ಭಾನುವಾರ, ಆಗಸ್ಟ್ 17, 2014

ನಾವ್ ಮಾಡ್ತಿರೋದೂ ಅದನ್ನೇ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕನ್ನಡ ಒಂದನ್ನೇ ಮಾತಾಡುವ ಒಂದು ಕಿರುಹಳ್ಳಿ ಇದೆ ಎಂದುಕೊಳ್ಳಿ. ಆ ಹಳ್ಳಿಯವರಲ್ಲಿ ಅರೆವಾಸಿ ಮಂದಿ ಅದು ಹೇಗೋ ಏನೋ ಕಾಲಕ್ರಮೇಣ ಕನ್ನಡವನ್ನು ತೊರೆದು ಮರಾಟಿಯನ್ನು ಆಡಲು ತೊಡಗಿದರೆಂದುಕೊಳ್ಳಿ. ಆ ಬಳಿಕ ಅವರು, ಕನ್ನಡ ಆಡುವುದನ್ನು ಮುಂದುವರೆಸಿಕೊಂಡು ಬಂದ ಉಳಿದ ಅರ್‌ದದವರ ಮೇಲೆ ತಿರುಗಿಬಿದ್ದು, "ಏ ಕನ್ನಡದವರಾ, ನಾವೀಗ ಕನ್ನಡಿಗರಲ್ಲ, ಮರಾಟಿಗರು. ನಾವೇ ಬೇರೆ, ನೀವೇ ಬೇರೆ!" ಎಂದು ಬೊಬ್ಬೆ ಹಾಕಿ ಹಳ್ಳಿಯನ್ನು ಎರಡು ಪಾಲು ಮಾಡಿದರೆಂದುಕೊಳ್ಳಿ. ಅಶ್ಟಕ್ಕೂ ಸುಮ್ಮನಿರದೆ, "ಪಾಲು ಸರಿಯಾಗಿ ಆಗಿಲ್ಲ. ಇನ್ನೂ ಕೆಲವು ಓಣಿಗಳು ನಮಗೇ ಸೇರಬೇಕು" ಎಂದು ಚಂಡಿ ಹಿಡಿದು, ಆ ಓಣಿಗಳಲ್ಲಿ ಬಂಡರಂತೆ ಬಂದು ಮರಾಟಿ ಬಾವುಟ ನೆಟ್ಟರೆಂದುಕೊಳ್ಳಿ. ಹೀಗೇನಾದರು ನಡೆದರೆ ಏನೆನಿಸುತ್ತೆ ನಿಮಗೆ? ಅಲ್ಲ, ಇದೆಂತಹ ವಿಪರ್‌ಯಾಸ ಅಂತ!? ಇದೆಂತಹ ವಿಪರ್‌ಯಾಸವೆಂದರೆ, ಒಂದೇ ಒಕ್ಕಲಿನ ಕೆಲವರು ತಮ್ಮ ಮಾತನ್ನು ಬಿಟ್ಟು ಹೆರವರ ಮಾತನ್ನು ಅಪ್ಪಿಕೊಂಡು, ತಮ್ಮವರ ಮೇಲೇ ತಿರುಗಿ ಬೀಳುವ ಅಯ್ಯೋ ಎನಿಸುವಂತಹ ವಿಪರ್‌ಯಾಸ! ಕನ್ನಡಿಗರ ಮತ್ತು ಮರಾಟಿಗರ ನಡುವೆ ವಾಸ್ತವಾಗಿ ನಡೆದು ಬಂದಿರುವುದು ಇಂತಹದೇ ಒಂದು ಕ್ರೂರ ವಿಪರ್‌ಯಾಸ.
      ಮೊನ್ನೆ ಮೊನ್ನೆ ಬೆಳಗಾವಿ ಜಿಲ್ಲೆಯ ಯಳ್ಳೂರ ಗ್ರಾಮದಲ್ಲಿದ್ದ ’ಯಳ್ಳೂರು ಮಹಾರಾಶ್ಟ್ರಕ್ಕೆ ಸೇರಿದ ಊರು’ ಎಂದು ಸೂಚಿಸುವ ಪಲಕಗಳನ್ನು ತೆರವುಗೊಳಿಸಿದಾಗ, ಅದರಿಂದಾಗಿ ಮರಾಟಿಗರಿಂದ ನಡೆದ ಪುಂಡಾಟಿಕೆಯ ಬಗ್ಗೆ ಕೇಳಿದಾಗ, ಮೇಲಿನ ಚಾರಿತ್ರಿಕ ವಾಸ್ತವವನ್ನು ನೆನೆದು ’ಇದೆಂತಹ ವಿದಿಯ ಅಣಕ!’ ಎನಿಸಿತು ನನಗೆ. ಏಕೆಂದರೆ, ಇಂದಿನ ಬಹುತೇಕ ಮರಾಟಿಗರ ಮುನ್ನರು ಒಮ್ಮೆ ಕನ್ನಡಿಗರೇ ಆಗಿದ್ದರು, ಇಂದಿನ ಮಹಾರಾಶ್ಟ್ರದ ಹೆಚ್ಚಿನ ಬಾಗದಲ್ಲಿ ಒಮ್ಮೆ ಕನ್ನಡವೇ ನೆಲದ ನುಡಿಯಾಗಿತ್ತು ಎನ್ನುವುದಕ್ಕೆ ಯಾರಿಗೂ ಅಲ್ಲಗಳೆಯಲಾರದಶ್ಟು ಸಂಸ್ಕ್ರುತಿ, ಶಾಸನ ಹಾಗೂ ಊರ ಹೆಸರುಗಳ ಪುರಾವೆ ಇಡೀ ಮಹಾರಾಶ್ಟ್ರದಲ್ಲೆಲ್ಲಾ ಕಂಡುಬರುತ್ತದೆ. ಇದರ ಬಗ್ಗೆ ಬಹು ವಿವರವಾಗಿ ಡಾ.ಚಿದಾನಂದ ಮೂರ್‌ತಿಯವರ ’ಬ್ರುಹತ್ ಬಾಶಿಕ ಕರ್‌ನಾಟಕ’ ಎಂಬ ಓದುಗೆಯಲ್ಲಿ ಬರೆಯಲಾಗಿದೆ (ಕನ್ನಡದೊಲವಿಗಳೆಲ್ಲರೂ ಓದಲೇಬೇಕಾದ ಹೊತ್ತಗೆ ಇದು). ಸುಮಾರು ಸಾವಿರ ಏಡುಗಳ ಮುನ್ನ ಮರಾಟಿ ಎಂಬುದೇ ಇರಲಿಲ್ಲ ಎನ್ನುವುದರ ಬಗ್ಗೆ ನಮ್ಮ ಕನ್ನಡದ ಕೆಲ ಅರಿಗರು ಆಗಾಗ್ಗೆ ಮರಾಟಿಗರಿಗೆ ನೆನಪಿಸುವುದು ಒಂದು ವಾಡಿಕೆಯೇ ಆಗಿದೆ. ’ಒಮ್ಮೆ ಕನ್ನಡವನ್ನೇ ಆಡುತ್ತಿದ್ದ ನೀವು, ಈಗ ಕನ್ನಡಕ್ಕೇ ಅವಹೇಳನ ಮಾಡುತ್ತಿದ್ದೀರಿ’ ಎಂದು ಅವರನ್ನು ಚೇಡಿಸುವುದು ಕೂಡಾ ನಡೆದೇ ಇದೆ. ಆದರೆ, ಇದರಿಂದ ಪ್ರಯೋಜನವೇನೂ ಆಗಿಲ್ಲ. ಮರಾಟಿಗರಿಗೆ ಇಂದು, ಅವರನ್ನು ನುಂಗಿ ನೀರು ಕುಡಿದ ಆರ್‌ಯಬಾಶೆ ಮರಾಟಿಯೇ ಚೆನ್ನೆನಿಸಿದೆ, ಒಮ್ಮೆ ತಮ್ಮದೇ ಆಗಿದ್ದ ಕನ್ನಡ ನುಡಿ ಕೀಳೆನಿಸಿದೆ!
      ಈ ಬಗೆಯ, ’ತಮ್ಮನ್ನು ಮೆಟ್ಟಿದ ನಡೆನುಡಿಯನ್ನು ಹೊಗಳುವ, ತಮ್ಮದೇ ಆಗಿದ್ದ ನಡೆನುಡಿಯನ್ನು ತೆಗಳುವ’ ಪರಿ ಮರಾಟಿಗರಿಗೆ ಮಾತ್ರ ಸೀಮಿತವಾದದ್ದಲ್ಲ. ಒಟ್ಟಾರೆ ಮನುಶ್ಯ ಸ್ವಬಾವವೇ ಹೀಗೆ! ಈ ಚಾಳಿ ಕನ್ನಡಿಗರಲ್ಲೂ ಇದೆ. ಏಕೆಂದರೆ, ’ತಮ್ಮತನ’ ಕಳೆದುಕೊಂಡ ಮರಾಟಿಗರು ಏನನ್ನು ಮಾಡುತ್ತಿದ್ದಾರೋ ಅದನ್ನೇ ನಾವೂ ಮಾಡುತ್ತಿದ್ದೇವೆ, ನಮ್ಮದೇ ರೀತಿಯಲ್ಲಿ!
      ಮರಾಟಿ ಬಂದು ಕನ್ನಡ ಹೋಗುವ ಕಾಲದಲ್ಲಿ ಜನಕ್ಕೆ ವಾಸ್ತವಿಕವಾದ ’ದ್ರಾವಿಡ’ ಎಂಬ ಪರಿಕಲ್ಪನೆಯೇ ಇರಲಿಲ್ಲ. ಈ ಪರಿಕಲ್ಪನೆ ಬಂದಿರುವುದು ಸುಮಾರು ಇನ್ನೂರು ವರ್‌ಶಗಳಿಂದ ಮಾತ್ರ. ಒಂದು ವೇಳೆ ಈ ಪರಿಕಲ್ಪನೆ ಆಗಲೇ ಇದ್ದಿದ್ದರೆ ಮರಾಟಿಗೆ ಕನ್ನಡವನ್ನು ಹಿಮ್ಮೆಟ್ಟಿಸುವುದು ಹಗುರವಾಗುತ್ತಿರಲಿಲ್ಲ. ಅದೇನೇ ಇರಲಿ. ದ್ರಾವಿಡ ಪರಿಕಲ್ಪನೆಯ ಅರಿವು ಈಗಂತೂ ಇದೆ. ಆದರೆ, ಅದರ ಸಮರ್‌ಪಕ ಬಳಕೆ ನಮ್ಮಲ್ಲಿ ಎಲ್ಲಿ ಆಗುತ್ತಿದೆ?
      ಕನ್ನಡಿಗರ ಮಯ್ ಲಕ್ಶಣಗಳನ್ನು ಗಮನಿಸಿದರೆ, ಅವರಲ್ಲಿ ದ್ರಾವಿಡ ಲಕ್ಶಣಗಳು ಹೆಚ್ಚಾಗಿ ಇರುವವರೇ ಬಹಳ. ಮೇಲಾಗಿ ನಮ್ಮ ಕನ್ನಡ ಒಂದು ದ್ರಾವಿಡ ನುಡಿ. ಹಾಗಾಗಿ ದ್ರಾವಿಡತನವೇ ನಮಗೆ ನಮ್ಮತನದ ಅಡಿಗಲ್ಲಾಗಬೇಕು. ಆದರೆ, ದ್ರಾವಿಡತನದ ಬದಲು ಆರ್‌ಯತನವನ್ನೇ ಅಡಿಗಲ್ಲಾಗಿ ಮಾಡಿಕೊಳ್ಳಲು ಹೊರಟಂತಿದೆ ನಮ್ಮ ನಡವಳಿಕೆ!
      ದ್ರಾವಿಡ ಲಕ್ಶಣಗಳು ಹೆಚ್ಚಾಗಿ ಇರುವ ಕನ್ನಡಿಗರಲ್ಲಿ ಬಹುಮಂದಿ ಕಲಿತವರಲ್ಲ. ಮೇಲಿನ ವರ್‌ಗಕ್ಕೆ ಸೇರಿದವರಲ್ಲ. ಹಾಗಾಗಿ ಅವರು ಆಟಕ್ಕಿದ್ದರೂ ಲೆಕ್ಕಕ್ಕಿಲ್ಲ. ಕಲಿಕೆ ಇಲ್ಲದ ಅವರಿಗೆ ತಾವು ದ್ರಾವಿಡರು ಎಂಬುದೂ ತಿಳಿದಿಲ್ಲ. ದ್ರಾವಿಡ ಅರಿವು ಇರುವ ಕಲಿತವರೆನಿಸಿಕೊಂಡ ನಾವು ಅವರಲ್ಲಿ ದ್ರಾವಿಡ ಅರಿವನ್ನು ಮೂಡಿಸಬಹುದು. ಆದರೆ, ನಾವು ಹಾಗೆ ಮಾಡುತ್ತಿಲ್ಲ. ಹಾಗೆ ಮಾಡುವುದಿರಲಿ, ಅದಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದೇವೆ. ಆರ್‌ಯ ನಡೆನುಡಿಗಳನ್ನೇ ತಲೆಯಮೇಲಿಟ್ಟುಕೊಂಡು ಮೆರೆಸುತ್ತಿದ್ದೇವೆ. ಹೋಮ, ಹವನ, ಯಜ್ನ, ಯಾಗ ಮುಂತಾದ ಉತ್ತರದ ಕಂದಾಚಾರಗಳಿಗೆ ಪಕ್ಕಾಗಿದ್ದೇವೆ (ಅದೂ ಬಸವಣ್ಣನ ನಾಡಿನವರಾಗಿ!). ಕನ್ನಡದ ತುಂಬೆಲ್ಲ ಕನ್ನಡದ ಹೆಸರಿನಲ್ಲಿ ಸಂಸ್ಕ್ರುತವನ್ನು ತುರುಕಿಕೊಂಡಿದ್ದೇವೆ. ದ್ರಾವಿಡರಾದ ನಾವು ಆರ‍್ಯನುಡಿ ಸಂಸ್ಕ್ರುತಕ್ಕಾಗಿ ವಿಶ್ವವಿದ್ಯಾಲಯ ಕಟ್ಟಿಕೊಡುತ್ತಿದ್ದೇವೆ. ನಮ್ಮ ಹಿರಿಕಟ್ಟಡಗಳಿಗೆ, ಕೆರೆಕಟ್ಟೆಗಳಿಗೆ, ಕಾಡುಮೇಡುಗಳಿಗೆ, ಊರುಕೇರಿಗಳಿಗೆ ಮುಂತಾದುವಕ್ಕೆಲ್ಲ ಕನ್ನಡ ಎಂದುಕೊಂಡು ಸಂಸ್ಕ್ರುತದ ಹೆಸರುಗಳನ್ನು ಇಡುತ್ತಿದ್ದೇವೆ. ದೇಶಪ್ರೇಮದ ಹೆಸರಿನಲ್ಲಿ ರಾಶ್ಟ್ರಬಾಶೆ ಎಂದುಕೊಂಡು ಹಿಂದೀ ಕಲಿಯುತ್ತಿದ್ದೇವೆ. ನಮ್ಮ ನಾಡಿನಲ್ಲೇ ಹಿಂದಿಯಲ್ಲಿ ಮಾತಾಡಿ ಕನ್ನಡವನ್ನು ಬದಿಗೊತ್ತುತ್ತಿದ್ದೇವೆ. ಹಿಂದೀ ಬಾಶಣಗಳನ್ನು ದನ್ಯತಾಬಾವದಿಂದ(!) ಕೇಳುತ್ತಿದ್ದೇವೆ. ಇಂತಹ ಅಡಿಯಾಳ್ತನವನ್ನು ಮಯ್ಗೂಡಿಸಿಕೊಂಡಿರುವ ನಾವು, ’ಅಡಿಯಾಳ್ತನ ಬೇಡ!’ ಎಂದು ದ್ರಾವಿಡತನವನ್ನು ಕಾಯ್ದುಕೊಳ್ಳಲು ಹೆಣಗುತ್ತಿರುವ, ಜನಾಂಗೀಯವಾಗಿ ನಮ್ಮವರೇ ಆದ ತಮಿಳರ ನೀತಿಯನ್ನು ಮಾತ್ರ ತಪ್ಪದೆ ಜರೆಯುತ್ತೇವೆ! ನಮಗೂ ಮರಾಟಿಗರಿಗೂ ಎಲ್ಲಿದೆ ಮನೋಬಾವನೆಯಲ್ಲಿ ವ್ಯತ್ಯಾಸ? ಅವರು ಮಾಡುವುದನ್ನೇ ನಾವೂ ಮಾಡುತ್ತಿದ್ದೇವೆ.
      ಈಗಿನ ದಿನಗಳಲ್ಲಿ ಆರ್‌ಯವಾದಿಗಳಿಗೆ ರಾಜಕೀಯ ಬಲ ಬಂದಿರುವುದರಿಂದ, ದ್ರಾವಿಡರಾದ ಕನ್ನಡಿಗರ ನಡೆನುಡಿಗಳ ಮೇಲೆ ಇನ್ನು ಮುಂದೆ ಹೆಚ್ಚುಹೆಚ್ಚು ಒತ್ತಡ ಬೀಳುವುದರಲ್ಲಿ ಸಂದೇಹವಿಲ್ಲ. ಹಾಗಾಗಿ, ಕನ್ನಡಿಗರು ನಾವು ಆರ್‌ಯ ನಡೆನುಡಿಗಳಿಗೆ ಮಣೆ ಹಾಕದೆ, ನಮ್ಮವರೇ ಆದ ತಮಿಳರೊಂದಿಗೆ ಸೇರಿ, ನಮ್ಮ ನಡೆನುಡಿಗಳನ್ನು ಕಾಪಾಡಿಕೊಳ್ಳುವ ಒಗ್ಗಟ್ಟಿನ ಹಾದಿ ಹಿಡಿಯಬೇಕು (ತೆಲುಗರೂ ಮಲೆಯಾಳದವರೂ ಹೀಗೇ ಮಾಡಬೇಕು). ಹೀಗೆ ಮಾಡದಿದ್ದರೆ, ಮರಾಟಿಗರ ನಡವಳಿಕೆ ಎಶ್ಟು ವಿಶಾದನೀಯ ನಗೆಪಾಟಲು ಎನಿಸುತ್ತದೆಯೋ ಅಶ್ಟೇ ವಿಶಾದನೀಯ ನಗೆಪಾಟಲಾಗುತ್ತದೆ ನಮ್ಮ ನಡವಳಿಕೆ ಕೂಡ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಶುಕ್ರವಾರ, ಜುಲೈ 18, 2014

ಮುಂಬಾಗಿಲು ಬದ್ರ, ಹಿಂಬಾಗಿಲು ಚಿದ್ರ!

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಬೀಜೇಪಿ ಈಗ ಕೇಂದ್ರದಲ್ಲಿ ಅದಿಕಾರಕ್ಕೆ ಬಂದಿರುವುದರಿಂದ, ಇನ್ನು ಮುಂದೆ ಹಿಂದೀ ಹೇರಿಕೆಯ ಹುನ್ನಾರಗಳು ಮರುಕಳಿಸಬಹುದೆಂದು ನಾನು ಕಳೆದ ಲೇಕನದಲ್ಲಿ ಕಳವಳ ವ್ಯಕ್ತಪಡಿಸಿದ್ದೆ. ಕಾಕತಾಳೀಯವೆಂಬಂತೆ ಲೇಕನವನ್ನು ಪತ್ತಿಸಿದ ಕೆಲ ನಾಳುಗಳಲ್ಲೇ ಬೀಜೇಪೀಗಳ ಹಿಂದೀ ಹೇರಿಕೆಯ ಮೊದಲ ಪ್ರಯತ್ನ ನಡೆದೇಬಿಟ್ಟಿತು!
      ಸರ್‌ಕಾರೀ ಜಾಲತಾಣಗಳಲ್ಲಿ ಇನ್ನು ಮುಂದೆ ಹಿಂದೀ ಬಾಶೆಯ ಬಳಕೆಗೆ ಮೇಲೆಡೆ ಕೊಡಬೇಕೆಂದು ಮತ್ತು ರಾಜ್ಯ ಸರ್‌ಕಾರಗಳೊಡನೆ ಕೇಂದ್ರ ಸರ್‌ಕಾರ ಹಿಂದೀಯಲ್ಲಿ ವ್ಯವಹರಿಸಬಹುದೆಂದು ಆದೇಶಿಸುವ ಎರಡು ಬೇರೆಬೇರೆ ಸುತ್ತೋಲೆಗಳನ್ನು ಕೇಂದ್ರ ಸರ್‌ಕಾರ ಹೊರಡಿಸಿತು. ಹಿಂದೀ ಹೇರಿಕೆಗೆ ವಾತಾವರಣ ಈಗ ಹೇಗಿರಬಹುದೆಂದು ಅರಿತುಕೊಳ್ಳುವ ಹುನ್ನಾರದಿಂದ ಈ ರೀತಿ ಬೀಜೇಪಿ ಸರ್‌ಕಾರ ಮಾಡಿರಬಹುದು. ಕಾರಣ ಏನೇ ಇರಲಿ, ಅದರ ಈ ನಡೆಗೆ ಕೂಡಲೇ ಎದುರು ವ್ಯಕ್ತವಾದದ್ದೊಂದೇ ಅಲ್ಲ, ಹಾಗೆ ವ್ಯಕ್ತವಾದ ಎದುರಿಗೆ ಹಿಂದೆಂದೂ ಕಂಡಿರದ ಹರವು ಕೂಡ ಕಂಡುಬಂತು!
      ಮುಂಚೆ ಅರುವತ್ತರ ದಶಕದಲ್ಲಿ ಕೇಂದ್ರ ಸರ್‌ಕಾರ ಹಿಂದೀಯನ್ನು ಹೇರಲು ಹೊರಟಿದ್ದಾಗ ಅದಕ್ಕೆ ಎದಿರು ಕಂಡುಬಂದದ್ದು ಬಹುಪಾಲು ನಮ್ಮ ಸಹದ್ರಾವಿಡ ತಮಿಳು ಸೋದರರಿಂದ ಹಾಗೂ ಕೊಂಚಮಟ್ಟಿಗೆ ಕನ್ನಡಿಗರಿಂದ ಮತ್ತು ಬಂಗಾಳಿಗಳಿಂದ. ಆದರೆ ಈ ಬಾರಿ, ಒರಿಸ್ಸಾ, ಕಾಶ್ಮೀರ ಮುಂತಾದ ರಾಜ್ಯಗಳಿಂದ ಕೂಡ ವಿರೋದದ ಕೂಗುಗಳು ಕೇಳಿಬಂದವು! ಒರಿಸ್ಸಾದಲ್ಲಂತೂ, ಹಿಂದೀಯಲ್ಲಿ ಮಾತಾಡಲು ಹೊರಟ ಒಬ್ಬ ಶಾಸಕನಿಗೆ ಸಬಾಪತಿಗಳು, "ಒರಿಯಾದಲ್ಲಿ ಮಾತಾಡು, ಇಲ್ಲದಿದ್ದರೆ ಇಂಗ್ಲೀಶಿನಲ್ಲಿ ಮಾತಾಡು, ಹಿಂದೀಯಲ್ಲಿ ಮಾತ್ರ ಬೇಡ" ಎಂದು ಎಚ್ಚರಿಸಿದರು! ಹಿಂದಿಯೇತರರಾದ ನಮಗೆ ಇದೆಲ್ಲಾ ನಿಜಕ್ಕೂ ಒಂದು ಹಿಗ್ಗಿನ ಸುದ್ದಿ! ಕಲಿತವರ ಸಂಕ್ಯೆ ಹೆಚ್ಚಾಗುತ್ತಿರುವುದರಿಂದಲೋ ಏನೋ, ಹೆಚ್ಚು ಹೆಚ್ಚು ಹಿಂದಿಯೇತರರಿಗೆ ಹಿಂದೀ ದುರಬಿಮಾನಿಗಳ ಆಟದ ಅರಿವು ಮೂಡುತ್ತಿರುವುದರಿಂದಲೋ ಏನೋ, ಈಗೀಗ, ಹಿಂದೀ ಹೇರಿಕೆಗೆ ವಿರೋದ ದ್ರಾವಿಡರಿಂದ ಮಾತ್ರವಲ್ಲದೆ ಬೇರೆಯವರಿಂದಲೂ ವ್ಯಕ್ತವಾಗುತ್ತಿದೆ. ಈ ನೆಲೆ ಹೀಗೇ ಮುಂದುವರೆಯುತ್ತದೆ ಎಂದು ನಂಬೋಣ.
      ಇದೆಲ್ಲದರ ಅರ್‌ತ ಇಶ್ಟೇ. ಅದಿಕ್ರುತವಾಗಿ ಹಿಂದಿಯೊಂದನ್ನೇ ಸಂಪರ್‌ಕ ಬಾಶೆಯನ್ನಾಗಲೀ ರಾಶ್ಟ್ರಬಾಶೆಯನ್ನಾಗಲೀ ಮಾಡಲಾಗುವ ದಿನಗಳು ಹತ್ತಿರವಿಲ್ಲ. ಪಾಪ, ಹಿಂದೀ ದುರಬಿಮಾನಿಗಳು ಅದಕ್ಕಾಗಿ ಇನ್ನೂ ಹಲಹೊತ್ತು ತಾಳ್ಮೆಯಿಂದ ಕಾಯಬೇಕು. ಆದರೆ, ಅನದಿಕ್ರುತವಾಗಿ ಹಿಂದೀ ಹರಡುವುದು ಮಾತ್ರ ನಡೆಯುತ್ತಲೇ ಇದೆ. ಏಕೆಂದರೆ, ಹಿಂದಿಗೆ ವಿರೋದವಾಗಿ ಮುಂಬಾಗಿಲನ್ನೇನೋ ಮುಚ್ಚಿದ್ದೇವೆ. ಆದರೆ, ಹಿಂಬಾಗಿಲನ್ನು ತೆರೆದು ಬಿಟ್ಟಿದ್ದೇವೆ. ಹಿಂದಿಯ ತೂರಿಕೆಯನ್ನು ಮುಂಬಾಗಿಲಿನಲ್ಲಿ ತಡೆಯುವ ಹಾಗೇ ಹಿಂಬಾಗಿಲಿನಲ್ಲೂ ನಾವು ತಡೆಯಬೇಕು. ಇಲ್ಲದಿದ್ದರೆ, ಒಂದಲ್ಲ ಒಂದು ದಿನ ಹಿಂದೀ ಹೇಗೂ ಬಂದು ಕನ್ನಡದಂತಹ ಅಲ್ಲಲ್ಲಿನ ನೆಲದ ನುಡಿಗಳನ್ನು ಅಳಿಸಿಹಾಕುವುದು ಗ್ಯಾರಂಟಿ.
      ಅನದಿಕ್ರುತವಾಗಿ, ಅಂದರೆ ತಾನೇ ತಾನಾಗಿ, ಹಿಂದೀ ಬಾಶೆ ಒಂದು ಸ್ತಳೀಯ ಬಾಶೆಯನ್ನು ಹೇಗೆ ಬಗ್ಗುಬಡಿಯಬಲ್ಲುದು ಎಂಬುದಕ್ಕೆ ಒಂದು ಎತ್ತುಗೆಯನ್ನು ಕೊಡುತ್ತೇನೆ. ಮುಂಬಯಿ ನಗರವೇ ಆ ಎತ್ತುಗೆ. ಮುಂಬಯಿ ಮಹಾರಾಶ್ಟ್ರಕ್ಕೆ ಸೇರಿದ ಊರು. ಮಹಾರಾಶ್ಟ್ರದ ನೆಲದ ನುಡಿ ಮರಾಟಿ. ಆದರೆ, ಮುಂಬಯಿಯ ನೆಲದ ನುಡಿ ಮಾತ್ರ ಹಿಂದೀ! ಮುಂಬಯಿಯಲ್ಲಿ ಹಿಂದಿಯೇ ತಾಯ್ನುಡಿಯಾಗಿರುವವರ ಪ್ರಮಾಣ ನೂರಕ್ಕೆ ಇಪ್ಪತ್ತರಶ್ಟೂ ಇಲ್ಲ. ಆದರೂ, ಮುಂಬಯಿಯ ಬೀದಿ ಬೀದಿಗಳಲ್ಲಿ, ಮೂಲೆ ಮೂಲೆಗಳಲ್ಲಿ ಹಿಂದಿಯೋ ಹಿಂದಿ! ಅಲ್ಲಿ ಹಿಂದೀವಾಲರದೇ ಆಟ, ಹಿಂದಿಯದೇ ಬಾವುಟ! ಇದು ಹೇಗಾಯಿತು?
      ಅದಕ್ಕೆ ಉತ್ತರ ನಮ್ಮ ಬೆಂಗಳೂರಿನಲ್ಲೇ ಎದ್ದು ಕಾಣುತ್ತದೆ. ಇಲ್ಲೂ ಅಶ್ಟೆ, ಹಿಂದೀವಾಲರ ಸಂಕ್ಯೆ ಕಡಿಮೆ. ಆದರೆ, ಅವರ ವರ್‌ಚಸ್ಸು ಮಾತ್ರ ಊರಗಲ! ಎಲ್ಲೆಡೆ, ಎಲ್ಲರೊಡನೆ ಅವರು ಮಾತಾಡುವುದೇ ಹಿಂದಿಯಲ್ಲಿ! ಎಳ್ಳಶ್ಟೂ ಹಿಂಜರಿಯದೆ ಎಲ್ಲರ ಬಾಯಲ್ಲೂ ಹಿಂದಿಯನ್ನು ಹೊರಡಿಸುವ ಅವರ ಪೊಗರನ್ನು ಯಾರೇ ಆಗಲಿ ಮೆಚ್ಚಲೇ ಬೇಕು. ಅವರಿಗೆ ಸ್ತಳೀಯರ ಬಾವನೆಗಳು ಲೆಕ್ಕಕ್ಕೇ ಇಲ್ಲ! ಸ್ತಳೀಯರು ಕೆರಳಿಯಾರು ಎಂಬ ಹೆದರಿಕೆಯೇ ಇಲ್ಲ. ಅಶ್ಟಕ್ಕೂ ಅವರು ಯಾಕೆ ಹೆದರಬೇಕು? ಸ್ತಳೀಯರು ಕೆರಳುವುದೇ ಇಲ್ಲವಲ್ಲ? ಅವರ ಹಿಂದಿಗೆ ಪ್ರತಿಯಾಗಿ ಸ್ತಳೀಯರು ಕುರಿಗಳಂತೆ ಹಿಂದೀಯಲ್ಲೇ ಮಾರು ಕೊಡುತ್ತಾರೆ. ವಸ್ತುಸ್ತಿತಿ ಹೀಗಿರುವಾಗ ಅವರಿಗೇಕೆ ಅಂಜಿಕೆ? ಜೊತೆಗೆ, ಬೆಂಗಳೂರಿನಲ್ಲಿ ಮುಂಬಯಿಯಂತೆಯೇ ಸ್ತಳೀಯರ ಸಂಕ್ಯೆಯೇ ಕಡಿಮೆ. ಹೊರಗಿನವರ ಸಂಕ್ಯೆಯೇ ಹೆಚ್ಚು. ಇಂತಹ ನೆಲೆಯಲ್ಲಿ ಹಿಂದಿಗೆ ಯಾರಿಂದ ವಿರೋದ ಬರುತ್ತದೆ? ಬೆಂಗಳೂರು, ಹಿಂದಿಯ ಮಟ್ಟಿಗೆ ನೋಡುವುದಾದರೆ, ಮುಂಬಯಿಯ ಹಾದಿಯನ್ನು ಹಿಡಿದಿರುವುದರಲ್ಲಿ ಅನುಮಾನವಿಲ್ಲ. ಬವಿಶ್ಯದಲ್ಲಿ ಮುಂಬಯಿಯಂತೆ ಬೆಂಗಳೂರಿನ ಮೊದಲ ಬಾಶೆ ಕೂಡ ಹಿಂದಿಯೇ ಆದರೆ, ಬಳಿಕ ನಮ್ಮ ಉಳಿದ ದೊಡ್ಡ ಊರುಗಳಿಗೂ ಹಿಂದೀ ಕಾಯಿಲೆ ತಗುಲಿಕೊಂಡರೆ ಯಾರೂ ಅಚ್ಚರಿ ಪಡಬೇಕಾಗಿಲ್ಲ. ದೊಡ್ಡ ಊರುಗಳು ಹಿಂದೀಮಯವಾಗಿ ಸಣ್ಣ ಊರುಗಳಲ್ಲಿ ಮಾತ್ರ ಕನ್ನಡ ಉಳಿದರೆ ಕನ್ನಡ ಇದ್ದೂ ಸತ್ತಂತೆ ತಾನೆ?
      ಇದೇ ಬಗೆಯ ಹಿಂದಿಯ ಆಕ್ರಮಣ ನಮ್ಮ ನೆರೆಯ ತಮಿಳುನಾಡಿನಲ್ಲಿ ಆಗುವುದಿಲ್ಲ. ಅಲ್ಲಿ ಏನು ವಿಶೇಶ? ಅಲ್ಲಿ ಒಂದೇ ವಿಶೇಶ - ಬಹುಮಂದಿ ತಮಿಳರು ಹಿಂದಿಯನ್ನು ಕಲಿಯುವುದಕ್ಕೂ ಹೋಗುವುದಿಲ್ಲ, ಮಾತಾಡುವುದಕ್ಕೂ ಹೋಗುವುದಿಲ್ಲ. ಅದಕ್ಕೆ ಕಾರಣ ಅಲ್ಲಿ ದಶಕಗಳಿಂದಲೂ ನಡೆದುಕೊಂಡು ಬಂದಿರುವ ದ್ರಾವಿಡ ಚಳುವಳಿ. ತಮಿಳರಿಗೆ ತಾವು ದ್ರಾವಿಡರೆಂಬುದು ತಿಳಿದಿದೆ. ಕನ್ನಡಿಗರಿಗಾದರೋ ತಾವೂ ಕೂಡ ದ್ರಾವಿಡರು ಎಂಬುದು ಇನ್ನೂ ತಿಳಿದಿಲ್ಲ. ಈ ನನ್ನಿ ತಿಳಿಯಬೇಕು. ತಿಳಿದರೆ, ನಾವೂ ಕೂಡ ಹಿಂದೀ ಬಾಶಣಗಳನ್ನು ಕುರಿಗಳಂತೆ ಸುಮ್ಮನೆ ಕೇಳುವುದನ್ನು ನಿಲ್ಲಿಸಬಹುದು. ಹಿಂದೀವಾಲರಿಗೆ ’ನಮ್ಮ ನುಡಿಯಲ್ಲೇ ಮಾತಾಡಿ’ ಎಂದು ಒತ್ತಾಯಿಸಬಹುದು. ಕನ್ನಡ ವಿರೋದಿಯಾದ ತ್ರಿಬಾಶಾ ಸೂತ್ರದಿಂದ ಹೊರಬರಬಹುದು. ನಮ್ಮ ಮೆಟ್ರೋದಿಂದ ಹಿಂದಿಯನ್ನು ತೊಲಗಿಸಬಹುದು. ಒಟ್ಟಾರೆ, ಹಿಂದೀ ಪಿಡುಗನ್ನು ದೂರವಿಡಬಹುದು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಶುಕ್ರವಾರ, ಜೂನ್ 13, 2014

ಎಲ್ಲಕ್ಕೂ ಮೊದಲು ಇರಬೇಕು ’ಇದು ನಮ್ಮ ನುಡಿ’ ಎಂಬ ಕೆಚ್ಚು

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕನ್ನಡಿಗ ರಾಜಕಾರಣಿಗಳಿಗೆ ತಮ್ಮ ತಾಯ್ನುಡಿಯ ಬಗ್ಗೆ ಅಬಿಮಾನ ಕಡಿಮೆ ಎಂಬ ಸಾಮಾನ್ಯ ನಂಬಿಕೆ ಜನಮನದಲ್ಲಿ ಮನೆಮಾಡಿದೆ. ಈ ನಂಬಿಕೆ ಸಂಪೂರ‍್ಣ ಸರಿ ಅಲ್ಲ ಎನ್ನುವ ಹಾಗೆ ಈ ನಡುವೆ ನಮ್ಮ ಪ್ರತಿನಿದಿಗಳು ನಡೆದುಕೊಂಡು ನಮ್ಮನ್ನು ಅಚ್ಚರಿ ಬೀಳಿಸಿದ್ದಾರೆ!
      ಇತ್ತೀಚೆಗೆ ಸುಪ್ರೀಮ್ ಕೋರ್ಟ್ ಕನ್ನಡ ಮಾದ್ಯಮವನ್ನು ಕಡ್ಡಾಯಗೊಳಿಸುವ ವಿರುದ್ದ ತೀರ್‌ಪು ಕೊಟ್ಟಾಗ ಎಣಿಸಿದಂತೆಯೇ ಕನ್ನಡದೊಲವಿಗಳಿಂದ ಕೂಗಾಟ ಮತ್ತು ಹೋರಾಟದ ಮಾತುಗಳು ಕೇಳಿಬಂದವು. ಮಯ್ಸೂರಿನಲ್ಲಿ ಕೆಲ ಸಾಹಿತಿಗಳು ಒಟ್ಟಿಗೆ ಸೇರಿ, ಕನ್ನಡಕ್ಕಾಗಿ ಗೋಕಾಕ್ ಮಾದರಿಯ ಚಳುವಳಿಯನ್ನು ಕಯ್ಗೆತ್ತಿಕೊಳ್ಳುವುದಾಗಿ ಹೇಳಿಕೆ ಕೊಟ್ಟರು. ತೀರ‍್ಪಿನಿಂದ ಸಿಡಿಮಿಡಿಗೊಂಡ ಸರ‍್ಕಾರ ಕೂಡ ನಾಡಿನಲ್ಲಿ ಕನ್ನಡವನ್ನು ಕಾಪಾಡುವ ನಿಟ್ಟಿನಲ್ಲಿ ತಾನು ಏನೇನು ಮಾಡಲಿದೆ ಎಂಬುದರ ಬಗ್ಗೆ ಒಂದು ಪಟ್ಟಿಯನ್ನೇ ಮಾಡಿ ಗೋಶಿಸಿತು. ಆದರೆ, ಜನಸಾಮಾನ್ಯರು ಮಾತ್ರ, ’ಇಶ್ಟೆಲ್ಲಾ ಹಾರಾಟ ಕೆಲಕಾಲ ಮಾತ್ರ. ಸ್ವಲ್ಪ ದಿನ ಕಳೆದರೆ ಎಲ್ಲರೂ ಮಾಮೂಲಿನಂತೆ ತೆಪ್ಪಗಾಗುತ್ತಾರೆ’ಎಂದುಕೊಂಡರು. ಮೊದಮೊದಲು ಜನಗಳು ಅಂದುಕೊಂಡದ್ದೇ ನಿಜವಾಗುವ ಹಾಗೆ ಕಂಡಿತು. ಆದರೆ, ಮೊನ್ನೆಮೊನ್ನೆ ಜನರ ಅನಿಸಿಕೆಯನ್ನು ಸುಳ್ಳು ಮಾಡುವಂತಹ ಕೆಲ ಸಂಗತಿಗಳು ನಡೆದಿವೆ.
      ಗೋಕಾಕ್ ಮಟ್ಟದ ಹೋರಾಟದ ಪಣತೊಟ್ಟ ಸಾಹಿತಿಗಳ ಹಿಂಡು ಎತ್ತ ಪೋದುದೋ ತಿಳಿಯಲಿಲ್ಲ. ಆದರೆ, ನಾಡಿನ ಮುಕ್ಯಮಂತ್ರಿಗಳು ಹಾಗೂ ಹೊಸದಾಗಿ ಆಯ್ಕೆಗೊಂಡ ಸಂಸದರಲ್ಲಿ ಬಹುಮಂದಿ ಮಾತ್ರ ಕನ್ನಡದ ಅಬಿಮಾನ ಮೆರೆವಂತಹ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಮಾನ್ಯ ಮುಕ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪ್ರದಾನಮಂತ್ರಿ ಮೋದಿಯವರನ್ನು ಬೇಟಿ ಮಾಡಿ, ಸುಪ್ರೀಮ್ ಕೋರ‍್ಟಿನ ತೀರ‍್ಪಿನ ಬಗ್ಗೆ ವಿವರಿಸಿ, ತಾಯ್ನುಡಿಯನ್ನು ಕಲಿಕೆಯ ಮಾದ್ಯಮ ಮಾಡುವುದರ ಬಗ್ಗೆ ಸಂಸತ್ತಿನಲ್ಲಿ ಚರ‍್ಚೆ ನಡೆಸುವುದಕ್ಕೆ ನೆರವಾಗಬೇಕು ಎಂದು ಕೇಳಿಕೊಂಡಿದ್ದಾರೆ. ತಾವು ಈ ವಿಶಯದಲ್ಲಿ ಹಲವಾರು ರಾಜ್ಯಗಳ ಮುಕ್ಯಮಂತ್ರಿಗಳಿಗೆ ಕಾಗದವನ್ನೂ ಬರೆದಿರುವುದಾಗಿ ತಿಳಿಸಿದ್ದಾರೆ. ಕನ್ನಡವನ್ನು ಕಾಯುವ ಅವರ ಈ ಕಾಯಕ ಅಡೆತಡೆಯಿಲ್ಲದೇ ಮುಂದುವರೆಯಲಿ ಎಂದು ಹಾರಯ್ಸೋಣ.
      ಇನ್ನು ನಮ್ಮ ಸಂಸದರು ಕೂಡ ಪಕ್ಶಾತೀತವಾಗಿ ಸಂಸತ್ತಿನ ಪ್ರಮಾಣವಚನವನ್ನು ಕನ್ನಡದಲ್ಲೇ ತೆಗೆದುಕೊಂಡಿದ್ದಾರೆ. ಕೇಂದ್ರಮಂತ್ರಿಮಂಡಲದ ಪ್ರಮಾಣವಚನವನ್ನು ಹಿಂದಿಯಲ್ಲಿ ತೆಗೆದುಕೊಂಡು ಮೊದಲು ಕನ್ನಡಿಗರಿಗೆ ಕಸಿವಿಸಿಯುಂಟುಮಾಡಿದ್ದ ಅನಂತಕುಮಾರರು ಕೂಡ ಬಳಿಕ ಸಂಸದ ಪ್ರಮಾಣವಚನವನ್ನಾದರೂ ಕನ್ನಡದಲ್ಲಿ ತೆಗೆದುಕೊಂಡು ನಾವೆಲ್ಲ ಸಮಾದಾನದ ನಿಟ್ಟುಸಿರನ್ನು ಬಿಡುವಂತೆ ಮಾಡಿದ್ದಾರೆ. ಆದರೆ, ಎಲ್ಲಾ ಕನ್ನಡಿಗ ಸಂಸದರೂ ಕನ್ನಡದಲ್ಲೇ ಪ್ರಮಾಣವಚನ ತೆಗೆದುಕೊಂಡಿಲ್ಲ. ಒಬ್ಬರು ಪಾಪ ಸಂಸ್ಕ್ರುತದಲ್ಲಿ ತೆಗೆದುಕೊಂಡರಂತೆ! ಏನು ಹೇಳುವುದು ಇದಕ್ಕೆ? ಕನ್ನಡಕ್ಕೆ ಹೊಡೆತ ಬಿದ್ದಿರುವ ಈ ದಿನಗಳಲ್ಲಿ, ಉಳಿದೆಲ್ಲ ಕನ್ನಡಿಗ ಸಂಸದರು ಒಗ್ಗಟ್ಟಿನಿಂದ ಕನ್ನಡವನ್ನು ಎತ್ತಿಹಿಡಿಯಲು ಪ್ರಯತ್ನಿಸುತ್ತಿದ್ದ ಸಂದರ‍್ಬದಲ್ಲಿ, ಈ ಒಬ್ಬರಿಗೆ ಕನ್ನಡ ಬಿಟ್ಟು ಸಂಸ್ಕ್ರುತದಲ್ಲಿ ಪ್ರಮಾಣವಚನ ತೆಗೆದುಕೊಳ್ಳುವ ಬಯಕೆ ಏಕೆ ಬಂತೋ?
      ನಮ್ಮ ಬಹುತೇಕ ಸಂಸದರು ಹೀಗೆ ಕನ್ನಡತನವನ್ನು ಮೆರೆದಿರುವುದು ಉದ್ದೇಶಪೂರ‍್ವಕವಾಗಿರಬಹುದು. ಸುಪ್ರೀಮ್ ಕೋರ‍್ಟಿನ ತೀರ‍್ಪಿನ ಬಗ್ಗೆ ಚರ‍್ಚೆ ನಡೆಸಲು ಸಂಸತ್ತಿನ ವಾತಾವರಣವನ್ನು ಮುನ್ನಣಿಗೊಳಿಸುವ ಸಲುವಾಗಿ ಅವರು ಈ ರೀತಿ ಮಾಡಿರಬಹುದು. ಯಾವ ಕಾರಣಕ್ಕಾದರೂ ಮಾಡಿರಲಿ, ಕನ್ನಡತನದ ಇಂತಹ ಪ್ರದರ‍್ಶನವನ್ನು ನಮ್ಮ ಸಂಸದರು ಹೀಗೇ ಮುಂದುವರೆಸಿಕೊಂಡು ಹೋಗಬೇಕು. ಏಕೆಂದರೆ, ಬೀಜೇಪಿ ಪಕ್ಶ ಈಗ ಪೂರ‍್ಣ ಅದಿಕಾರಕ್ಕೆ ಬಂದಿರುವುದರಿಂದ, ಕನ್ನಡದಂತಹ ಹಿಂದಿಯೇತರ ಸ್ತಳೀಯ ನುಡಿಗಳನ್ನು ಚಚ್ಚರದಿಂದ ಎತ್ತಿಹಿಡಿಯುವ ಅವಶ್ಯಕತೆ ಇಂದು ಎಂದಿಗಿಂತಲೂ ಹೆಚ್ಚು ಉಂಟಾಗಿದೆ. ಉತ್ತರದ ಬೀಜೇಪಿ ಪಕ್ಶದವರು ಎಲ್ಲೆಡೆಯಲ್ಲೂ ಎಲ್ಲ ಸಂದರ‍್ಬಗಳಲ್ಲೂ ಹಿಂದೀಯಲ್ಲೇ ಮಾತಾಡುವುದಕ್ಕೆ ಶುರು ಮಾಡಿದ್ದಾರೆ. ಅವರ ಮುಂದಾಳುಗಳು ಆಂಗ್ಲ ಚಾನೆಲ್ಲುಗಳಿಗೆ ಬರುತ್ತಾರೆ, ಆದರೆ, ಇಂಗ್ಲೀಶ್ ಚೆನ್ನಾಗಿ ಬಂದರೂ, ಹಿಂದೀಯಲ್ಲೇ ರಾಜಾರೋಶವಾಗಿ ಮಾತಾಡುತ್ತಾರೆ. ಕೋಟ್ಯಂತರ ಬಾರತೀಯರಿಗೆ ಹಿಂದಿ ತಿಳಿಯದು ಎಂಬ ಪರಿವೆಯಾಗಲೀ ಕಾಳಜಿಯಾಗಲೀ ಅವರಿಗಿಲ್ಲ. ಹೀಗೆ ನಡೆದುಕೊಳ್ಳುವುದೂ ಕೂಡ ಒಂದು ರೀತಿಯಲ್ಲಿ ಹಿಂದೀ ಹೇರಿಕೆಯೇ ತಾನೆ?
      ಇಂತಹವರಿಗೆ ಪ್ರತ್ಯುತ್ತರವಾಗಿ ನಮ್ಮ ದಕ್ಶಿಣದ ಮುಂದಾಳುಗಳು ಕೂಡ ಎಲ್ಲಿ ಅಂದರಲ್ಲಿ ನಮ್ಮ ದ್ರಾವಿಡ ನುಡಿಗಳನ್ನೇ ಆಡಿ ತೋರಿಸಬೇಕು. ಆದರೆ, ಅಂತಹ ಗಂಡು ಇರುವ ಮುಂದಾಳುಗಳು ನಮ್ಮಲ್ಲಿದ್ದಾರೆಯೆ? ಹಿಂದೆ ಇದ್ದರು. ಎಪ್ಪತ್ತರ ದಶಕದಲ್ಲಿ ಒಮ್ಮೆ ದಿಲ್ಲಿಯ ಒಂದು ಸಮಾರಂಬದಲ್ಲಿ, ವೇದಿಕೆಯ ಮೇಲಿದ್ದವರು ಬರೀ ಹಿಂದಿಯಲ್ಲಿ ಬಾಶಣ ಮಾಡಿದರು. ಅದಕ್ಕೆ ಪ್ರತ್ಯುತ್ತರವಾಗಿ, ವೇದಿಕೆಯ ಮೇಲಿದ್ದ ನಮ್ಮ ಸಹದ್ರಾವಿಡರಾದ ತೆಲುಗಿನ ನೀಲಮ್ ಸಂಜೀವ ರೆಡ್ಡಿಯವರು, ತಮ್ಮ ಸರದಿ ಬಂದಾಗ ಮೊದಲೆರಡು ನಿಮಿಶ ತೆಲುಗಿನಲ್ಲಿ ಬಾಶಣ ಮಾಡಿ, ಹಿಂದೀವಾಲರಿಗೆ ಪೆಚ್ಚಾಗುವಂತೆ ಮಾಡಿ, ಬಳಿಕ ಇಂಗ್ಲೀಶಿನಲ್ಲಿ ಬಾಶಣವನ್ನು ಮುಂದುವರೆಸಿದರು. ಇಂತಹ ಗಂಡು ನಮ್ಮ ಈಗಿನ ತೆಂಕಣದ ಮುಂದಾಳುಗಳಿಗೆ ಇದೆಯೆ?
      ಕನ್ನಡವನ್ನು ಉಳಿಸುವ ಸಲುವಾಗಿ ನಾವು ಹಲವಾರು ಕಟ್ಟಳೆಗಳನ್ನು ತರಬಹುದು. ಸಂವಿದಾನವನ್ನೂ ತಿದ್ದಬಹುದು. ಆದರೆ, ಕನ್ನಡಿಗರಲ್ಲಿ ಕನ್ನಡದ ಅಬಿಮಾನವೇ ಇಲ್ಲದಿದ್ದರೆ ಕಟ್ಟಳೆಗಳಿಂದ ಏನು ಪ್ರಯೋಜನ? ವಲಸಿಗರ ಮಕ್ಕಳಿಗೆ ನಾವು ಕಟ್ಟಳೆ ಜಾರಿಗೊಳಿಸಿ ಕಡ್ಡಾಯವಾಗಿ ಶಾಲೆಯಲ್ಲಿ ಕನ್ನಡವನ್ನು ಕಲಿಸಬಹುದು. ಆದರೆ, ಅವರು ಕನ್ನಡವನ್ನು ಮಾತಾಡುವಂತೆಯೂ ಮಾಡಲು ಕಟ್ಟಳೆಯನ್ನು ಜಾರಿಗೊಳಿಸಲು ಬರುವುದೇ? ಇಂದು ಎಶ್ಟೊಂದು ಮಂದಿ ಹುಟ್ಟು ಕನ್ನಡಿಗರೇ ಕನ್ನಡ ಬಿಟ್ಟು ಇಂಗ್ಲೀಶಿನಲ್ಲಿ ಮಾತಾಡುತ್ತಿದ್ದಾರೆ. ಇಂತಹವರನ್ನೆಲ್ಲಾ ಕನ್ನಡದಲ್ಲಿ ಮಾತಾಡುವಂತೆ ಮಾಡಲು ಕಟ್ಟಳೆ ಮಾಡಲಾದೀತೆ? ಎಲ್ಲಕ್ಕೂ ಮೊದಲು ನಮ್ಮಲ್ಲಿ ಸ್ವಾಬಿಮಾನವಿರಬೇಕು. ಎಲ್ಲೆಡೆಯಲ್ಲೂ ನಾವು ನಮ್ಮ ನುಡಿಯನ್ನು ಆಡಬೇಕು ಮತ್ತು ವಲಸಿಗರ ಬಾಯಲ್ಲಿ ಆಡಿಸಬೇಕು. ಹಾಗೆ ಮಾಡಿದರೆ ಕನ್ನಡ ಉಳಿದೀತೇ ಹೊರತು, ಅದನ್ನು ಬಿಟ್ಟು ಬರೀ ಒಂದರ ಮೇಲೊಂದು ಕಟ್ಟಳೆಗಳನ್ನು ಹೊಸೆದರೆ ಏನೂ ಬಾಳ್ತೆಯಿಲ್ಲ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಶುಕ್ರವಾರ, ಮೇ 16, 2014

ಕಡ್ಡಾಯ ಕನ್ನಡ ಮಾದ್ಯಮ ಸರಿಯೆ?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ತಮ್ಮ ಮಕ್ಕಳು ಯಾವ ಮಾದ್ಯಮದಲ್ಲಿ ಕಲಿಯುತ್ತಾರೆ ಎಂಬುದು ತಾಯ್ತಂದೆಯರ ನಿರ‍್ದಾರವಲ್ಲದೆ ಮತ್ತಿನ್ನಾರದ್ದು?
      ಹೀಗೆ ಏಕೆ ಕೇಳುತ್ತಿದ್ದೇನೆ ಎಂದರೆ, ಇತ್ತೀಚೆಗೆ ಸುಪ್ರೀಮ್ ಕೋರ‍್ಟ್, ’ಕಲಿಕೆಯ ಒಯ್ಯುಗೆ ಯಾವುದೆಂಬುದು ತಾಯ್ತಂದೆಯರ ನಿರ‍್ದಾರವಲ್ಲದೆ ಸರ‍್ಕಾರದ್ದಲ್ಲ’ ಎಂದು ಕಡ್ಡಿ ಮುರಿದಂತೆ ತೀರ‍್ಪು ಕೊಟ್ಟಿದೆ, ಹಲವರು ’ಈ ತೀರ‍್ಪು ಸರಿ ಅಲ್ಲ’ ಎಂದು ಎದಿರೊಡ್ಡಿಕೆಯ ಬೊಬ್ಬೆಗಳನ್ನು ಹಾಕುತ್ತಿದ್ದಾರೆ, ಅದಕ್ಕೆ.
      ಕನ್ನಡವನ್ನು ಉಳಿಸುವ ಉದ್ದೇಶವನ್ನು ಒಳಗಿಟ್ಟುಕೊಂಡು, ಅದನ್ನು ಆಗಮಾಡಿಸುವುದಕ್ಕಾಗಿ, ಹೊರಗೆ, ’ತಾಯ್ನುಡಿಯಲ್ಲೇ ಮಕ್ಕಳ ಮೊದಲ ಕಲಿಕೆ ನಡೆಯಬೇಕು. ಇದು ಶಿಕ್ಶಣ ತಜ್ನರ ಒಮ್ಮತ ’ ಎಂಬ ಜಾಣವಾದವನ್ನು ಮುಂದಿಡುತ್ತಾ ಬಂದಿದ್ದ ಕರ‍್ನಾಟಕ ಸರ‍್ಕಾರದ ಹೂಟವನ್ನು ಸುಪ್ರೀಮ್ ಕೋರ‍್ಟ್ ಗಟ್ಟಿ ತೀರ‍್ಪಿನಿಂದ ಹೊಡೆದು ಹಾಕಿದೆ. ಸುಪ್ರೀಮ್ ಕೋರ‍್ಟಿನ ಈ ತೀರ‍್ಮಾನ ಸರಿಯೆ? ಇದು ಪ್ರಶ್ನೆ.
      ನನ್ನ ಅಬಿಪ್ರಾಯದಲ್ಲಿ, ಸರಿ. ಕಲಿಕೆಯ ಒಯ್ಯುಗೆ ಒಂದೇ ಅಲ್ಲ, ಮಕ್ಕಳು ಯಾವ ಹೆಸರನ್ನು ಹೊತ್ತು ಬದುಕುತ್ತಾರೆ, ಯಾವ ಮಾತನ್ನು ಆಡುತ್ತಾರೆ, ಯಾವ ಬಗೆಯ ನಡವಳಿಕೆಯನ್ನು ಬೆಳೆಸಿಕೊಳ್ಳುತ್ತಾರೆ, ಯಾವ ಮಕ್ಕಳೊಂದಿಗೆ ಬೆರೆಯುತ್ತಾರೆ, ಯಾವ ದರ‍್ಮವನ್ನು ನೆಚ್ಚಿಕೊಳ್ಳುತ್ತಾರೆ ಎಂಬವನ್ನೆಲ್ಲಾ ಅವರ ತಾಯ್ತಂದೆಯರೇ ನಿರ‍್ದರಿಸುತ್ತಾರೆ. ಇದು ಸ್ರುಶ್ಟಿಯ ನಿಯಮ. ಇಂತಹ ವಿಶಯಗಳಲ್ಲಿ ಸರ‍್ಕಾರವಾಗಲೀ ಬೇರಾರೇ ಆಗಲಿ, ತಲೆಹಾಕುವುದನ್ನು ಬೂಮಿಯ ಮೇಲಿನ ಹೆಚ್ಚೆಣಿಕೆಯ ತಂದೆ ತಾಯಿಗಳು ಒಪ್ಪುವುದಿಲ್ಲ. ಮೂಡನಂಬಿಕೆಯಲ್ಲಿ ಸಿಲುಕಿದ ಕೆಲ ತಾಯ್ತಂದೆಯರು ಹರಕೆ ತೀರಿಸುವುದೇ ಮುಂತಾದ ಕಾರಣಗಳಿಗಾಗಿ ತಮ್ಮ ಮಕ್ಕಳ ತಲೆಯ ಮೇಲೆ ತೆಂಗಿನಕಾಯಿ ಒಡೆಸುವುದೂ, ಮಕ್ಕಳ ಬೆನ್ನಿಗೆ ಕೊಕ್ಕೆ ಚುಚ್ಚಿಸಿ ಗಾಳಿಯಲ್ಲಿ ’ಸಿಡಿ’ ಆಡಿಸುವುದೂ ಮುಂತಾದ, ಮಕ್ಕಳ ಒಳಿತಿಗೆ ನಿಜಕ್ಕೂ ಕೆಡುಕನ್ನು ಉಂಟುಮಾಡುವಂತಹ ಆಚರಣೆಗಳನ್ನು ನಡೆಸುತ್ತಾರೆ. ಇಂತಹ ವಿಶಯಗಳಲ್ಲಿ ಮಾತ್ರ ಅಡ್ಡಬರುವುದಕ್ಕೆ ಸರ‍್ಕಾರಕ್ಕೆ ಇಲ್ಲವೆ ಸಮಾಜಕ್ಕೆ ಅದಿಕಾರವಿದೆಯೇ ಹೊರತು, ಕಲಿಕೆಯ ಮಾದ್ಯಮದಂತಹ ವಿಶಯಗಳಲ್ಲಿ ಅಲ್ಲ.
      ’ನಮ್ಮ ನಾಡಿನಲ್ಲಿ ನಮ್ಮ ಅಸ್ಮಿತೆ ಉಳಿಯಬೇಕೆಂದರೆ ನಮ್ಮ ನುಡಿ ಉಳಿಯಬೇಕು. ನಮ್ಮ ನುಡಿ ಉಳಿಯಬೇಕೆಂದರೆ ಕನ್ನಡ ಮಾದ್ಯಮದಲ್ಲೇ ಕಲಿಕೆ ಆಗಬೇಕು’, ಎಂದು ನೇರವಾಗೇ ಅಸ್ಮಿತೆಯ ಚವುಕಟ್ಟಿನಲ್ಲಿ ವಾದ ಮಾಡಿದ್ದರೆ ನಮ್ಮ ಸರ‍್ಕಾರಕ್ಕೆ ಕೋರ‍್ಟಿನಲ್ಲಿ ಸೋಲುಂಟಾಗುತ್ತಿರಲಿಲ್ಲ ಎಂದು ಈಗ ಕೆಲವರು ಎತ್ತಿ ಆಡುತ್ತಿದ್ದಾರೆ. ಈ ವಾದವೂ ತಾಯ್ತಂದೆಯರ ಸಹಜ ಹಕ್ಕಿಗೆ ದಕ್ಕೆ ತರುತ್ತಿದ್ದರಿಂದ, ಇದನ್ನೂ ಕೂಡ ಕೋರ‍್ಟು ಸಂವಿದಾನದಲ್ಲಿ ಕೊಡಮಾಡಿರುವ ಹಕ್ಕುಗಳನ್ನು ಹೆಸರಿಸಿ ಸುಲಬವಾಗೇ ತಳ್ಳಿ ಹಾಕುತ್ತಿತ್ತು.
      ನಿಜಕ್ಕೂ, ಕನ್ನಡವನ್ನು ಕಲಿಕೆಯ ಮಾದ್ಯಮವಾಗಿ ಹೇರುವ ಅದಿಕಾರ ಸರ‍್ಕಾರಕ್ಕೆ ಬರಬೇಕೆಂದರೆ, ಅದಕ್ಕೆ ಇರುವ ದಾರಿ ಒಂದೇ - ಸಂವಿದಾನವನ್ನು ತಿದ್ದುವುದು. ಆದರೆ, ಇದು ಹಗುರಾಗಿ ಆಗುವಂತಹುದಲ್ಲ. ಸಂವಿದಾನದ ತಿದ್ದುಪಡಿಗೆ ಇಡೀ ದೇಶದ ಹೆಚ್ಚೆಣಿಕೆಯ ಶಾಸಕರ ಒಪ್ಪಿಗೆ ಬೇಕೇ ಬೇಕು. ಆದರೂ, ಹೆಚ್ಚು ಸಮಯ ತೆಗೆದುಕೊಂಡರೂ, ಈ ತಿದ್ದುಪಡಿಯನ್ನು ಆಗಿಸುವುದಕ್ಕೆ ಸರ‍್ಕಾರ ದುಡಿಯಬೇಕೇ ಹೊರತು, ’ಮರುಪರಿಶೀಲನೆ ಮಾಡಿಸುತ್ತೇವೆ’ ಎಂದು ಮತ್ತೆ ಹಳೇ ವಾದವನ್ನೇ ಕೋರ‍್ಟಿನ ಮುಂದಿಟ್ಟು ಹೊತ್ತುಹಾಳುಮಾಡುವುದಲ್ಲ.
      ಅಶ್ಟಕ್ಕೂ, ಕನ್ನಡವನ್ನು ಕಲಿಕೆಯ ಮಾದ್ಯಮವಾಗಿ ಕಡ್ಡಾಯ ಮಾಡುವುದು ಸರ‍್ಕಾರಕ್ಕೆ ಎಂದೂ ಸಾದ್ಯವಾಗದೇ ಇರಬಹುದು. ಇಂದು ಹಳ್ಳಿಹಳ್ಳಿಗಳಲ್ಲಿ, ಕೊಂಪೆಕೊಂಪೆಗಳಲ್ಲಿ, ಮಕ್ಕಳ ತಂದೆತಾಯಿಗಳಿಗೆ ಬೇಕಾಗಿರುವುದು ಒಂದೇ - ತಮ್ಮ ಮಕ್ಕಳು ಆಂಗ್ಲ ಮಾದ್ಯಮದಲ್ಲಿ ಓದಬೇಕು ಎನ್ನುವುದು. ಅದಕ್ಕಾಗಿ ಸಾಲ ಮಾಡಿಯಾದರೂ ಮಕ್ಕಳನ್ನು ಆಂಗ್ಲ ಮಾದ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ನನ್ನಿನೆಲೆ ಇಂತಿರುವಾಗ, ಯಾವ ಸರ‍್ಕಾರಕ್ಕೆ ತಾನೆ ಇಂಗ್ಲೀಶಿನ ಮೇಲೆಡೆಗೆ ಕನ್ನಡವನ್ನು ತಂದಿಡಲು ಸಾದ್ಯವಾಗುತ್ತದೆ? ದೇಶದ ಸಂವಿದಾನದ ತಿದ್ದುಪಡಿ ಹಾಗಿರಲಿ, ಹೇಗೋ ಏನೋ ಕರ‍್ನಾಟಕ ರಾಜ್ಯ ಒಂದು ಸ್ವತಂತ್ರ ದೇಶವೇ ಆಯ್ತು ಎಂದುಕೊಳ್ಳೋಣ. ಆಗಲಾದರೂ ಸರ‍್ಕಾರಕ್ಕೆ ಕನ್ನಡ ಮಾದ್ಯಮವನ್ನು ಕಡ್ಡಾಯ ಮಾಡುವುದು ಸಾದ್ಯವಾಗುತ್ತದೆಯೆ? ಹಾಗೇನೇದರೂ ಸರ‍್ಕಾರ ಮಾಡಲು ಮುಂದಾದರೆ, ಕನ್ನಡಿಗ ತಂದೆತಾಯಿಗಳೇ ಬೀದಿಗಿಳಿದು ಎದಿರೊಡ್ಡಿಯಾರು! ಇಂದು ಇಂಗ್ಲೀಶಿನ ಸೆಳೆತ ಆ ಮಟ್ಟಕ್ಕಿದೆ.
      ಕನ್ನಡವನ್ನು ಉಳಿಸಬೇಕೆಂದಿದ್ದರೆ, ಸರ‍್ಕಾರ ಕೂಡಲೆ ಮಾಡಬೇಕಾಗಿರುವುದು ಈ ಮುಂತಾದವು - ’ಗಣಿತ ಮುಂತಾದ ವಿಶಯಗಳಿಗೆ ಎಶ್ಟರ ಮಟ್ಟಿನ ಒತ್ತು ಇದೆಯೋ ಅಶ್ಟೇ ಒತ್ತು ಕೊಟ್ಟು ಕನ್ನಡ ನುಡಿಯನ್ನೊಂದು ಕಡ್ಡಾಯ ವಿಶಯವಾಗಿ ಮಾಡಿ ನಾಡಿನ ಎಲ್ಲಾ ಶಾಲೆಗಳಲ್ಲಿ ಅದನ್ನು ಕಲಿಸುವಂತೆ ಆದೇಶ ಹೊರಡಿಸುವುದು (ಕೇರಳದಲ್ಲಿ ಇಂತಹ ಕಟ್ಟಳೆ ಜಾರಿಯಲ್ಲಿದೆ). ನಾಡಿನ ಅಂಗಡಿಗಳು, ಕಾಸಗಿ ಕಚೇರಿಗಳು, ಆಸ್ಪತ್ರೆಗಳು ಮುಂತಾದ ಎಲ್ಲಾ ಸಾರ‍್ವಜನಿಕ ವ್ಯವಹಾರದ ಎಡೆಗಳಲ್ಲಿ ಕನ್ನಡ ಬಯಸುವವರಿಗೆ ಕನ್ನಡದಲ್ಲೇ ವ್ಯವಹರಿಸುವ ಸವುಲಬ್ಯವನ್ನು ಕಡ್ಡಾಯಗೊಳಿಸುವುದು. ಸರ‍್ಕಾರಿ ವ್ಯವಹಾರ ಇಡಿಯಾಗಿ ಕನ್ನಡದಲ್ಲೇ ನಡೆವಂತೆ ಮಾಡುವುದು. ತ್ರಿಬಾಶಾ ಸೂತ್ರದಿಂದ ಹೊರಗೆ ಬರುವುದು. ಹೆಚ್ಚೆಡೆಗಳಲ್ಲಿ ಕನ್ನಡಿಗರಿಗೇ ಉದ್ಯೋಗ ಮೀಸಲಾಗಿರಿಸುವುದು (ಸರೋಜಿನಿ ಮಹಿಶಿ ವರದಿಯ ಅನುಶ್ಟಾನ)’.
      ಮೇಲಿನಂತಹ ನಡೆಗಳಿಂದ ಕನ್ನಡದ ಕಲಿಕೆ ಮತ್ತು ಬಳಕೆಯನ್ನು ಹೆಚ್ಚಿಸಬಹುದು. ಆದರೆ, ಇಲ್ಲೂ ಒಂದು ಕೇಳ್ವಿಯನ್ನು ಕೇಳಬೇಕಾಗುತ್ತದೆ. ಕನ್ನಡವನ್ನು ಕಲಿತ ಮಾತ್ರಕ್ಕೆ ಕನ್ನಡಿಗರಲ್ಲದವರು ನಿಜವಾದ ಕನ್ನಡಿಗರಾಗಿಬಿಡುತ್ತಾರೆಯೆ? ಕನ್ನಡ ಬಂದೊಡನೆ ಹೊರಗಿನವರಿಗೆ ಹುಟ್ಟುಕನ್ನಡಿಗರಿಗಿರುವಶ್ಟು ಕನ್ನಡ ನೆಲದ ಹಾಗೂ ನುಡಿಯ ಒಲವು ಬಂದುಬಿಡುತ್ತದೆಯೆ? ಒಟ್ಟಾರೆ ನಮ್ಮ ಹಾಗೇ ಕಾಣುವ, ನಮ್ಮ ನುಡಿಯಂತಹ ನುಡಿಗಳನ್ನೇ ಆಡುವ, ದ್ರಾವಿಡ ಹಿನ್ನೆಲೆಯ ತೆಂಕಣ ಬಾರತದ ಮಂದಿಯಲ್ಲಿ ನಮ್ಮ ನೆಲದ ಮೇಲೆ ನಮಗಿರುವಶ್ಟೇ ಒಲವು ಮೂಡಬಹುದು. ಆದರೆ, ಇದೇ ಮಾತನ್ನು ’ತೆಂಕಣಿಗರು ಕೀಳು’ ಎಂಬ ನಂಬಿಕೆಯನ್ನು ರೂಡಿಸಿಕೊಂಡಿರುವ ಬೇರೆ ಪ್ರದೇಶಗಳ ಮಂದಿಯ ಬಗ್ಗೆ ಹೇಳಲು ಬರುತ್ತದೆಯೆ?
      ಎಶ್ಟೋ ಹೊರಗಿನ ಮಂದಿ ಇಂದು ಯಾವಯಾವುದೋ ಕಾರಣಕ್ಕಾಗಿ ಕನ್ನಡದಲ್ಲಿ ಮಾತಾಡುವುದನ್ನು ಕಲಿತಿದ್ದಾರೆ. ಆದರೆ, ಅವರಲ್ಲಿ ಬಹುಮಂದಿಗೆ ಕನ್ನಡದೊಂದಿಗೆ ಗುರುತಿಸಿಕೊಳ್ಳುವ ಒಲವು ಇಲ್ಲ. ಇದೊಂದು ಕಡುನನ್ನಿ. ಆದ್ದರಿಂದ, ಹೊರಗಿನಿಂದ ನಮ್ಮ ನಾಡೊಳಗೆ ಬಂದು ಸೇರುತ್ತಿರುವ ವಲಸಿಗರ ಪ್ರಮಾಣದ ಮೇಲೆ ನಮಗೆ ಹಿಡಿತ ಇಲ್ಲದಿದ್ದರೆ, ಅದರಿಂದಲೂ ನಮ್ಮ ಅಸ್ಮಿತೆಗೆ ಕುಂದು ಬರುತ್ತದೆ. ಈ ನಿಟ್ಟಿನಲ್ಲೂ ಸಂವಿದಾನದ ತಿದ್ದುಪಡಿ ಆಗಬೇಕು. ಇದರ ಅರ‍್ತ, ಈ ದೇಶದ ಎಲ್ಲ ರಾಜ್ಯಗಳಿಗೂ ಹೆಚ್ಚುಕಡಿಮೆ ಸ್ವತಂತ್ರ ದೇಶಗಳಿಗೆ ಇರುವಶ್ಟೇ ಅದಿಕಾರವಿರಬೇಕು (true federalism). ಈ ಬಗೆಯ ಸ್ವಾತಂತ್ರ್ಯ ರಾಜ್ಯಗಳಿಗೆ ದೊರಕುವುದು ನ್ಯಾಯವೇ. ಏಕೆಂದರೆ, ವಯ್ಚಾರಿಕವಾಗಿ ನೋಡಿದರೆ, ಬಾರತ ರಾಜ್ಯಗಳ ಒಕ್ಕೂಟವಲ್ಲ, ದೇಶಗಳ ಒಕ್ಕೂಟ.
      ದೇಶಮಟ್ಟದ ಸ್ವಾತಂತ್ರ್ಯ ಪಡೆದುಕೊಳ್ಳುವ ಗುರಿ ಮುಟ್ಟುವುದು ಅರಿದೇ. ಆದರೆ, ಅಸಾದ್ಯವಲ್ಲ. ನಮ್ಮ ಹಾಗೇ ವಲಸಿಗರ ಮುತ್ತಿಗೆಯಿಂದ ತತ್ತರಿಸುತ್ತಿರುವ ಅಸ್ಸಾಮಿನಂತಹ ಬೇರೆ ರಾಜ್ಯಗಳೊಡನೆ ಕೂಡಿ ನಾವು ಹೋರಾಡಿದರೆ ಕಂಡಿತವಾಗಿಯೂ ಗುರಿ ತಲುಪುಬಹುದು. ಈ ಬಗೆಯ ಹೆಜ್ಜೆಗಳನ್ನೇ ಇಂದು ಕನ್ನಡಿಗರಾದ ನಾವು ಹಾಕಬೇಕಾಗಿರುವುದು.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಶುಕ್ರವಾರ, ಏಪ್ರಿಲ್ 25, 2014

ನಮ್ಮ ಮೆಟ್ರೋ ಮತ್ತು ಹಿಂದೀ ಹೇರಿಕೆ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಕೆಲ ವಾರಗಳ ಹಿಂದೆ ಬೆಂಗಳೂರಿನ ಹೆಮ್ಮೆಯ ನಮ್ಮ(!?) ಮೆಟ್ರೋ ರಯಿಲು ತನ್ನ ಎರಡನೆಯ ಹಳಿವಳಿಯನ್ನು (track-route) ಸಾರ್‌ವಜನಿಕ ಸೇವೆಗೆ ತೆರೆದಾಗ ಡೇಜಾವೂ ಎಂಬಂತೆ ಹಳೆಯ ಕೆಲ ದ್ರುಶ್ಯಗಳು ಟೀವೀಯ ಮೇಲೆ ಮತ್ತೆ ಕಾಣಿಸಿಕೊಂಡುವು. ಮೆಟ್ರೋದಲ್ಲಿ ಹಿಂದಿಯಲ್ಲಿ ಸಂದೇಶಗಳನ್ನು ಕೊಡುವುದನ್ನು ವಿರೋದಿಸುವ ಒಂದು ಚರ್‌ಚಾ ಕಾರ್‌ಯಕ್ರಮ ನಡೆಯಿತು. ಬನವಾಸಿ ಬಳಗದ ಗೆಳೆಯರು ಅದರಲ್ಲಿ ಪಾಲ್ಗೊಂಡು, ಮೆಟ್ರೋದಲ್ಲಿ ಹಿಂದೀ ಹೇರಿರುವುದು ಹೇಗೆ ತಪ್ಪು ಎಂಬುವುದನ್ನು ತಕ್ಕ ಕಾರಣಗಳನ್ನು ಕೊಡುತ್ತ ನೋಡುಗರ ಮುಂದೆ ತೆರೆದಿಟ್ಟರು. ದಯ್‍ತ್ಯ ಅಳವನ್ನು ಹೊಂದಿರುವ ಕನ್ನಡ ಸಂಗಟನೆಯ ಮುಂದಾಳೊಬ್ಬರು ಸುದ್ದಿ ತುಣುಕೊಂದರಲ್ಲಿ, ’ನೆರೆಯ ತಮಿಳುನಾಡಿನಲ್ಲಿ ಯಾವ ಸಂಚಾರ ಏರ್‌ಪಾಡಿನಲ್ಲೂ ಹಿಂದಿಯ ಬಳಕೆ ಇಲ್ಲ. ನಮ್ಮ ಮೆಟ್ರೋದಲ್ಲಿ ಮಾತ್ರ ಯಾಕಿರಬೇಕು? ಇದರ ಬಗ್ಗೆ ಸಂಬಂದಪಟ್ಟವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ’ಎಂಬ ಹೇಳಿಕೆ ಕೊಟ್ಟರು. ನಿರಾಸೆಯ ಸಂಗತಿ ಏನೆಂದರೆ, ಇದೇ ಬಗೆಯ ಹೇಳಿಕೆಗಳೂ ಚರ್‌ಚೆಗಳೂ ಕೆಲ ವರ‍್ಶಗಳ ಹಿಂದೆ ನಮ್ಮ ಮೆಟ್ರೋ ತನ್ನ ಸೇವೆಯನ್ನು ಮೊತ್ತಮೊದಲು ತೊಡಗಿಸಿದಾಗ ಕೂಡ ಕೇಳಿ ಬಂದಿದ್ದವು. ಇದರ ಅರ್‌ತ ಏನೆಂದರೆ, ಈ ಎರಡು ಮೂರು ವರ್‌ಶಗಳಲ್ಲಿ ಹಿಂದೀ ಸಂದೇಶಗಳ ಬಗ್ಗೆ ನಮ್ಮಲ್ಲಿ ಕೆಲವರು ತೋರಿಸಿರುವ ವಿರೋದದ ವಿಶಯದಲ್ಲಿ ಮೆಟ್ರೋ ಸಂಸ್ತೆ ’ಕ್ಯಾರೆ’ಎಂದು ಕೂಡ ಅಂದಿಲ್ಲವೆಂಬುದು!
      ನಮ್ಮ ಮೆಟ್ರೋ ಸಂಸ್ತೆ ಈ ವಿಶಯದಲ್ಲಿ ಏನೂ ಗೊತ್ತಿಲ್ಲದಂತೆ ಇರುವುದು ಏಕೆ? ಹಿಂದೀ ಹೇರಿಕೆಯ ವಿಶಯವನ್ನು ಯಾರೂ ನೇರವಾಗಿ ಅದರ ಗಮನಕ್ಕೆ ತಂದಿಲ್ಲವೆಂದಲ್ಲ. ಬನವಾಸಿ ಬಳಗದ ವೆಬ್ ತಾಣಕ್ಕೆ ಹೋಗಿ ನೋಡಿದರೆ, ಅವರು ಮೆಟ್ರೋ ಸಂಸ್ತೆಯ ಮುಂದೆ ಆಗಾಗ್ಗೆ ಈ ವಿಶಯದಲ್ಲಿ ಆಕ್ಶೇಪಿಸಿಕೊಂಡು ಬಂದಿರುವುದು ಕಾಣುತ್ತದೆ. ಕಾನೂನು ಕೊಡಮಾಡಿರುವ ಸವುಲಬ್ಯಗಳನ್ನು ಬಳಸಿಕೊಂಡು ಬನವಾಸಿ ಬಳಗದವರು, ಹಿಂದೀ ಹೇರಿರುವ ತಪ್ಪಿನ ಬಗ್ಗೆ ಮೆಟ್ರೋ ಸಂಸ್ತೆಯ ಪಾರುಪತ್ಯೆಯವರಿಗೆ ಹಲವಾರು ಬಾರಿ ಎತ್ತಿ ತೋರಿಸಿದ್ದಾರೆ. ಸಾರ‍್ವಜನಿಕರ ಸಾವಿರಾರು ಎಲೆಕ್ಟ್ರಾನಿಕ್ ಸಹಿಗಳನ್ನು ಕೂಡ ಇದರ ಬಗ್ಗೆ ಬಳಗದ ಪರಿವಾರದವರು ಒಟ್ಟಯಿಸಿ, ಸಂಬಂದಪಟ್ಟವರಿಗೆ ರವಾನಿಸಿದ್ದಾರೆ. ಇಶ್ಟೆಲ್ಲ ಮಾಡಿದರೂ ಇಳುವರಿ ಮಾತ್ರ ಸೊನ್ನೆ! ಇದು ಹೀಗೇ ನಡೆದರೆ ಕನ್ನಡಿಗರ ’ನಮ್ಮ’ ಮೆಟ್ರೋದಲ್ಲಿ ಉತ್ತರದವರ ಹಿಂದಿ ನೆಲೆಯಾಗಿ ನಿಂತು ರಾರಾಜಿಸುವುದು ಗ್ಯಾರಂಟಿ.
      ಹಾಗಾದರೆ, ನಮ್ಮ ಮೆಟ್ರೋ ಸಂಸ್ತೆಯನ್ನು ಮಣಿಸಲು ಏನು ಮಾಡಬೇಕು? ಮುಕ್ಯವಾಗಿ, ನಾವು ಆರಿಸಿ ಕೂರಿಸಿರುವ ನಮ್ಮ ’ಪ್ರತಿನಿದಿಗಳ’ ಬಾಯಿಂದ ಮೆಟ್ರೋ ಸಂಸ್ತೆಗೆ ಹೇಳಿಸಬೇಕು. ಮೆಟ್ರೋ ಸೇವೆ ತೊಡಗಿದಂದಿನಿಂದ ಇಶ್ಟು ಕಾಲದವರೆಗೆ, ನಮ್ಮ ಒಬ್ಬ ಪ್ರತಿನಿದಿಯಾದರೂ ಈ ವಿಶಯದಲ್ಲಿ ತುಟಿಪಿಟಕ್ಕೆಂದಿದ್ದಾರೆಯೆ? ಇಲ್ಲ! ಹಿಂದೀ ಮಾತಾಡುವ ದಿಲ್ಲಿಯ ಹಯ್ ಕಮಾಂಡಿನವರಿಂದ ಮಾತು ಮಾತಿಗೆ ಅಣತಿಗಳನ್ನು ಹೇಳಿಸಿಕೊಳ್ಳುವ ಚಾಳಿಯನ್ನು ಮಯ್ಗೂಡಿಸಿಕೊಂಡಿರುವ ಇವರಿಂದ ಹಿಂದೀ ವಿರೋದದ ಹೇಳಿಕೆಗಳು ಎಲ್ಲಾದರೂ ಬರುವುದುಂಟೆ? ಹೇಗೋ ಮೊದಲು ಇವರ ಬಾಯಿಂದ ಮೆಟ್ರೋದಲ್ಲಿನ ಹಿಂದೀ ಸಂದೇಶಗಳನ್ನು ತೆಗೆದು ಹಾಕುವ ಹೇಳಿಕೆಗಳನ್ನು ನಾವು ಬರಿಸಬೇಕು. ಇದಕ್ಕಾಗಿ ಇವರ ಬಳಿ ಹೋಗಿ ಬರೀ ಕೋರಿಕೊಂಡರೆ ಆಗುವುದಿಲ್ಲ. ಜನಬಲವಿಲ್ಲದ ಯಾವ ಕೋರಿಕೆಗಳ ವಿಶಯದಲ್ಲೂ ಜನನಾಯಕರು ತಮ್ಮ ’ಬೆಲೆಕಟ್ಟಲಾಗದ’ ಸಮಯವನ್ನು ಹಾಳುಮಾಡಿಕೊಳ್ಳುವುದಿಲ್ಲ. ಆದ್ದರಿಂದ, ಎಲ್ಲಕ್ಕೂ ಮೊದಲು ನಾವು ನಮ್ಮ ಕೋರಿಕೆಗೆ ಜನಬಲವಿದೆ ಎಂಬುದನ್ನು ತೋರಿಸಬೇಕು.
      ಜನಬಲವನ್ನು ತೋರಿಸುವುದಕ್ಕೆ ಎಲೆಕ್ಟ್ರಾನಿಕ್ ಸಹಿಗಳು ನಮ್ಮ ದೇಶದ ವ್ಯವಸ್ತೆಯಲ್ಲಿ ಸಾಲುವುದಿಲ್ಲ ಎನ್ನುವುದು ನನ್ನ ನಂಬಿಕೆ. ಈ ಆದುನಿಕ ದಿನಗಳಲ್ಲೂ ನಮ್ಮಲ್ಲಿ, ಹತ್ತಾರು ಸಾವಿರ ಜನಗಳನ್ನು ಒಂದೆಡೆ ಸೇರಿಸಿ ಜನಬಲವನ್ನು ಪ್ರದರ್‌ಶಿಸುವುದೇ ಪರಿಣಾಮಕಾರಿ ಎನಿಸುತ್ತದೆ ನನಗೆ. ಆದರೆ, ಹತ್ತಾರು ಸಾವಿರ ಜನಗಳನ್ನು, ಅದರಲ್ಲೂ ಹಿಂದೀ ವಿರೋದಂತಹ ಜನಾಸಕ್ತಿ ಇರದ ವಿಶಯಗಳಲ್ಲಿ, ಒಂದೆಡೆ ಸೇರಿಸುವುದು ಹೇಗೆ? ಇದೇ ದೊಡ್ಡ ಪ್ರಶ್ನೆ. ಇದಕ್ಕೆ ಉತ್ತರ ಕಂಡುಕೊಂಡರೆ ಮಾತ್ರ ಹಿಂದೀ ಹೇರಿಕೆಯನ್ನು ಮೆಟ್ರೋದಿಂದ ತೆಗೆಯಲು ಆಗಬಹುದು ಎನಿಸುತ್ತದೆ.
      ಬೆಂಗಳೂರಲ್ಲದೆ ಬೇರೆ ಊರುಗಳಲ್ಲಿ ಬದುಕುವ ಒಟ್ಟಾರೆ ಕನ್ನಡಿಗರಿಗೆ ಮೆಟ್ರೋದಲ್ಲಿ ಹಿಂದಿ ತೂರಿಸಿರುವುದು ಒಂದು ಸಮಸ್ಯೆಯೇ ಎನಿಸಿಲ್ಲ. ಇದು ಸಹಜ. ಹೋಗಲಿ, ಬೆಂಗಳೂರಿನ ಕನ್ನಡಿಗರಿಗಾದರೂ ಇದು ಒಂದು ’ಇಶ್ಯೂ’ ಆಗಿದೆಯೆ? ಅನುಮಾನ. ಬೆಂಗಳೂರಿನ ಕನ್ನಡಿಗರು ತಾವೇ ಮೇಲೆ ಬಿದ್ದು ಹಿಂದೀ ಮಾತಾಡುವುದನ್ನು ನೋಡಿದರೆ, ಸಾರ್‌ವಜನಿಕ ಕಾರ್‌ಯಕ್ರಮಗಳಲ್ಲಿ ಹಿಂದೀ ಬಾಶಣಗಳನ್ನು ಆರಾಮಾಗಿ ಕುಳಿತು ಕೇಳುವುದನ್ನು ನೋಡಿದರೆ, ಅವರಿಗೆ ಹಿಂದೀ ಬಳಕೆಯ ಬಗ್ಗೆ ಬೇಸರವಿಲ್ಲದಂತೆ ಕಾಣುತ್ತದೆ. ಈ ಮಾತು, ಬರೀ ಬೆಂಗಳೂರಿನವರಿಗೇ ಏಕೆ, ಇಡೀ ಕರ್‌ನಾಟಕದ ಜನರಿಗೇ ಅನ್ವಯವಾಗುತ್ತದೆ ಎಂದರೂ ತಪ್ಪಾಗಲಾರದು. ಸಿನಿಮಾಗಳಲ್ಲಿ, ಟೀವೀಯಲ್ಲಿ, ಕನ್ನಡಿಗರೇ ಸಾಲು ಸಾಲು ಹಿಂದೀ ಮಾತಾಡುವುದನ್ನು ಈಗ ನೋಡುತ್ತಿದ್ದೇವೆ. ಪೂರ್‌ತಿ ಹಿಂದೀ ಬಾಶೆಯಲ್ಲೇ ಸಂದರ್‌ಶನಗಳನ್ನು ನಡೆಸುವುದನ್ನು ನೋಡುತ್ತಿದ್ದೇವೆ. ಕನ್ನಡ ಹಾಡುಗಳ ಕಾರ‍್ಯಕ್ರಮಗಳಲ್ಲಿ ಕನ್ನಡದ ಹಾಡುಗಾರರೇ ಉಬ್ಬಿನಿಂದ ಹಿಂದೀ ಹಾಡುಗಳನ್ನು ಹಾಡುವುದನ್ನು ನೋಡುತ್ತಿದ್ದೇವೆ. ಇದನ್ನೆಲ್ಲಾ ನೋಡಿದರೆ, ಕನ್ನಡಿಗರು ಹಿಂದೀಯನ್ನು ಆಗಲೇ ಹೆಚ್ಚುಕಡಿಮೆ ಒಪ್ಪಿಕೊಂಡಿರುವಂತೆ ಕಾಣುತ್ತದೆ. ಈ ಊಹೆ ನಿಜವಾದರೆ, ಹಿಂದೀಯನ್ನು ಮೆಟ್ರೋದಿಂದಾಗಲೀ, ಕರ್‌ನಾಟಕದಿಂದಾಗಲೀ ತೆಗೆದು ಹಾಕುವುದು ಹಿಮಾಲಯವನ್ನು ಹತ್ತುವಶ್ಟೇ ಅರಿದಾಗುತ್ತದೆ.
      ಆದ್ದರಿಂದ, ಮೊದಲು ನಾವು ಬೆಂಗಳೂರು ಕನ್ನಡಿಗರಲ್ಲಿ ಎಶ್ಟು ಮಂದಿಗೆ ಮೆಟ್ರೋದಿಂದ ಹಿಂದಿಯನ್ನು ತೆಗೆಸುವ ಆಸೆ ಇದೆ ಎಂಬುದನ್ನು ಕಂಡುಹಿಡಿಯಬೇಕು. ಬೆಂಗಳೂರಿನ ಬೇರೆ ಬೇರೆ ಬಾಗಗಳಲ್ಲಿ, ಬೇರೆ ಬೇರೆ ವರ್‌ಗಗಳ ಕನ್ನಡಿಗರನ್ನು ಬೇಟಿ ಮಾಡಿ, ಮಾತಾಡಿಸಿ, ಈ ವಿಶಯದಲ್ಲಿ ಅವರಿಗೆ ಎಶ್ಟರ ಮಟ್ಟಿನ ಆಸಕ್ತಿ ಇದೆ ಎಂಬುದನ್ನು ಅರಿತುಕೊಳ್ಳಬೇಕು. ಬರೀ ಇಂಟರ್‌ನೆಟ್ಟನ್ನು ನೆಚ್ಚಿಕೊಂಡರೆ ಸಾಲದು. ಸಾಕಶ್ಟು ಮಂದಿಯಲ್ಲಿ ಹಿಂದೀ ಬಗ್ಗೆ ವಿರೋದ ಇದೆ ಎಂದು ಕಂಡುಬಂದರೆ, ಬೆಂಗಳೂರಿನ ಉಳಿದ ತೆಂಕಣ ಬಾರತೀಯರ ಬೆಂಬಲವನ್ನು ಪಡೆದುಕೊಳ್ಳುವ ಮುಂದಿನ ಹೆಜ್ಜೆಯನ್ನು ಇಡಬಹುದು. ಬೆಂಗಳೂರಿನ ದ್ರಾವಿಡ ನುಡಿಗರು ಒಟ್ಟಾಗಿ ಸೇರಿದರೆ, ಹಿಂದೀಯನ್ನು ಬೆಂಗಳೂರಿಂದ ಒಂದೇ ನಾಳಿನಲ್ಲಿ ತೊಲಗಿಸಬಹುದು. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಸಹಜವಾಗಿ ಕನ್ನಡಿಗರೇ ಇಡಬೇಕು. ಕನ್ನಡಿಗರು, ತಮಿಳರು, ತೆಲುಗರು ಮತ್ತು ಮಲಯಾಳಿಗರು ಒಂದಾದರೆ ಹಿಂದೀ ಆಟ ನಡೆಯುವುದಿಲ್ಲ. ಆದರೆ ನಾವೆಲ್ಲ ಹೀಗೆ ಒಂದಾಗುವುದಕ್ಕೆ ನಮ್ಮ ಕನ್ನಡ ಸಂಗಟನೆಗಳೇ ಅಡ್ಡ ಬಂದರೂ ಬರಬಹುದು. ಅಡಿಗಡಿಗೂ ತಮಿಳರನ್ನು ಬಯ್ದುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ನಮ್ಮ ಎಶ್ಟೋ ರೋಲ್ಕಾಲ್ ಸಂಗಟನೆಗಳಿಗೆ ದ್ರಾವಿಡರು ಒಂದಾಗುವುದು ಬೇಡ ಎನಿಸಿದರೆ ಅಚ್ಚರಿಯೇನೂ ಇರಬಾರದಶ್ಟೇ?
      ಒಟ್ಟಿನಲ್ಲಿ ನನ್ನ ಅನಿಸಿಕೆ ಇದು - ನಮ್ಮ ಮೆಟ್ರೋದಿಂದ ಹಿಂದಿಯನ್ನು ತೆಗೆಸುವುದಕ್ಕೆ, ಮೊದಲು ನಾವು ಮಾಡಬೇಕಾದುದು ಬೆಂಗಳೂರಿನ ಎಶ್ಟು ಮಂದಿ ಕನ್ನಡಿಗರಿಗೆ ಇದು ಬೇಕಾಗಿದೆ ಎಂದು ತಿಳಿದುಕೊಳ್ಳುವುದು. ಇಂಟರ್‌ನೆಟ್ ಒಂದೇ ಅಲ್ಲದೆ ಬೇರೆ ಇನ್ನು ಯಾವ ಯಾವ ಬಗೆಯಲ್ಲಿ ಇದನ್ನು ಮಾಡಬಹುದು ಎಂಬುದನ್ನು ನಾವು ಎಣಿಸಬೇಕು. ನಿಮಗೇನಾದರೂ ತೋಚಿದರೆ ಎಲ್ಲರೊಡನೆ ಈ ತಾಣದಲ್ಲಿ ಹಂಚಿಕೊಳ್ಳಿ. ನಾವೆಲ್ಲ ಒಬ್ಬಗೆಯಿಂದ ಒಟ್ಟಾಗಿ ನೆಗಳಿದರೆ ಗುರಿಯನ್ನು ಮುಟ್ಟುವುದು ಆಗದ ಮಾತೇನೂ ಅಲ್ಲ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಸೋಮವಾರ, ಮಾರ್ಚ್ 17, 2014

ತಿಪ್ಪಸಂದ್ರದಲ್ಲಿ "ಇಂಗ್ಲಿಶ್ ಕಲಿಸಿ - ಹಿಂದಿ ಕಳಿಸಿ" ಅರುಹುನಡೆ

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ಮಾಗಡಿ ತಾಲೂಕಿನ ತಿಪ್ಪಸಂದ್ರದಲ್ಲಿ "ಇಂಗ್ಲಿಶ್ ಕಲಿಸಿ - ಹಿಂದಿ ಕಳಿಸಿ" ಅರುಹುನಡೆಯ ಮೊತ್ತಮೊದಲ ಕಾರ‍್ಯಕ್ರಮವನ್ನು ಬಳಗ ನಡೆಸಿತು. ಕಾರ‍್ಯಕ್ರಮದ ಹೆಚ್ಚಿನ ಕೆಲವು ಚಿತ್ರಗಳನ್ನು ವಿವರಣೆಯೊಡನೆ ನಮ್ಮ Facebook  ತಾಣದ Photos ವಿಬಾಗದಲ್ಲಿ ಹಾಕಿದೆ (https://www.facebook.com/groups/kannadigarudravidare/photos/). ಅವನ್ನೂ ನೋಡಲು ಮರೆಯಬೇಡಿ. ಇನ್ನು, ಅರುಹುನಡೆಗೆ ಪ್ರೇರಣೆ ಏನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ತಾಣದ ಅರುಹುನಡೆ ಪುಟವನ್ನು ನೋಡಿ.

ಮೊದಲ ಚಿತ್ರದಲ್ಲಿರುವವರು, ಎಡದಿಂದ ಬಲಕ್ಕೆ, ಸುರೇಶ್, ಬಾಶಾ ಮತ್ತು ನಾನು (ಎಚ್. ಎಸ್. ರಾಜ್)














ನಾನು ಮತ್ತು ಗೆಳೆಯರಾದ ಸುರೇಶ್, ಬಾಶಾ, ನವಿಲ್ - ನಾವು ನಾಲ್ವರೂ ನಮ್ಮ ಓಮ್ನಿ ವ್ಯಾನಿನಲ್ಲಿ ಕಾರ‍್ಯಕ್ರಮದ ಸರಕನ್ನೆಲ್ಲಾ ತುಂಬಿಕೊಂಡು ಮದ್ಯಾಹ್ನ ಬೆಂಗಳೂರಿಂದ ಹೊರಟು ಸುಮಾರು ಮೂರು ಗಂಟೆಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯನ್ನು ತಲುಪಿದೆವು.
      ತಿಪ್ಪಸಂದ್ರದಲ್ಲಿ ಸರ‍್ಕಾರ ಕನ್ನಡಿಗರ ತೆರಿಗೆ ಹಣದಲ್ಲಿ ದೊಡ್ದದೊಂದು ಸಂಸ್ಕ್ರುತ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಕಟ್ಟಲಿದೆ. ನಮ್ಮ ಮಕ್ಕಳಿಗೆ ಬಾಳ್ತೆ ಇರುವ ಕನ್ನಡ ಇಂಗ್ಲೀಶುಗಳನ್ನು ಹೇಳಿಕೊಡುವುದನ್ನು ಬಿಟ್ಟು ಉಪಯೋಗವಿರದ ಸಂಸ್ಕ್ರುತಕ್ಕೆ ಸವಲತ್ತುಗಳನ್ನು ಪೋಲು ಮಾಡುವುದು ತಪ್ಪು ಎಂಬುದು ನಮ್ಮ ಅನಿಸಿಕೆ. ಆದ್ದರಿಂದ, ತಿಪ್ಪಸಂದ್ರದಲ್ಲೇ ನಮ್ಮ ಅರುಹುನಡೆಯನ್ನು ಸಾಂಕೇತಿಕ ಪ್ರತಿಬಟನೆ ಎಂಬಂತೆ ಶುರು ಮಾಡಿದೆವು.
      ನಮ್ಮ ಕಾರ‍್ಯಕ್ರಮ ನಡೆಸಿಕೊಡುವುದರ ಬಗ್ಗೆ ತಿಪ್ಪಸಂದ್ರದ ಪಂಚಾಯತಿಯವರಿಗೆ ನಾವು ಮೊದಲೇ ತಿಳಿಸಿದ್ದೆವು. ಊರನ್ನು ತಲುಪಿದ ಮೇಲೆ, ಮೊದಲು "ಇಂಗ್ಲಿಶ್ ಕಲಿಸಿ, ಹಿಂದಿ ಕಳಿಸಿ" ಎಂದು ಸಾರುವ ಅರುಹುನಡೆಯ ನಮ್ಮ ಬ್ಯಾನರನ್ನು ಹಿಡಿದು ಊರಿನ ಮುಕ್ಯ ಬೀದಿಗಳಲ್ಲಿ ಕಾರ‍್ಯಕ್ರಮಕ್ಕೆ ಜನರನ್ನು ಮೆಗಾಫೋನಿನ ಮೂಲಕ ಕರೆಯುತ್ತಾ ಒಮ್ಮೆ ಹೋಗಿ ಬಂದೆವು. ಬಂದೊಡನೆ, ಪಂಚಾಯತಿ ಕಚೇರಿಯ ಎದುರಿರುವ ನಾಗರಕಟ್ಟೆಯ ಬದಿ ನಮ್ಮ ಸವುಂಡ್ ಸಿಸ್ಟಮ್ಮನ್ನು ಅಣಿಗೊಳಿಸಿದೆವು. ಹಾಗೇ ಬ್ಯಾನರನ್ನೂ ಕಟ್ಟಿದೆವು. ಕೊಂಚ ಹೊತ್ತಿನಲ್ಲಿ ಮಂದಿ ಬರಲು ತೊಡಗಿದರು.
      ’ದೊಡ್ಡ ಊರುಗಳಲ್ಲಿ ಜನಕ್ಕೆ ಕಾರ‍್ಯಕ್ರಮಗಳಲ್ಲಿ ಆಸಕ್ತಿ ಇರುವುದಿಲ್ಲ. ಆದರೆ, ಚಿಕ್ಕ ಊರುಗಳಲ್ಲಿ ಹಾಗಲ್ಲ. ಕುತೂಹಲಕ್ಕಾಗಿಯಾದರೂ ಕಾರ‍್ಯಕ್ರಮಗಳಿಗೆ ಬರುತ್ತಾರೆ’ ಎಂಬುದು ನಮ್ಮ ಎಣಿಕೆಯಾಗಿತ್ತು. ನಮ್ಮ ಎಣಿಕೆ ಪೂರ್‌ತಿ ಸರಿಯಲ್ಲ ಎಂಬುದು ಬೇಗನೇ ಗೊತ್ತಾಯಿತು! ಸುಮಾರು ಅರುವತ್ತೋ ಎಪ್ಪತ್ತೋ ಮಂದಿ ಬಂದಿದ್ದರು. ಅದು ಅಲ್ಲಿನ ಒಟ್ಟು ವಯಸ್ಕ ಜನಸಂಕ್ಯೆಯ ಶೇಕಡಾ ಹತ್ತರಶ್ಟು ಮಾತ್ರ. ಹೆಂಗಸರಂತೂ ಬೆರಳೆಣಿಕೆಯಶ್ಟಟಿದ್ದರು, ಅಶ್ಟೇ. ಬಹುಮಂದಿ ಹೆಂಗಸರು ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಮುಂತಾದ ಮನೆ ಕೆಲಸಗಳನ್ನು ಮಾಡಿಕೊಂಡಿದ್ದರು. ಯುವಕರೂ ಹೆಚ್ಚಾಗಿ ಕಾಣಲಿಲ್ಲ. ಬಂದವರಲ್ಲಿ ಹೆಚ್ಚಿನವರು ನಡು ವಯಸ್ಸಿನವರಾಗಿದ್ದರು.
      ನಾವು ಕುರ್‌ಚಿಗಳ ಏರ‍್ಪಾಡು ಮಾಡಿರಲಿಲ್ಲ. ಹಾಗಾಗಿ, ಬಂದವರೆಲ್ಲಾ ಎಲ್ಲೆಲ್ಲಿ ಕಟ್ಟೆ ಕಲ್ಲುಗಳಿದ್ದವೋ, ಅಲ್ಲಲ್ಲಿ ಕುಳಿತುಕೊಂಡು ಬಾಶಣವನ್ನು ಕೇಳಿದರು. ಬಹಳಶ್ಟು ಜನ ಅಂಗಡಿಗಳ ಮುಂದಿನ ಬೆಂಚುಗಳ ಮೇಲೆ ಕುಳಿತಿದ್ದರು. ಗೆಳೆಯ ಸುರೇಶ್ ಬಹುದೂರಕ್ಕೆ ಕೇಳಿಸಲೆಂದೇ ಉದ್ದೇಶಿಸಿ ತಮ್ಮ ಕಯ್ಗಳಿಂದಲೇ ವಿಶೇಶವಾಗಿ ಮಾಡಿದ್ದ ನಮ್ಮ ಎರಡೂ ಸ್ಪೀಕರುಗಳೂ ಈ ಸಂದರ‍್ಬದಲ್ಲಿ ತುಂಬು ಉಪಯೋಗಕ್ಕೆ ಬಂದವು. ಸುರೇಶರ ಹಾಗೂ ಈ ಕೆಲಸದಲ್ಲಿ ನೆರವಾದ ಅವರ ಅಣ್ಣನವರ ಕವುಶಲ್ಯಕ್ಕೆ ನಾನು ರುಣಿ.
      ’ಮಕ್ಕಳ ಮೊದಲ ಕಲಿಕೆ ಕನ್ನಡದಲ್ಲೇ ಆಗಬೇಕು. ಆದರೆ, ಮೊದಲಿಂದಲೇ ಅವರಿಗೆ ಇಂಗ್ಲೀಶಿನಲ್ಲಿ ಮಾತನಾಡುವುದನ್ನು ಹೇಳಿಕೊಡಬೇಕು. ಹಾಗೆ ಹೇಳಿಕೊಡುವ ಸವುಲಬ್ಯ ಆಗಲೇ ಇದೆ. ಅದನ್ನು ಸರ‍್ಕಾರ ಎಲ್ಲಾ ಕನ್ನಡ ಮಾದ್ಯಮ ಶಾಲೆಗಳಲ್ಲಿ ಜಾರಿಗೆ ತರಬೇಕು. ಉಪಯೋಗಕ್ಕೆ ಬಾರದ ಹಿಂದೀ ಕಲಿಸುವುದರ ಬದಲು, ಅದೇ ಸಮಯಯವನ್ನು ಇಂಗ್ಲೀಶ್ ಕಲಿಸುವುದಕ್ಕೆ ಬಳಸಬೇಕು’ - ಇದು ನನ್ನ ಬಾಶಣದ ತಿರುಳು. ಬಾಶಣ ಅರ‍್ದ ಗಂಟೆ ಮೀರಲಿಲ್ಲ. ಬಾಶಣದ ಬಳಿಕ ಒಂದಿಬ್ಬರು ಮೂವರು ಕೇಳಿದ ಪ್ರಶ್ನೆಗಳಿಗೆ ತಕ್ಕ ಮಾರು ಹೇಳಿದೆ. ಅಲ್ಲಿಗೆ ನಮ್ಮ ಕಾರ‍್ಯಕ್ರಮ ಮುಗಿಯಿತು.
      ವಿಶೇಶ ಸಂಗತಿಗಳೇ ನಡೆಯದಂತೆ ಸಪ್ಪೆಯಾಗಿ ನಮ್ಮ ಕಾರ‍್ಯಕ್ರಮವೇನೂ ಮುಗಿದು ಹೋಗಲಿಲ್ಲ. ಕಾರ‍್ಯಕ್ರಮದ ಮುನ್ನ, "ಹಿಂದಿ ಕಳಿಸಿ" ಎಂಬ ನಮ್ಮ ಬ್ಯಾನರಿನ ಸಂದೇಶವನ್ನು ತಪ್ಪಾಗಿ ಅರ‍್ತ ಮಾಡಿಕೊಂಡ ಒಬ್ಬ ಹೆಣ್ಣುಮಗಳು, ’ಬೆಂಗ್ಳೂರ‍್ನಾಗೇ ಆಪಾಟಿ ಇಂದಿ ಜನ್‍ಗುಳು ತುಂಬ್ಕಂಡವ್ರೆ. ಅವ್ರುನ್ ಮದ್ಲ್ ಕಳ್ಸಿ, ಆಮೇಲ್ ಇಲ್ಲಿಗ್ ಬರ್ರಿ’ ಎಂದು ನಮಗೆ ತಾಕೀತು ಮಾಡಿದಳು! ಕಾರ‍್ಯಕ್ರಮದ ಬಳಿಕ, ಹಿಂದಿಯನ್ನು ’ಮಾತ್ರುಬಾಶೆ’ಎಂದು ತಪ್ಪಾಗಿ ತಿಳಿದುಕೊಂಡಿದ್ದ ಒಬ್ಬರು, ’ನಮ್ಮ ಮಾತ್ರುಬಾಶೆಯನ್ನೇ ಕಳಿಸಿ ಅಂತಿದ್ದೀರಲ್ಲಾ, ಸರೀನಾ?’ ಎಂದು ಕಳಕಳಿಯನ್ನು ನಟಿಸಿ ಆಕ್ಶೇಪಿಸಿದರು. ಅದಕ್ಕೆ ಅವರ ಒಡನಿದ್ದವರೇ ಅವರ ತಪ್ಪನ್ನು ತೋರಿಸಿ, ’ನಿನ್ನ ಪ್ರಶ್ನೆಗೆ ಅರ‍್ತವೇ ಇಲ್ಲ’ ಎಂದು ಹೇಳಿ ಅವರನ್ನು ಸುಮ್ಮನಿರಿಸಿದರು. ಸುತ್ತಮುತ್ತಲಿದ್ದವರಿಗೆ ಅವರ ಆ ಪ್ರಶ್ನೆಯಿಂದ ತುಂಬಾ ನಗು ಬಂತು. ಇನ್ನು ’ಕನ್ನಡಿಗರೂ ದ್ರಾವಿಡರೆ’ ಎನ್ನುವುದು ಕೆಲವರಿಗೆ ತಿಳಿದ ಸಂಗತಿಯಾಗಿದ್ದರೆ, ಹಲವರಿಗೆ ಹೊಸ ಸುದ್ದಿಯಂತಿತ್ತು. ಅರಸು ಎಂಬ ಸ್ತಳೀಯ ಹಿರಿಯಾಳೊಬ್ಬರು ’ದಕ್ಶಿಣ ಬಾರತದವರೆಲ್ಲಾ ದ್ರಾವಿಡರೇ’ ಎಂದು ಕಾರ‍್ಯಕ್ರಮದ ಬಳಿಕ ಜೊತೆಯಲ್ಲಿದ್ದವರಿಗೆ ಬಿಡಿಸಿ ಹೇಳಿದರು.
      ಬೆಂಗಳೂರಿಗೆ ನಾವು ಮರಳಿದಾಗ ಆಗ ತಾನೇ ಕತ್ತಲಾಗಿತ್ತು. ಒಟ್ಟಿನಲ್ಲಿ, ಕಾರ‍್ಯಕ್ರಮ ನಮಗೆ ತ್ರುಪ್ತಿ ಕೊಟ್ಟಿತ್ತು. ಬರೀ ದೊಡ್ಡ ಊರುಗಳಲ್ಲಿ ಕಾರ‍್ಯಕ್ರಮಗಳನ್ನು ನಡೆಸಿದರೆ ಸಾಲದು. ಸಣ್ಣ ಊರುಗಳಿಗೂ ಸಂದೇಶ ತಲುಪಬೇಕು. ಮೊದಮೊದಲು, ಬೆಂಗಳೂರಿನ ಸುತ್ತಮುತ್ತಲ ಊರುಗಳಲ್ಲಿ ನಮ್ಮ ಅರುಹುನಡೆ ಕಾರ‍್ಯಕ್ರಮಗಳನ್ನು ನಡೆಸಬೇಕೆಂಬುದು ನಮ್ಮ ತೀರ‍್ಮಾನ. ಈ ಕಾರ‍್ಯಕ್ರಮಗಳಲ್ಲಿ ನೀವೂ ಪಾಲ್ಗೊಳ್ಳಬೇಕು ಎಂಬುದು ನಮ್ಮ ಆಸೆ. ಮುಂದಿನ ಕಾರ‍್ಯಕ್ರಮದ ವಿವರಗಳಿಗೆ ಈ ತಾಣವನ್ನು ದಯವಿಟ್ಟು ಆಗಾಗ್ಗೆ ಗಮನಿಸುತ್ತಿರಿ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್

ಮಂಗಳವಾರ, ಫೆಬ್ರವರಿ 18, 2014

ಸ್ವತಂತ್ರ ದ್ರಾವಿಡನಾಡು!?

ಈ ಬರಹ ’ಹೊಸಬರಹ’ ಲಿಪಿಯಲ್ಲಿದೆ. ಹೊಸಬರಹ ಲಿಪಿಯಲ್ಲಿ ಕನ್ನಡಕ್ಕೆ ಬೇಡದ ಅಕ್ಶರಗಳನ್ನು ಬಳಸುವುದಿಲ್ಲ. ಮುಕ್ಯವಾಗಿ ಮಹಾಪ್ರಾಣ ಮತ್ತು ಋಕಾರದ ಬಳಕೆ ಇರುವುದಿಲ್ಲ. ಹೊಸಬರಹದ ಬಗ್ಗೆ ತಿಳಿದುಕೊಳ್ಳಲು ಡಾ. ಡಿ.ಎನ್.ಶಂಕರ ಬಟ್ ಅವರ ’ಬಾಶೆಯ ಬಗೆಗೆ ನೀವೇನು ಬಲ್ಲಿರಿ? (ನಾಲ್ಕನೇ ಅಚ್ಚು)’, ’ಮಾತು ಮತ್ತು ಬರಹದ ನಡುವಿನ ಗೊಂದಲ’ ಮತ್ತು ’ಕನ್ನಡ ಬರಹವನ್ನು ಸರಿಪಡಿಸೋಣ’  ಓದುಗೆಗಳನ್ನು ನೋಡಿ.

ನೆರೆಯ ತೆಲುಗುನಾಡನ್ನು ಇರುಪೋಳು ಮಾಡುವ ಪ್ರಕ್ರಿಯೆಯ ಬಗ್ಗೆ ಗಲಾಟೆ ತುದಿಮುಟ್ಟುತ್ತಿರುವ ಈ ದಿನಗಳಲ್ಲಿ ಅಲ್ಲಿಯ ಕೆಲ ಮುಂದಾಳುಗಳಿಂದ ವಯ್ಪರೀತ್ಯದ ಕೂಗುಗಳು ಕೇಳಿಬರುತ್ತಿವೆ. ಇಡಿ ಆಂದ್ರವನ್ನು ಎರಡು ತುಂಡು ಮಾಡುವುದೇ ಆದರೆ, ಸೀಮಾಂದ್ರವನ್ನು ಒಂದು ಪ್ರತ್ಯೇಕ ದೇಶವನ್ನಾಗಿಸಬೇಕು ಎಂಬ ಗುಡುಗು ಅವರಿಂದ ಹೊರಡುತ್ತಿದೆ. ಇದು ಯಾರೋ ಒಬ್ಬಿಬ್ಬರು ಇಡುತ್ತಿರುವ ಬೊಬ್ಬೆಯಲ್ಲ. ಹಲವಾರು ತೆಲುಗು ದೇಶಮ್ ಪಕ್ಶದ ಮುಂದಾಳುಗಳಿಂದ ಬಂದಿರುವ ಆಗ್ರಹ.
      ’ನಮ್ಮದೇ ಸಂಸತ್ ನಮಗೆ ಕೊಡಿ. ದಿಲ್ಲಿಯ ಸಂಸತ್ತಿನಲ್ಲಿ ನಮಗೆ ನ್ಯಾಯವೂ ಇಲ್ಲ, ಬೆಲೆಯೂ ಇಲ್ಲ. ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದ ಹಾಗೆ ನಮಗೆ ನಮ್ಮದೇ ಆದ ಸೀಮಾಂದ್ರ ದೇಶ ಕೊಡಿ’ ಎಂದು ಮೊದುಗುಲ ವೇಣುಗೋಪಾಲ ರೆಡ್ಡಿ ಎಂಬ ಸಂಸದರು ಅಬ್ಬರಿಸಿದ್ದಾರೆ. ’ಸೀಮಾಂದ್ರ - ಒಂದು ಪ್ರತ್ಯೇಕ ರಾಶ್ಟ್ರ’ ಎಂಬ ಸಮುದಾಯ ಪುಟವೊಂದನ್ನು ಫೇಸ್‍ಬುಕ್ಕಿನಲ್ಲಿ ತೆರೆಯಲಾಗಿದೆಯಂತೆ. ತೆಲುಗು ದೇಶಮ್ಮಿನ, ಒಮ್ಮೆ ಮಂತ್ರಿಯಾಗಿದ್ದ ಗಾಲಿ ಮುದ್ದುಕ್ರಿಶ್ಣಮ ನಾಯುಡು ಎಂಬವರು, ’ತೆಲುಗರಿಗೆ ಮನ್ನಣೆ ದಕ್ಕದು ಎಂದ ಮೇಲೆ, ತೆಲುಗುನಾಡು ಬಾರತದೊಳಗೆ ಏಕಿರಬೇಕು? ಪ್ರತ್ಯೇಕ ರಾಶ್ಟ್ರ ಏಕಾಗಬಾರದು?’ ಎಂದು ಕೇಳುತ್ತಿದ್ದಾರೆ. ಕಿಶ್ಣಾ ಜಿಲ್ಲೆಯ ತೆಲುಗು ದೇಶಮ್ಮಿನ ಅದ್ಯಕ್ಶ ನೂತಕ್ಕಿ ವೇಣುಗೋಪಾಲ ರಾವ್ ಎಂಬವರು ಕಳೆದ ಅಕ್ಟೋಬರಿನಲ್ಲೇ ತೆಲಂಗಾಣದ ವಿಶಯವಾಗಿ ’ಪ್ರತ್ಯೇಕ ಸೀಮಾಂದ್ರ ದೇಶ ಬೇಕು’ಎಂದು ಸಾರುವ ಪೋಸ್ಟರುಗಳನ್ನು ಮಾಡಿಸಿದ್ದರಂತೆ. ಮಾಜಿ ಮಂತ್ರಿ ಸೋಮಿರೆಡ್ಡಿ ಚಂದ್ರಮೋಹನ ರೆಡ್ಡಿ ಎಂಬವರು ಇನ್ನೂ ಮುಂದೆ ಹೋಗಿ, ’ಇಡೀ ತೆಂಕಣ ಬಾರತವೇ ಏಕೆ ಒಂದು ಸ್ವತಂತ್ರ ದೇಶವಾಗಬಾರದು?’ ಎಂದು ಗುಡುಗಿ, ’ಹಾಗಾಗುವ ದಿನಗಳು ದೂರವಿಲ್ಲ’ ಎಂದು ಆಶಾವಾದ ಬೆರೆತ ಬವಿಶ್ಯವನ್ನೂ ನುಡಿದಿದ್ದಾರೆ. ಇನ್ನೊಬ್ಬ ಮಾಜಿ ಮಂತ್ರಿ ಬೊಜ್ಜಲ ಗೋಪಾಲಕ್ರಿಶ್ಣ ರೆಡ್ಡಿ ಎಂಬವರು, ’ಬಾರತ ಯೂರೋಪಿನ ಹಾಗೆ ಸ್ವತಂತ್ರ ದೇಶಗಳ ಒಕ್ಕೂಟವಾಗಬೇಕು’ ಎಂದು ದನಿಗೂಡಿಸಿದ್ದಾರೆ. ಇವೆಲ್ಲಾ ಸಂಗತಿಗಳು ಫೆಬ್ರವರಿ ಹದಿನಾರರ ಟಯ್‍ಮ್ಸ್ ಆಫ್ ಇಂಡಿಯಾ ಸುದ್ದಿಹಾಳೆಯಲ್ಲಿ ಪ್ರಕಟವಾಗಿವೆ.
      ತಮಗೆ ನ್ಯಾಯ ದೊರಕುತ್ತಿಲ್ಲ ಎಂಬ ಹತಾಶೆ ತಟ್ಟಿದಾಗ ಮಂದಿ ಈ ರೀತಿ ಪ್ರತ್ಯೇಕತೆಯ ಕೂಗು ಹಾಕುವುದು ಆಗಾಗ್ಗೆ ನಡೆಯುತ್ತಾ ಬಂದಿದೆ. ಕಾವೇರಿ ನೀರಿನ ಗದ್ದಲದಲ್ಲಿ ನಮ್ಮ ನಡುವೆಯೂ ಪ್ರತ್ಯೇಕತೆಯ ಕ್ಶೀಣ ಕೊರಲು ಕಳೆದ ವರ‍್ಶ ಕೇಳಿಬಂದಿತ್ತು. ಆದರೆ, ಈಗ ಆಂದ್ರದಿಂದ ಬರುತ್ತಿರುವುದನ್ನು ಕ್ಶೀಣದನಿ ಎಂದು ಕಡೆಗಾಣಿಸುವಂತಿಲ್ಲ. ಇದು ತೆಲುಗು ದೇಶಂ ಪಕ್ಶದ ರಾಜಕೀಯ ನಡೆಯೇ ಆದರೂ, ಅದು ಸಾರುತ್ತಿರುವ ಸಂದೇಶಗಳಲ್ಲಿ ಅದರ ಮುಂದಾಳುಗಳಿಗೆ ಕೂಡ ದಿಟವಾದ ನಂಬಿಕೆ ಇರುವಂತೆಯೇ ಕಾಣಿಸುತ್ತಿದೆ. ಅಶ್ಟಕ್ಕೂ, ಚಿತ್ತೂರಿನಲ್ಲಿ ’ದ್ರಾವಿಡ ವಿಶವಿದ್ಯಾಲಯವನ್ನು’ ನಿರಿಸಿದ್ದು ತೆಲುಗು ದೇಶಮ್ ಪಕ್ಶವೇ. ಈ ಪಕ್ಶಕ್ಕೆ ಮೊದಲಿಂದಲೂ ದ್ರಾವಿಡ ಅರಿವು ಇದ್ದಂತೆ ಕಾಣುತ್ತದೆ. ಒಟ್ಟಿನಲ್ಲಿ ಮುಕ್ಯವಾಗಿ ಗಮನಿಸಬೇಕಾದದ್ದು ಏನೆಂದರೆ, ತೆಂಕಣ ಬಾರತದಲ್ಲಿ, ತಮಿಳುನಾಡಿನ ಹೊರಗೂ ಅಲ್ಲಲ್ಲಿ ಕೊಂಚಕೊಂಚ ದ್ರಾವಿಡತನದ ಅರಿವು ಇನ್ನೂ ಬದುಕಿಕೊಂಡಿದೆ ಎನ್ನುವುದು. ನಮ್ಮ ’ಕನ್ನಡಿಗರೂ ದ್ರಾವಿಡರೆ’ ಬಳಗ ಅಸ್ತಿತ್ವಕ್ಕೆ ಬಂದ ಅಲ್ಪಕಾಲದಲ್ಲೇ ಈ ಸತ್ಯ ನನಗೆ ಮನವರಿಕೆಯಾಗಿತ್ತು.
      ಪ್ರಶ್ನೆ ಇದು - ಪ್ರತ್ಯೇಕತೆ ಸರಿಯೆ? ಹತಾಶೆಯ ನೋವಿಂದ ಪ್ರೇರಿತವಾಗಿ ’ನಾವು ಬೇರೆಯಾಗಬೇಕು’ ಎಂಬ ಬಾವುಕತೆಯ ಕೂಗೇಳುವುದು ಸಹಜ. ಆದರೆ, ಪ್ರತ್ಯೇಕತೆಯಂತಹ ಗಂಬೀರವಾದ ಸಂಗತಿಯನ್ನು ವಿವೇಚನೆಯಿಂದ ನೋಡುವುದು ಒಳಿತು. ಬಾವುಕತೆಯ ಕಯ್ಗೆ ಜುಟ್ಟುಕೊಟ್ಟು ಒಂದೊಂದು ರಾಜ್ಯವೂ ಒಂದೊಂದು ಸ್ವತಂತ್ರ ದೇಶವಾಗಿ ಸಿಡಿದು ಚದುರಿದರೆ, ನಾವು ನೆಮ್ಮದಿಯಿಂದ ಬಾಳಲಿಕ್ಕಾಗುತ್ತದೆಯೆ? ಇದರ ಬಗ್ಗೆ ಆಳವಾಗಿ ಯೋಚಿಸಬೇಕು. ನಮ್ಮ ದೇಶದ ಇತಿಹಾಸವನ್ನು ನೋಡಿದರೆ, ಚದುರಿ ಬಾಳುವುದರಿಂದ ನಮಗೆ ನಶ್ಟವಾಗುವ ಸಾದ್ಯತೆಯೇ ಹೆಚ್ಚು ಎಂಬುದು ಎದ್ದು ಕಾಣುತ್ತದೆ. ಶತಮಾನಗಳ ಹಿಂದೆ, ಸಂಪನ್ಮೂಲಗಳ ಕೊರತೆ ಇಲ್ಲದಿದ್ದಾಗಲೂ ನಾವು ನಮ್ಮನಮ್ಮಲ್ಲೇ ಅರ‍್ತವಿಲ್ಲದ ಕಲಹಗಳನ್ನು ಮಾಡಿಕೊಂಡಿದ್ದೇವೆ. ಇನ್ನು ಸಂಪನ್ಮೂಲಗಳ ಕೊರತೆ ಹೇರಳವಾಗಿರುವ ಈ ದಿನಗಳಲ್ಲಿ ನಮ್ಮ ನಡವಳಿಕೆ ಹೇಗಾಗಬಹುದು? ಮೊದಲಿಂದಲೂ ನಮ್ಮಲ್ಲಿ ದಡ್ದತನಕ್ಕೇನೂ ಕೊರತೆ ಇಲ್ಲವಲ್ಲ? ನಮ್ಮ ಎಶ್ಟೋ ಹೊಳೆಗಳು ಎರಡು ಮೂರು ರಾಜ್ಯಗಳ ಮೂಲಕ ಹರಿಯುತ್ತವೆ. ನಾವು ಪ್ರತ್ಯೇಕ ರಾಶ್ಟ್ರಗಳಾದರೆ, ಅವುಗಳನ್ನು ನ್ಯಾಯಸಮ್ಮತವಾಗಿ ಹಂಚಿಕೊಳ್ಳುವಶ್ಟು ಎತ್ತರದ ತಿಳಿವಳಿಕೆಯ ಮಟ್ಟ ನಮಗಿದೆಯೆ? ಇದೆ ಎಂದು ಹೇಳುವ ಆರ‍್ಪು ಯಾರಿಗೂ ಇರದು. ವಾಸ್ತವ ಹೀಗಿರುವಾಗ ಪ್ರತ್ಯೇಕತೆಯ ಕೂಗು ಸಲ್ಲ.
      ಹಾಗಾದರೆ, ’ದಕ್ಶಿಣದ ನಮಗೆ ಬಾರತದ ಒಕ್ಕೂಟದಲ್ಲಿ ಬೆಲೆ ಸಿಗುತ್ತಿಲ್ಲ’ ಎಂಬ ಸಮಸ್ಯೆಗೆ ಬಗೆಹರಿವೇನು? ಬಗೆಹರಿವೇನೆಂದರೆ, ನಮ್ಮ ಮನೋಸ್ತಿತಿಯನ್ನು ಕೊಂಚ ಮಾರ‍್ಪಡಿಸಿಕೊಳ್ಳುವುದು. ದಿಲ್ಲಿಯ ಮಟ್ಟದಲ್ಲಿ, ’ನಾವು ಕನ್ನಡರು, ನಾವು ತಮಿಳರು, ನಾವು ತೆಲುಗರು’ ಎಂದು ನಮ್ಮನ್ನು ನಾವು ಬೇರೆಬೇರೆಯಾಗಿ ಗುರುತಿಸಿಕೊಳ್ಳದೇ, ’ದಕ್ಶಿಣದವರು ನಾವೆಲ್ಲ ದ್ರಾವಿಡರು’ ಎಂದು ಒಗ್ಗಟ್ಟಿನಿಂದ ನಡೆಯಬೇಕು. ನಮ್ಮ ಯಾವುದೇ ಒಂದು ರಾಜ್ಯಕ್ಕೆ ಅವಮಾನವಾದರೆ, ಅದು ನಮಗೆಲ್ಲರಿಗೂ ಆದ ಅವಮಾನ ಎಂದೇ ಬಾವಿಸಿಕೊಳ್ಳಬೇಕು. ಮೊನ್ನೆ ಮೊನ್ನೆ ಆಮ್ ಆದ್ಮಿ ಪಕ್ಶದ ಅರಿವುಗೆಟ್ಟವನೊಬ್ಬ ಮಲಯಾಳೀ ನರ‍್ಸುಗಳನ್ನು ಕಪ್ಪು ಕುರೂಪಿಗಳು ಎಂದು ಅಣಕಿಸಿದಾಗ, ಕೇರಳೀಯರನ್ನು ಬಿಟ್ಟರೆ, ಉಳಿದ ನಾವೆಲ್ಲ ಸುಮ್ಮನಿದ್ದೆವು. ಇದು ಸರಿಯಲ್ಲ. ಮುಕ್ಯವಾಗಿ, ನಮ್ಮ ಮುಂದಾಳುಗಳು ’ಪ್ರತ್ಯೇಕತೆ’ ಎಂದು ಕೂಗುವ ಬದಲು ನಮ್ಮ ದ್ರಾವಿಡತನದ ಅರಿವನ್ನು ನಮ್ಮ ಎಲ್ಲ ಸಮುದಾಯಗಳಲ್ಲೂ ಹರಡುವ ಪ್ರಯತ್ನವನ್ನು ಮಾಡಬೇಕು. ನಮ್ಮ ದ್ರಾವಿಡ ಒಗ್ಗಟ್ಟನ್ನು ನಾವು ಒಂದು ಗಟ್ಟಿನೆಲೆಯಲ್ಲಿ ಮೆರೆದರೆ, ತೆಲಂಗಾಣದಂತಹ ತೊಂದರೆಗಳು ಏಳುವುದೂ ಇಲ್ಲ, ನಮಗೆ ರಾಶ್ಟ್ರ ಮಟ್ಟದಲ್ಲಿ ಬೆಲೆ, ಮನ್ನಣೆ ಮತ್ತು ನ್ಯಾಯಗಳು ದೊರಕದೆ ಹೋಗುವುದೂ ಇಲ್ಲ.

ನಲ್‍ಮೆಯೊಡನೆ,
ಎಚ್.ಎಸ್. ರಾಜ್