ ಎದ್ದು ಕಾಣುತ್ತದೆ. ಇಲ್ಲೂ ಅಶ್ಟೆ, ಹಿಂದೀವಾಲರ ಸಂಕ್ಯೆ ಕಡಿಮೆ. ಆದರೆ, ಅವರ ವರ್‌ಚಸ್ಸು ಮಾತ್ರ ಊರಗಲ! ಎಲ್ಲೆಡೆ, ಎಲ್ಲರೊಡನೆ ಅವರು ಮಾತಾಡುವುದೇ ಹಿಂದಿಯಲ್ಲಿ! ಎಳ್ಳಶ್ಟೂ ಹಿಂಜರಿಯದೆ ಎಲ್ಲರ ಬಾಯಲ್ಲೂ ಹಿಂದಿಯನ್ನು ಹೊರಡಿಸುವ ಅವರ ಪೊಗರನ್ನು ಯಾರೇ ಆಗಲಿ ಮೆಚ್ಚಲೇ ಬೇಕು. ಅವರಿಗೆ ಸ್ತಳೀಯರ ಬಾವನೆಗಳು ಲೆಕ್ಕಕ್ಕೇ ಇಲ್ಲ! ಸ್ತಳೀಯರು ಕೆರಳಿಯಾರು ಎಂಬ ಹೆದರಿಕೆಯೇ ಇಲ್ಲ. ಅಶ್ಟಕ್ಕೂ ಅವರು ಯಾಕೆ ಹೆದರಬೇಕು? ಸ್ತಳೀಯರು ಕೆರಳುವುದೇ ಇಲ್ಲವಲ್ಲ? ಅವರ ಹಿಂದಿಗೆ ಪ್ರತಿಯಾಗಿ ಸ್ತಳೀಯರು ಕುರಿಗಳಂತೆ ಹಿಂದೀಯಲ್ಲೇ ಮಾರು ಕೊಡುತ್ತಾರೆ. ವಸ್ತುಸ್ತಿತಿ ಹೀಗಿರುವಾಗ ಅವರಿಗೇಕೆ ಅಂಜಿಕೆ? ಜೊತೆಗೆ, ಬೆಂಗಳೂರಿನಲ್ಲಿ ಮುಂಬಯಿಯಂತೆಯೇ ಸ್ತಳೀಯರ ಸಂಕ್ಯೆಯೇ ಕಡಿಮೆ. ಹೊರಗಿನವರ ಸಂಕ್ಯೆಯೇ ಹೆಚ್ಚು. ಇಂತಹ ನೆಲೆಯಲ್ಲಿ ಹಿಂದಿಗೆ ಯಾರಿಂದ ವಿರೋದ ಬರುತ್ತದೆ? ಬೆಂಗಳೂರು, ಹಿಂದಿಯ ಮಟ್ಟಿಗೆ ನೋಡುವುದಾದರೆ, ಮುಂಬಯಿಯ ಹಾದಿಯನ್ನು ಹಿಡಿದಿರುವುದರಲ್ಲಿ ಅನುಮಾನವಿಲ್ಲ. ಬವಿಶ್ಯದಲ್ಲಿ ಮುಂಬಯಿಯಂತೆ ಬೆಂಗಳೂರಿನ ಮೊದಲ ಬಾಶೆ ಕೂಡ ಹಿಂದಿಯೇ ಆದರೆ, ಬಳಿಕ ನಮ್ಮ ಉಳಿದ ದೊಡ್ಡ ಊರುಗಳಿಗೂ ಹಿಂದೀ ಕಾಯಿಲೆ ತಗುಲಿಕೊಂಡರೆ ಯಾರೂ ಅಚ್ಚರಿ ಪಡಬೇಕಾಗಿಲ್ಲ. ದೊಡ್ಡ ಊರುಗಳು ಹಿಂದೀಮಯವಾಗಿ ಸಣ್ಣ ಊರುಗಳಲ್ಲಿ ಮಾತ್ರ ಕನ್ನಡ ಉಳಿದರೆ ಕನ್ನಡ ಇದ್ದೂ ಸತ್ತಂತೆ ತಾನೆ?
      ಇದೇ ಬಗೆಯ ಹಿಂದಿಯ ಆಕ್ರಮಣ ನಮ್ಮ ನೆರೆಯ ತಮಿಳುನಾಡಿನಲ್ಲಿ ಆಗುವುದಿಲ್ಲ. ಅಲ್ಲಿ ಏನು ವಿಶೇಶ? ಅಲ್ಲಿ ಒಂದೇ ವಿಶೇಶ - ಬಹುಮಂದಿ ತಮಿಳರು ಹಿಂದಿಯನ್ನು ಕಲಿಯುವುದಕ್ಕೂ ಹೋಗುವುದಿಲ್ಲ, ಮಾತಾಡುವುದಕ್ಕೂ ಹೋಗುವುದಿಲ್ಲ. ಅದಕ್ಕೆ ಕಾರಣ ಅಲ್ಲಿ ದಶಕಗಳಿಂದಲೂ ನಡೆದುಕೊಂಡು ಬಂದಿರುವ ದ್ರಾವಿಡ ಚಳುವಳಿ. ತಮಿಳರಿಗೆ ತಾವು ದ್ರಾವಿಡರೆಂಬುದು ತಿಳಿದಿದೆ. ಕನ್ನಡಿಗರಿಗಾದರೋ ತಾವೂ ಕೂಡ ದ್ರಾವಿಡರು ಎಂಬುದು ಇನ್ನೂ ತಿಳಿದಿಲ್ಲ. ಈ ನನ್ನಿ ತಿಳಿಯಬೇಕು. ತಿಳಿದರೆ, ನಾವೂ ಕೂಡ ಹಿಂದೀ ಬಾಶಣಗಳನ್ನು ಕುರಿಗಳಂತೆ ಸುಮ್ಮನೆ ಕೇಳುವುದನ್ನು ನಿಲ್ಲಿಸಬಹುದು. ಹಿಂದೀವಾಲರಿಗೆ ’ನಮ್ಮ ನುಡಿಯಲ್ಲೇ ಮಾತಾಡಿ’ ಎಂದು ಒತ್ತಾಯಿಸಬಹುದು. ಕನ್ನಡ ವಿರೋದಿಯಾದ ತ್ರಿಬಾಶಾ ಸೂತ್ರದಿಂದ ಹೊರಬರಬಹುದು. ನಮ್ಮ ಮೆಟ್ರೋದಿಂದ ಹಿಂದಿಯನ್ನು ತೊಲಗಿಸಬಹುದು. ಒಟ್ಟಾರೆ, ಹಿಂದೀ ಪಿಡುಗನ್ನು ದೂರವಿಡಬಹುದು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಶುಕ್ರವಾರ, ಜೂನ್ 13, 2014

ಎಲ್ಲಕ್ಕೂ ಮೊದಲು ಇರಬೇಕು ’ಇದು ನಮ್ಮ ನುಡಿ’ ಎಂಬ ಕೆಚ್ಚು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕನ್ನಡಿಗ ರಾಜಕಾರಣಿಗಳಿಗೆ ತಮ್ಮ ತಾಯ್ನುಡಿಯ ಬಗ್ಗೆ ಅಬಿಮಾನ ಕಡಿಮೆ ಎಂಬ ಸಾಮಾನ್ಯ ನಂಬಿಕೆ ಜನಮನದಲ್ಲಿ ಮನೆಮಾಡಿದೆ. ಈ ನಂಬಿಕೆ ಸಂಪೂರ‍್ಣ ಸರಿ ಅಲ್ಲ ಎನ್ನುವ ಹಾಗೆ ಈ ನಡುವೆ ನಮ್ಮ ಪ್ರತಿನಿದಿಗಳು ನಡೆದುಕೊಂಡು ನಮ್ಮನ್ನು ಅಚ್ಚರಿ ಬೀಳಿಸಿದ್ದಾರೆ!
      ಇತ್ತೀಚೆಗೆ ಸುಪ್ರೀಮ್ ಕೋರ್ಟ್ ಕನ್ನಡ ಮಾದ್ಯಮವನ್ನು ಕಡ್ಡಾಯಗೊಳಿಸುವ ವಿರುದ್ದ ತೀರ್‌ಪು ಕೊಟ್ಟಾಗ ಎಣಿಸಿದಂತೆಯೇ ಕನ್ನಡದೊಲವಿಗಳಿಂದ ಕೂಗಾಟ ಮತ್ತು ಹೋರಾಟದ ಮಾತುಗಳು ಕೇಳಿಬಂದವು. ಮಯ್ಸೂರಿನಲ್ಲಿ ಕೆಲ ಸಾಹಿತಿಗಳು ಒಟ್ಟಿಗೆ ಸೇರಿ, ಕನ್ನಡಕ್ಕಾಗಿ ಗೋಕಾಕ್ ಮಾದರಿಯ ಚಳುವಳಿಯನ್ನು ಕಯ್ಗೆತ್ತಿಕೊಳ್ಳುವುದಾಗಿ ಹೇಳಿಕೆ ಕೊಟ್ಟರು. ತೀರ‍್ಪಿನಿಂದ ಸಿಡಿಮಿಡಿಗೊಂಡ ಸರ‍್ಕಾರ ಕೂಡ ನಾಡಿನಲ್ಲಿ ಕನ್ನಡವನ್ನು ಕಾಪಾಡುವ ನಿಟ್ಟಿನಲ್ಲಿ ತಾನು ಏನೇನು ಮಾಡಲಿದೆ ಎಂಬುದರ ಬಗ್ಗೆ ಒಂದು ಪಟ್ಟಿಯನ್ನೇ ಮಾಡಿ ಗೋಶಿಸಿತು. ಆದರೆ, ಜನಸಾಮಾನ್ಯರು ಮಾತ್ರ, ’ಇಶ್ಟೆಲ್ಲಾ ಹಾರಾಟ ಕೆಲಕಾಲ ಮಾತ್ರ. ಸ್ವಲ್ಪ ದಿನ ಕಳೆದರೆ ಎಲ್ಲರೂ ಮಾಮೂಲಿನಂತೆ ತೆಪ್ಪಗಾಗುತ್ತಾರೆ’ಎಂದುಕೊಂಡರು. ಮೊದಮೊದಲು ಜನಗಳು ಅಂದುಕೊಂಡದ್ದೇ ನಿಜವಾಗುವ ಹಾಗೆ ಕಂಡಿತು. ಆದರೆ, ಮೊನ್ನೆಮೊನ್ನೆ ಜನರ ಅನಿಸಿಕೆಯನ್ನು ಸುಳ್ಳು ಮಾಡುವಂತಹ ಕೆಲ ಸಂಗತಿಗಳು ನಡೆದಿವೆ.
      ಗೋಕಾಕ್ ಮಟ್ಟದ ಹೋರಾಟದ ಪಣತೊಟ್ಟ ಸಾಹಿತಿಗಳ ಹಿಂಡು ಎತ್ತ ಪೋದುದೋ ತಿಳಿಯಲಿಲ್ಲ. ಆದರೆ, ನಾಡಿನ ಮುಕ್ಯಮಂತ್ರಿಗಳು ಹಾಗೂ ಹೊಸದಾಗಿ ಆಯ್ಕೆಗೊಂಡ ಸಂಸದರಲ್ಲಿ ಬಹುಮಂದಿ ಮಾತ್ರ ಕನ್ನಡದ ಅಬಿಮಾನ ಮೆರೆವಂತಹ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಮಾನ್ಯ ಮುಕ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪ್ರದಾನಮಂತ್ರಿ ಮೋದಿಯವರನ್ನು ಬೇಟಿ ಮಾಡಿ, ಸುಪ್ರೀಮ್ ಕೋರ‍್ಟಿನ ತೀರ‍್ಪಿನ ಬಗ್ಗೆ ವಿವರಿಸಿ, ತಾಯ್ನುಡಿಯನ್ನು ಕಲಿಕೆಯ ಮಾದ್ಯಮ ಮಾಡುವುದರ ಬಗ್ಗೆ ಸಂಸತ್ತಿನಲ್ಲಿ ಚರ‍್ಚೆ ನಡೆಸುವುದಕ್ಕೆ ನೆರವಾಗಬೇಕು ಎಂದು ಕೇಳಿಕೊಂಡಿದ್ದಾರೆ. ತಾವು ಈ ವಿಶಯದಲ್ಲಿ ಹಲವಾರು ರಾಜ್ಯಗಳ ಮುಕ್ಯಮಂತ್ರಿಗಳಿಗೆ ಕಾಗದವನ್ನೂ ಬರೆದಿರುವುದಾಗಿ ತಿಳಿಸಿದ್ದಾರೆ. ಕನ್ನಡವನ್ನು ಕಾಯುವ ಅವರ ಈ ಕಾಯಕ ಅಡೆತಡೆಯಿಲ್ಲದೇ ಮುಂದುವರೆಯಲಿ ಎಂದು ಹಾರಯ್ಸೋಣ.
      ಇನ್ನು ನಮ್ಮ ಸಂಸದರು ಕೂಡ ಪಕ್ಶಾತೀತವಾಗಿ ಸಂಸತ್ತಿನ ಪ್ರಮಾಣವಚನವನ್ನು ಕನ್ನಡದಲ್ಲೇ ತೆಗೆದುಕೊಂಡಿದ್ದಾರೆ. ಕೇಂದ್ರಮಂತ್ರಿಮಂಡಲದ ಪ್ರಮಾಣವಚನವನ್ನು ಹಿಂದಿಯಲ್ಲಿ ತೆಗೆದುಕೊಂಡು ಮೊದಲು ಕನ್ನಡಿಗರಿಗೆ ಕಸಿವಿಸಿಯುಂಟುಮಾಡಿದ್ದ ಅನಂತಕುಮಾರರು ಕೂಡ ಬಳಿಕ ಸಂಸದ ಪ್ರಮಾಣವಚನವನ್ನಾದರೂ ಕನ್ನಡದಲ್ಲಿ ತೆಗೆದುಕೊಂಡು ನಾವೆಲ್ಲ ಸಮಾದಾನದ ನಿಟ್ಟುಸಿರನ್ನು ಬಿಡುವಂತೆ ಮಾಡಿದ್ದಾರೆ. ಆದರೆ, ಎಲ್ಲಾ ಕನ್ನಡಿಗ ಸಂಸದರೂ ಕನ್ನಡದಲ್ಲೇ ಪ್ರಮಾಣವಚನ ತೆಗೆದುಕೊಂಡಿಲ್ಲ. ಒಬ್ಬರು ಪಾಪ ಸಂಸ್ಕ್ರುತದಲ್ಲಿ ತೆಗೆದುಕೊಂಡರಂತೆ! ಏನು ಹೇಳುವುದು ಇದಕ್ಕೆ? ಕನ್ನಡಕ್ಕೆ ಹೊಡೆತ ಬಿದ್ದಿರುವ ಈ ದಿನಗಳಲ್ಲಿ, ಉಳಿದೆಲ್ಲ ಕನ್ನಡಿಗ ಸಂಸದರು ಒಗ್ಗಟ್ಟಿನಿಂದ ಕನ್ನಡವನ್ನು ಎತ್ತಿಹಿಡಿಯಲು ಪ್ರಯತ್ನಿಸುತ್ತಿದ್ದ ಸಂದರ‍್ಬದಲ್ಲಿ, ಈ ಒಬ್ಬರಿಗೆ ಕನ್ನಡ ಬಿಟ್ಟು ಸಂಸ್ಕ್ರುತದಲ್ಲಿ ಪ್ರಮಾಣವಚನ ತೆಗೆದುಕೊಳ್ಳುವ ಬಯಕೆ ಏಕೆ ಬಂತೋ?
      ನಮ್ಮ ಬಹುತೇಕ ಸಂಸದರು ಹೀಗೆ ಕನ್ನಡತನವನ್ನು ಮೆರೆದಿರುವುದು ಉದ್ದೇಶಪೂರ‍್ವಕವಾಗಿರಬಹುದು. ಸುಪ್ರೀಮ್ ಕೋರ‍್ಟಿನ ತೀರ‍್ಪಿನ ಬಗ್ಗೆ ಚರ‍್ಚೆ ನಡೆಸಲು ಸಂಸತ್ತಿನ ವಾತಾವರಣವನ್ನು ಮುನ್ನಣಿಗೊಳಿಸುವ ಸಲುವಾಗಿ ಅವರು ಈ ರೀತಿ ಮಾಡಿರಬಹುದು. ಯಾವ ಕಾರಣಕ್ಕಾದರೂ ಮಾಡಿರಲಿ, ಕನ್ನಡತನದ ಇಂತಹ ಪ್ರದರ‍್ಶನವನ್ನು ನಮ್ಮ ಸಂಸದರು ಹೀಗೇ ಮುಂದುವರೆಸಿಕೊಂಡು ಹೋಗಬೇಕು. ಏಕೆಂದರೆ, ಬೀಜೇಪಿ ಪಕ್ಶ ಈಗ ಪೂರ‍್ಣ ಅದಿಕಾರಕ್ಕೆ ಬಂದಿರುವುದರಿಂದ, ಕನ್ನಡದಂತಹ ಹಿಂದಿಯೇತರ ಸ್ತಳೀಯ ನುಡಿಗಳನ್ನು ಚಚ್ಚರದಿಂದ ಎತ್ತಿಹಿಡಿಯುವ ಅವಶ್ಯಕತೆ ಇಂದು ಎಂದಿಗಿಂತಲೂ ಹೆಚ್ಚು ಉಂಟಾಗಿದೆ. ಉತ್ತರದ ಬೀಜೇಪಿ ಪಕ್ಶದವರು ಎಲ್ಲೆಡೆಯಲ್ಲೂ ಎಲ್ಲ ಸಂದರ‍್ಬಗಳಲ್ಲೂ ಹಿಂದೀಯಲ್ಲೇ ಮಾತಾಡುವುದಕ್ಕೆ ಶುರು ಮಾಡಿದ್ದಾರೆ. ಅವರ ಮುಂದಾಳುಗಳು ಆಂಗ್ಲ ಚಾನೆಲ್ಲುಗಳಿಗೆ ಬರುತ್ತಾರೆ, ಆದರೆ, ಇಂಗ್ಲೀಶ್ ಚೆನ್ನಾಗಿ ಬಂದರೂ, ಹಿಂದೀಯಲ್ಲೇ ರಾಜಾರೋಶವಾಗಿ ಮಾತಾಡುತ್ತಾರೆ. ಕೋಟ್ಯಂತರ ಬಾರತೀಯರಿಗೆ ಹಿಂದಿ ತಿಳಿಯದು ಎಂಬ ಪರಿವೆಯಾಗಲೀ ಕಾಳಜಿಯಾಗಲೀ ಅವರಿಗಿಲ್ಲ. ಹೀಗೆ ನಡೆದುಕೊಳ್ಳುವುದೂ ಕೂಡ ಒಂದು ರೀತಿಯಲ್ಲಿ ಹಿಂದೀ ಹೇರಿಕೆಯೇ ತಾನೆ?
      ಇಂತಹವರಿಗೆ ಪ್ರತ್ಯುತ್ತರವಾಗಿ ನಮ್ಮ ದಕ್ಶಿಣದ ಮುಂದಾಳುಗಳು ಕೂಡ ಎಲ್ಲಿ ಅಂದರಲ್ಲಿ ನಮ್ಮ ದ್ರಾವಿಡ ನುಡಿಗಳನ್ನೇ ಆಡಿ ತೋರಿಸಬೇಕು. ಆದರೆ, ಅಂತಹ ಗಂಡು ಇರುವ ಮುಂದಾಳುಗಳು ನಮ್ಮಲ್ಲಿದ್ದಾರೆಯೆ? ಹಿಂದೆ ಇದ್ದರು. ಎಪ್ಪತ್ತರ ದಶಕದಲ್ಲಿ ಒಮ್ಮೆ ದಿಲ್ಲಿಯ ಒಂದು ಸಮಾರಂಬದಲ್ಲಿ, ವೇದಿಕೆಯ ಮೇಲಿದ್ದವರು ಬರೀ ಹಿಂದಿಯಲ್ಲಿ ಬಾಶಣ ಮಾಡಿದರು. ಅದಕ್ಕೆ ಪ್ರತ್ಯುತ್ತರವಾಗಿ, ವೇದಿಕೆಯ ಮೇಲಿದ್ದ ನಮ್ಮ ಸಹದ್ರಾವಿಡರಾದ ತೆಲುಗಿನ ನೀಲಮ್ ಸಂಜೀವ ರೆಡ್ಡಿಯವರು, ತಮ್ಮ ಸರದಿ ಬಂದಾಗ ಮೊದಲೆರಡು ನಿಮಿಶ ತೆಲುಗಿನಲ್ಲಿ ಬಾಶಣ ಮಾಡಿ, ಹಿಂದೀವಾಲರಿಗೆ ಪೆಚ್ಚಾಗುವಂತೆ ಮಾಡಿ, ಬಳಿಕ ಇಂಗ್ಲೀಶಿನಲ್ಲಿ ಬಾಶಣವನ್ನು ಮುಂದುವರೆಸಿದರು. ಇಂತಹ ಗಂಡು ನಮ್ಮ ಈಗಿನ ತೆಂಕಣದ ಮುಂದಾಳುಗಳಿಗೆ ಇದೆಯೆ?
      ಕನ್ನಡವನ್ನು ಉಳಿಸುವ ಸಲುವಾಗಿ ನಾವು ಹಲವಾರು ಕಟ್ಟಳೆಗಳನ್ನು ತರಬಹುದು. ಸಂವಿದಾನವನ್ನೂ ತಿದ್ದಬಹುದು. ಆದರೆ, ಕನ್ನಡಿಗರಲ್ಲಿ ಕನ್ನಡದ ಅಬಿಮಾನವೇ ಇಲ್ಲದಿದ್ದರೆ ಕಟ್ಟಳೆಗಳಿಂದ ಏನು ಪ್ರಯೋಜನ? ವಲಸಿಗರ ಮಕ್ಕಳಿಗೆ ನಾವು ಕಟ್ಟಳೆ ಜಾರಿಗೊಳಿಸಿ ಕಡ್ಡಾಯವಾಗಿ ಶಾಲೆಯಲ್ಲಿ ಕನ್ನಡವನ್ನು ಕಲಿಸಬಹುದು. ಆದರೆ, ಅವರು ಕನ್ನಡವನ್ನು ಮಾತಾಡುವಂತೆಯೂ ಮಾಡಲು ಕಟ್ಟಳೆಯನ್ನು ಜಾರಿಗೊಳಿಸಲು ಬರುವುದೇ? ಇಂದು ಎಶ್ಟೊಂದು ಮಂದಿ ಹುಟ್ಟು ಕನ್ನಡಿಗರೇ ಕನ್ನಡ ಬಿಟ್ಟು ಇಂಗ್ಲೀಶಿನಲ್ಲಿ ಮಾತಾಡುತ್ತಿದ್ದಾರೆ. ಇಂತಹವರನ್ನೆಲ್ಲಾ ಕನ್ನಡದಲ್ಲಿ ಮಾತಾಡುವಂತೆ ಮಾಡಲು ಕಟ್ಟಳೆ ಮಾಡಲಾದೀತೆ? ಎಲ್ಲಕ್ಕೂ ಮೊದಲು ನಮ್ಮಲ್ಲಿ ಸ್ವಾಬಿಮಾನವಿರಬೇಕು. ಎಲ್ಲೆಡೆಯಲ್ಲೂ ನಾವು ನಮ್ಮ ನುಡಿಯನ್ನು ಆಡಬೇಕು ಮತ್ತು ವಲಸಿಗರ ಬಾಯಲ್ಲಿ ಆಡಿಸಬೇಕು. ಹಾಗೆ ಮಾಡಿದರೆ ಕನ್ನಡ ಉಳಿದೀತೇ ಹೊರತು, ಅದನ್ನು ಬಿಟ್ಟು ಬರೀ ಒಂದರ ಮೇಲೊಂದು ಕಟ್ಟಳೆಗಳನ್ನು ಹೊಸೆದರೆ ಏನೂ ಬಾಳ್ತೆಯಿಲ್ಲ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಶುಕ್ರವಾರ, ಮೇ 16, 2014

ಕಡ್ಡಾಯ ಕನ್ನಡ ಮಾದ್ಯಮ ಸರಿಯೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ತಮ್ಮ ಮಕ್ಕಳು ಯಾವ ಮಾದ್ಯಮದಲ್ಲಿ ಕಲಿಯುತ್ತಾರೆ ಎಂಬುದು ತಾಯ್ತಂದೆಯರ ನಿರ‍್ದಾರವಲ್ಲದೆ ಮತ್ತಿನ್ನಾರದ್ದು?
      ಹೀಗೆ ಏಕೆ ಕೇಳುತ್ತಿದ್ದೇನೆ ಎಂದರೆ, ಇತ್ತೀಚೆಗೆ ಸುಪ್ರೀಮ್ ಕೋರ‍್ಟ್, ’ಕಲಿಕೆಯ ಒಯ್ಯುಗೆ ಯಾವುದೆಂಬುದು ತಾಯ್ತಂದೆಯರ ನಿರ‍್ದಾರವಲ್ಲದೆ ಸರ‍್ಕಾರದ್ದಲ್ಲ’ ಎಂದು ಕಡ್ಡಿ ಮುರಿದಂತೆ ತೀರ‍್ಪು ಕೊಟ್ಟಿದೆ, ಹಲವರು ’ಈ ತೀರ‍್ಪು ಸರಿ ಅಲ್ಲ’ ಎಂದು ಎದಿರೊಡ್ಡಿಕೆಯ ಬೊಬ್ಬೆಗಳನ್ನು ಹಾಕುತ್ತಿದ್ದಾರೆ, ಅದಕ್ಕೆ.
      ಕನ್ನಡವನ್ನು ಉಳಿಸುವ ಉದ್ದೇಶವನ್ನು ಒಳಗಿಟ್ಟುಕೊಂಡು, ಅದನ್ನು ಆಗಮಾಡಿಸುವುದಕ್ಕಾಗಿ, ಹೊರಗೆ, ’ತಾಯ್ನುಡಿಯಲ್ಲೇ ಮಕ್ಕಳ ಮೊದಲ ಕಲಿಕೆ ನಡೆಯಬೇಕು. ಇದು ಶಿಕ್ಶಣ ತಜ್ನರ ಒಮ್ಮತ ’ ಎಂಬ ಜಾಣವಾದವನ್ನು ಮುಂದಿಡುತ್ತಾ ಬಂದಿದ್ದ ಕರ‍್ನಾಟಕ ಸರ‍್ಕಾರದ ಹೂಟವನ್ನು ಸುಪ್ರೀಮ್ ಕೋರ‍್ಟ್ ಗಟ್ಟಿ ತೀರ‍್ಪಿನಿಂದ ಹೊಡೆದು ಹಾಕಿದೆ. ಸುಪ್ರೀಮ್ ಕೋರ‍್ಟಿನ ಈ ತೀರ‍್ಮಾನ ಸರಿಯೆ? ಇದು ಪ್ರಶ್ನೆ.
      ನನ್ನ ಅಬಿಪ್ರಾಯದಲ್ಲಿ, ಸರಿ. ಕಲಿಕೆಯ ಒಯ್ಯುಗೆ ಒಂದೇ ಅಲ್ಲ, ಮಕ್ಕಳು ಯಾವ ಹೆಸರನ್ನು ಹೊತ್ತು ಬದುಕುತ್ತಾರೆ, ಯಾವ ಮಾತನ್ನು ಆಡುತ್ತಾರೆ, ಯಾವ ಬಗೆಯ ನಡವಳಿಕೆಯನ್ನು ಬೆಳೆಸಿಕೊಳ್ಳುತ್ತಾರೆ, ಯಾವ ಮಕ್ಕಳೊಂದಿಗೆ ಬೆರೆಯುತ್ತಾರೆ, ಯಾವ ದರ‍್ಮವನ್ನು ನೆಚ್ಚಿಕೊಳ್ಳುತ್ತಾರೆ ಎಂಬವನ್ನೆಲ್ಲಾ ಅವರ ತಾಯ್ತಂದೆಯರೇ ನಿರ‍್ದರಿಸುತ್ತಾರೆ. ಇದು ಸ್ರುಶ್ಟಿಯ ನಿಯಮ. ಇಂತಹ ವಿಶಯಗಳಲ್ಲಿ ಸರ‍್ಕಾರವಾಗಲೀ ಬೇರಾರೇ ಆಗಲಿ, ತಲೆಹಾಕುವುದನ್ನು ಬೂಮಿಯ ಮೇಲಿನ ಹೆಚ್ಚೆಣಿಕೆಯ ತಂದೆ ತಾಯಿಗಳು ಒಪ್ಪುವುದಿಲ್ಲ. ಮೂಡನಂಬಿಕೆಯಲ್ಲಿ ಸಿಲುಕಿದ ಕೆಲ ತಾಯ್ತಂದೆಯರು ಹರಕೆ ತೀರಿಸುವುದೇ ಮುಂತಾದ ಕಾರಣಗಳಿಗಾಗಿ ತಮ್ಮ ಮಕ್ಕಳ ತಲೆಯ ಮೇಲೆ ತೆಂಗಿನಕಾಯಿ ಒಡೆಸುವುದೂ, ಮಕ್ಕಳ ಬೆನ್ನಿಗೆ ಕೊಕ್ಕೆ ಚುಚ್ಚಿಸಿ ಗಾಳಿಯಲ್ಲಿ ’ಸಿಡಿ’ ಆಡಿಸುವುದೂ ಮುಂತಾದ, ಮಕ್ಕಳ ಒಳಿತಿಗೆ ನಿಜಕ್ಕೂ ಕೆಡುಕನ್ನು ಉಂಟುಮಾಡುವಂತಹ ಆಚರಣೆಗಳನ್ನು ನಡೆಸುತ್ತಾರೆ. ಇಂತಹ ವಿಶಯಗಳಲ್ಲಿ ಮಾತ್ರ ಅಡ್ಡಬರುವುದಕ್ಕೆ ಸರ‍್ಕಾರಕ್ಕೆ ಇಲ್ಲವೆ ಸಮಾಜಕ್ಕೆ ಅದಿಕಾರವಿದೆಯೇ ಹೊರತು, ಕಲಿಕೆಯ ಮಾದ್ಯಮದಂತಹ ವಿಶಯಗಳಲ್ಲಿ ಅಲ್ಲ.
      ’ನಮ್ಮ ನಾಡಿನಲ್ಲಿ ನಮ್ಮ ಅಸ್ಮಿತೆ ಉಳಿಯಬೇಕೆಂದರೆ ನಮ್ಮ ನುಡಿ ಉಳಿಯಬೇಕು. ನಮ್ಮ ನುಡಿ ಉಳಿಯಬೇಕೆಂದರೆ ಕನ್ನಡ ಮಾದ್ಯಮದಲ್ಲೇ ಕಲಿಕೆ ಆಗಬೇಕು’, ಎಂದು ನೇರವಾಗೇ ಅಸ್ಮಿತೆಯ ಚವುಕಟ್ಟಿನಲ್ಲಿ ವಾದ ಮಾಡಿದ್ದರೆ ನಮ್ಮ ಸರ‍್ಕಾರಕ್ಕೆ ಕೋರ‍್ಟಿನಲ್ಲಿ ಸೋಲುಂಟಾಗುತ್ತಿರಲಿಲ್ಲ ಎಂದು ಈಗ ಕೆಲವರು ಎತ್ತಿ ಆಡುತ್ತಿದ್ದಾರೆ. ಈ ವಾದವೂ ತಾಯ್ತಂದೆಯರ ಸಹಜ ಹಕ್ಕಿಗೆ ದಕ್ಕೆ ತರುತ್ತಿದ್ದರಿಂದ, ಇದನ್ನೂ ಕೂಡ ಕೋರ‍್ಟು ಸಂವಿದಾನದಲ್ಲಿ ಕೊಡಮಾಡಿರುವ ಹಕ್ಕುಗಳನ್ನು ಹೆಸರಿಸಿ ಸುಲಬವಾಗೇ ತಳ್ಳಿ ಹಾಕುತ್ತಿತ್ತು.
      ನಿಜಕ್ಕೂ, ಕನ್ನಡವನ್ನು ಕಲಿಕೆಯ ಮಾದ್ಯಮವಾಗಿ ಹೇರುವ ಅದಿಕಾರ ಸರ‍್ಕಾರಕ್ಕೆ ಬರಬೇಕೆಂದರೆ, ಅದಕ್ಕೆ ಇರುವ ದಾರಿ ಒಂದೇ - ಸಂವಿದಾನವನ್ನು ತಿದ್ದುವುದು. ಆದರೆ, ಇದು ಹಗುರಾಗಿ ಆಗುವಂತಹುದಲ್ಲ. ಸಂವಿದಾನದ ತಿದ್ದುಪಡಿಗೆ ಇಡೀ ದೇಶದ ಹೆಚ್ಚೆಣಿಕೆಯ ಶಾಸಕರ ಒಪ್ಪಿಗೆ ಬೇಕೇ ಬೇಕು. ಆದರೂ, ಹೆಚ್ಚು ಸಮಯ ತೆಗೆದುಕೊಂಡರೂ, ಈ ತಿದ್ದುಪಡಿಯನ್ನು ಆಗಿಸುವುದಕ್ಕೆ ಸರ‍್ಕಾರ ದುಡಿಯಬೇಕೇ ಹೊರತು, ’ಮರುಪರಿಶೀಲನೆ ಮಾಡಿಸುತ್ತೇವೆ’ ಎಂದು ಮತ್ತೆ ಹಳೇ ವಾದವನ್ನೇ ಕೋರ‍್ಟಿನ ಮುಂದಿಟ್ಟು ಹೊತ್ತುಹಾಳುಮಾಡುವುದಲ್ಲ.
      ಅಶ್ಟಕ್ಕೂ, ಕನ್ನಡವನ್ನು ಕಲಿಕೆಯ ಮಾದ್ಯಮವಾಗಿ ಕಡ್ಡಾಯ ಮಾಡುವುದು ಸರ‍್ಕಾರಕ್ಕೆ ಎಂದೂ ಸಾದ್ಯವಾಗದೇ ಇರಬಹುದು. ಇಂದು ಹಳ್ಳಿಹಳ್ಳಿಗಳಲ್ಲಿ, ಕೊಂಪೆಕೊಂಪೆಗಳಲ್ಲಿ, ಮಕ್ಕಳ ತಂದೆತಾಯಿಗಳಿಗೆ ಬೇಕಾಗಿರುವುದು ಒಂದೇ - ತಮ್ಮ ಮಕ್ಕಳು ಆಂಗ್ಲ ಮಾದ್ಯಮದಲ್ಲಿ ಓದಬೇಕು ಎನ್ನುವುದು. ಅದಕ್ಕಾಗಿ ಸಾಲ ಮಾಡಿಯಾದರೂ ಮಕ್ಕಳನ್ನು ಆಂಗ್ಲ ಮಾದ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ನನ್ನಿನೆಲೆ ಇಂತಿರುವಾಗ, ಯಾವ ಸರ‍್ಕಾರಕ್ಕೆ ತಾನೆ ಇಂಗ್ಲೀಶಿನ ಮೇಲೆಡೆಗೆ ಕನ್ನಡವನ್ನು ತಂದಿಡಲು ಸಾದ್ಯವಾಗುತ್ತದೆ? ದೇಶದ ಸಂವಿದಾನದ ತಿದ್ದುಪಡಿ ಹಾಗಿರಲಿ, ಹೇಗೋ ಏನೋ ಕರ‍್ನಾಟಕ ರಾಜ್ಯ ಒಂದು ಸ್ವತಂತ್ರ ದೇಶವೇ ಆಯ್ತು ಎಂದುಕೊಳ್ಳೋಣ. ಆಗಲಾದರೂ ಸರ‍್ಕಾರಕ್ಕೆ ಕನ್ನಡ ಮಾದ್ಯಮವನ್ನು ಕಡ್ಡಾಯ ಮಾಡುವುದು ಸಾದ್ಯವಾಗುತ್ತದೆಯೆ? ಹಾಗೇನೇದರೂ ಸರ‍್ಕಾರ ಮಾಡಲು ಮುಂದಾದರೆ, ಕನ್ನಡಿಗ ತಂದೆತಾಯಿಗಳೇ ಬೀದಿಗಿಳಿದು ಎದಿರೊಡ್ಡಿಯಾರು! ಇಂದು ಇಂಗ್ಲೀಶಿನ ಸೆಳೆತ ಆ ಮಟ್ಟಕ್ಕಿದೆ.
      ಕನ್ನಡವನ್ನು ಉಳಿಸಬೇಕೆಂದಿದ್ದರೆ, ಸರ‍್ಕಾರ ಕೂಡಲೆ ಮಾಡಬೇಕಾಗಿರುವುದು ಈ ಮುಂತಾದವು - ’ಗಣಿತ ಮುಂತಾದ ವಿಶಯಗಳಿಗೆ ಎಶ್ಟರ ಮಟ್ಟಿನ ಒತ್ತು ಇದೆಯೋ ಅಶ್ಟೇ ಒತ್ತು ಕೊಟ್ಟು ಕನ್ನಡ ನುಡಿಯನ್ನೊಂದು ಕಡ್ಡಾಯ ವಿಶಯವಾಗಿ ಮಾಡಿ ನಾಡಿನ ಎಲ್ಲಾ ಶಾಲೆಗಳಲ್ಲಿ ಅದನ್ನು ಕಲಿಸುವಂತೆ ಆದೇಶ ಹೊರಡಿಸುವುದು (ಕೇರಳದಲ್ಲಿ ಇಂತಹ ಕಟ್ಟಳೆ ಜಾರಿಯಲ್ಲಿದೆ). ನಾಡಿನ ಅಂಗಡಿಗಳು, ಕಾಸಗಿ ಕಚೇರಿಗಳು, ಆಸ್ಪತ್ರೆಗಳು ಮುಂತಾದ ಎಲ್ಲಾ ಸಾರ‍್ವಜನಿಕ ವ್ಯವಹಾರದ ಎಡೆಗಳಲ್ಲಿ ಕನ್ನಡ ಬಯಸುವವರಿಗೆ ಕನ್ನಡದಲ್ಲೇ ವ್ಯವಹರಿಸುವ ಸವುಲಬ್ಯವನ್ನು ಕಡ್ಡಾಯಗೊಳಿಸುವುದು. ಸರ‍್ಕಾರಿ ವ್ಯವಹಾರ ಇಡಿಯಾಗಿ ಕನ್ನಡದಲ್ಲೇ ನಡೆವಂತೆ ಮಾಡುವುದು. ತ್ರಿಬಾಶಾ ಸೂತ್ರದಿಂದ ಹೊರಗೆ ಬರುವುದು. ಹೆಚ್ಚೆಡೆಗಳಲ್ಲಿ ಕನ್ನಡಿಗರಿಗೇ ಉದ್ಯೋಗ ಮೀಸಲಾಗಿರಿಸುವುದು (ಸರೋಜಿನಿ ಮಹಿಶಿ ವರದಿಯ ಅನುಶ್ಟಾನ)’.
      ಮೇಲಿನಂತಹ ನಡೆಗಳಿಂದ ಕನ್ನಡದ ಕಲಿಕೆ ಮತ್ತು ಬಳಕೆಯನ್ನು ಹೆಚ್ಚಿಸಬಹುದು. ಆದರೆ, ಇಲ್ಲೂ ಒಂದು ಕೇಳ್ವಿಯನ್ನು ಕೇಳಬೇಕಾಗುತ್ತದೆ. ಕನ್ನಡವನ್ನು ಕಲಿತ ಮಾತ್ರಕ್ಕೆ ಕನ್ನಡಿಗರಲ್ಲದವರು ನಿಜವಾದ ಕನ್ನಡಿಗರಾಗಿಬಿಡುತ್ತಾರೆಯೆ? ಕನ್ನಡ ಬಂದೊಡನೆ ಹೊರಗಿನವರಿಗೆ ಹುಟ್ಟುಕನ್ನಡಿಗರಿಗಿರುವಶ್ಟು ಕನ್ನಡ ನೆಲದ ಹಾಗೂ ನುಡಿಯ ಒಲವು ಬಂದುಬಿಡುತ್ತದೆಯೆ? ಒಟ್ಟಾರೆ ನಮ್ಮ ಹಾಗೇ ಕಾಣುವ, ನಮ್ಮ ನುಡಿಯಂತಹ ನುಡಿಗಳನ್ನೇ ಆಡುವ, ದ್ರಾವಿಡ ಹಿನ್ನೆಲೆಯ ತೆಂಕಣ ಬಾರತದ ಮಂದಿಯಲ್ಲಿ ನಮ್ಮ ನೆಲದ ಮೇಲೆ ನಮಗಿರುವಶ್ಟೇ ಒಲವು ಮೂಡಬಹುದು. ಆದರೆ, ಇದೇ ಮಾತನ್ನು ’ತೆಂಕಣಿಗರು ಕೀಳು’ ಎಂಬ ನಂಬಿಕೆಯನ್ನು ರೂಡಿಸಿಕೊಂಡಿರುವ ಬೇರೆ ಪ್ರದೇಶಗಳ ಮಂದಿಯ ಬಗ್ಗೆ ಹೇಳಲು ಬರುತ್ತದೆಯೆ?
      ಎಶ್ಟೋ ಹೊರಗಿನ ಮಂದಿ ಇಂದು ಯಾವಯಾವುದೋ ಕಾರಣಕ್ಕಾಗಿ ಕನ್ನಡದಲ್ಲಿ ಮಾತಾಡುವುದನ್ನು ಕಲಿತಿದ್ದಾರೆ. ಆದರೆ, ಅವರಲ್ಲಿ ಬಹುಮಂದಿಗೆ ಕನ್ನಡದೊಂದಿಗೆ ಗುರುತಿಸಿಕೊಳ್ಳುವ ಒಲವು ಇಲ್ಲ. ಇದೊಂದು ಕಡುನನ್ನಿ. ಆದ್ದರಿಂದ, ಹೊರಗಿನಿಂದ ನಮ್ಮ ನಾಡೊಳಗೆ ಬಂದು ಸೇರುತ್ತಿರುವ ವಲಸಿಗರ ಪ್ರಮಾಣದ ಮೇಲೆ ನಮಗೆ ಹಿಡಿತ ಇಲ್ಲದಿದ್ದರೆ, ಅದರಿಂದಲೂ ನಮ್ಮ ಅಸ್ಮಿತೆಗೆ ಕುಂದು ಬರುತ್ತದೆ. ಈ ನಿಟ್ಟಿನಲ್ಲೂ ಸಂವಿದಾನದ ತಿದ್ದುಪಡಿ ಆಗಬೇಕು. ಇದರ ಅರ‍್ತ, ಈ ದೇಶದ ಎಲ್ಲ ರಾಜ್ಯಗಳಿಗೂ ಹೆಚ್ಚುಕಡಿಮೆ ಸ್ವತಂತ್ರ ದೇಶಗಳಿಗೆ ಇರುವಶ್ಟೇ ಅದಿಕಾರವಿರಬೇಕು (true federalism). ಈ ಬಗೆಯ ಸ್ವಾತಂತ್ರ್ಯ ರಾಜ್ಯಗಳಿಗೆ ದೊರಕುವುದು ನ್ಯಾಯವೇ. ಏಕೆಂದರೆ, ವಯ್ಚಾರಿಕವಾಗಿ ನೋಡಿದರೆ, ಬಾರತ ರಾಜ್ಯಗಳ ಒಕ್ಕೂಟವಲ್ಲ, ದೇಶಗಳ ಒಕ್ಕೂಟ.
      ದೇಶಮಟ್ಟದ ಸ್ವಾತಂತ್ರ್ಯ ಪಡೆದುಕೊಳ್ಳುವ ಗುರಿ ಮುಟ್ಟುವುದು ಅರಿದೇ. ಆದರೆ, ಅಸಾದ್ಯವಲ್ಲ. ನಮ್ಮ ಹಾಗೇ ವಲಸಿಗರ ಮುತ್ತಿಗೆಯಿಂದ ತತ್ತರಿಸುತ್ತಿರುವ ಅಸ್ಸಾಮಿನಂತಹ ಬೇರೆ ರಾಜ್ಯಗಳೊಡನೆ ಕೂಡಿ ನಾವು ಹೋರಾಡಿದರೆ ಕಂಡಿತವಾಗಿಯೂ ಗುರಿ ತಲುಪುಬಹುದು. ಈ ಬಗೆಯ ಹೆಜ್ಜೆಗಳನ್ನೇ ಇಂದು ಕನ್ನಡಿಗರಾದ ನಾವು ಹಾಕಬೇಕಾಗಿರುವುದು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್